Tragedy: A strange incident in Thotaganti village.. A missing woman was found in a well

Tragedy: ತೋಟಗಂಟಿ ಗ್ರಾಮದಲ್ಲೊಂದು ವಿಚಿತ್ರ ಘಟನೆ.. ಕಾಣೆಯಾಗಿದ್ದ ಮಹಿಳೆ ಬಾವಿಯಲ್ಲಿ ಪತ್ತೆ!

Tragedy: ತೋಟಗಂಟಿ ಗ್ರಾಮದಲ್ಲೊಂದು ವಿಚಿತ್ರ ಘಟನೆ.. ಕಾಣೆಯಾಗಿದ್ದ ಮಹಿಳೆ ಬಾವಿಯಲ್ಲಿ ಪತ್ತೆ!

ಗದಗ: ಜಿಲ್ಲೆಯ ರೋಣ ತಾಲೂಕಿನ ತೋಟಗಂಟಿ ಗ್ರಾಮದಿಂದ ಕಾಣೆಯಾಗಿದ್ದ ವಿವಾಹಿತ ಮಹಿಳೆ ಅದೇ ಗ್ರಾಮದ ಹೊಲದಲ್ಲಿನ ನೀರಿಲ್ಲದ ಹಳೆ ಬಾವಿಯಲ್ಲಿ ಮೂರು ದಿನಗಳ ನಂತರ ಪತ್ತೆಯಾಗಿದ್ದಾರೆ. (Tragedy)

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಗೆ ಸೇರಿ: https://t.me/dcgkannada

ಸದ್ಯ, ಮಹಿಳೆಯನ್ನು ರಕ್ಷಿಸಿ ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ತೋಟಗಂಟಿ ಗ್ರಾಮದಿಂದ ಕೋಚಲಾಪುರಕ್ಕೆ ಹೋಗುವ ಮಾರ್ಗದಲ್ಲಿರುವ ಮನೆಯಲ್ಲಿ ವಾಸವಿದ್ದ ಪಾರ್ವತಿ– ವೀರಯ್ಯ ಕಲ್ಮಠ ದಂಪತಿಗೆ ಆರು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ಆಗಸ್ಟ್‌ 20ರಂದು ಪಾರ್ವತಿ ನಾಪತ್ತೆಯಾಗಿದ್ದರು. ಗಂಡ ಹಾಗೂ ಕುಟುಂಬಸ್ಥರು ಎಲ್ಲೆಡೆ ಹುಡುಕಿ, ಎಲ್ಲಿಯೂ ಸಿಗದೆ ಇದ್ದಾಗ ನರೇಗಲ್‌ ಪೊಲೀಸ್‌ ಠಾಣೆಯಲ್ಲಿ ಕಾಣೆಯಾಗಿರುವ ಕುರಿತು ದೂರು ನೀಡಿದ್ದರು.

ಆಗಸ್ಟ್ 22ರಂದು ಗ್ರಾಮದಿಂದ ಅಂದಾಜು 1 ಕಿ.ಮೀ. ದೂರದ ಬಾವಿಯಲ್ಲಿ ಮಹಿಳೆಯೊಬ್ಬರು ಅರಚುತ್ತಿರುವುದು ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕೃಷಿಕರಿಗೆ ಕೇಳಿಸಿದೆ. ಆಗ ಅವರು ಪೊಲೀಸ್‌ ಠಾಣೆಗೆ ಮಾಹಿತಿ ನೀಡಿ, ಹಗ್ಗದ ಸಹಾಯದಿಂದ ರಕ್ಷಿಸಿದ್ದಾರೆ.

ಆ.20ರಂದು ಬೆಳಿಗ್ಗೆ 5ರ ಸುಮಾರಿಗೆ ಮನೆ ಮುಂದೆ ನಿಂತಿದ್ದಾಗ ವಯಸ್ಕ ಮಹಿಳೆಯೊಬ್ಬರು ನನ್ನ ಕುತ್ತಿಗೆ ಭಾಗ ಹಿಡಿದು ಮನೆ ಬಿಟ್ಟು ಬರುವಂತೆ ಬಲವಂತ ಮಾಡಿದಳು. ಕೈಬಳೆ, ಕಾಲುಂಗರ ನೀಡುವಂತೆ ಒತ್ತಾಯಿಸಿದಳು. ಬಳಿಕ ನನ್ನನ್ನು ಎಳೆದುಕೊಂಡು ಬಂದು ಬಾವಿಗೆ ತಳ್ಳಿದಳು. ಬಾವಿಗೆ ಬಿದ್ದ ಮಾರನೇ ದಿನ ನನಗೆ ಪ್ರಜ್ಞೆ ಬಂದಿದೆ. ಆಗ ಕಿರುಚಿದರೂ ಯಾರೂ ಸಹಾಯಕ್ಕೆ ಬರಲಿಲ್ಲ. ಆ. 22ರಂದು ಧ್ವನಿ ಕೇಳಿದ ಜನರು ನನ್ನ ಕಾಪಾಡಿದ್ದಾರೆ ಎಂದು ತೊಂದರೆಗೆ ಒಳಗಾದ ಮಹಿಳೆ ಮಾಹಿತಿ ನೀಡಿದ್ದಾರೆ.

