This is the advertisement in the next CM newspaper

Karnataka cm race: ಸದ್ಯ ಖಾಲಿ ಇಲ್ಲದ ಹುದ್ದೆಗಾಗಿ ಕಾಂಗ್ರೆಸ್ಸಿಗರ ಕಚ್ಚಾಟ!

Karnataka cm race: ಸದ್ಯ ಖಾಲಿ ಇಲ್ಲದ ಹುದ್ದೆಗಾಗಿ ಕಾಂಗ್ರೆಸ್ಸಿಗರ ಕಚ್ಚಾಟ!

ಬೆಂಗಳೂರು: ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲದಿದ್ದರೂ ಈ ಹುದ್ದೆಗೆ ಟವೆಲ್ ಹಾಕುವ ರೇಸ್‌ನಲ್ಲಿ ಗುರುತಿಸಿಕೊಳ್ಳಲು ಹಲವು ನಾಯಕರು ಮುಂದಾಗಿದ್ದು, ರಾಜಕೀಯ ಕೋಲಾಹಲಕ್ಕೆ ಮುನ್ನುಡು ಬರೆದಿದ್ದಾರೆ.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada

ಈ ಮೂಲಕ ಖಾಲಿ ಇಲ್ಲದ ಮುಖ್ಯಮಂತ್ರಿ ಹುದ್ದೆಗೆ ಹಲವು ನಾಯಕರಲ್ಲಿ ಆಸೆ ಗರಿಗೆದರಿರುವುದು ಸ್ಪಷ್ಟವಾಗಿದೆ.

ಸಿಎಂ ಬದಲಾವಣೆ ಇಲ್ಲ ಎಂಬುದು ಗೊತ್ತಿದ್ದರೂ 2028ರ ಚುನಾವಣೆ ಗಮನದಲ್ಲಿಟ್ಟುಕೊಂಡು ಹೇಳಿಕೆ ನೀಡುತ್ತಿರುವ ನಾಯಕರು ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಡುವುದು ಮಾತ್ರವಲ್ಲದೇ, ಪರಸ್ಪರ ಪರೋಕ್ಷ ವಾಕ್ಸಮರ ಶುರುವಾಗಿರುವುದು ಪಕದ ಹೈಕಮಾಂಡ್‌ಗೆ ಇರುಸುಮುರುಸು ಉಂಟಾಗಿದೆ. ಎಂ.ಬಿ.ಪಾಟೀಲ್ ಅದರಲ್ಲಿಯೂ ಹಾಗೂ ಶಿವಾನಂದ ಪಾಟೀಲ್ ಅವರ ನಡುವೆ ನೇರಾನೇರ ವಾಕಮರ ಇದೀಗ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.

ಮುಡಾ ನಿವೇಶನ ಹಂಚಿಕೆ ವಿಷಯದಲ್ಲಿ ಪ್ರತಿಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳಿದ್ದರೂ ಯಾವುದೇ ಕಾರಣಕ್ಕೂ ರಾಜೀನಾಮೆ ತೆಗೆದುಕೊಳ್ಳುವ ಪ್ರಶ್ನೆಯಿಲ್ಲ ಎಂದು ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ. ಆದರೂ ಪಕ್ಷದ ಕೆಲ ನಾಯಕರು ತಾವೂ ಆಕಾಂಕ್ಷಿ ಎನ್ನುವ ಮಾತುಗಳನ್ನು ಹೇಳುತ್ತಿದ್ದಾರೆ.

ಈ ಹೇಳಿಕೆಗಳು ಪಕದ ಆಂತರಿಕ ಪಕ್ಷದ ವಲಯದಲ್ಲಿ ಯಾವುದೇ ಪರಿಣಾಮ ಬೀರದಿದ್ದರೂ ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದು ಪ್ರತಿಪಕ್ಷಗಳಿಗೆ ಪರೋಕ್ಷ ಸಹಾಯ ಮಾಡುತ್ತಿದೆ ಎಂದು ಪಕ್ಷದ ನಾಯಕರೇ ಹೇಳುತ್ತಿದ್ದಾರೆ.

ಭವಿಷ್ಯದ ಆಲೋಚನೆ:

ಮುಖ್ಯಮಂತ್ರಿ ಆಕಾಂಕ್ಷಿ ಎನ್ನುವ ಹೇಳಿಕೆ ನೀಡುತ್ತಿರುವ ಬಹುತೇಕ ನಾಯಕರು ಸಿದ್ದರಾಮಯ್ಯ ಅವರ ಬದಲಿಗೆ ತಮಗೆ ಸಿಎಂ ಹುದ್ದೆ ನೀಡಿ ಎನ್ನುವ ಮನಸ್ಥಿತಿಯಲ್ಲಿ ಹೇಳಿಕೆ ನೀಡುತ್ತಿಲ್ಲ. ಬದಲಿಗೆ 2028ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಈ ರೀತಿಯ ಹೇಳಿಕೆ ನೀಡುವ ಮೂಲಕ ‘ಸಿಎಂ ಗಾದಿ’ಗೆ ಟವೆಲ್ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ.

