Salumada Thimmakka National Greenery Award won by Kuvara of Ededore.

ಎಡೆದೊರೆ ನಾಡಿನ ಕುವರನಿಗೆ ಒಲಿದು ಬಂದ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್

ಎಡೆದೊರೆ ನಾಡಿನ ಕುವರನಿಗೆ ಒಲಿದು ಬಂದ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್

Ad
Ad

ರಾಯಚೂರು: ದುರ್ಗದ ಸಿರಿ ದಶರಥ ಸಾವೂರ್‌ಗೆ ರಾಷ್ಟ್ರೀಯ ಗ್ರೀನರಿ ಅವಾರ್ಡ್ ಹಳ್ಳಿಯಿಂದ ಬಂದು ಟಿವಿ-5 ಅಸೋಸಿಯೆಟ್ ಎಡಿಟರ್ ಆದ ಸಾಧಕನಿಗೆ ಪುರಸ್ಕಾರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದ ತಾಲೂಕು ದೇವದುರ್ಗದ ಪ್ರತಿಭೆ ದಶರಥ ಸಾವೂರ್‌ಗೆ ರಾಷ್ಟ್ರ ಮಟ್ಟದ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್ ಒಲಿದು ಬಂದಿದೆ.

Ad
Ad

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada

ರಾಜ್ಯದ ವಿವಿಧ ವಿಭಾಗದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಗ್ರೀನರಿ ಅವಾರ್ಡ್ ನೀಡಲಾಗುತ್ತಿದೆ. ಪ್ರತಿಷ್ಠಿತ ಪ್ರಶಸ್ತಿ ರಾಯಚೂರು ಜಿಲ್ಲೆಯ ದೇವದುರ್ಗಕ್ಕೆ ಒಲಿದು ಬಂದಿದ್ದು ಸಾಧಕನ ಸಾಧನೆಗೆ ಕನ್ನಡಿ ಹಿಡಿದಂತಾಗಿದೆ.

ದೇವದುರ್ಗ ತಾಲೂಕಿನ ಪುಟ್ಟ ಗ್ರಾಮ ಯರಮಸಾಳದಲ್ಲಿ ಬೆಳೆದ ದಶರಥ ಸಾವೂರ್ ಹಳ್ಳಿಯಲ್ಲಿ ಕಲಿತು ಇಂದು ಪ್ರತಿಷ್ಠಿತ ಟಿವಿ-5 ಚಾನೆಲ್‌ನ ಅಸೋಸಿಯೆಟ್ ಎಡಿಟರ್ ఆగి ಕಾರ್ಯನಿರ್ವಹಿಸುತ್ತಿದ್ದಾರೆ.

‘ದಶರಥ ಸಾವೂರ್’ 2010 ರಲ್ಲಿ ಸಮಯ ಟಿವಿ ಮೂಲಕ ಮಾಧ್ಯಮ ರಂಗಕ್ಕೆ ಧುಮುಕಿದ್ದರು. ಅಂದಿನಿಂದ ಹಿಂದುರುಗಿಯೇ ನೋಡಿಲಿಲ್ಲಾ.

ಸಮಯ ಟಿವಿ ರಾಯಚೂರು ವರದಿಗಾರನಾಗಿ ನಂತರ ಜಿಲ್ಲಾ ಬಾಗಲಕೋಟೆ ಹಾಗೂ ಹಾಸನ ಜಿಲ್ಲೆಯ ಟಿವಿ-9 ಜಿಲ್ಲಾ ವರದಿಗಾರ ರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ನಂತರ ರಾಜ್ಯದ ನಂಬರ್ 1 ವಿಜಯವಾಣಿಯ ಪತ್ರಿಕೆ ರಾಜಕೀಯ ವಿಶ್ಲೇಷಕರಾಗಿ ನ್ಯೂಜ್ 18 ಚಾನೆಲ್ ವರದಿಗಾರರಾಗಿ, ಬಳಿಕ ಟಿವಿ 5 ನಿರೂಪಕರಾಗಿ ಸದ್ಯ ಟಿವಿ-5 ಅಸೋಸಿಯೆಟ್ ಎಡಿಟರ್‌ ಆಗಿ ಸೇವೆ ಸಲ್ಲಿಸಿದ್ದಾರೆ. ಮಾಧ್ಯಮ ರಂಗದಲ್ಲಿ ಸುಮಾರು ಸೇವೆ ಸಲ್ಲಿಸುತ್ತಿದ್ದಾರೆ.

