Tungabhadra dam: ಕ್ರಸ್ಟ್ ಗೇಟ್ ಕಟ್ಟಾದ ಬಗ್ಗೆ ಬಿಜೆಪಿಯವರು ಭಾರತ ಸರ್ಕಾರವನ್ನ ಪ್ರಶ್ನೆ ಮಾಡಬೇಕು: ಸಿಎಂ ಸಿದ್ದರಾಮಯ್ಯ‌ ತೀರುಗೇಟು

Tungabhadra dam: ಕ್ರಸ್ಟ್ ಗೇಟ್ ಕಟ್ಟಾದ ಬಗ್ಗೆ ಬಿಜೆಪಿಯವರು ಭಾರತ ಸರ್ಕಾರವನ್ನ ಪ್ರಶ್ನೆ ಮಾಡಬೇಕು: ಸಿಎಂ ಸಿದ್ದರಾಮಯ್ಯ‌ ತೀರುಗೇಟು

ಕೊಪ್ಪಳ: ತುಂಗಭದ್ರಾ ಡ್ಯಾಂನ (Tungabhadra dam) 19ನೇ ಕ್ರಸ್ಟ್ ಗೇಟ್ ಕಟ್ಟಾಗಿರುವ ಕುರಿತು ಕೊಪ್ಪಳದ ಬಸಾಪುರ ಖಾಸಗಿ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು, ವಿರೋಧ ಪಕ್ಷ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ಮಾಡಿದರು.

ನಿಮಗೆ ಬೋರ್ಡ್ ಇದೆ ಎಂದು ಗೊತ್ತಾ? ಅದರ ಚೇರ್ ಮನ್ ಭಾರತ ಸರ್ಕಾರ ನೇಮಕ ಮಾಡುತ್ತೆ. ಅವರ ಮೇಲೆ ಆರೋಪ ಮಾಡೋಕೆ ಬಿಜೆಪಿಗೆ ಏನಾಗಿದೆ? ಭಾರತ ಸರ್ಕಾರವನ್ನು ಪ್ರಶ್ನೆ ಮಾಡಬೇಕು ಅಲ್ವಾ? ಎಂದು ಸಿದ್ದರಾಮಯ್ಯ‌ (Siddaramaiah) ಪ್ರಶ್ನಿಸಿದರು.

Join Our Telegram: https://t.me/dcgkannada

ನಾನು ಇದರಲ್ಲಿ ರಾಜಕೀಯ ಮಾಡುವುದಿಲ್ಲ. ಸಿಡಬ್ಲುಸಿ ಅವರು ಅಧಿಕಾರಿಗಳನ್ನು ನೇಮಕ ಮಾಡುತ್ತಾರೆ. ನಮ್ಮ ರಾಜ್ಯದ ಅಧಿಕಾರಿಗಳು, ತೆಲಂಗಾಣ, ಆಂಧ್ರದ ಅಧಿಕಾರಿಗಳು ಇರುತ್ತಾರೆ. ನೀವು ಕೇಳುವುದಕ್ಕೆಲ್ಲ ಉತ್ತರ ಕೊಡೊಕೆ ಆಗಲ್ಲ. ಬಿಜೆಪಿ ಅವರು ರಾಜಕೀಯ ಮಾಡ್ತಾರೆ. ಅದಕ್ಕೆಲ್ಲ ನಾನು ಉತ್ತರ ಕೊಡುವುದಿಲ್ಲ. ಗೇಟ್ ಕಟ್ ಆಗುವುದಕ್ಕೆ ಸರ್ಕಾರದ ಹೊಣಗೇಡಿತನ ಅಂದ್ರ ಹೇಗೆ? ಎಂದು ಮರುಪ್ರಶ್ನೆ ಮಾಡಿದರು.

