Three out of the four seats held in the election went to the BJP

ಚುನಾವಣೆ ನಡೆದ ನಾಲ್ಕರಲ್ಲಿ ಮೂರು ಸ್ಥಾನ BJP ಪಾಲು.. ಆದ್ರೂ PLD ಬ್ಯಾಂಕ್ ಗದ್ದುಗೆ ಕಾಂಗ್ರೆಸ್ ಪಾಲು..! ( ವಿಡಿಯೋ ನೋಡಿ)

ಚುನಾವಣೆ ನಡೆದ ನಾಲ್ಕರಲ್ಲಿ ಮೂರು ಸ್ಥಾನ BJP ಪಾಲು.. ಆದ್ರೂ PLD ಬ್ಯಾಂಕ್ ಗದ್ದುಗೆ ಕಾಂಗ್ರೆಸ್ ಪಾಲು..! ( ವಿಡಿಯೋ ನೋಡಿ)

ಹುನಗುಂದ: ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (PLD) ನಿರ್ದೇಶಕ ಮಂಡಳಿಯ 14 ಸ್ಥಾನಗಳ ಪೈಕಿ ಹತ್ತು ಸ್ಥಾನಗಳು ಅವಿರೋಧ ಆಯ್ಕೆಯಾಗಿದ್ದು, ಉಳಿದ ನಾಲ್ಕು ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಮೂವರು ಬಿಜೆಪಿ ಬೆಂಬಲಿತರು ಹಾಗೂ ಓರ್ವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

Join Our Telegram: https://t.me/dcgkannada

ಶನಿವಾರ ಪಟ್ಟಣದ ಶ್ರೀ ವಿಜಯಮಹಾಂತೇಶ ಪ್ರೌಢ ಶಾಲೆಯಲ್ಲಿ PLD ಬ್ಯಾಂಕ್‌ನ ನಾಲ್ಕು ನಿರ್ದೇಶಕ ಮಂಡಳಿಯ ಚುನಾವಣೆಯಲ್ಲಿ ವೀರೇಶ ಸಂಗನಗೌಡ ಗೌಡರ (ಜಂಬಲದಿನ್ನಿ ಸಾಮಾನ್ಯ), ರುದ್ರಪ್ಪ ವೀರಪ್ಪ ಶೀಲವಂತರ (ಹಿರೇಶಿಂಗನಗುತ್ತಿ ಸಾಮಾನ್ಯ), ಲೀಲಾವತಿ ಸಿದ್ದನಗೌಡ ಪಾಟೀಲ(ಸೂಳೇಭಾವಿ ಸಾಮಾನ್ಯ ಮಹಿಳೆ) ಬಿಜೆಪಿ ಬೆಂಬಲಿತರು, ಇನ್ನು ಶಿವನಗೌಡ ಭೀಮನಗೌಡ ಜಡಿಯಪ್ಪಗೌಡ (ನಂದವಾಡಗಿ ಸಾಮಾನ್ಯ) ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.
 
ಅವಿರೋಧವಾಗಿ ಆಯ್ಕೆಯಾದವರ ವಿವರ:

ಮಹಾಲಿಂಗಪ್ಪ ರಾಚಪ್ಪ ಕಾಶಪ್ಪನವರ (ಸಾಮಾನ್ಯ, ಧನ್ನೂರ), ಶಿವಕುಮಾರಯ್ಯ ಬಸಯ್ಯ ಬಿನ್ನೇದ(ಸಾಮಾನ್ಯ, ನಾಗೂರ), ಮಲ್ಲಪ್ಪ ಮಹಾಂತಪ್ಪ ಬಿಸರಡ್ಡಿ (ಸಾಮಾನ್ಯ, ಚಿತ್ತರಗಿ), ಪ್ರಭಾಕರ ಸಿದ್ರಾಮಪ್ಪ ನಾಗರಾಳ (ಸಾಮಾನ್ಯ, ಅಮೀನಗಡ), ಸುವರ್ಣಾ ಗಂಗಪ್ಪ ಇಲಕಲ್ಲ (ಮಹಿಳಾ, ಹುನಗುಂದ), ನೂರಪ್ಪ ಮೊತಪ್ಪ ಲಮಾಣಿ(ಪರಿಶಿಷ್ಟ ಜಾತಿ, ಇಳಕಲ್), ಸೋಮೇಶ್ವರ ಹುಲ್ಲಪ್ಪ ಬಲಕುಂದಿ (ಪರಿಶಿಷ್ಟ ಪಂಗಡ, ಗುಡೂರು ಎಸ್.ಸಿ), ಖಾಜಾಸಾಬ್ ಮಹಮದ್‌ಸಾಬ್ ಮುದುಗಲ್ (ಹಿಂದುಳಿದ ವರ್ಗ ಅ,ಕರಡಿ), ಬಾಲನಗೌಡ ಹನಮಂತಗೌಡ ಪಾಟೀಲ (ಹಿಂದುಳಿದ ವರ್ಗ ಅ,ಕೂಡಲಸಂಗಮ), ಶೇಖರಪ್ಪ ಗುರಪ್ಪ ಬಾದ ವಾಡಗಿ ( ಬಿನ್‌ಸಾಲಗಾರ) ಆಯ್ಕೆಯಾಗಿದ್ದಾರೆ.

