Borewell Free Scheme: ರೈತರಿಗೆ ಇದು ಭಾರೀ ಸಂತಸದ ಸುದ್ದಿ. ರಾಜ್ಯದಲ್ಲಿ ನೀರಾವರಿ ಇಲ್ಲದೆ ಸಾಕಷ್ಟು ಜನರಿಗೆ ಬೆಳೆಯನ್ನು ಬೆಳೆಯಲು ಕಷ್ಟವಾಗಿದೆ. ರಾಜ್ಯದ ರೈತರಿಗೆ ನೀರಾವರಿ ಒದಗಿಸಲು ರಾಜ್ಯ ಸರ್ಕಾರದ ಗಂಗಾ ಕಲ್ಯಾಣ ಯೋಜನೆಯಿಂದ ರೈತರಿಗೆ ಉಚಿತವಾಗಿ ಬೋರ್ವೆಲ್ ಕೊರೆಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
Join Our Telegram: https://t.me/dcgkannada
ಹೌದು, ರಾಜ್ಯದಲ್ಲಿ ನೀರಾವರಿ ಇಲ್ಲದೆ ರೈತರು ಬೆಳೆಗಳನ್ನು ಬೆಳೆಯಲು ಕಷ್ಟವಾಗಿದೆ. ಇದನ್ನು ಅರಿತ ಸರ್ಕಾರ ರೈತರಿಗೆ ನೀರಾವರಿ ಒದಗಿಸಲು ಗಂಗಾ ಕಲ್ಯಾಣ ಯೋಜನೆಯಿಂದ ಉಚಿತವಾಗಿ ಬೋರ್ವೆಲ್ ಕೊರಿಸಲು ಅರ್ಜಿಯನ್ನು ಆವರಿಸಲಾಗಿದೆ.
ಯಾವೆಲ್ಲ ರೈತರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು? ಎಷ್ಟರವರೆಗೆ ಸಹಾಯಧನ ಸಿಗಲಿದೆ? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು? ಮತ್ತು ಅರ್ಜಿ ಎಲ್ಲಿ ಸಲ್ಲಿಸಬೇಕು? ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನ ನೀಡಿದೆ.
ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು
*ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು.
*ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಅಭ್ಯರ್ಥಿಗಳ ವಾರ್ಷಿಕ ಆದಾಯ 1.5 ಲಕ್ಷಕ್ಕಿಂತ ಕಡಿಮೆ ಇರಬೇಕು.
*ನಗರ ಪ್ರದೇಶದಲ್ಲಿ ವಾಸಿಸುವ ಅಭ್ಯರ್ಥಿಗಳ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರಬೇಕು.
*ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 21 ಪೂರೈಸಬೇಕು.
*ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಜಮೀನು 5 ಎಕರೆಗಿಂತ ಕಡಿಮೆ ಇರಬೇಕು.
ಎಷ್ಟು ಸಹಾಯಧನ ಸಿಗಲಿದೆ?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಬೋರ್ವೆಲ್ ಕೊರಿಸಲು 1.5 ಲಕ್ಷದಿಂದ 3.50 ಲಕ್ಷದವರೆಗೆ ಸಹಾಯಧನ ನೀಡಲಿದೆ, ಇದರ ಜೊತೆಗೆ ಪಂಪ್ಸೆಟ್ ಅಳವಡಿಕೆಗೆ ಈ ಒಂದು ಹಣ ಸಿಗಲಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
*ಆಧಾರ್ ಕಾರ್ಡ್
*ಬ್ಯಾಂಕ್ ಪಾಸ್ ಬುಕ್
*ರೇಷನ್ ಕಾರ್ಡ್
*ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಜಮೀನಿನ ಪಹಣಿ
ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?
ಅರ್ಜಿ ಸಲ್ಲಿಸಲು ಬಯಸುವ ರೈತರು ಮೇಲೆ ನೀಡಿರುವ ಅರ್ಹತೆಗಳೊಂದಿಗೆ ಹಾಗೂ ದಾಖಲೆಗಳೊಂದಿಗೆ ನಿಮ್ಮ ಹತ್ತಿರದ ಸಮಾಜ ಕಲ್ಯಾಣ ಕಚೇರಿಗೆ ಭೇಟಿ ನೀಡುವ ಮೂಲಕ ಇನ್ನು ಹೆಚ್ಚಿನ ಮಾಹಿತಿ ಪಡೆದುಕೊಂಡು ಉಚಿತ ಬೋರ್ವೆಲ್ ಕೊರಿಸಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: Grahalaxmi Yojane ಯ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ಹಣ!