ಶಾಸಕರು, ಮಾಜಿ ಶಾಸಕರ ಹೆಸರಿನಲ್ಲಿ ಪುಢಾರಿಗಳಿಂದ ಹಣ ವಸೂಲಿ..! ತಾಂಡಾ ಮಂದಿಯ ಆಕ್ರೋಶ (ವಿಡಿಯೋ ನೋಡಿ)

ಶಾಸಕರು, ಮಾಜಿ ಶಾಸಕರ ಹೆಸರಿನಲ್ಲಿ ಪುಢಾರಿಗಳಿಂದ ಹಣ ವಸೂಲಿ..! ತಾಂಡಾ ಮಂದಿಯ ಆಕ್ರೋಶ (ವಿಡಿಯೋ ನೋಡಿ)


ಮುದ್ದೇಬಿಹಾಳ : ತಾಲ್ಲೂಕಿನ ಕೋಳೂರು ತಾಂಡಾದಲ್ಲಿ ( Koluru tanda) ಶತಮಾನಗಳಿಂದ ವಾಸಿಸುತ್ತಿರುವ ನಿವಾಸಿಗಳಿಗೆ ವಾಸಿಸುತ್ತಿರುವ ಜಾಗೆಯ ಕುರಿತು ಗೊಂದಲ ಸೃಷ್ಟಿಸಿ ಅದರ ದುರ್ಲಾಭ ಪಡೆದುಕೊಳ್ಳಲು ಹಾಲಿ, ಮಾಜಿ ಶಾಸಕರ ಹೆಸರುಗಳನ್ನು ಬಳಸಿಕೊಂಡು ಕೆಲವು ಪುಢಾರಿಗಳು ವಸೂಲಿ ದಂಧೆಗೆ ಇಳಿದಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದು ಬಂಜಾರ ಸಮಾಜದ ಮುಖಂಡ ರವಿ ನಾಯಕ ಆಗ್ರಹಿಸಿದರು.

Join Our Telegram: https://t.me/dcgkannada

ಪಟ್ಟಣದ ತಹಶೀಲ್ದಾರ್ ಕಚೇರಿಗೆ ಸೋಮವಾರ ತಾಂಡಾ ನಿವಾಸಿಗಳೊಂದಿಗೆ ಆಗಮಿಸಿದ್ದ ಅವರು ತಹಶೀಲ್ದಾರ್‌ರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.

ತಾಲ್ಲೂಕಿನ ಕೋಳೂರು ತಾಂಡಾ Koluru tanda) ನಿವಾಸಿಗಳು ತಾಂಡಾದ ಸರ್ವೆ ನಂ.167//3ಬ, 167//2, 167//1 , 169//* ರಲ್ಲಿನ ಮಾಲೀಕರುಗಳಿಗೆ ತಮ್ಮ ಸ್ವಂತ ಹಣವನ್ನು ಕೊಟ್ಟು ಅವತ್ತಿನ ಕಾಲದಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಆದರೆ ಈಚೇಗೆ ಸರ್ಕಾರದ ಸುತ್ತೋಲೆಯಂತೆ ನಮ್ಮ ತಾಂಡಾವನ್ನು ಕಂದಾಯ ಗ್ರಾಮವನ್ನಾಗಿ ಪರಿವರ್ತಿಸುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು ಇದರ ದುರುಪಯೋಗವನ್ನು ಮೂಲ ಮಾಲೀಕರೂ ಹಾಗೂ ಮಧ್ಯವರ್ತಿಗಳು ಪಡೆದುಕೊಂಡು ಇಲ್ಲಿನ ನಿವಾಸಿಗಳಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: Hunagund: 528 ವಿದ್ಯಾರ್ಥಿಗಳಿಗೆ ಒಂದೇ ಬಸ್..!

ಹಾಲಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ, ಮಾಜಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರ ಜೊತೆಗೆ ಇರುವ ಕೆಲವು ಪುಢಾರಿಗಳು ಈ ರೀತಿ ಬಡವರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿದ್ದು ಜನಪ್ರತಿನಿಧಿಗಳ ಮುಖಕ್ಕೆ ಕಪ್ಪು ಮಸಿ ಬಳಿಯುವ ಕುತಂತ್ರವೂ ನಡೆದಿದೆ. ಇದಕ್ಕೆ ಹಾಲಿ, ಮಾಜಿ ಶಾಸಕರು ಆಸ್ಪದ ಕೊಡದೇ ಅಂತವರಿಗೆ ತಿಳಿವಳಿಕೆ ಹೇಳಬೇಕು ಎಂದು ಮನವಿ ಮಾಡಿದರು.

ಸರ್ಕಾರಕ್ಕೆ ಪುಕ್ಕಟೆಯಾಗಿ ಜಮೀನು ಕೊಟ್ಟಿದ್ದೇವೆ.ಅದಕ್ಕಾಗಿ ನಮಗೆ ಪರಿಹಾರ ಕೊಡಬೇಕು ಎಂದು ವಿನಾಕಾರಣ ಕೆಲವು ಪಟ್ಟಭದ್ರರು ಸರಕಾರಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ ಮತ್ತು ಅಧಿಕಾರಿಗಳಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ.ಅಧಿಕಾರಿಗಳಿಗೆ ಧಮಕಿ ಹಾಕಿ ತಮಗೆ ಸಂಬಂಧಪಡದ ಜಾಗೆಯನ್ನು ತಮ್ಮ ಹೆಸರಿಗೆ ಬರೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಸದರಿ ವಿಷಯದಲ್ಲಿ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಬಡವರಿಗೆ ಅನ್ಯಾಯ ಆಗದಂತೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಒಂದು ವೇಳೆ ಇಂತಹ ದುರ್ಮಾರ್ಗದಿಂದ ಬಡವರಿಗೆ ತೊಂದರೆ ಕೊಡುವ ಕೆಲಸ ಮುಂದುವರೆದರೆ, ನಮ್ಮ ತಾಂಡಾವನ್ನು ಕಂದಾಯ ಗ್ರಾಮ ಮಾಡುವ ಅವಶ್ಯಕತೆ ಇರುವುದಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈಗಾಗಲೇ ಮೂಲ ಮಾಲೀಕರಿಗೆ ಹಣ ಕೊಟ್ಟು ಜಮೀನು ಖರೀದಿ ಮಾಡಿದ್ದು ಅವರಿಗೆ ಯಾವುದೇ ರೀತಿಯ ಪರಿಹಾರವನ್ನು ನೀಡಬಾರದು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಮನವಿಯನ್ನು ಶಿರಸ್ತೇದಾರ ಎಂ.ಎಸ್.ಬಾಗೇವಾಡಿ ಅವರಿಗೆ ಸಲ್ಲಿಸಿದರು.

ತಾಂಡಾದ ಪ್ರಮುಖರಾದ ಶಾಂತಾರಾಮ ಮೇಲ್ಮನಿ, ರಾಮಸ್ವಾಮಿ ಸೀತಿಮನಿ, ಪ್ರತಾಪ ಸೀತಿಮನಿ, ತುಳಜಾರಾಮ ಚವ್ಹಾಣ, ಸಯಭಾಷ ದಿಂಡೂರ, ಮುತ್ತು ಚವ್ಹಾಣ, ಪ್ರದೀಪ ರಾಠೋಡ, ವಿಕಾಸ ಚವ್ಹಾಣ, ಶಿವಾನಂದ ರಾಠೋಡ ಮೊದಲಾದವರು ಇದ್ದರು.