ಇವರ ಸಾಧನೆಗೆ 14 ವರ್ಷಗಳಿಂದ ಸಾಧನೆಯ ಹಾದಿ 2010 ರಲ್ಲಿ ಸಮಯ ಟಿವಿಯಲ್ಲಿ ಇನ್ಸುಟ್‌ನಲ್ಲಿ ಕಾರ್ಯಾರಂಭ, ಸಮಯ ಟಿವಿಯ ರಾಯಚೂರು ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿ, ಅಲ್ಲಿಂದ ಹೈದರಾಬಾದನ ವರದಿಗಾರನಾಗಿ ಮುಂದುವರಿಕೆ.

2012 ರಲ್ಲಿ ಟಿವಿ9 ಹುಬ್ಬಳ್ಳಿ ವರದಿಗಾರರಾಗಿ, ನಂತರದಲ್ಲಿ ಬಾಗಲಕೋಟೆ ಜಿಲ್ಲೆಯ ಟಿವಿ9 ವರದಿಗಾರರಾಗಿ ಸೇವೆ. 2014 ರಲ್ಲಿ ಹಾಸನ ಜಿಲ್ಲೆಯ ಟಿವಿ9 ವರದಿಗಾರರಾಗಿ ಪ್ರಖ್ಯಾತಿ ಪಡೆದಿದ್ದಾರೆ. ಹಾಸನದಲ್ಲಿ ವರದಿಗಾರರಾಗಿದ್ದ ವೇಳೆ ಇಡೀ ರಾಜ್ಯವೇ ತಿರುಗಿ ನೋಡುವಂತೆ ಮಾಡಿದ್ದು ಇವರ ವರದಿಗಾರಿಕೆ.

ಅರಸೀಕೆರೆ ತಾಲೂಕು ಕಾವಲುಗಾರರ ಗೊಲ್ಲರ ಹಟ್ಟಿಗಳು, ಮೌಡ್ಯ ಆಚರಣೆ
ಮಾಡುತ್ತಿದ್ದ ಬಗ್ಗೆ ಟಿವಿ9 ವಾಹಿನಿಯಲ್ಲಿ “ಹೆಣ್ಣಾಗಿದ್ದೇ ತಪ್ಪಾ” ಎಂಬ ಶೀರ್ಷಿಕೆ ಅಡಿಯಲ್ಲಿ ರಾಜ್ಯ ಸರ್ಕಾರದ ಕಣ್ಣು ತೆರೆಸಿದ್ದು ಮಾತ್ರವಲ್ಲ ಮೌಡ್ಯಗಳಿಂದ ಇದ್ದ ಗೊಲ್ಲರಹಟ್ಟಿಗಳಲ್ಲಿ ಜಾಗೃತಿ ಮೂಡಿಸಿ 43 ಗೊಲ್ಲರಹಟ್ಟಿಗಳನ್ನು ಬದಲಿಸಿದ ಮಹತ್ಕಾರ್ಯ ಮಾಡಿದ್ದಾರೆ.

ನಂತರ, ಟಿವಿ ಕನ್ನಡ ವಾಹಿನಿಯಲ್ಲಿ ಹಿರಿಯ ರಾಜಕೀಯ ವರದಿಗಾರರಾಗಿ ರಾಜಕೀಯದ ಒಳ ಹೊರಗೂ ವಿಶ್ಲೇಷಣೆಯ ವರದಿ ಮಾಡಿದ ಕೀರ್ತಿ ಇವರದ್ದು. ನ್ಯೂಸ್ 18 ಕನ್ನಡ ವಾಹಿನಿಯಲ್ಲಿ ಹಿರಿಯ ರಾಜಕೀಯ ವರದಿಗಾರರಾಗಿ ಅನುಪಮ ಸೇವೆ ಸಲ್ಲಿಸಿದ್ದಾರೆ. ಟಿವಿ ವಾಹಿನಿಯಲ್ಲಿ ನ್ಯೂಸ್ ಆ್ಯಂಕರ್ ಆಗಿ ‘ಆರ್ ವಿ ಸ್ಪೂಪಿಡ್?’ ಎಂಬ ಜನಪ್ರಿಯ ಕಾರ್ಯಕ್ರಮದ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ.

