ದೇಶದ ಸೇವೆ ಆಯ್ಕೆ ಮಾಡಿಕೊಂಡವರು ಅದೃಷ್ಟವಂತರು-ಎಂ.ಎಸ್.ಕೊಪ್ಪ

ದೇಶದ ಸೇವೆ ಆಯ್ಕೆ ಮಾಡಿಕೊಂಡವರು ಅದೃಷ್ಟವಂತರು-ಎಂ.ಎಸ್.ಕೊಪ್ಪ

ಮುದ್ದೇಬಿಹಾಳ : ದೇಶದ ಗಡಿ ಕಾಯುವ ಸೇವೆಯನ್ನು ಆಯ್ಕೆ ಮಾಡಿಕೊಂಡ ಆಯೇಷಾ ವಾಲೀಕಾರ, ಕಾಶೀಬಾಯಿ ಚಲವಾದಿ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಹುಲ್ಲೂರು ಎಸ್.ಎನ್.ಡಿ ನ್ಯಾಶನಲ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಎಂ.ಎಸ್.ಕೊಪ್ಪ ಹೇಳಿದರು.
ತಾಲ್ಲೂಕಿನ ಹುಲ್ಲೂರು ಗ್ರಾಮದ ಎಸ್.ಎನ್.ಡಿ ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ದೇಶದ ಗಡಿ ಕಾಯುವ ಕೆಲಸ ಸಾಮಾನ್ಯವಾದದ್ದಲ್ಲ.ಅದಕ್ಕೆ ಸಾಕಷ್ಟು ತಯಾರಿ ಬೇಕಾಗುತ್ತದೆ.ಬಡತನದಲ್ಲಿ ಇಂತಹ ದೊಡ್ಡ ಸಾಧನೆ ಮಾಡಿದ ನಮ್ಮ ತಾಲ್ಲೂಕಿನ ಇಬ್ಬರು ಯುವತಿಯರಿಗೆ ಅಭಿನಂದಿಸುವುದಾಗಿ ಹೇಳಿದರು.

ಬಿಎಸ್‌ಎಫ್‌ಗೆ ಆಯ್ಕೆಯಾದ ಆಯೇಷಾ ವಾಲೀಕಾರ ಹಾಗೂ ಕಾಶೀಬಾಯಿ ಚಲವಾದಿ ಮಾತನಾಡಿ, ದೇಶದ ಸೇವೆ ಸಲ್ಲಿಸಲು ಬಂದ ಅವಕಾಶ ನಾವು ಸದುಪಯೋಗಪಡಿಸಿಕೊಳ್ಳುತ್ತೇವೆ.ಹೆತ್ತವರಿಗೆ,ನಮ್ಮನ್ನು ಹೊತ್ತ ಭೂಮಿಗೆ ಈ ದೇಹ ಅರ್ಪಣೆ ಎಂಬ ಭಾವನೆಯನ್ನು ಇಟ್ಟುಕೊಂಡು ದೇಶದ ಸೇವೆಗೆ ತೆರಳುತ್ತಿದ್ದೇವೆ ಎಂದರು.

ಸಿಆರ್‌ಪಿಎಫಗೆ ಆಯ್ಕೆಯಾದ ಶಿವಾನಂದ ಮಾದರ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಶಿಕ್ಷಕಿ ಬಸಮ್ಮ ಹೋಲ್ಡರ್,ಶಿಕ್ಷಕರಾದ ಎಚ್.ಆರ್.ಬಾಗಲಕೋಟ ನಿರೂಪಿಸಿದರು.ಶಿಕ್ಷಕ ದಶರಥ ಸ್ವಾಗತಿಸಿದರು.ಬಿರಾದಾರ ಶಿಕ್ಷಕರು ವಂದಿಸಿದರು.

Latest News

ಮುದ್ದೇಬಿಹಾಳ : ಫೆ.19 ರಂದು ಅದ್ದೂರಿ ಶಿವಾಜಿ ಜಯಂತಿ ಆಚರಣೆಗೆ ನಿರ್ಧಾರ

ಮುದ್ದೇಬಿಹಾಳ : ಫೆ.19 ರಂದು ಅದ್ದೂರಿ ಶಿವಾಜಿ ಜಯಂತಿ ಆಚರಣೆಗೆ ನಿರ್ಧಾರ

ಮುದ್ದೇಬಿಹಾಳ : ಸ್ಥಳೀಯ ಕ್ಷತ್ರೀಯ ಮರಾಠಾ ಸಮಾಜದ ವತಿಯಿಂದ ಫೆ. 19 ರಂದು ಛತ್ರಪತಿ

ನಿಮ್ಮ ಪಂಚಾಯಿತಿಗೆ ಆಡಳಿತಾಧಿಕಾರಿ ಯಾರು?: ಮುದ್ದೇಬಿಹಾಳ : ಗ್ರಾ.ಪಂಗಳಲ್ಲಿನ್ನು ಆಡಳಿತಾಧಿಕಾರಿಗಳ ದರ್ಬಾರ್

ನಿಮ್ಮ ಪಂಚಾಯಿತಿಗೆ ಆಡಳಿತಾಧಿಕಾರಿ ಯಾರು?: ಮುದ್ದೇಬಿಹಾಳ : ಗ್ರಾ.ಪಂಗಳಲ್ಲಿನ್ನು ಆಡಳಿತಾಧಿಕಾರಿಗಳ ದರ್ಬಾರ್