ಒಟ್ಟಾರೆಯಾಗಿ ಚುನಾವಣೆಯಲ್ಲಿ ಮೂವರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ವಿಜಯಶಾಲಿಯಾಗಿದ್ದರೂ ಕೂಡಾ ನಂದವಾಡಗಿ ಕ್ಷೇತ್ರದಿಂದ ಗೆಲುವು ಸಾಧಿಸಿದ ಓರ್ವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜೊತೆಗೆ ಹತ್ತು ಅವಿರೋಧ ಆಯ್ಕೆಯಾಗಿರುವ ಅಭ್ಯರ್ಥಿಗಳು ಕಾಂಗ್ರೆಸ್ ಬೆಂಬಲಿತರಾಗಿರುವುದರಿಂದ ಪಿಎಲ್‌ಡಿ ಬ್ಯಾಂಕ್ ಅಧಿಕಾರ ಕಾಂಗ್ರೆಸ್ ಬೆಂಬಲಿಗರ ಪಾಲಾಗುವುದು ನಿಶ್ಚಿತವಾಗಿದೆ.

ಬಿಜೆಪಿ ಸಂಭ್ರಮಾಚರಣೆ:

ನಾಲ್ಕು ಸ್ಥಾನದಲ್ಲಿ ಮೂವರು ಬಿಜೆಪಿ ಬೆಂಬಲಿತರು, ಓರ್ವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸುತ್ತಿದಂತೆ ಎರಡು ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿ ಗುಲಾಲ ಎರಚಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

ಎಲ್ಲ ಚುನಾವಣೆಗೆ ದಿಕ್ಸೂಚಿ?

PLD ಬ್ಯಾಂಕ್ 4 ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಾಲ್ವರಲ್ಲಿ ಮೂವರ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿರುವುದು. ಬಿಜೆಪಿಯ ಪಾಲಿಗೆ ಈ ಗೆಲುವು ಮುಂದೆ ನಡೆಯುವ ಎಲ್ಲ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಒಂದು ವೇಳೆ ಪಿಎಲ್‌ಡಿ ಬ್ಯಾಂಕಿನ 14 ಸ್ಥಾನಕ್ಕೂ ಚುನಾವಣೆ ನಡೆದಿದ್ದರೇ ಖಂಡಿತವಾಗಲೂ 10 ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಗೆಲುವು ಸಾಧಿಸುತ್ತಿದ್ದರು ಎಂದು ಬಿಜೆಪಿ ಮುಖಂಡ ರಾಜಕುಮಾರ ಬಾದವಾಡಗಿ ಹೇಳಿದರು.

‘ನಾಚಿಗೇಡಿನ ನಾಯಕತ್ವದ ಲಕ್ಷಣ’

ಪಿಎಲ್‌ಡಿ ಬ್ಯಾಂಕ್ ಚುನಾವಣೆಯ ಮತದಾರ ಯಾದಿಯನ್ನು ತನ್ನ ಮೂಗಿನ ನೇರಕ್ಕೆ ತಯಾರಿಸಿ ಮತ್ತೇ ಕೋರ್ಟ್ನಲ್ಲಿ ಹೆಚ್ಚುವರಿ ಮತದಾರರನ್ನು ಒಪ್ಪಿಗೆ ತರೋವುದು ನಾಚಿಗೇಡಿನ ನಾಯಕತ್ವದ ಲಕ್ಷಣವಾಗಿದೆ. ಆದರೂ ಸಹಿತ ಸದ್ಯ ನಾಲ್ಕು ಸ್ಥಾನಗಳಲ್ಲಿ ಮೂವರು ಬಿಜೆಪಿ ಬೆಂಬಲಿತರು ಗೆದ್ದಿರೋದು ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಜನರ ಒಲವು ನಮ್ಮ ಪರವಾಗಿದೆ ಎನ್ನುವುದನ್ನು ಈ ಚುನಾವಣೆ ಸಾಬೀತು ಮಾಡಿದೆ. ಈಗ ಮೂವರು ಗೆದ್ದಿದ್ದಾರೆ. ಹಾಗೇನಾದರೂ ಮರಳಿ ಎಲ್ಲರನ್ನು ರಾಜೀನಾಮೆ ಕೊಡಿಸಿ ಚುನಾವಣೆ ಎದರಿಸಲಿ ನಾವು 10 ಕ್ಕೂ ಹೆಚ್ಚು ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದು ಬಿಜೆಪಿ ಪರತಗೌಡ ಪಾಟೀಲ ಹೇಳಿದರು.

