Tungabhadra dam: ಕ್ರಸ್ಟ್ ಗೇಟ್ ಕಟ್ಟಾದ ಬಗ್ಗೆ ಬಿಜೆಪಿಯವರು ಭಾರತ ಸರ್ಕಾರವನ್ನ ಪ್ರಶ್ನೆ ಮಾಡಬೇಕು: ಸಿಎಂ ಸಿದ್ದರಾಮಯ್ಯ‌ ತೀರುಗೇಟು

Tungabhadra dam: ಕ್ರಸ್ಟ್ ಗೇಟ್ ಕಟ್ಟಾದ ಬಗ್ಗೆ ಬಿಜೆಪಿಯವರು ಭಾರತ ಸರ್ಕಾರವನ್ನ ಪ್ರಶ್ನೆ ಮಾಡಬೇಕು: ಸಿಎಂ ಸಿದ್ದರಾಮಯ್ಯ‌ ತೀರುಗೇಟು

ಕೊಪ್ಪಳ: ತುಂಗಭದ್ರಾ ಡ್ಯಾಂನ (Tungabhadra dam) 19ನೇ ಕ್ರಸ್ಟ್ ಗೇಟ್ ಕಟ್ಟಾಗಿರುವ ಕುರಿತು ಕೊಪ್ಪಳದ ಬಸಾಪುರ ಖಾಸಗಿ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು, ವಿರೋಧ ಪಕ್ಷ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ಮಾಡಿದರು.

ನಿಮಗೆ ಬೋರ್ಡ್ ಇದೆ ಎಂದು ಗೊತ್ತಾ? ಅದರ ಚೇರ್ ಮನ್ ಭಾರತ ಸರ್ಕಾರ ನೇಮಕ ಮಾಡುತ್ತೆ. ಅವರ ಮೇಲೆ ಆರೋಪ ಮಾಡೋಕೆ ಬಿಜೆಪಿಗೆ ಏನಾಗಿದೆ? ಭಾರತ ಸರ್ಕಾರವನ್ನು ಪ್ರಶ್ನೆ ಮಾಡಬೇಕು ಅಲ್ವಾ? ಎಂದು ಸಿದ್ದರಾಮಯ್ಯ‌ (Siddaramaiah) ಪ್ರಶ್ನಿಸಿದರು.

Join Our Telegram: https://t.me/dcgkannada

ನಾನು ಇದರಲ್ಲಿ ರಾಜಕೀಯ ಮಾಡುವುದಿಲ್ಲ. ಸಿಡಬ್ಲುಸಿ ಅವರು ಅಧಿಕಾರಿಗಳನ್ನು ನೇಮಕ ಮಾಡುತ್ತಾರೆ. ನಮ್ಮ ರಾಜ್ಯದ ಅಧಿಕಾರಿಗಳು, ತೆಲಂಗಾಣ, ಆಂಧ್ರದ ಅಧಿಕಾರಿಗಳು ಇರುತ್ತಾರೆ. ನೀವು ಕೇಳುವುದಕ್ಕೆಲ್ಲ ಉತ್ತರ ಕೊಡೊಕೆ ಆಗಲ್ಲ. ಬಿಜೆಪಿ ಅವರು ರಾಜಕೀಯ ಮಾಡ್ತಾರೆ. ಅದಕ್ಕೆಲ್ಲ ನಾನು ಉತ್ತರ ಕೊಡುವುದಿಲ್ಲ. ಗೇಟ್ ಕಟ್ ಆಗುವುದಕ್ಕೆ ಸರ್ಕಾರದ ಹೊಣಗೇಡಿತನ ಅಂದ್ರ ಹೇಗೆ? ಎಂದು ಮರುಪ್ರಶ್ನೆ ಮಾಡಿದರು.

ಯಾರು ಬೋರ್ಡ್ ನಿರ್ವಹಿಸುತ್ತಾರೆ ಎಂಬುದು ಮುಖ್ಯ. ಬಿಜೆಪಿ ಅವರು ಅದರ ಬಗ್ಗೆ ತಿಳಿದುಕೊಳ್ಳಲಿ. ಕ್ರಸ್ಟ್‌ ಗೇಟ್ ಕಟ್ ಆಗಿದೆ. ಅದರಿಂದ ನೀರು ಪೋಲ್ ಆಗಿದೆ. ಇನ್ನು ಸೆಪ್ಟೆಂಬರ್ ವರೆಗೂ ಮಳೆ ಇದೆ.‌ ಮಳೆಯಿಂದ ಮತ್ತೆ ಜಲಾಶಯ ತುಂಬುತ್ತೆ ಎನ್ನುವ ಆಶಾಭಾವನೆ ಇರಲಿ ಎಂದರು.

