ಸಗಣಿ ಎರಚಿಕೊಂಡು ಓಕುಳಿ ಆಟ! ಗದಗನಲ್ಲೊಂದು ವಿಶಿಷ್ಟ ಆಚರಣೆ (ವಿಡಿಯೋ ನೋಡಿ)

ಸಗಣಿ ಎರಚಿಕೊಂಡು ಓಕುಳಿ ಆಟ! ಗದಗನಲ್ಲೊಂದು ವಿಶಿಷ್ಟ ಆಚರಣೆ (ವಿಡಿಯೋ ನೋಡಿ)

ಗದಗ : ಓಕುಳಿ ಆಟ ಅಂದ್ರೆ ತಲೆಯಲ್ಲಿ ಬರೋದು ಬಣ್ಣದೋಕುಳಿ. ರಾಜ ಮಹರಾಜರ ಕಾಲದಲ್ಲಿ ಹಾಲಿನ ಓಕುಳಿಯೂ ನಡೆಯುತ್ತಿತ್ತು ಅನ್ನೋದನ್ನ ಕೇಳಿರ್ತೇವೆ. ಆದ್ರೆ, ಗದಗನಲ್ಲಿ ಸಗಣಿಯ ಓಕುಳಿ (Dung spitting game) ನಡೆಯುತ್ತೆ ಅನ್ನೋದು ವಿಶೇಷವಾಗಿದೆ.

Join Our Telegram: https://t.me/dcgkannada

ಗದಗ ನಗರದ ಗಂಗಾಪುರ ಪೇಟೆಯಲ್ಲಿ ಶತಮಾನದಿಂದ ಸಗಣಿ ಆಟದ ವಿಶಿಷ್ಟ ಆಚರಣೆ ನಡೆದುಕೊಂಡು ಬಂದಿದೆ. ನಾಗರ ಪಂಚಮಿ ಹಬ್ಬದಂದು ಹುತ್ತಕ್ಕೆ ಹಾಲೆರುದು ನಾಗದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸುವ ಜನರು. ಮಾರನೇ ದಿನ ಸಗಣಿ ಎರಚಾಟದ ವಿಶಿಷ್ಠ ಆಚರಣೆ ನಡೆಸ್ತಾರೆ. ವಿಶೇಷ ಓಕುಳಿ ಆಟಕ್ಕೆ ತಿಂಗಳಿಂದ ಪೂರ್ವಭಾವಿಯಾಗಿ ಸಗಣಿ ಸಂಗ್ರಹಣೆ ಕೆಲಸ ನಡೆಯುತ್ತೆ. ದನ ಕರುಗಳಿರುವ ಮನೆಗಳಿಗೆ ತೆರಳುವ ಯುವಕರು ಸಗಣಿ ಸಂಗ್ರಹಿಸುತ್ತಾರೆ.

ಇದನ್ನೂ ಓದಿ: Murder case: ಶೆಡ್‌ನಲ್ಲಿ ನಡೀತು ಮತ್ತೊಂದು ಭೀಕರ ಹತ್ಯೆ..! ಇಲ್ಲಿ ಸ್ನೇಹಿತನೇ ಕೊಲೆಗಾರ

ಪಂಚಮಿ ಮಾರನೇ ದಿನ ನಡೆಯೋ ಓಕುಳಿಯಲ್ಲಿ ಬಡಾವಣೆ ಜನ ಉತ್ಸಾಹದಿಂದ ಆಚರಿಸ್ತಾರೆ. ಬಡಾವಣೆಯ ಮುಖ್ಯರಸ್ತೆಯಲ್ಲಿ ಸಗಣಿಯ 20 ಗುಂಪುಗಳನ್ನು ಹಾಕಿ ಅವುಗಳ ಮೇಲೆ ವಿವಿಧ ಬಣ್ಣಗಳನ್ನು ಹಾಕಲಾಗುತ್ತೆ. 12 ರಿಂದ 16 ಜನ ಯುವಕರು ಎರಡು ತಂಡ ರಚಿಸಿ ಹತ್ತಿರದ ದೈವದವರ ತೋಟದಲ್ಲಿ ಸಗಣೆ ಆಟಕ್ಕೆ ಸಿದ್ಧತೆ ನಡೆಸ್ತಾರೆ. ಚಿತ್ರ ವಿಚಿತ್ರ ಬಟ್ಟೆ ಹಾಕಿಕೊಂಡು ಬದನೆಕಾಯಿ, ಈರುಳ್ಳಿ, ಹಿರೇಕಾಯಿ, ಟೊಮೆಟೊ, ಸೇರಿದಂತೆ ವಿವಿಧ ತರಕಾರಿಗಳಿಂದ ಸಿದ್ಧವಾದ ಹಾರ ಹಾಕಿಕೊಳ್ಳುವ ಯುವಕರು, ತಂಡ ರಚಿಸಿಕೊಂಡು ಪರಸ್ಪರ ಸಗಣಿ ಎರಚಿ ಖುಷಿ ಪಡ್ತಾರೆ.