Latest News

ಸ್ನೇಹ ಸಂಗಮ ಗೆಳೆಯರ ಬಳಗದ ವಾರ್ಷಿಕೋತ್ಸವ

ಸ್ನೇಹ ಸಂಗಮ ಗೆಳೆಯರ ಬಳಗದ ವಾರ್ಷಿಕೋತ್ಸವ

ಸ್ನೇಹಿತರ ಬಳಗದಿಂದ ಸಮಾಜಮುಖಿ ಕಾರ್ಯಗಳಾಗಲಿ-ಹಂಚಲಿ ಮುದ್ದೇಬಿಹಾಳ : ಸ್ನೇಹಿತರ ಬಳಗಗಳು ಕೇವಲ ವೈಯಕ್ತಿಕ ಸಮಸ್ಯೆಗಳಿಗೆ

ಬಕ್ರೀದ್ ಹಬ್ಬದ ಹಿನ್ನಲೆ ಮುಸ್ಲಿಂ ಬಾಂಧವರಿಂದ ಪ್ರಾರ್ಥನೆ

ಬಕ್ರೀದ್ ಹಬ್ಬದ ಹಿನ್ನಲೆ ಮುಸ್ಲಿಂ ಬಾಂಧವರಿಂದ ಪ್ರಾರ್ಥನೆ

ಕುಳಗೇರಿ ಕ್ರಾಸ್: ಸ್ಥಳೀಯ ರಾಮದುರ್ಗ ರಸ್ತೆಯಲ್ಲಿರುವ ಜಾಮಿಯಾ ಮಸೀದಿಯಲಿ ಈದುಲ್ ದುವಾ ಪ್ರಾರ್ಥನೆ ನಡೆಸಲಾಯಿತು.

ಕೂಲಿಕಾರರ ಅರೋಗ್ಯವೃದ್ಧಿಗೆ ನರೇಗಾ ಬದ್ಧ: ಪಿ. ಎಸ್. ಕಸನಕ್ಕಿ

ಕೂಲಿಕಾರರ ಅರೋಗ್ಯವೃದ್ಧಿಗೆ ನರೇಗಾ ಬದ್ಧ: ಪಿ. ಎಸ್. ಕಸನಕ್ಕಿ

ಮುದ್ದೇಬಿಹಾಳ : ಕೂಲಿಕಾರರ ಅರೋಗ್ಯ ವೃದ್ಧಿಗೆ ನರೇಗಾ ಯೋಜನೆ ಬದ್ಧವಾಗಿದ್ದು, ಇದಕ್ಕಾಗಿ ಕಾಮಗಾರಿ ಸ್ಥಳದಲ್ಲೆ

ಪರಿಸರ ರಕ್ಷಕ” ಪ್ರಶಸ್ತಿ ಪ್ರದಾನ ಭೂಮಿ ಮೇಲೆ ಸ್ವಾರ್ಥವಿಲ್ಲದೇ ಬದುಕು ನಡೆಸೋಣ: ಬಲರಾಮ ಕಟ್ಟಿಮನಿ

ಪರಿಸರ ರಕ್ಷಕ” ಪ್ರಶಸ್ತಿ ಪ್ರದಾನ ಭೂಮಿ ಮೇಲೆ ಸ್ವಾರ್ಥವಿಲ್ಲದೇ ಬದುಕು ನಡೆಸೋಣ: ಬಲರಾಮ ಕಟ್ಟಿಮನಿ