ಇದನ್ನೂ ಓದಿ: Viral: ಭಾರತಕ್ಕೆ‌ ಅವಮಾನ‌ ತೋರಿದ ಆರೋಪ‌.. ಮಧ್ಯರಾತ್ರಿ‌ ಕ್ಯಾಬ್ ನಿಂದ ಹೊರದಬ್ಬಿದ ಉಬರ್ ಚಾಲಕ (ವೈರಲ್ ವಿಡಿಯೋ ನೋಡಿ)

ರೈತರ ಹಿತದೃಷ್ಟಿಯಿಂದ ಗೇಟ್ ದುರಸ್ತಿ ಮುಖ್ಯ. ಮಳೆ ಬರುವುದಾಗಿ ಹವಮಾನ ಇಲಾಖೆ ಮನಸ್ಸೂಚನೆ ನೀಡಿದೆ. ಮತ್ತೆ ಮಳೆಯಿಂದ ಜಲಾಶಯ ಭರ್ತಿಯಾಗುತ್ತೆ. ನಾನು ಯಾರು ಮೇಲೂ ಗೂಬೆ ಕೂರಿಸುವುದಿಲ್ಲ ಎಂದ ಸಿಎಂ ಸಿದ್ದರಾಮಯ್ಯ‌ ವಿಪಕ್ಷಗಳ ಪ್ರಶ್ನೆಗೆ ಉತ್ತರಿಸಿದರು.

Latest News

ಜಾನುವಾರುಗಳಿಗೆ ಕುಡಿವ ನೀರು ಸೌಲಭ್ಯ ಕಲ್ಪಿಸಿ

ಜಾನುವಾರುಗಳಿಗೆ ಕುಡಿವ ನೀರು ಸೌಲಭ್ಯ ಕಲ್ಪಿಸಿ

ಮುದ್ದೇಬಿಹಾಳ : ಬೇಸಿಗೆಯ ಧಗೆಯಲ್ಲಿ ಪ್ರಾಣಿ ಪಕ್ಷಿಗಳು ಕುಡಿಯುವ ನೀರು, ಆಹಾರ ಇಲ್ಲದೇ ಬಹಳ

ಬಂಜಾರ ಭಾಷಾ ಅಕಾಡೆಮಿ ಅಧ್ಯಕ್ಷ ಡಾ.ಮೋತಿಲಾಲ  ಚವ್ಹಾಣರಿಗೆ  ಸನ್ಮಾನ

ಬಂಜಾರ ಭಾಷಾ ಅಕಾಡೆಮಿ ಅಧ್ಯಕ್ಷ ಡಾ.ಮೋತಿಲಾಲ  ಚವ್ಹಾಣರಿಗೆ  ಸನ್ಮಾನ

ಮುದ್ದೇಬಿಹಾಳ : ತಾಲೂಕಿನ ಹುಲ್ಲೂರ ತಾಂಡಾ(ವೆಂಕಟೇಶ ನಗರ) ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಬಸು

ಶಾಸಕ ನಾಡಗೌಡರ ಮನೆಗೆ ನನ್ನ ಚಪ್ಪಲಿಯೂ ಹೋಗಿಲ್ಲ-ಎ.ಎಸ್.ಪಾಟೀಲ ನಡಹಳ್ಳಿ

ಶಾಸಕ ನಾಡಗೌಡರ ಮನೆಗೆ ನನ್ನ ಚಪ್ಪಲಿಯೂ ಹೋಗಿಲ್ಲ-ಎ.ಎಸ್.ಪಾಟೀಲ ನಡಹಳ್ಳಿ

ಮುದ್ದೇಬಿಹಾಳ : ತಮಗೆ ಸಾಷ್ಟಾಂಗ ಹಾಕಿರುವುದಾಗಿ ಸುಳ್ಳು ಹೇಳಿಕೆ ಕೊಡುವುದನ್ನು ಮೊದಲು ಶಾಸಕ ನಾಡಗೌಡರು

ತಂಗಡಗಿಯಲ್ಲಿ 26 ಜೋಡಿ ನವಜೀವನಕ್ಕೆ ಪದಾರ್ಪಣೆ

ತಂಗಡಗಿಯಲ್ಲಿ 26 ಜೋಡಿ ನವಜೀವನಕ್ಕೆ ಪದಾರ್ಪಣೆ

ಮುದ್ದೇಬಿಹಾಳ : ಇಂದಿನ ರಾಜಕಾರಣಿಗಳು ತಮ್ಮ ಮಕ್ಕಳ ಮದುವೆಗಳನ್ನು ದುಂದುವೆಚ್ಚದಲ್ಲಿ ಮಾಡುವಬದಲು ಅದೇ ಖರ್ಚಿನಲ್ಲಿ