ಇದನ್ನೂ ಓದಿ: ನಟ ದರ್ಶನ್ ಗೆ ಇಂದು ಜಾಮೀನು ಸಿಗುತ್ತಾ?

ಇನ್ನು ಕೆಲವರಿಗೆ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿದ್ದರೂ ಈ ಕ್ಷಣದಲ್ಲಿ ಆ ಆಸೆ ಹೊರ ಹಾಕಿದರೆ ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎನ್ನುವ ಆತಂಕ ದಿಂದ ಯಾವುದೇ ಪ್ರತಿಕ್ರಿಯೆ ನೀಡದೇ ಮೌನಕ್ಕೆ ಶರಣಾಗಿದ್ದಾರೆ.

Latest News

ಪರಿಸರ ರಕ್ಷಕ” ಪ್ರಶಸ್ತಿ ಪ್ರದಾನ ಭೂಮಿ ಮೇಲೆ ಸ್ವಾರ್ಥವಿಲ್ಲದೇ ಬದುಕು ನಡೆಸೋಣ: ಬಲರಾಮ ಕಟ್ಟಿಮನಿ

ಪರಿಸರ ರಕ್ಷಕ” ಪ್ರಶಸ್ತಿ ಪ್ರದಾನ ಭೂಮಿ ಮೇಲೆ ಸ್ವಾರ್ಥವಿಲ್ಲದೇ ಬದುಕು ನಡೆಸೋಣ: ಬಲರಾಮ ಕಟ್ಟಿಮನಿ

ಮುದ್ದೇಬಿಹಾಳ : ಭೂಮಿಯ ಮೇಳೆ ಮನುಷ್ಯ ಸ್ವಾರ್ಥವಿಲ್ಲದ ಜೀವನ ನಡೆಸಬೇಕು. ಈ ಭೂಮಿಯ ಮೇಲೆ

ನರೇಗಾ ಕೂಲಿಕಾರರಿಗೆ ಅರೋಗ್ಯ ಉಚಿತ ತಪಾಸಣೆ ಶಿಬಿರ

ನರೇಗಾ ಕೂಲಿಕಾರರಿಗೆ ಅರೋಗ್ಯ ಉಚಿತ ತಪಾಸಣೆ ಶಿಬಿರ

ಖಾತ್ರಿ ಯೋಜನೆಯಡಿ ನಿರಂತರ ಕೆಲಸ : ಗಣಾಚಾರಿ ಮುದ್ದೇಬಿಹಾಳ : ತಾಲ್ಲೂಕಿನ ಮುದ್ನಾಳ ಗ್ರಾಮದ

ಗ್ರಾಮದೇವತೆ ಜಾತ್ರೆಯ ನಿಮಿತ್ಯ ಸ್ಪರ್ಧೆ: ರಂಗೋಲಿ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ

ಗ್ರಾಮದೇವತೆ ಜಾತ್ರೆಯ ನಿಮಿತ್ಯ ಸ್ಪರ್ಧೆ: ರಂಗೋಲಿ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ

ಮುದ್ದೇಬಿಹಾಳ : ಪಟ್ಟಣದ ಗ್ರಾಮ ದೇವತೆ ಜಾತ್ರೆಯ ಅಂಗವಾಡಿ ಅಂಬೇಡ್ಕರ್ ಸಭಾಂಗಣದಲ್ಲಿ ಮಹಿಳೆಯರಿಗಾಗಿ ಏರ್ಪಡಿಸಿದ್ದ

ಕ್ರೀಡಾಪಟುಗಳಿಗೆ ಅನ್ಯಾಯವಾಗದಂತೆ ಕಾರ್ಯನಿರ್ವಹಿಸಿ-ಸಾವಳಗಿ

ಕ್ರೀಡಾಪಟುಗಳಿಗೆ ಅನ್ಯಾಯವಾಗದಂತೆ ಕಾರ್ಯನಿರ್ವಹಿಸಿ-ಸಾವಳಗಿ

ಮುದ್ದೇಬಿಹಾಳ : ಕ್ರೀಡಾಪಟುಗಳನ್ನು ಅವರ ಕೌಟುಂಬಿಕ ಹಿನ್ನೆಲೆ, ಜಾತಿ, ಮತದ ಆಧಾರದ ಮೇಲೆ ಗುರುತಿಸದೇ