ಹತ್ತು ಹಲವು ರಾಜ್ಯ ಮಟ್ಟದ ಪ್ರಶಸ್ತಿಗಳು ಒಲಿದು ಬಂದಿವೆ.

2023ರಲ್ಲಿ ದಾವಣಗೇರಾ ದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದಿಂದ ಆಯೋಜಿಸಿದ್ದ 38ನೇ ಪತ್ರಕರ್ತರ ಸಮ್ಮೇಳನದಲ್ಲಿ ರಾಜ್ಯ
ಮಟ್ಟದ ಪ್ರಶಸ್ತಿ ಮುಡುಗೇರಿತ್ತು.

ಇದನ್ನೂ ಓದಿ: Muddebihal: ಬಡವರ ಶೆಡ್ ತೆರವು, ಜಿಪಿಎಸ್‌ಗೆ ಪಿಡಿಒಯಿಂದ ಹಣಕ್ಕೆ ಬೇಡಿಕೆ- ಆರೋಪ

ಮಾಧ್ಯಮ ರಂಗದ ಗುರುತರ ಸೇವೆ ಗುರುತಿಸಿ ಈಗ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್ ಒಲಿದು ಬಂದಿದ್ದು ರಾಯಚೂರು ಜಿಲ್ಲೆಗೆ ಮತ್ತಷ್ಟು ಹಿರಿಮೆ ಹೆಚ್ಚಿದಂತಾಗಿದೆ.

Latest News

ರೇಣುಕಾಚಾರ್ಯ ಸಿದ್ಧಾಂತ ಅನುಕರಣೀಯ: ಪಿಡಿಒ ಎಸ್ ಜಿ ಪರಸನ್ನವರ

ರೇಣುಕಾಚಾರ್ಯ ಸಿದ್ಧಾಂತ ಅನುಕರಣೀಯ: ಪಿಡಿಒ ಎಸ್ ಜಿ ಪರಸನ್ನವರ

ಕುಳಗೇರಿ ಕ್ರಾಸ್: ಜಗದ್ಗುರು ರೇಣುಕಾಚಾರ್ಯರು ಬೋಧಿಸಿರುವ ತತ್ವ ಸಿದ್ಧಾಂತಗಳು ಸಮಾಜದ ಸುಧಾರಣೆಗೆ ಸೋಪಾನವಾಗಿವೆ. ಇಂಥ

ಮೃತ ಕುರಿಗಾಹಿ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಐದು ಲಕ್ಷ ಮಂಜೂರು

ಮೃತ ಕುರಿಗಾಹಿ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಐದು ಲಕ್ಷ ಮಂಜೂರು

ಬಾದಾಮಿ: ಕಳೆದ ಮಾ.9 ರಂದು ತಾಲೂಕಿನ ಉಗಲವಾಟ ಗ್ರಾಮದ ಕುರಿಗಳ್ಳರಿಂದ ಕೊಲೆಯಾದ ಮೃತ ಕುರಿಗಾಹಿ

ರೇಣುಕಾಚಾರ್ಯರ ಜಯಂತಿ ಆಚರಣೆ

ರೇಣುಕಾಚಾರ್ಯರ ಜಯಂತಿ ಆಚರಣೆ

ಮುದ್ದೇಬಿಹಾಳ : ತಾಲ್ಲೂಕು ಆಡಳಿತದಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ರೇಣುಕಾಚಾರ್ಯರ ಜಯಂತಿ

ಸಿ ಎಲ್ ಪಿ ಸಭೆಯಲ್ಲಿ ಸಚಿವರ ಜಟಾಪಟಿ? ಬಣ ರಾಜಕೀಯ ಸಂಘರ್ಷ ಮುನ್ನೆಲೆಗೆ!