ಹಾಲಿ, ಮಾಜಿ ಶಾಸಕರು ರಾಜಕಾರಣ ಮಾಡುವಾಗ ರಾಜಕಾರಣ ಮಾಡಿ.ಬಡವರು ತೊಂದರೆಯಲ್ಲಿದ್ದಾಗ ಅವರಿಗೆ ಸಹಾಯಕ್ಕೆ ಬನ್ನಿ. ಕೆಲವರು ಅಧಿಕಾರಿಗಳಿಗೆ ಬ್ಲಾಕ್‌ಮೇಲ್ ಮಾಡುವುದು, ರೊಕ್ಕಾ ಎತ್ತುವುದು ಮಾಡುತ್ತಿದ್ದಾರೆ. ಅನವಶ್ಯಕವಾಗಿ ಬಡವರಿಗೆ ತೊಂದರೆ ಕೊಡುತ್ತಿರುವವರನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿ ಕ್ರಮ ಜರುಗಿಸಬೇಕು ಎಂದು ಬಂಜಾರ ಸಮಾಜದ ಮುಖಂಡ ರವಿ ನಾಯಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Latest News

ಹೆಸರು ನೋಂದಾಯಿಸಲು ಸೂಚನೆ:ಮಾ.21 ರಂದು ಉಚಿತ ಸಾಮೂಹಿಕ ವಿವಾಹ

ಹೆಸರು ನೋಂದಾಯಿಸಲು ಸೂಚನೆ:ಮಾ.21 ರಂದು ಉಚಿತ ಸಾಮೂಹಿಕ ವಿವಾಹ

ಮುದ್ದೇಬಿಹಾಳ : ಈಗಾಗಲೇ ತಾಲ್ಲೂಕಿನಲ್ಲಿ ಶಿಕ್ಷಣ ಕ್ರಾಂತಿಯ ಮೂಲಕ ಕಡು ಬಡವರ ಮಕ್ಕಳಿಗೆ ಕೋವಿಡ್

‘ಸರ್ಕಾರಿ ಕಚೇರಿಗಳಲ್ಲಿ ರಾಜಕಾರಣಿಗಳ ಅಪ್ಪಂದಿರ,ಅಜ್ಜoದಿರ ಫೋಟೋ ಬೇಡ’

‘ಸರ್ಕಾರಿ ಕಚೇರಿಗಳಲ್ಲಿ ರಾಜಕಾರಣಿಗಳ ಅಪ್ಪಂದಿರ,ಅಜ್ಜoದಿರ ಫೋಟೋ ಬೇಡ’

ಮುದ್ದೇಬಿಹಾಳ : ಸೈನ್ಯಕ್ಕೆ ಸೇರುವವರು ಬಡವರ ಮಕ್ಕಳು ಎಂದು ಕೆಲವು ರಾಜಕಾರಣಿಗಳು ಕೆಲವೆಡೆ ಹೇಳಿಕೆ

ಛತ್ರಪತಿ ಶಿವಾಜಿ ಜಯಂತಿ:                                              ಶಿವಾಜಿ ಮಹಾರಾಜರ ಆದರ್ಶ ಮಕ್ಕಳಲ್ಲಿ ಬೆಳೆಸಿ

ಛತ್ರಪತಿ ಶಿವಾಜಿ ಜಯಂತಿ: ಶಿವಾಜಿ ಮಹಾರಾಜರ ಆದರ್ಶ ಮಕ್ಕಳಲ್ಲಿ ಬೆಳೆಸಿ

ಮುದ್ದೇಬಿಹಾಳ : ಪ್ರಜೆಗಳ ಹಿತರಕ್ಷಣೆಗಾಗಿ ಪ್ರಾಣ ಕೊಡಲು ಲೆಕ್ಕಿಸದ ಧೀರ ಹೋರಾಟಗಾರ ಛತ್ರಪತಿ ಶಿವಾಜಿ