ಗ್ರಾಮದೇವತೆ ಜಾತ್ರೆ : ರಾಷ್ಟ್ರ, ರಾಜ್ಯಮಟ್ಟದ ಪೈಲ್ವಾನ್‌ಗಳಿಂದ ರಂಗೇರಿದ ಕುಸ್ತಿ

ಗ್ರಾಮದೇವತೆ ಜಾತ್ರೆ : ರಾಷ್ಟ್ರ, ರಾಜ್ಯಮಟ್ಟದ ಪೈಲ್ವಾನ್‌ಗಳಿಂದ ರಂಗೇರಿದ ಕುಸ್ತಿ

ಮುದ್ದೇಬಿಹಾಳ : ಪಟ್ಟಣದ ಗ್ರಾಮದೇವತೆ ಜಾತ್ರೆಯ ಅಂಗವಾಗಿ ಭಾನುವಾರ ಸಂಜೆ ಇಲ್ಲಿನ ಪ್ರಾರ್ಥನಾ ವಿದ್ಯಾಮಂದಿರದ ಹಿಂಭಾಗದಲ್ಲಿರುವ ಕುಸ್ತಿ ಮೈದಾನದಲ್ಲಿ ರಾಷ್ಟ್ರ, ರಾಜ್ಯಮಟ್ಟದ ಕುಸ್ತಿಪಟುಗಳಿಂದ ಭರ್ಜರಿ ಕುಸ್ತಿ ಪ್ರದರ್ಶನ ನಡೆಯಿತು. ಮಧ್ಯಪ್ರದೇಶ, ಮಹಾರಾಷ್ಟ್ರ, ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರಾಜ್ಯಮಟ್ಟದ ಕುಸ್ತಿಪಟುಗಳು ಪಾಲ್ಗೊಂಡು ಅಖಾಡವನ್ನು ರಂಗೇರಿಸಿದ್ದರು. ವಿಶೇಷವಾಗಿ ಕುಸ್ತಿಯನ್ನು ನಿಗದಿ ಮಾಡಿದ ಪೈಲ್ವಾನ್‌ರೊಂದಿಗೆ ಆಡಿಸಿದ್ದು ಕುಸ್ತಿ ಪ್ರೇಮಿಗಳ ಮೆಚ್ಚುಗೆಗೆ ಕಾರಣವಾಯಿತು. ಸಾವಿರಾರು ಜನರು ಕುಸ್ತಿಯನ್ನು ವೀಕ್ಷಿಸಿದರು.

ಗ್ರಾಮದೇವತೆ ಜಾತ್ರೆ : ರಾಷ್ಟ್ರ, ರಾಜ್ಯಮಟ್ಟದ ಪೈಲ್ವಾನ್‌ಗಳಿಂದ ರಂಗೇರಿದ ಕುಸ್ತಿ

ಗ್ರಾಮದೇವತೆ ಜಾತ್ರೆ : ರಾಷ್ಟ್ರ, ರಾಜ್ಯಮಟ್ಟದ ಪೈಲ್ವಾನ್‌ಗಳಿಂದ ರಂಗೇರಿದ ಕುಸ್ತಿ

ಮುದ್ದೇಬಿಹಾಳ : ಪಟ್ಟಣದ ಗ್ರಾಮದೇವತೆ ಜಾತ್ರೆಯ ಅಂಗವಾಗಿ ಭಾನುವಾರ ಸಂಜೆ ಇಲ್ಲಿನ ಪ್ರಾರ್ಥನಾ ವಿದ್ಯಾಮಂದಿರದ ಹಿಂಭಾಗದಲ್ಲಿರುವ ಕುಸ್ತಿ ಮೈದಾನದಲ್ಲಿ ರಾಷ್ಟ್ರ, ರಾಜ್ಯಮಟ್ಟದ ಕುಸ್ತಿಪಟುಗಳಿಂದ ಭರ್ಜರಿ ಕುಸ್ತಿ ಪ್ರದರ್ಶನ ನಡೆಯಿತು. ಮಧ್ಯಪ್ರದೇಶ, ಮಹಾರಾಷ್ಟ್ರ, ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರಾಜ್ಯಮಟ್ಟದ ಕುಸ್ತಿಪಟುಗಳು ಪಾಲ್ಗೊಂಡು ಅಖಾಡವನ್ನು ರಂಗೇರಿಸಿದ್ದರು. ವಿಶೇಷವಾಗಿ ಕುಸ್ತಿಯನ್ನು ನಿಗದಿ ಮಾಡಿದ ಪೈಲ್ವಾನ್‌ರೊಂದಿಗೆ ಆಡಿಸಿದ್ದು ಕುಸ್ತಿ ಪ್ರೇಮಿಗಳ ಮೆಚ್ಚುಗೆಗೆ ಕಾರಣವಾಯಿತು. ಸಾವಿರಾರು ಜನರು ಕುಸ್ತಿಯನ್ನು ವೀಕ್ಷಿಸಿದರು.