SSLC ಪರೀಕ್ಷೆ : ಶಿಕ್ಷಣ ಸಚಿವರಿಗೆ ಅಭಿನಂದನೆ ತಿಳಿಸಿದ ವಿದ್ಯಾರ್ಥಿನಿ

SSLC ಪರೀಕ್ಷೆ : ಶಿಕ್ಷಣ ಸಚಿವರಿಗೆ ಅಭಿನಂದನೆ ತಿಳಿಸಿದ ವಿದ್ಯಾರ್ಥಿನಿ

ಮುದ್ದೇಬಿಹಾಳ : ಪಟ್ಟಣದ ಐದು ಪರೀಕ್ಷಾ ಕೇಂದ್ರಗಳು ಸೇರಿದಂತೆ ಮುದ್ದೇಬಿಹಾಳ,ತಾಳಿಕೋಟಿ,ನಾಗರಬೆಟ್ಟ ಪರೀಕ್ಷಾ ಕೇಂದ್ರಗಳಲ್ಲಿ ಮೊದಲ ದಿನದ ಪರೀಕ್ಷೆಗಳು ಅತ್ಯಂತ ಬಿಗಿ ಭದ್ರತೆಯಲ್ಲಿ ಕಟ್ಟುನಿಟ್ಟಾಗಿ ನಡೆದಿರುವುದಾಗಿ ವರದಿಯಾಗಿದೆ. ಪಟ್ಟಣದ ವಿಬಿಸಿ ಪ್ರೌಢಶಾಲೆ,ಜ್ಞಾನ ಭಾರತಿ ವಿದ್ಯಾಮಂದಿರ, ಚಿನ್ಮಯ ಜೆ.ಸಿ.ಆಂಗ್ಲಮಾಧ್ಯಮ ಪ್ರೌಢಶಾಲೆ,ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಶಿರೋಳ,ಅಭ್ಯುದಯ ಆಂಗ್ಲಮಾಧ್ಯಮ ಪ್ರೌಢಶಾಲೆ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಭಾಗದ ಪರೀಕ್ಷಾ ಕೇಂದ್ರಗಳಲ್ಲೂ ಯಾವುದೇ ಗೊಂದಲವಿಲ್ಲದೇ ಕಟ್ಟುನಿಟ್ಟಾಗಿ ಪರೀಕ್ಷೆಗಳು ನಡೆದಿವೆ ಎಂದು ಎಸ್.ಎಸ್.ಎಲ್.ಸಿ ಪರೀಕ್ಷೆಯ ಅಧ್ಯಕ್ಷರು,ತಹಶೀಲ್ದಾರ್ ಕೀರ್ತಿ ಚಾಲಕ ತಿಳಿಸಿದರು.

ಸೌಹಾರ್ದತೆ ಮೆರೆದ ಮನಿಯಾರ್ :                                          ಹಬ್ಬದ ಸಮಯಗಳಲ್ಲಿ ಬಡವರಿಗೆ ನೆರವಾಗಿ-ಸಿಪಿಐ ಫಸಿವುದ್ದೀನ್

ಸೌಹಾರ್ದತೆ ಮೆರೆದ ಮನಿಯಾರ್ : ಹಬ್ಬದ ಸಮಯಗಳಲ್ಲಿ ಬಡವರಿಗೆ ನೆರವಾಗಿ-ಸಿಪಿಐ ಫಸಿವುದ್ದೀನ್

ಮುದ್ದೇಬಿಹಾಳ : ಸಮಾಜದಲ್ಲಿ ಆರ್ಥಿಕವಾಗಿ ಸಬಲತೆ ಸಾಧಿಸಿದವರು ಬಡವರು,ನಿರ್ಗತಿಕರಿಗೆ ಹಬ್ಬದ ಸಮಯಗಳಲ್ಲಿ ನೆರವಾಗುವ ಕಾರ್ಯ ಮಾಡಬೇಕು ಎಂದು ಸಿಪಿಐ ಮೊಹ್ಮದ್ ಫಸಿವುದ್ದೀನ್ ಹೇಳಿದರು. ಪಟ್ಟಣದ ಹುಡ್ಕೋದಲ್ಲಿರುವ ಉದ್ಯಮಿ ಅಯ್ಯೂಬ ಮನಿಯಾರ್ ಅವರ ಮನಿಯಾರ್ ಚಾರಿಟೇಬಲ್ ಟ್ರಸ್ಟ್ನಿಂದ ಮಂಗಳವಾರ ರಂಜಾನ್ ಹಬ್ಬದ ನಿಮಿತ್ಯ ಬಡವರಿಗೆ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮನಿಯಾರ್ ಅವರು ತಮ್ಮ ತಂದೆ ತಾಯಿ ಸ್ಮರಣಾರ್ಥ ಈ ಕಿಟ್‌ಗಳನ್ನು ವಿತರಿಸುತ್ತಿದ್ದಾರೆ.ಆರ್ಥಿಕ ಸಬಲತೆ ಸಾಧಿಸಿದವರು ಇಂತಹ ಕಾರ್ಯಗಳನ್ನು ಮಾಡುತ್ತಿದ್ದರೆ