ಮುದ್ದೇಬಿಹಾಳ : ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಮೀತಿ ಮೀರಿದ್ದು ಭಾನುವಾರ ಪಿಲೇಕೆಮ್ಮ ನಗರದ ವಾರ್ಡ ಸಂಖ್ಯೆ 11ರಲ್ಲಿ ಮೂವರು ಮಕ್ಕಳ ಮೇಲೆ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದೆ.
ಪಿಲೇಕೆಮ್ಮ ನಗರದ ಐದು ವರ್ಷದ ಉಲ್ಲಾಸ್ ಹಂಡರಗಲ್ಗೆ ದೇಹದ ಎದೆಯ ಮೇಲ್ಭಾಗದಲ್ಲಿ ಕಚ್ಚಿದ್ದು ವಾರ್ಡನ ಇನ್ನಿಬ್ಬರು ಮಕ್ಕಳಿಗೂ ಕಚ್ಚಿ ಗಾಯಗೊಳಿಸಿದೆ ಎಂದು ವಾರ್ಡನ ಮುಖಂಡ ಮೊಹ್ಮದಅಜರುದ್ದೀನ ಮೂಲಿಮನಿ ತಿಳಿಸಿದ್ದಾರೆ.
ಬೀದಿ ನಾಯಿ ಕಚ್ಚಿದ ಕೂಡಲೇ ಮಕ್ಕಳನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಾರ್ಡ ನಿವಾಸಿ ಬಸವರಾಜ ಹಂಡರಗಲ್ , ಪಿಲೇಕೆಮ್ಮ ನಗರದೊಳಕ್ಕೆ ಸಂಜೆಯಾಯಿತೆAದರೆ ಮನೆಗೆ ಹೋಗುವುದಕ್ಕೆ ಭಯವಾಗುತ್ತದೆ.ಬೀದಿ ನಾಯಿಗಳ ಹಾವಳಿ ಮೀತಿ ಮೀರಿದ್ದು ಅಧಿಕಾರಿಗಳು ಅವುಗಳನ್ನು ಹಿಡಿದು ಬೇರೆಡೆ ಸಾಗಿಸುವ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಕಳೆದ ವರ್ಷವೂ ಮಕ್ಕಳ ಮೇಲೆ ಬೀದಿ ನಾಯಿಗಳು ಹಾವಳಿ ಮಾಡಿದ್ದವು.ಆಗ ಅಧಿಕಾರಿಗಳ ಗಮನಕ್ಕೆ ತಂದಾಗ ಬೀದಿ ನಾಯಿಗಳನ್ನು ಬೇರೆ ಕಡೆಗೆ ಹಿಡಿದು ಸಾಗಿಸುವುದಾಗಿ ಭರವಸೆ ನೀಡಿದ್ದ ಪುರಸಭೆ ಅಧಿಕಾರಿಗಳು ಬೇಜವಾಬ್ದಾರಿತನದಿಂದ ಸಣ್ಣ ಸಣ್ಣ ಮಕ್ಕಳ ಮೇಲೆ ನಾಯಿಗಳು ಕಚ್ಚುತ್ತಾ ತಿರುಗಾಡುತ್ತಿವೆ ಎಂದು ಹರಿಹಾಯ್ದರು.
ಪಿಲೇಕೆಮ್ಮ ನಗರಕ್ಕೆ ಯಾರಾದರೂ ಕೆಲಸ ಮುಗಿಸಿಕೊಂಡು ತಡರಾತ್ರಿ ಒಬ್ಬರೇ ಮನೆಗೆ ಬರುವಂತಿಲ್ಲ.ಬೀದಿ ನಾಯಿಗಳು ಓಣಿಯೊಳಗೆ ಹೋಗುವುದಕ್ಕೆ ಬಿಡುವುದಿಲ್ಲ ಎಂದು ಮುಖಂಡ ಮೊಹ್ಮದ ಅಜರುದ್ದೀನ್ ತಿಳಿಸಿದರು.ಕೂಡಲೇ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಪಿಲೇಕೆಮ್ಮ ನಗರದ ನಿವಾಸಿಗಳು ಆಗ್ರಹಿಸಿದ್ದಾರೆ.