ರೈತ ಸಮುದಾಯ ಸಗಣಿಗೆ (Dung spitting game) ಬಂಗಾರದ ಸ್ಥಾನಮಾನ ನೀಡುತ್ತೆ. ಪವಿತ್ರತೆಯ ಸಂಕೇತವಾದ ಸಗಣಿಯನ್ನ ಕೀಳರಮೆಯಿಂದ ಕಾಣದೆ ಬಣ್ಣದ ರೀತಿ ಬಳಸುವುದೇ ಈ ಓಕುಳಿ ವಿಶೇಷತೆಯಾಗಿದೆ. ಸಗಣಿ ಮೈಮೇಲೆ ಹಾಕಿಕೊಳ್ಳುವುದರಿಂದ ಚರ್ಮರೋಗ ವಾಸಿಯಾಗುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ.

ನೂರಾರು ವರ್ಷದಿಂದ ನಡೆದುಕೊಂಡು ಬಂದಿರೋ ವಿಶೇಷ ಆಚರಣೆ ಇಂದಿಗೂ ಮುಂದುವರೆದಿದೆ. ಸಾಂಸ್ಕೃತಿಕ ಸಂಕೇತದಿಂತಿರುವ ಸಗಣಿ ಓಕುಳಿ ವರ್ಷದಿಂದ ವರ್ಷಕ್ಕೆ ತನ್ನ ಆಕರ್ಷಣೆ ಹೆಚ್ಚಿಸಿಕೊಳ್ಳುತ್ತಿದೆ. ಗೋ ಮಾತೆಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಹಾಗೂ ಪೂರ್ವಿಕರ ಸಂಸ್ಕೃತಿ ಮುಂದುವರೆಸಿಕೊಂಡು ಹೋಗ್ತಿರೋದು ನಿಜಕ್ಕೂ ವಿಶೇಷವಾಗಿದೆ.

Latest News

‘ಶಾಸಕ ಸಿ.ಎಸ್.ನಾಡಗೌಡರಿಗೆ ಮಂತ್ರಿ ಮಾಡಿ,ಇಲ್ಲವೇ ನಮ್ಮ ರಾಜೀನಾಮೆ ಪಡೆದುಕೊಳ್ಳಿ’

‘ಶಾಸಕ ಸಿ.ಎಸ್.ನಾಡಗೌಡರಿಗೆ ಮಂತ್ರಿ ಮಾಡಿ,ಇಲ್ಲವೇ ನಮ್ಮ ರಾಜೀನಾಮೆ ಪಡೆದುಕೊಳ್ಳಿ’

ಮುದ್ದೇಬಿಹಾಳ : ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡರಿಗೆ ನೂತನ

ತಾಳಿಕೋಟಿ : ಸಿಲಿಂಡರ್ ಸ್ಫೋಟದಿಂದ ಮೃತ ಕುಟುಂಬಗಳಿಗೆ ಅಸ್ಕಿ ಫೌಂಡೇಶನ್ ನೆರವು

ತಾಳಿಕೋಟಿ : ಸಿಲಿಂಡರ್ ಸ್ಫೋಟದಿಂದ ಮೃತ ಕುಟುಂಬಗಳಿಗೆ ಅಸ್ಕಿ ಫೌಂಡೇಶನ್ ನೆರವು

ತಾಳಿಕೋಟಿ : ಪಟ್ಟಣದಲ್ಲಿ ಇತ್ತೀಚಿಗೆ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಮೃತಪ್ಪಟ ಕಟ್ಟಡ ಕಾರ್ಮಿಕರಾದ ಶಕೀಲಅಹ್ಮದ್

17.17 ಲಕ್ಷ ರೂ.ಅನುದಾನ ದುರುಪಯೋಗ;                   ಯರಝರಿ ಹಿಂದಿನ ಪಿಡಿಒ ಮುದಗಲ್ ಅಮಾನತು

17.17 ಲಕ್ಷ ರೂ.ಅನುದಾನ ದುರುಪಯೋಗ; ಯರಝರಿ ಹಿಂದಿನ ಪಿಡಿಒ ಮುದಗಲ್ ಅಮಾನತು

ಮುದ್ದೇಬಿಹಾಳ : ಪ್ರಸ್ತುತ ಬಾಗಲಕೋಟ ತಾಪಂ ಅಧೀಕ್ಷಕಿಯಾಗಿ ಸೇವೆಯಲ್ಲಿರುವ ಹಿಂದಿನ ಮುದ್ದೇಬಿಹಾಳ ತಾಲ್ಲೂಕು ಯರಝರಿ