ಯಾರು ಬೋರ್ಡ್ ನಿರ್ವಹಿಸುತ್ತಾರೆ ಎಂಬುದು ಮುಖ್ಯ. ಬಿಜೆಪಿ ಅವರು ಅದರ ಬಗ್ಗೆ ತಿಳಿದುಕೊಳ್ಳಲಿ. ಕ್ರಸ್ಟ್‌ ಗೇಟ್ ಕಟ್ ಆಗಿದೆ. ಅದರಿಂದ ನೀರು ಪೋಲ್ ಆಗಿದೆ. ಇನ್ನು ಸೆಪ್ಟೆಂಬರ್ ವರೆಗೂ ಮಳೆ ಇದೆ.‌ ಮಳೆಯಿಂದ ಮತ್ತೆ ಜಲಾಶಯ ತುಂಬುತ್ತೆ ಎನ್ನುವ ಆಶಾಭಾವನೆ ಇರಲಿ ಎಂದರು.

ಇದನ್ನೂ ಓದಿ: Viral: ಭಾರತಕ್ಕೆ‌ ಅವಮಾನ‌ ತೋರಿದ ಆರೋಪ‌.. ಮಧ್ಯರಾತ್ರಿ‌ ಕ್ಯಾಬ್ ನಿಂದ ಹೊರದಬ್ಬಿದ ಉಬರ್ ಚಾಲಕ (ವೈರಲ್ ವಿಡಿಯೋ ನೋಡಿ)

ರೈತರ ಹಿತದೃಷ್ಟಿಯಿಂದ ಗೇಟ್ ದುರಸ್ತಿ ಮುಖ್ಯ. ಮಳೆ ಬರುವುದಾಗಿ ಹವಮಾನ ಇಲಾಖೆ ಮನಸ್ಸೂಚನೆ ನೀಡಿದೆ. ಮತ್ತೆ ಮಳೆಯಿಂದ ಜಲಾಶಯ ಭರ್ತಿಯಾಗುತ್ತೆ. ನಾನು ಯಾರು ಮೇಲೂ ಗೂಬೆ ಕೂರಿಸುವುದಿಲ್ಲ ಎಂದ ಸಿಎಂ ಸಿದ್ದರಾಮಯ್ಯ‌ ವಿಪಕ್ಷಗಳ ಪ್ರಶ್ನೆಗೆ ಉತ್ತರಿಸಿದರು.

Latest News

ಹಂಡೆ ಹನುಮಪ್ಪ ನಾಯಕರ ಜೀವನ ಚರಿತ್ರೆ ಪಠ್ಯದಲ್ಲಿ ಅಳವಡಿಸಿ

ಹಂಡೆ ಹನುಮಪ್ಪ ನಾಯಕರ ಜೀವನ ಚರಿತ್ರೆ ಪಠ್ಯದಲ್ಲಿ ಅಳವಡಿಸಿ

ಮುದ್ದೇಬಿಹಾಳ : ಹಂಡೇ ಹನುಮಪ್ಪ ನಾಯಕರ ಇತಿಹಾಸ ಈಗಾಗಲೇ ಆಂಧ್ರಪ್ರದೇಶದ ಸರ್ಕಾರ ತನ್ನ ಶಾಲೆಗಳಲ್ಲಿನ

ಹಿರೇಮುರಾಳ-ಕೇಸಾಪೂರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಹಿರೇಮುರಾಳ-ಕೇಸಾಪೂರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಮುದ್ದೇಬಿಹಾಳ : ಹಿಂದಿನ ಬಿಜೆಪಿ ಸರ್ಕಾರ ಎರಡು ವರ್ಷದಲ್ಲಿ 2.20 ಲಕ್ಷ ಕೋಟಿ ರೂ.ಬಿಲ್

ಭವ್ಯ ಭಾರತ ನಿರ್ಮಾಣಕ್ಕೆ ಯೋಗ ದಿನ ಪ್ರೇರಣೆ

ಭವ್ಯ ಭಾರತ ನಿರ್ಮಾಣಕ್ಕೆ ಯೋಗ ದಿನ ಪ್ರೇರಣೆ

ಮುಧೋಳ: ಮಹಾನ್ ನಾಯಕರ ಕನಸಿನಂತೆ ಭವ್ಯ ಭಾರತ ನಿರ್ಮಾಣಕ್ಕೆ ಯೋಗ ದಿನ ಪ್ರೇರಣೆಯಾಗಿದೆ ಎಂದು

ಹಳ್ಳದಲ್ಲಿ ಕೊಚ್ಚಿಹೋದ ಬಾಲಕ-ಯುವಕ ಶವವಾಗಿ ಪತ್ತೆ!