ಮುದ್ದೇಬಿಹಾಳ : ಭೂಮಿಯ ಮೇಳೆ ಮನುಷ್ಯ ಸ್ವಾರ್ಥವಿಲ್ಲದ ಜೀವನ ನಡೆಸಬೇಕು. ಈ ಭೂಮಿಯ ಮೇಲೆ

ಆರ್‌ಸಿಬಿಗೆ ಕಪ್: ಮೇರೆ ಮೀರಿದ ಅಭಿಮಾನಿಗಳ ಉತ್ಸಾಹ

ಆರ್‌ಸಿಬಿಗೆ ಕಪ್: ಮೇರೆ ಮೀರಿದ ಅಭಿಮಾನಿಗಳ ಉತ್ಸಾಹ

ಸಂಭ್ರಮಾಚರಣೆ ವೇಳೆ ಪೊಲೀಸರಿಂದ ಲಾಠಿ ಪ್ರಹಾರ ಮುದ್ದೇಬಿಹಾಳ : ಬೆಂಗಳೂರಿನ ರಾಯಲ್ ಚಾಲೆಂರ‍್ಸ್ ತಂಡ 18 ವರ್ಷದ ಬಳಿಕ ಕಪ್ ಗೆಲುವು ಸಾಧಿಸುತ್ತಿದ್ದಂತೆ ಅಭಿಮಾನಿಗಳ ಉತ್ಸಾಹ ಮೇರೆ ಮೀರಿದ್ದು ಸಂಭ್ರಮಾಚಾರಣೆ ವೇಳೆ ಪೊಲೀಸರು ಬೀಸಿದ ಲಾಠಿ ಏಟಿಗೆ ಒಬ್ಬ ಯುವಕ ಗಾಯಗೊಂಡಿದ್ದು ಸಂಭ್ರಮಾಚರಣೆಯ ವೇಳೆ ಸಂಭವನೀಯ ಅವಘಡ ತಪ್ಪಿಸಲು ಹೋದ ಪೊಲೀಸ್ ಪೇದೆಗೂ ಒಳಪೆಟ್ಟಾಗಿರುವ ಘಟನೆ ಮಂಗಳವಾರ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ನಡೆದಿದೆ. ಪಟ್ಟಣದಲ್ಲಿ ಮೂರು ವರ್ಷಕ್ಕೊಮ್ಮೆ ಗ್ರಾಮದೇವತೆ ಜಾತ್ರೆ

ಗ್ರಾಮದೇವತೆ ಜಾತ್ರೆಗೆ ತೆರೆ : ಐದು ದಿನಗಳ ನಿರಂತರ ದಾಸೋಹ ಸೇವೆಗೆ ಎಲ್ಲೆಡೆ ಮೆಚ್ಚುಗೆ

ಗ್ರಾಮದೇವತೆ ಜಾತ್ರೆಗೆ ತೆರೆ : ಐದು ದಿನಗಳ ನಿರಂತರ ದಾಸೋಹ ಸೇವೆಗೆ ಎಲ್ಲೆಡೆ ಮೆಚ್ಚುಗೆ

ಮುದ್ದೇಬಿಹಾಳ : ಪಟ್ಟಣದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಗ್ರಾಮದೇವತೆ ಜಾತ್ರೆಗೆ ಮಂಗಳವಾರ ಸಂಜೆ ತೆರೆ ಬಿದ್ದಿತು. 5 ದಿನಗಳವರೆಗೆ ಜರುಗಿದ ಈ ಜಾತ್ರೋತ್ಸವಲ್ಲಿ ದ್ಯಾಮವ್ವನ ಕಟ್ಟೆಯಲ್ಲಿ ಶಾರದಾ ದೇವಿ, ಮಧ್ಯೆದಲ್ಲಿ ಗ್ರಾಮದೇವತೆ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ನಾಡಿನ ವಿವಿಧ ಕಡೆಗಳಿಂದ ಬಂದ ಲಕ್ಷಾಂತರ ಭಕ್ತರು ತಮ್ಮ ಭಕ್ತಿ ಸಮರ್ಪಿಸಿ ಧನ್ಯತೆ ಮೆರೆದರು. ಮಂಗಲೋತ್ಸವ ದಿನದಂದು ಶಾರದಾದೇವಿ ಹಾಗೂ ಗ್ರಾಮದೇವತೆಯ ಮೂರ್ತಿಗಳನ್ನು ವಾದ್ಯ ವೈಭವಗಳೊಂದಿಗೆ ಮೆರವಣಿಗೆ ನಡೆಸಿ ಮೂಲ ಸ್ಥಳಕ್ಕೆ ಕಳಿಸಿಕೊಡಲಾಯಿತು.