ಅನುಭವಿ ನಾಯಕ ರುದ್ರಪ್ಪ ಲಮಾಣಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ

ಅನುಭವಿ ನಾಯಕ ರುದ್ರಪ್ಪ ಲಮಾಣಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ

ಮುದ್ದೇಬಿಹಾಳ : ಕಾಂಗ್ರೆಸ್ ಪಕ್ಷದ ಹಿರಿಯ ಹಾಗೂ ಅನುಭವಿ ಶಾಸಕ ರುದ್ರಪ್ಪ ಮಾ. ಲಮಾಣಿ

ಮುದ್ದೇಬಿಹಾಳ : ಗುಡಿಮನಿಗೆ ತಾಪಂ ಅಧಿಕಾರಿಗಳ ಸನ್ಮಾನ

ಮುದ್ದೇಬಿಹಾಳ : ಗುಡಿಮನಿಗೆ ತಾಪಂ ಅಧಿಕಾರಿಗಳ ಸನ್ಮಾನ

ಮುದ್ದೇಬಿಹಾಳ : ತಾಲ್ಲೂಕಿನ ಢವಳಗಿ ಗ್ರಾಮ ಪಂಚಾಯತಿಯ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಎಂ.ಕೆ. ಗುಡಿಮನಿ ಅವರು ಕರ್ನಾಟಕ ರಾಜ್ಯ ಸರಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಕಬಡ್ಡಿ ಕ್ರೀಡೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದ್ದಕ್ಕೆ ಹಾಗೂ ಗುಂಡು ಎಸೆತ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡ ಹಿನ್ನೆಲೆಯಲ್ಲಿ ಅವರನ್ನು ಬುಧವಾರ ಮುದ್ದೇಬಿಹಾಳ ತಾಲೂಕು ಪಂಚಾಯತ ಕಚೇರಿಯಲ್ಲಿ ತಾಪಂ ಇಒ ಸಂಗನಗೌಡ ಬಿರಾದಾರ ಸನ್ಮಾನಿಸಿದರು. ಈ ಸಂದರ್ಭದಲ್ಲಿ ತಾಪಂ ಪ್ರಭಾರ ಎಡಿ ಮಲ್ಲಿಕಾರ್ಜುನ

ಡಿಸೇಲ್,ಪೆಟ್ರೋಲ್‌ಗಾಗಿ ಪರದಾಟ:                                       ಖಾಲಿ ಕ್ಯಾನ್‌ಗಳೊಂದಿಗೆ ಬಂಕ್‌ಗಳ ಮುಂದೆ ಸಾಲುದ್ದ ಕ್ಯೂ

ಡಿಸೇಲ್,ಪೆಟ್ರೋಲ್‌ಗಾಗಿ ಪರದಾಟ: ಖಾಲಿ ಕ್ಯಾನ್‌ಗಳೊಂದಿಗೆ ಬಂಕ್‌ಗಳ ಮುಂದೆ ಸಾಲುದ್ದ ಕ್ಯೂ

ಮುದ್ದೇಬಿಹಾಳ : ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಣಾಮ ಈ ಭಾಗದಲ್ಲೂ ಎಫೆಕ್ಟ್ ಆಗಿದ್ದು ಡಿಸೇಲ್,ಪೆಟ್ರೋಲ್‌ಗಾಗಿ ಗ್ರಾಹಕರು ಬಂಕ್‌ಗಳ ಮುಂದೆ ಸರದಿಯಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ ಹಲವು ಪೆಟ್ರೋಲ್ ಬಂಕ್‌ಗಳ ಮುಂದೆ ಅಡ್ಡಲಾಗಿ ಹಗ್ಗ ಕಟ್ಟಿ ನೋ ಸ್ಟಾಕ್ ಬೋರ್ಡ್ ಹಾಕಿದ್ದರೆ ಡಿಸೇಲ್ ಲಭ್ಯವಿರುವ ಪೆಟ್ರೋಲ್ ಬಂಕ್‌ಗಳ ಮುಂದೆ ಸಾಕಷ್ಟು ಸಂಖ್ಯೆಯಲ್ಲಿ ವಾಹನ ಸವಾರರು,ಖಾಲಿ ಕ್ಯಾನ್‌ಗಳೊಂದಿಗೆ ಸರದಿಯಲ್ಲಿ ನಿಂತಿದ್ದು ಕಂಡು ಬಂದಿತು. ಪಟ್ಟಣದ ತಾಳಿಕೋಟಿ ರಸ್ತೆಯಲ್ಲಿರುವ ನಾಗಠಾಣ ಪೆಟ್ರೋಲ್ ಬಂಕ್‌ನಲ್ಲಿ ಡಿಸೇಲ್