ಮುದೂರಿನಲ್ಲಿ ಸಂತಕವಿ ಸರ್ವಜ್ಞ ಜಯಂತಿ ಆಚರಣೆ

ಮುದೂರಿನಲ್ಲಿ ಸಂತಕವಿ ಸರ್ವಜ್ಞ ಜಯಂತಿ ಆಚರಣೆ

ಮುದ್ದೇಬಿಹಾಳ : ತಾಲೂಕಿನ ಮುದೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂತಕವಿ ಸರ್ವಜ್ಞ ಮಹರ್ಷಿಯ

ಜೆಇಇ-1 ಪರೀಕ್ಷೆ ಫಲಿತಾಂಶ :                                  ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ ಜಿಲ್ಲೆಯ ಟಾಪ್-3 ಸ್ಥಾನ

ಜೆಇಇ-1 ಪರೀಕ್ಷೆ ಫಲಿತಾಂಶ : ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ ಜಿಲ್ಲೆಯ ಟಾಪ್-3 ಸ್ಥಾನ

ಮುದ್ದೇಬಿಹಾಳ : ಜೆಇಇ ಸೆಷನ್-1 ರ ಪರೀಕ್ಷೆಯಲ್ಲಿ ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಅಭಿಷೇಕ ಎಸ್.ಟಕ್ಕಳಕಿ ಶೇ.99.28, ಅದಿತಿ ಸವಣೂರ ಶೇ.99.23 ಹಾಗೂ ಪ್ರೀತಮ ಲಮಾಣಿ ಶೇ.99.12 ರಷ್ಟು ಪರ್ಸೆಂಟೈಲ್ ಅಂಕ ಪಡೆದು ಜಿಲ್ಲೆಗೆ ಕ್ರಮವಾಗಿ ಪ್ರಥಮ,ದ್ವಿತೀಯ,ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಜೆಇಇ ಪರೀಕ್ಷೆ ಫಲಿತಾಂಶದ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲ, ಆಡಳಿತಾಧಿಕಾರಿ ಅಮೀತಗೌಡ

ಫೆ.19 ರಂದು ನೌಕಾಪಡೆ ನಿವೃತ ಯೋಧ ಸತೀಶ ನಾಯ್ಕಗೆ ಅಭಿನಂದನಾ ಸಮಾರಂಭ

ಫೆ.19 ರಂದು ನೌಕಾಪಡೆ ನಿವೃತ ಯೋಧ ಸತೀಶ ನಾಯ್ಕಗೆ ಅಭಿನಂದನಾ ಸಮಾರಂಭ

ಮುದ್ದೇಬಿಹಾಳ : 15 ವರ್ಷಗಳ ಕಾಲ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿ ಮರಳಿ ತವರಿಗೆ ಆಗಮಿಸುತ್ತಿರುವ ತಾಲ್ಲೂಕಿನ ಜಟ್ಟಗಿ ತಾಂಡಾದ ಸತೀಶ ನಾಯ್ಕ ಅವರ ಅಭಿನಂದನಾ ಸಮಾರಂಭ ಫೆ.19 ರಂದು ಪಟ್ಟಣದಲ್ಲಿ ಅವರ ಅಭಿಮಾನಿ ಬಳಗದಿಂದ ಆಯೋಜಿಸಲಾಗಿದೆ. ಅಂದು ಮದ್ಯಾಹ್ನ 3ಕ್ಕೆ ಪಟ್ಟಣದ ಮಾರುತೇಶ್ವರ ದೇವಸ್ಥಾನದಿಂದ ತೆರೆದ ವಾಹನದಲ್ಲಿ ನಿವೃತ್ತ ಯೋಧ ಸತೀಶ ನಾಯ್ಕ ಅವರ ಮೆರವಣಿಗೆ ಆರಂಭಗೊಳ್ಳಲಿದ್ದು ಪ್ರಮುಖ ಬೀದಿಯಲ್ಲಿ ಹೊರಟು ಸೈನಿಕ ಮೈದಾನ ತಲುಪಿ, ಬಳಿಕ ಹಳೆ ತಹಶಿಲ್ದಾರ