ಮಾಜಿ ಶಾಸಕರು ಐದು ವರ್ಷ ನಿದ್ದೆ ಮಾಡುತ್ತಿದ್ದರೇ ?-ಶಾಸಕ ನಾಡಗೌಡ ಪ್ರಶ್ನೆ

ಮಾಜಿ ಶಾಸಕರು ಐದು ವರ್ಷ ನಿದ್ದೆ ಮಾಡುತ್ತಿದ್ದರೇ ?-ಶಾಸಕ ನಾಡಗೌಡ ಪ್ರಶ್ನೆ

ಮುದ್ದೇಬಿಹಾಳ : ಮತಕ್ಷೇತ್ರದ ತಾಳಿಕೋಟಿ ತಾಲ್ಲೂಕಿನಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ತಮ್ಮ ಅವಧಿಯಲ್ಲಿ ಜಾಗೆ ಗುರುತಿಸುವುದನ್ನು ಬಿಟ್ಟು ಮಾಜಿ ಶಾಸಕರು ಐದು ವರ್ಷ ನಿದ್ದೆ ಮಾಡುತ್ತಿದ್ದರೇ ಎಂದು ಶಾಸಕ ಸಿ.ಎಸ್.ನಾಡಗೌಡ ಮಾಜಿ ಶಾಸಕ ನಡಹಳ್ಳಿ ಅವರಿಗೆ ಪ್ರಶ್ನಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಶಾಸಕರಾಗಿದ್ದುಕೊಂಡು ಐದು ವರ್ಷ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಶ್ರಮಿಸದೇ ನಿದ್ದೆ ಮಾಡಿದ್ರಾ ನೀವು ? ಎಂದ ನಾಡಗೌಡ, ನಿಮಗೇಕೆ ಜಾಗೆ ಗುರುತಿಸಲಾಗಲಿಲ್ಲ.ನಿಮ್ಮಲ್ಲಿ ಇಚ್ಛಾಶಕ್ತಿ ಇರಲಿಲ್ಲ ಎಂದು ಮಾಜಿ ಶಾಸಕ ನಡಹಳ್ಳಿ ವಿರುದ್ಧ ಟೀಕಿಸಿದರು.
ನಾನು ಆಯ್ಕೆಯಾಗಿ ಬಂದ ಎರಡನೆ ತಿಂಗಳಲ್ಲಿ ಪ್ರಜಾಸೌಧ ನಿರ್ಮಾಣದ ಸ್ಥಳ ಗುರುತಿಸಲು ಪ್ರಯತ್ನ ಮುಂದುವರೆಸಿದ್ದೇವು.ಕೆಲವರು ನಾವು ಕೊಡುತ್ತೇವೆ ಎಂದು ಮುಂದೆ ಬಂದವರು ನಂತರ ಹಿಂದೇಟು ಹಾಕುತ್ತಿದ್ದರು.ಹೀಗೆ ಒಂದೂವರೆ ವರ್ಷ ಕಳೆದು ಹೋಯ್ತು.ಸದ್ಯಕ್ಕೆ ಮೈಲೇಶ್ವರ ರಸ್ತೆಯಲ್ಲಿ ಗುರುತಿಸಿರುವ ಜಾಗೆಯನ್ನು ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.50 ಅಡಿ ರಸ್ತೆ ಬೇಕು ಎಂದು ತಿಳಿಸಿದ್ದಾರೆ.ಅದಕ್ಕೆ ಜಮೀನಿನ ಮಾಲೀಕರು ಒಪ್ಪಿದ್ದಾರೆ.ನಗರಸಭೆಯಾಗಿ ಮೇಲ್ದರ್ಜೆಗೇರಿಸುವಾಗ ಮೈಲೇಶ್ವರ ಗ್ರಾಮ ಮುಂಬರುವ ದಿನಗಳಲ್ಲಿ ತಾಳಿಕೋಟಿಗೆ ಸೇರ್ಪಡೆಯಾಗಲಿದೆ.ಅಷ್ಟಕ್ಕೂ ತಹಶೀಲ್ದಾರ್ ಕಚೇರಿಗೆ ಬರುವವರು ಕೆಲಸ ಇದ್ದವರು ಮಾತ್ರ ಬರುತ್ತಾರೆ.ಈ ಹಿಂದೆ ಅವಿಭಜಿತ ಮುದ್ದೇಬಿಹಾಳ ತಾಲ್ಲೂಕು ಇದ್ದಾಗ 34 ಕಿ.ಮೀ ದೂರದವರೆಗೆ ಸಂಚರಿಸಿ ಕೆಲಸ ಮಾಡಿಕೊಂಡು ಬರುತ್ತಿದ್ದರು.ಈಗ 3 ಕಿ.ಮೀ ದೂರ ಎನ್ನುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ ಎಂದು ಹೇಳಿದರು.