ಸಿ ಎಲ್ ಪಿ ಸಭೆಯಲ್ಲಿ ಸಚಿವರ ಜಟಾಪಟಿ? ಬಣ ರಾಜಕೀಯ ಸಂಘರ್ಷ ಮುನ್ನೆಲೆಗೆ!

ರಾಯಚೂರು, ಮಾ.11- ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ಸಂಘರ್ಷ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ನಿನ್ನೆ

10 ವಿದ್ಯಾರ್ಥಿಗಳು ಉಚಿತ ಶಿಕ್ಷಣಕ್ಕೆ ಆಯ್ಕೆ

10 ವಿದ್ಯಾರ್ಥಿಗಳು ಉಚಿತ ಶಿಕ್ಷಣಕ್ಕೆ ಆಯ್ಕೆ

ಮುದ್ದೇಬಿಹಾಳ : ಗ್ರಾಮೀಣ ಪ್ರದೇಶದ ಬಡ ಪ್ರತಿಭಾನ್ವಿತ ಮಕ್ಕಳಿದ್ದರೆ ಗ್ರಾಮದ ಹಿರಿಯರ ಶಿಫಾರಸ್ಸಿನೊಂದಿಗೆ ಅಂತಹ ಮಕ್ಕಳಿಗೆ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ನೀಡಲು ಬದ್ಧ ಎಂದು ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಯ ಅಧ್ಯಕ್ಷ ಎಂ.ಎಸ್.ಕೊಪ್ಪ ಹೇಳಿದರು. ತಾಲ್ಲೂಕಿನ ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಯಲ್ಲಿ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಕೊಪ್ಪ ನೇತೃತ್ವದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚೆನ್ನಬಸವಶ್ರೀ ಸ್ಕಾಲರ್‌ಶಿಪ್ ಎಕ್ಸಾಂನಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.ಹಳ್ಳಿಯ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂದು ಕಷ್ಟಪಟ್ಟು

ರಾಜಸ್ವ ಸಂಗ್ರಹಿಸಲು ವರ್ತಕರು, ಅಧಿಕಾರಿಗಳ ಮೇಲೆ ಹೊರೆ: ಬಿ.ಎನ್.ಹೂಗಾರ

ರಾಜಸ್ವ ಸಂಗ್ರಹಿಸಲು ವರ್ತಕರು, ಅಧಿಕಾರಿಗಳ ಮೇಲೆ ಹೊರೆ: ಬಿ.ಎನ್.ಹೂಗಾರ

ಮುದ್ದೇಬಿಹಾಳ : 2024-25ನೇ ಸಾಲಿಗೆ ದೇಶದಲ್ಲಿ ಅತಿ ಹೆಚ್ಚು ಜಿ.ಎಸ್.ಟಿ ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯವು 2 ನೇ ಸ್ಥಾನದಲ್ಲಿದೆ. 2024-25ರ ಪರಿಷ್ಕೃತ ಅಂದಾಜಿನಲ್ಲಿ ವಾಣಿಜ್ಯ ತೆರಿಗೆಯಿಂದ ಒಟ್ಟು 1,05,000 ಕೋಟಿ ರೂ.ಗಳ ರಾಜಸ್ವವನ್ನು ನಿರೀಕ್ಷಿಸಲಾಗಿದ್ದು ಇದು ವರ್ತಕರಿಗೆ ಹಾಗೂ ಅಧಿಕಾರಿಗಳಿಗೆ ಒತ್ತಡ ವಾಗಬಹುದು ಎಂದು ತೆರಿಗೆ ಸಲಹೆಗಾರ ಬಿ.ಎನ್.ಹೂಗಾರ ತಿಳಿಸಿದ್ದಾರೆ. ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ತೆರಿಗೆ ಅಧಿನಿಯಮದಡಿ ವಾರ್ಷಿಕವಾಗಿ ಅನುಮತಿಸಬಹುದಾದ ಗರಿಷ್ಟ ಮಿತಿ 2,500