
ಮುದ್ದೇಬಿಹಾಳ : ತಾಲ್ಲೂಕಿನ ಅಗಸಬಾಳದಲ್ಲಿ ಅಂಬೇಡ್ಕರ್ ಜಯಂತಿಯಂದು ಗ್ರಾಮದಲ್ಲಿರುವ ಕಂಬವೊಂದಕ್ಕೆ ಅಳವಡಿಸಿದ್ದ ಅಶೋಕ ಚಕ್ರವಿದ್ದ ನೀಲಿ ಧ್ವಜವನ್ನು ಕಿಡಿಗೇಡಿಗಳು ಕಿತ್ತೆಸೆದ ಘಟನೆ ಸೋಮವಾರ ನಡೆದಿದೆ. ಘಟನೆಯಲ್ಲಿ ತಪ್ಪಿತಸ್ಥರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಬೇಕು ಎಂದು ದೌರ್ಜನ್ಯ ತಡೆ ಸಮೀತಿ ಮಾಜಿ ಸದಸ್ಯ ಬಸವರಾಜ ಪೂಜಾರಿ ಒತ್ತಾಯಿಸಿದರು.

ಘಟನೆಗೆ ಸಂಬಂಧಿಸಿದಂತೆ ಸಿಪಿಐ ಮೊಹ್ಮದ ಫಸೀವುದ್ದೀನ ಮಾತನಾಡಿ, ಅಗಸಬಾಳ ಗ್ರಾಮಕ್ಕೆ ಭೇಟಿ ಕೊಟ್ಟಿದ್ದು ಜಯಂತಿ ಆಚರಣೆಯ ಸಮಯದಲ್ಲಿ ಕಟ್ಟಿದ್ದ ಧ್ವಜ ಗ್ರಾಮದ ಗಿಡವೊಂದರ ಬಳಿ ಬಿದ್ದಿತ್ತೆಂದು ಗ್ರಾಮದ ಕೆಲವು ಮುಖಂಡರು ತಿಳಿಸಿದರು. ಈ ಕುರಿತಂತೆ ಯಾರ ಮೇಲೂ ಪ್ರಕರಣ ದಾಖಲಾಗಿಲ್ಲ. ಅನುಮಾನ ಬಂದಿರುವ ವ್ಯಕ್ತಿಗಳನ್ನು ಕರೆದು ವಿಚಾರಣೆಗೆ ಒಳಪಡಿಸುತ್ತೇವೆ ಎಂದು ತಿಳಿಸಿದರು. ಗ್ರಾಮದ ದಲಿತ ಸಮಾಜದ ಬಾಂಧವರು ಇದ್ದರು.