ಮುದ್ದೇಬಿಹಾಳ : ಮುದ್ದೇಬಿಹಾಳ ತಾಲ್ಲೂಕು ಗುರುತಿಸಿಕೊಳ್ಳುವುದೇ ನಾಗರಬೆಟ್ಟದ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಾಧನೆಯ ಕಾರಣಕ್ಕಾಗಿ.ಈ ಭಾಗದಲ್ಲಿ ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆ ಜ್ಞಾನದ ಜ್ಯೋತಿಯಾಗಿ ಬೆಳೆದಿದೆ ಎಂದು ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು.
ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಸೈನ್ಸ್ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆಕ್ಸಫರ್ಡ್ ಪಾಟೀಲ್ಸ್ ಜೀನಿಯಸ್ ಅವಾರ್ಡ್ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.
ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೆ ಸಂಸ್ಕಾರ,ಸoಸ್ಕೃತಿ,ಪರoಪರೆ ನೀಡುವಲ್ಲಿ ನಾವು ಮರೆತಿದ್ದೇವೆ.ಅದನ್ನು ನೀಡುವ ಕಾರ್ಯ ಆಗಬೇಕು.ಇಂದು ಸರ್ಕಾರಿ ಶಿಕ್ಷಣ ಸಂಸ್ಥೆಗಳು ಸರಿಯಾಗಿಲ್ಲದ್ದಕ್ಕಾಗಿಯೇ ಬಹುತೇಕ ಶಿಕ್ಷಕರು,ಪಾಲಕರು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳನ್ನು ಕಲಿಸಲು ಕಳಿಸುತ್ತಿದ್ದಾರೆ. ಇಲ್ಲಿ ಓದಿ ವೈದ್ಯರಾಗುವರು ಸ್ವದೇಶದಲ್ಲಿ ಸೇವೆ ಸಲ್ಲಿಸಬೇಕು.ಒಳ್ಳೆಯ ವೈದ್ಯರಾಗಿ,ಇಂಜಿನಿಯರ್ ಆಗಿ ಸೇವೆ ಸಲ್ಲಿಸಬೇಕು ಎಂದು ಹೇಳಿದರು.
ಹೈದರಾಬಾದ್ನ ಶೈಕ್ಷಣಿಕ ತರಬೇತಿದಾರರಾದ ಗಿರಿಧರ ಪೂಜಾರಿ ಮಾತನಾಡಿ, ವಿದ್ಯಾರ್ಥಿಗಳಿಗೆ ಅಂಕ ಗಳಿಸುವುದೊಂದೇ ಇಲ್ಲಿ ಮಾನದಂಡ.ಅದಕ್ಕೆ ಜಾತಿ,ಬಡತನ,ಧರ್ಮ,ವರ್ಗ,ವರ್ಣ,ಆರ್ಥಿಕ ಸ್ಥಿತಿ ಇನ್ಯಾವುದು ಇಲ್ಲಿ ಪರಿಗಣನೆ ಆಗುವುದಿಲ್ಲ.ಮಕ್ಕಳನ್ನು ಸಾಲ ಮಾಡಿಸಿಯಾದರೂ ಓದಿಸಿ.ಮಕ್ಕಳ ಮದುವೆಗೆ ದುಂದು ವೆಚ್ಚ ಮಾಡಬೇಡಿ.ಅವರ ಕಲಿಕೆಗಾಗಿ ಹಣ ತೊಡಗಿಸಿ.ಕಲಿಕೆ ಜೀವನಕ್ಕೆ ದಾರಿಯಾಗುವಂತಿರಬೇಕು.ಆದರೆ ಅದು ಯಾವುದಕ್ಕೂ ಉಪಯೋಗಕ್ಕೆ ಬರದಿದ್ದರೆ ವ್ಯರ್ಥ.ಮಕ್ಕಳು ತಮ್ಮ ಹೆತ್ತವರಿಗೆ ಕೀರ್ತಿ ತರುವ ಸಾಧನೆ ಮಾಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಆಕ್ಸಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಮೀತಗೌಡ ಪಾಟೀಲ ಮಾತನಾಡಿ,ನಮ್ಮ ಸಂಸ್ಥೆಯಲ್ಲಿ ಕೋವಿಡ್ ಅವಧಿ 2020ರಲ್ಲಿಯೇ 85 ವಿದ್ಯಾರ್ಥಿಗಳು ಮೆಡಿಕಲ್ ಸೀಟು ಪಡೆದುಕೊಂಡಿದ್ದು 2021 ರಲ್ಲಿ 123, 2022ರಲ್ಲಿ 143, 2023ರಲ್ಲಿ 145, 2024ರಲ್ಲಿ 172, 2025ರಲ್ಲಿ 187 ವಿದ್ಯಾರ್ಥಿಗಳು ಮೆಡಿಕಲ್ ಸೀಟು ಪಡೆದುಕೊಂಡಿದ್ದಾರೆ.ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣದಿಂದ ವಂಚಿತರಾಗುವ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಮೂರು ಕೋಟಿ ರೂ.ವೆಚ್ಚದ ಸ್ಕಾಲರ್ಶಿಪ್ ಕೊಡುವ ಕೆಲಸ ಆಕ್ಸಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆ ಮಾತ್ರ ಮಾಡುತ್ತಿದೆ.ನಾವು ದುಡ್ಡು ಮಾಡಬೇಕು ಎಂದು ಸಂಸ್ಥೆ ಕಟ್ಟಿಲ್ಲ.ಬೆಂಗಳೂರು, ಮಂಗಳೂರು ಕಾಲೇಜುಗಳಲ್ಲಿ ಕೊಡುವ ಫಲಿತಾಂಶ ನಮ್ಮ ಭಾಗದಲ್ಲೂ ಕೊಡಲಾಗುತ್ತಿದೆ ಎಂದು ಹೇಳಿದರು. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಶಂಕರಗೌಡ ಸೋಮನಾಳ,ದೇವಿಕಾ ಸುಬ್ಬಾರಾವ್ ಫೌಂಡೇಶನ್ ಅಧ್ಯಕ್ಷೆ ಪಲ್ಲವಿ ನಾಡಗೌಡ, ಪ್ರೋ.ಬಸವರಾಜ ಅಸ್ಕಿ, ಡಾ.ಎಸ್.ಬಿ.ಬಿರಾದಾರ ಮಾತನಾಡಿದರು. ಮುದನೂರ ಕಂಠಿಮಠದ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ವಿಜಯಕುಮಾರ ಪಾಟೀಲ್, ಪ್ರಾಚಾರ್ಯರಾದ ರೇವಣಸಿದ್ದ ಮುರಾಳ, ಪ್ರೊ.ಎನ್.ಎ.ಬಿರಾಜದಾರ,ಶಿಕ್ಷಕ ಸಂಗಮೇಶ ಹೂಗಾರ,ರಾಜಶೇಖರ ಹಿರೇಮಠ,ಆನಂದ ನಾವಿ ಇದ್ದರು. ಇಸ್ಮಾಯಿಲ್ ಮನಿಯಾರ್ ಕಾರ್ಯಕ್ರಮ ನಿರ್ವಹಿಸಿದರು.ಕಾರ್ಯಕ್ರಮದಲ್ಲಿ 2025ರಲ್ಲಿ ಮೆಡಿಕಲ್ಗೆ ಆಯ್ಕೆಯಾದ 187 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಜೀನಿಯಸ್ ಅವಾರ್ಡ್ ಪುರಸ್ಕೃತರು :
ಎರಡು ವರ್ಷದ ಸಂಪೂರ್ಣ ವಸತಿ,ಊಟ ಸಮೇತ ಉಚಿತ ಶಿಕ್ಷಣಕ್ಕೆ ಅಕುಲ್ ಸವಣೂರ,ಅಜಯೆಕುಮಾರ ಜಗ್ಗಲ,ಶಿವಕುಮಾರ ಕಡಿಮನಿ,ಕೀರ್ತನಾ ಮಸಲಗಿ,ಶ್ರೇಯಾ ಗಾಳಿ, ಶ್ರೀಹರಿ ಎಂ.ಜಿ.,ದೀಪಾ ಗಾಡಿ,ಶ್ರೇಯಸ್ ಕಲ್ಲಗೋನಾಳ,ಸಮೃದ್ಧಿ ದೇಸಾಯಿ,ಸುನೀಲ ಹೊಸಮನಿ, ಬಸವರಾಜ ದಿವಟಗಿ,ಸಾಕ್ಷಿ ಬೆಳ್ಳುಂಡಗಿ,ಅರ್ನವ್ ಕುರಂದವಾಡೆ,ಚಿನ್ಮಯಕುಮಾರ ನಾಗೂರ,ಸಂಪತಕುಮಾರ ಉಕ್ಕನಾಳ,ಶ್ರೀನಿವಾಸ ಕಟ್ಟಿಮನಿ,ಚೈತ್ರಾ ಮಹದೇವ,ಮೈಮುನಾ ಮುದ್ನಾಳ, ಸುಪ್ರೀತ ಪಾಟೀಲ,ವಿವೇಕಾನಂದ ಮುದ್ದನೂರಮಠ ಅವರು ಆಯ್ಕೆಯಾದರು.ಇನ್ನುಳಿದಂತೆ 21-40 ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಎರಡು ವರ್ಷದ ಉಚಿತ ಶಿಕ್ಷಣ,40-60 ನೇ ಸ್ಥಾನ ಪಡೆದುಕೊಂಡ ವಿದ್ಯಾರ್ಥಿಗಳಿಗೆ ಎರಡು ವರ್ಷದ ಶಿಕ್ಷಣಕ್ಕೆ ಶೇ.50ರಷ್ಟು ಶುಲ್ಕ ರಿಯಾಯಿತಿ,61-80 ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಶುಲ್ಕ ರಿಯಾಯಿತಿಗೆ ಆಯ್ಕೆ ಮಾಡಲಾಯಿತು.