ವಿಧಾನಸಭೆಯಲ್ಲಿ ಸಚಿವರು ಭೇಟಿಯಾದಾಗಲೊಮ್ಮೆ ಪ್ರಜಾಸೌಧದ ನಿರ್ಮಾಣದ ಹಣ ವಾಪಸ್ ಸರ್ಕಾರಕ್ಕೆ ಹೋಗುತ್ತದೆ.ಆದಷ್ಟು ಬೇಗ ನಿರ್ಮಾಣಕ್ಕೆ ಜಾಗೆ ದೊರಕಿಸಿಕೊಡುವ ವ್ಯವಸ್ಥೆ ಮಾಡಿ ಎಂದು ಮೌಖಿಕವಾಗಿ ಕೇಳಿದ್ದರು.ಅಷ್ಟರಲ್ಲಿ ಪ್ರಭು ಮದರಕಲ್ ಹಾಗೂ ಇತರರು ಎರಡು ಎಕರೆ ಜಮೀನು ದಾನವಾಗಿ ಕೊಡುತ್ತೇವೆ ಎಂದು ಮುಂದೆ ಬಂದಿದ್ದರು.ಅದಕ್ಕೆ ವಿನಾಕಾರಣ ವಿರೋಧ ಮಾಡುತ್ತಿರುವುದು ಸರಿಯಲ್ಲ. ಪಿಡಬ್ಲೂö್ಯಡಿಯವರು ಕೊಡುವುದಿಲ್ಲ,ಕೆಇಬಿ ಅವರು ನಮಗೆ ಜಾಗ ಇಲ್ಲ ಎಂದರು.ಹೀಗಾದಾಗ ನಾವು ದಾನವಾಗಿ ಕೊಡುವ ದಾನಿಗಳನ್ನು ಸಂಪರ್ಕಿಸಿ ಸರ್ಕಾರದ ನಿಯಮಗಳಂತೆ ಪ್ರಜಾಸೌಧ ನಿರ್ಮಾಣಕ್ಕೆ ಮುಂದಾಗುವ ಆಲೋಚನೆ ಮಾಡುತ್ತಿದ್ದರೆ ಇವರು ಇಲ್ಲದ ವಿಷಯಗಳನ್ನು ಜನರ ತಲೆಯಲ್ಲಿ ತುಂಬುತ್ತಿದ್ದಾರೆ ಎಂದು ಆರೋಪಿಸಿದರು.

ಇವತ್ತಿಗೂ ಪ್ರಜಾಸೌಧ ಅಲ್ಲೇ ಆಗಬೇಕು ಎಂಬುದು ನನ್ನ ಆಸೆಯೇನು ಇಲ್ಲ. ಬೇರೆಕಡೆ ಉಚಿತವಾಗಿ ಭೂಮಿ ಕೊಡುತ್ತಿದ್ದರೆ ಸಾರ್ವಜನಿಕರು ಯಾರೆ ಮುಂದೆ ಬಂದರೂ ಅದಕ್ಕೆ ನಾವು ಅಲ್ಲಿಯೆ ಪ್ರಜಾಸೌಧ ನಿರ್ಮಾಣ ಮಾಡಲು ಸಿದ್ದರಿದ್ದೇವೆ ಎಂದೂ ನಾಡಗೌಡರು ಹೇಳಿದರು.

ಸಾರ್ವಜನಿಕರ ಹಿತದೃಷ್ಟಿಯಿಂದ ಯಾರಾದರೂ ಪ್ರಜಾಸೌಧ ನಿರ್ಮಾಣಕ್ಕೆ ಜಾಗೆ ಕೊಡಲು ಮುಂದೆ ಬಂದರೆ ಈಗಲೂ ಸರ್ಕಾರದ ಗಮನಕ್ಕೆ ತಂದು ಸ್ಥಳ ಬದಲಾಯಿಸುವ ಬಗ್ಗೆ ಆಲೋಚಿಸುತ್ತೇವೆ.ಆದರೆ ನಾಡಗೌಡರಿಂದ ಪ್ರಜಾಸೌಧ ಮಾಡಲಿಲ್ಲ ಎಂಬ ಗೂಬೆ ಕೂಡಿಸುವ ಹುನ್ನಾರಕ್ಕೆ ನಾನು ಆಸ್ಪದ ನೀಡುವುದಿಲ್ಲ.ಹಳೇ ಪುರಸಭೆ ಜಾಗೆಯಲ್ಲಿ ಪ್ರಜಾಸೌಧ ಮಾಡುವಷ್ಟು ಜಾಗೆ ಇಲ್ಲ.ಎಕರೆಗೆ 70 ಲಕ್ಷದಂತೆ ಮಾರಾಟವಾಗುವ ಜಾಗೆಯನ್ನು ಈಗ ದಾನ ಮಾಡುತ್ತಿದ್ದಾರೆ.ಅದಕ್ಕೆ ವಿರೋಧಿಸುತ್ತಿರುವುದು ಹಾಸ್ಯಾಸ್ಪದ ಎನ್ನಿಸುತ್ತದೆ ಎಂದರು.