ಮುದ್ದೇಬಿಹಾಳ : ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ,ಉಪಾಧ್ಯಕ್ಷರ ಅವಧಿ ಮುಕ್ತಾಯಗೊಂಡಿದ್ದು ಮುದ್ದೇಬಿಹಾಳ ಹಾಗೂ ತಾಳಿಕೋಟಿ

ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆ ಆಯೋಜನೆ:              ನಾಳೆ ಬಾಗಲಕೋಟೆಯಲ್ಲಿ ಟ್ಯಾಲೆಂಟ್ ಸರ್ಚ್ ಎಕ್ಸಾಂ

ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆ ಆಯೋಜನೆ: ನಾಳೆ ಬಾಗಲಕೋಟೆಯಲ್ಲಿ ಟ್ಯಾಲೆಂಟ್ ಸರ್ಚ್ ಎಕ್ಸಾಂ

ಮುದ್ದೇಬಿಹಾಳ : ಇಲ್ಲಿಗೆ ಸಮೀಪದ ನಾಗರಬೆಟ್ಟದ ಗುಡ್ಡದ ಹತ್ತಿರ ಇರುವ ಆಕ್ಸ್ಫರ್ಡ್ ಪಾಟೀಲ್ಸ್ ಸಮೂಹ

ಸರ್ಕಾರಿ ಆಸ್ಪತ್ರೆಗಳ ಶುಚಿತ್ವಕ್ಕೆ ಆದ್ಯತೆಗೆ ಒತ್ತಾಯ

ಸರ್ಕಾರಿ ಆಸ್ಪತ್ರೆಗಳ ಶುಚಿತ್ವಕ್ಕೆ ಆದ್ಯತೆಗೆ ಒತ್ತಾಯ

ಮುದ್ದೇಬಿಹಾಳ : ಪಟ್ಟಣದ ಸರಕಾರಿ ಆಸ್ಪತ್ರೆಯು ಸೇರಿದಂತೆ ತಾಲ್ಲೂಕಿನಲ್ಲಿಯ ಸರ್ಕಾರಿ ಆಸ್ಪತ್ರೆಗಳ ಆವರಣ,ಒಳ ಹೊರಗಡೆ

ಗರಸಂಗಿಯಲ್ಲಿ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ

ಗರಸಂಗಿಯಲ್ಲಿ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ

ಮುದ್ದೇಬಿಹಾಳ : ಪ್ರಾಥಮಿಕ ಆರೋಗ್ಯ ಕೇಂದ್ರ ಗರಸಂಗಿಯಲ್ಲಿ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯಿತ್ ವಿಜಯಪುರ ಹಾಗೂ ತಾಲೂಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನ ಕಾರ್ಯಕ್ರಮದಡಿಯಲ್ಲಿ ಸ್ಪರ್ಶ ಕುಷ್ಟರೋಗ ಅರಿವು ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಭಾರ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್.ಗೌಡರ ಮಾತನಾಡಿ, ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ ಫೆಬ್ರವರಿ 13ರವರೆಗೆ ಜಿಲ್ಲಾದ್ಯಂತ ನಡೆಯಲಿದ್ದು ಜಿಲ್ಲೆಯಲ್ಲಿ ಕುಷ್ಠರೋಗವನ್ನು ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ಈಗಾಗಲೇ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಬಿ.ಎಸ್.ಎಫ್‌ಗೆ ಆಯ್ಕೆ :                                                                  ಫೆ.5 ರಂದು ಅಭಿನಂದನಾ ಸಮಾರಂಭ

ಬಿ.ಎಸ್.ಎಫ್‌ಗೆ ಆಯ್ಕೆ : ಫೆ.5 ರಂದು ಅಭಿನಂದನಾ ಸಮಾರಂಭ

ಮುದ್ದೇಬಿಹಾಳ : ಬಿ.ಎಸ್.ಎಫ್‌ಗೆ ಆಯ್ಕೆಯಗೊಂಡ ತಾಲೂಕಿನ ಪ್ರಥಮ ಯುವತಿ ಸಿದ್ದಾಪೂರ ಪಿ.ಟಿ ಗ್ರಾಮದ ಕುಮಾರಿ ಆಯೇಷಾ ಬಂದಗೀಸಾ ವಾಲಿಕಾರ ಅವರಗೆ ಫೆ.5 ರಂದು ಸಂಜೆ 4ಕ್ಕೆ ಇಲ್ಲಿನ ಕಾರ್ಗಿಲ್ ವೀರಯೋಧರ ಸ್ಮಾರಕ ನಿರ್ಮಾಣ ಸಮಿತಿ ಹಾಗೂ ಮಾಜಿ ಸೈನಿಕರ ಸಹಯೋಗದಲ್ಲಿ ಅಭಿನಂದನಾ ಹಮ್ಮಿಕೊಳ್ಳಲಾಗಿದೆ. ಪಟ್ಟಣದ ಬಜಾರ್ ಹನುಮಂತನ ಗುಡಿಯಿಂದ ತೆರೆದ ವಾಹನದಲ್ಲಿ ಆಯೇಷಾ ಅವರನ್ನು ಮೆರವಣಿಗೆ ಮೂಲಕ ಸೈನಿಕ ಮೈದಾನಕ್ಕೆ ಕರೆತಂದು ಅವರಿಗೆ ಹಾಗೂ ಅವರ ಹೆತ್ತವರಿಗೆ ಸನ್ಮಾನ ಮಾಡಲಾಗುತ್ತದೆ