ಮುದ್ದೇಬಿಹಾಳ : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ಬಿಎಲ್ಓಗಳು,ಮೇಲ್ವಿಚಾರಕರು,ಬಿಎಲ್ಎಗಳ ಹಾಗೂ ಮತದಾರರ ಸಹಕಾರದಿಂದ ಗಣತಿ ನಮೂನೆಗಳ ವಿತರಣೆ ಕಾರ್ಯದಲ್ಲಿ ಮುದ್ದೇಬಿಹಾಳ ಮತಕ್ಷೇತ್ರ ಶೇ.98.38ರಷ್ಟು ಸಾಧನೆ ಮಾಡಿ ವಿಜಯಪುರ ಜಿಲ್ಲೆಗೆ ಎರಡನೇ ಸ್ಥಾನ ಪಡೆದುಕೊಂಡಿದೆ ಎಂದು ಮತದಾರರ ನೋಂದಣಾಧಿಕಾರಿ,ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಬಿ.ಎ.ಸೌದಾಗರ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಎಸ್ಐಆರ್ ಪ್ರಕ್ರಿಯೆಯ ಕುರಿತು ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.2,28,285 ಮತದಾರರಲ್ಲಿ 2,24,589 ಮತದಾರರಿಗೆ ಗಣತಿ ನಮೂನೆ ವಿತರಣೆ ಮಾಡಲಾಗಿದೆ.69,622 ಮತದಾರರ ಗಣತಿ ನಮೂನೆಗಳನ್ನು ಡಿಜಿಟೈಜ್ ಮಾಡಲಾಗಿದೆ.ಆನಲೈನ್ದಲ್ಲಿ ಸಲ್ಲಿಸಿದ ಗಣತಿ 124,ಗೈರು ಹಾಜರಾದವರು 12,ಶಾಶ್ವತವಾಗಿ ಸ್ಥಳಾಂತರಗೊAಡವರು 299,ಮರಣ ಹೊಂದಿದವರು 407,120 ಮತದಾರರು ನೋಂದಾಯಿಸಿಕೊAಡಿದ್ದಾರೆ ಎಂದು ಅಧಿಕಾರಿ ಸೌದಾಗರ ಮಾಹಿತಿ ನೀಡಿದರು.
ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ ಅಧಿಕಾರಿಗಳು ರಜಾ ದಿನವಾಗಿದ್ದರೂ ಎರಡನೇ ಶನಿವಾರ,ಭಾನುವಾರವೂ ಈ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು. ತಹಶೀಲ್ದಾರ್ ಕೀರ್ತಿ ಚಾಲಕ್,ತಾಪಂ ಇಒ ಶರಣಗೌಡ ಆರ್,ಶಿರಸ್ತೇದಾರ ಶಕುಂತಲಾ ಸಜ್ಜನ,ಉಪ ತಹಶೀಲ್ದಾರ್ ನಿಂಗಣ್ಣ ದೊರೆ,ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ,ಕೃಷಿ ಅಧಿಕಾರಿ ಸೋಮನಗೌಡ ಬಿರಾದಾರ,ಪಿಡಿಒ ಭರಮಣ್ಣ ಯಾದಗಿರಿ,ಸೂಪರವೈಸರ್ ಎಲ್.ಎಚ್.ರಾಠೋಡ,ಗ್ರಾಮ ಆಡಳಿತ ಅಧಿಕಾರಿ ದಿನೇಶ ವಗ್ಗನ್ನವರ,ರಫೀಕ ಮುಲ್ಲಾ,ಹರ್ಷಿಗೌಡ,ಮಹಾಂತೇಶ ಬಸನಗೌಡರ ಮೊದಲಾದವರು ಇದ್ದರು.
ಶೇ.100ರಷ್ಟು ಸಾಧನೆ-ಇಬ್ಬರು ಬಿಎಲ್ಓಗಳಿಗೆ ಅಭಿನಂದನೆ:
ಮುದ್ದೇಬಿಹಾಳ ಮತಕ್ಷೇತ್ರದ ಮುದ್ನಾಳ ಮತಗಟ್ಟೆ ಸಂಖ್ಯೆ 168ರ ಬಿಎಲ್ಓ ಮಹಾಂತೇಶ ಪೂಜಾರ,ಚಿರ್ಚನಕಲ್ ಗ್ರಾಮದ ಭಾಗ ಸಂಖ್ಯೆ 120ರ ಬಿಎಲ್ಓ ಶೃತಿ ಭಾಟಿ ಅವರು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ 2026ರ ಕಾರ್ಯವನ್ನು ನಿಗದಿತ ಅವಧಿಗಿಂತ ಮುಂಚಿತವಾಗಿ ಶೇ.100ರಷ್ಟು ಸಾಧನೆ ಮಾಡಿದ್ದರಿಂದ ತಾಲ್ಲೂಕು ಆಡಳಿತದಿಂದ ಇಬ್ಬರು ಬಿಎಲ್ಓಗಳನ್ನು ಅಭಿನಂದಿಸಲಾಯಿತು.ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡ ಇಬ್ಬರು ಬಿಎಲ್ಓ ಅವರನ್ನು ಮತದಾರರ ನೋಂದಣಾಧಿಕಾರಿ ಬಿ.ಎ.ಸೌದಾಗರ,ತಹಶೀಲ್ದಾರ್ ಕೀರ್ತಿ ಚಾಲಕ್ ನೇತೃತ್ವದಲ್ಲಿ ಸನ್ಮಾನಿಸಲಾಯಿತು.