ಕಾಣೆಯಾದ ನಂತರ ಹೊಲ, ಮನಿ, ಊರೂರು ಹುಡುಕಿದ್ದೆವು. ಎಲ್ಲಿಯೂ ಸಿಗದ ಕಾರಣ ದೂರು ಕೊಟ್ಟಿದ್ದೆವು. ಬಾವಿಯಲ್ಲಿ ಬಿದ್ದು ರಕ್ಷಣೆಗೆ ಕೂಗುತ್ತಿರುವ ವಿಷಯ ಗೊತ್ತಾದ ನಂತರ ಆಕೆಯನ್ನು ರಕ್ಷಿಸಿ, ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೇವೆ ಎಂದು ಮಹಿಳೆ
ಯ ಪತಿ ವೀರಯ್ಯ ಮಾಹಿತಿ ನೀಡಿದರು.

ಇದನ್ನೂ ಓದಿ: Fighting for curry: ಮಟನ್ ಕರಿಗಾಗಿ ಮಾರಾಮಾರಿ..! 10 ಮಂದಿಗೆ ಗಾಯ..! (ವಿಡಿಯೋ ನೋಡಿ)

ಈ ಕುರಿತು ನಮ್ಮಲ್ಲಿ ಪ್ರಕರಣ ದಾಖಲಾಗಿಲ್ಲ. ಆದರೆ, ಎಂ.ಎಲ್.ಸಿ ಆಗಿದೆ. ಮಹಿಳೆಯನ್ನು ಬಾವಿಯಿಂದ ಹೊರಗೆ ತೆಗೆದಾಗ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಗದಗಕ್ಕೆ ಕರೆದುಕೊಂಡು ಹೋಗಿದ್ದಾರೆ. ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುವುದು ಎಂದು ನರೇಗಲ್‌ ಪೊಲೀಸ್‌ ಠಾಣೆ ಎಸ್‌ಐ ಐಶ್ವರ್ಯ ನಾಗರಾಳ ತಿಳಿಸಿದ್ದಾರೆ.

Latest News

ಬಸವೇಶ್ವರ ಪತ್ತಿನ ಸಹಕಾರಿ ಸಂಘದ ಶಾಖೆ ಉದ್ಘಾಟನೆ: ಶ್ರಮಿಕ ಜನರ ಆರ್ಥಿಕ ಮಟ್ಟದ ಸುಧಾರಣೆಗೆ ಶ್ರಮಿಸಿ-ನಾಡಗೌಡ

ಬಸವೇಶ್ವರ ಪತ್ತಿನ ಸಹಕಾರಿ ಸಂಘದ ಶಾಖೆ ಉದ್ಘಾಟನೆ: ಶ್ರಮಿಕ ಜನರ ಆರ್ಥಿಕ ಮಟ್ಟದ ಸುಧಾರಣೆಗೆ ಶ್ರಮಿಸಿ-ನಾಡಗೌಡ

ಮುದ್ದೇಬಿಹಾಳ : ಗ್ರಾಮೀಣ ಭಾಗದ ಶ್ರಮಿಕರು, ವ್ಯಾಪಾರಸ್ಥರಿಗೆ ಆರ್ಥಿಕವಾಗಿ ಆಸರೆಯಾಗುವ ಕಾರ್ಯ ಮಾಡುವ ಮೂಲಕ

ಸರದಿಯಲ್ಲಿ ನಿಂತು ಶಿವಲಿಂಗದ ದರ್ಶನ;                    ಎಲ್ಲೆಲ್ಲೂ ಅನುರಣಿಸಿದ ಶಿವನಾಮ

ಸರದಿಯಲ್ಲಿ ನಿಂತು ಶಿವಲಿಂಗದ ದರ್ಶನ; ಎಲ್ಲೆಲ್ಲೂ ಅನುರಣಿಸಿದ ಶಿವನಾಮ

ಮುದ್ದೇಬಿಹಾಳ : ಪಟ್ಟಣದಾದ್ಯಂತ ಶಿವರಾತ್ರಿ ಅಂಗವಾಗಿ ಭಕ್ತರು ಭಾನುವಾರ ಸಂಜೆ ಶಿವನ ದೇವಾಲಯಗಳಲ್ಲಿ ಸರದಿಯಲ್ಲಿ

ಬಿಎಎಸ್ ಇಂಟರ್‌ನ್ಯಾಶನಲ್ ಸ್ಕೂಲ್ ಉದ್ಘಾಟನೆ:            ಕಾಲು ಹಿಡಿದು ಜಗ್ಗುವವರೇ ಬಹಳಷ್ಟು ಜನ-ಸಿ.ಎಸ್.ನಾಡಗೌಡ