ಹಳ್ಳದಲ್ಲಿ ಕೊಚ್ಚಿಹೋದ ಬಾಲಕ-ಯುವಕ ಶವವಾಗಿ ಪತ್ತೆ!

ಇಳಕಲ್: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿರುವ ದುರ್ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್

ಅನೈತಿಕ‌ ಸಂಬಂಧಕ್ಕೆ ಆಲಮೇಲನಲ್ಲಿ ಬಿತ್ತು ಹೆಣ?

ಅನೈತಿಕ‌ ಸಂಬಂಧಕ್ಕೆ ಆಲಮೇಲನಲ್ಲಿ ಬಿತ್ತು ಹೆಣ?

ಆಲಮೇಲ: ಪಟ್ಟಣದಲ್ಲಿ ಯುವಕನನೊರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಫಾರೂಕ ಆಮದಸಾಬ ಲಾಳಸಂಗಿ (26) ಕೊಲೆಯಾದ ವ್ಯಕ್ತಿ. ಕೊಲೆಗೆ ಅನೈತಿಕ ಸಂಭದದ ಶಂಕೆ ವ್ಯಕ್ತವಾಗಿದೆ. ಪೋಲಿಸರು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಸಿಂದಗಿ ಸಿಪಿಐ ನಾನಾಗೌಡ ಪೋಲಿಸ್ ಪಾಟೀಲ, ಪಿಎಸ್ಐ ಅರವಿಂದ ಅಂಗಡಿ ಭೇಟಿ ನಿಡಿ ಪರಿಶೀಲನೆ ನಡೆಸಿದ್ದಾರೆ. ಸ್ವಾನದಳ ಸಿಬ್ಬಂದಿ ಆಗಮಿಸಿ ಶೋಧ ನಡೆಸಿದ್ದಾರೆ.

ಹುಟ್ಟು ಹೋರಾಟಗಾರ ರಾಜಕೀಯ ಮುತ್ಸದಿ ಕಾಶಪ್ಪನವರ ಅಗಲಿಕೆ ಎರಡು ದಶಕಗಳು

ಹುಟ್ಟು ಹೋರಾಟಗಾರ ರಾಜಕೀಯ ಮುತ್ಸದಿ ಕಾಶಪ್ಪನವರ ಅಗಲಿಕೆ ಎರಡು ದಶಕಗಳು

ಹುನಗುಂದ-ಅಖಂಡ ವಿಜಯಪುರ ಮತ್ತು ಬಾಗಲಕೋಟಿ ಜಿಲ್ಲೆಯ ಹುನಗುಂದ ತಾಲೂಕಿನ ಕೃಷ್ಣ ನದಿಯ ದಡದಲ್ಲಿರುವ ಒಂದು ಪುಟ್ಟ ಗ್ರಾಮವಾದ ಹಾವರಗಿಯಲ್ಲಿ ಜನಿಸಿದ ಲಿಂ, ಎಸ್.ಆರ್.ಕಾಶಪ್ಪನವರ ಮೊದಲು ತಾಲೂಕ ಅಭಿವೃದ್ದಿ ಮಂಡಳಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ತಮ್ಮ ರಾಜಕೀಯ ಜರ್ನಿ ಆರಂಭಿಸುವ ಮೂಲಕ ರಾಜ್ಯ ಸರ್ಕಾರದ ಕ್ಯಾಬಿನೆಟ್ ದರ್ಜೆಯ ಮಂತ್ರಿ ಸ್ಥಾನದವರಿಗೂ ಸಾಗಿದರು. ಹಮ್ಮು ಬಿಮ್ಮಿಲ್ಲದ ಸರಳ ವ್ಯಕ್ತಿತ್ವದ ರಾಜಕಾರಣಿಯಾಗಿದ್ದರು. ಜಿಗಿಟುತನ ಹಾಗೂ ಜವಾರಿ ಭಾಷೆ ಮತ್ತು ಸ್ವಭಾವ ಅವರನ್ನು ಅಲ್ಲಿಯತನಕ ಕರೆದುಕೊಂಡು