ಬಿಎಎಸ್ ಇಂಟರ್‌ನ್ಯಾಶನಲ್ ಸ್ಕೂಲ್ ಉದ್ಘಾಟನೆ: ಕಾಲು ಹಿಡಿದು ಜಗ್ಗುವವರೇ ಬಹಳಷ್ಟು ಜನ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಸಮಾಜದಲ್ಲಿ ಒಂದು ಸಂಸ್ಥೆ, ಕಾರ್ಖಾನೆ , ಒಬ್ಬ ವ್ಯಕ್ತಿ ಬೆಳೆಯುತ್ತಿದ್ದಾನೆ ಎಂದರೆ

ದೇಶದ ಪ್ರಗತಿಗೆ ಸಂಸ್ಕಾರಭರಿತ ಶಿಕ್ಷಣ ಅವಶ್ಯ-ಆರ್.ಎಸ್.ಬಂಗಿ

ದೇಶದ ಪ್ರಗತಿಗೆ ಸಂಸ್ಕಾರಭರಿತ ಶಿಕ್ಷಣ ಅವಶ್ಯ-ಆರ್.ಎಸ್.ಬಂಗಿ

ಮುದ್ದೇಬಿಹಾಳ : ದೇಶದ ಪ್ರಗತಿ ಪಥದ ಚಾಲನೆಗೆ ಸಂಸ್ಕಾರ ಭರಿತ ಶಿಕ್ಷಣ ಅವಶ್ಯಕ ಎಂದು

ಗ್ಯಾರಂಟಿ ಯೋಜನೆ:                                                     ಮನೆಗಳ ಎದುರಿಗೆ ರಂಗೋಲಿ ಬಿಡಿಸಿ ಜಾಗೃತಿ

ಗ್ಯಾರಂಟಿ ಯೋಜನೆ: ಮನೆಗಳ ಎದುರಿಗೆ ರಂಗೋಲಿ ಬಿಡಿಸಿ ಜಾಗೃತಿ

ಮುದ್ದೇಬಿಹಾಳ : ಪಟ್ಟಣದ ಮಹಾಂತೇಶ ನಗರ ಹಾಗೂ ಹೊರಪೇಟಿಯಲ್ಲಿ ಮನೆ ಮನೆಗೆ ತೆರಳಿದ ಪಂಚ ಗ್ಯಾರಂಟಿ ಸಮೀತಿ ಪದಾಧಿಕಾರಿಗಳು ನಿವಾಸಿಗಳ ಮನೆ ಎದುರಿಗೆ ರಂಗೋಲಿ ಬಿಡಿಸಿ ಗ್ಯಾರಂಟಿ ಯೋಜನೆಗಳ ಕುರಿತು ಅರಿವು ಮೂಡಿಸಿದರು. ಸಮೀತಿ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ,ಪುರಸಭೆ ಮಾಜಿ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸಮೀತಿ ಪದಾಧಿಕಾರಿಗಳು ಇದ್ದರು.

ದೇಶದ ಸೇವೆ ಆಯ್ಕೆ ಮಾಡಿಕೊಂಡವರು ಅದೃಷ್ಟವಂತರು-ಎಂ.ಎಸ್.ಕೊಪ್ಪ

ದೇಶದ ಸೇವೆ ಆಯ್ಕೆ ಮಾಡಿಕೊಂಡವರು ಅದೃಷ್ಟವಂತರು-ಎಂ.ಎಸ್.ಕೊಪ್ಪ

ಮುದ್ದೇಬಿಹಾಳ : ದೇಶದ ಗಡಿ ಕಾಯುವ ಸೇವೆಯನ್ನು ಆಯ್ಕೆ ಮಾಡಿಕೊಂಡ ಆಯೇಷಾ ವಾಲೀಕಾರ, ಕಾಶೀಬಾಯಿ ಚಲವಾದಿ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಹುಲ್ಲೂರು ಎಸ್.ಎನ್.ಡಿ ನ್ಯಾಶನಲ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಎಂ.ಎಸ್.ಕೊಪ್ಪ ಹೇಳಿದರು.ತಾಲ್ಲೂಕಿನ ಹುಲ್ಲೂರು ಗ್ರಾಮದ ಎಸ್.ಎನ್.ಡಿ ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ದೇಶದ ಗಡಿ ಕಾಯುವ ಕೆಲಸ ಸಾಮಾನ್ಯವಾದದ್ದಲ್ಲ.ಅದಕ್ಕೆ ಸಾಕಷ್ಟು ತಯಾರಿ ಬೇಕಾಗುತ್ತದೆ.ಬಡತನದಲ್ಲಿ ಇಂತಹ ದೊಡ್ಡ ಸಾಧನೆ ಮಾಡಿದ ನಮ್ಮ ತಾಲ್ಲೂಕಿನ