ಶಿವಕುಮಾರ ಸ್ವಾಮೀಜಿಯವರ ಹೆಸರಿನಲ್ಲಿ ಹೆರಿಗೆ ಆಸ್ಪತ್ರೆ ಕಟ್ಟಿಸುತ್ತೇನೆ, ಗಾರ್ಮೆಂಟ್ ಫ್ಯಾಕ್ಟರಿ ಕಟ್ಟುತ್ತೇನೆ ಎಂದವರು ಏನು ಮಾಡಿದ್ದಾರೆ.ನಾಲತವಾಡದಲ್ಲಿ ಬೇನಾಮಿಯಾಗಿ ಆಸ್ತಿ ಖರೀದಿಸಿ ಈಗ ಪ್ಲಾಟುಗಳನ್ನು ಮಾಡಿ ಮಾರಾಟ ಮಾಡಿಸುತ್ತಿದ್ದಾರೆ.21 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ ನಾನು ಭೇಟಿ ಕೊಟ್ಟಿಲ್ಲ ಎಂದವರಿಗೆ ನಾನು ಅಲ್ಲಿನ ಹೋರಾಟಗಾರರು,ನಾಯಕರನ್ನು ಕರೆದು ಮಾತನಾಡಿಸಿದ್ದೇನೆ.ಭಾಷೆ ಮೇಲೆ ಹಿಡಿತ ಇರಬೇಕು.ಹೋರಾಟಗಾರರು ಅಲ್ಲೊಂದು ಶೋ ಮಾಡ್ತಾ ಕೂಡುತ್ತಿದ್ದೀರಿ. ನನ್ನ ಬೇರೆ ಕೆಲಸ ಬಿಟ್ಟು ದಿನ ಅದೇ ಮಾಡುತ್ತಾ ಕೂಡಬೇಕಾ ? ಎಂದು ನಾಡಗೌಡರು ಖಾರವಾಗಿ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ,ತಾಳಿಕೋಟಿ ಕಾಂಗ್ರೆಸ್ ಮುಖಂಡ ಪ್ರಭುಗೌಡ ಮದರಕಲ್, ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಮುಖಂಡರಾದ ವಾಯ್.ಎಚ್.ವಿಜಯಕರ್, ಶಿವಶಂಕರಗೌಡ ಹಿರೇಗೌಡರ,ಪ್ರಭುರಾಜ ಕಲ್ಬುರ್ಗಿ, ಸಂಗನಗೌಡ ಬಿರಾದಾರ,ಸದ್ದಾಂ ಕುಂಟೋಜಿ,ಸದು ಮಠ, ಡಾ.ವಿಜಯಕುಮಾರ ಗೂಳಿ,ರಾಜು ನಾಯಕ,ಹಣಮಂತ ಭೋವಿ ಮೊದಲಾದವರು ಇದ್ದರು.

ನಡಹಳ್ಳಿ ನನಗೆ ಸಾಷ್ಟಾಂಗ ಹಾಕಿದ್ದರು: ನನಗಿಂತ ಹತ್ತು ವರ್ಷ ಸಣ್ಣವರು.ಈ ಹಿಂದೆ ನನ್ನ ಮನೆಗೆ ಬಂದು ನಡಹಳ್ಳಿಯವರು ಸಾಷ್ಟಾಂಗ ಹಾಕಿದ್ದಾರೆ.ಈ ರೀತಿ ನೀವು ಮಾಡಬೇಡಿ ಎಂದಾಗ ನೀವು ಹಿರಿಯರಿದ್ದೀರಿ ಗೌರವ ಕೊಡುತ್ತೇನೆ ಎಂದು ಹೇಳಿದ್ದರು.ನಾನು ಗೌರವ ಕೊಟ್ಟೇ ಮಾತನಾಡಿದ್ದೆ.ಆದರೆ ಈಗ ಏಕವಚನದಲ್ಲಿ ಮಾತನಾಡುತ್ತಿರುವುದು ನೋಡಿದರೆ ಈ ಹಿಂದೆ ಇದ್ದ ಆ ನಮ್ಮ ಹಿರಿತನ ಇವರಿಗೆ ಈಗ ಎಲ್ಲಿ ಹೋಯಿತು ಎಂದು ಎನ್ನಿಸುತ್ತಿದೆ.ನೀವು ಏಕವಚನದಲ್ಲಿ ಮಾತನಾಡಲು ಶುರು ಮಾಡಿದರೆ ನಮ್ಮ ಹಿಂಬಾಲಕರು ನಿಮಗೆ ಬೇರೆ ಭಾಷೆ ಬಳಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುವುದಾಗಿ ತಿಳಿಸಿದರು. ಮಾನನಷ್ಟ ಮೊಕದ್ದಮೆ ಹೂಡುವೆ : ಸಾರ್ವಜನಿಕರು ದೇಣಿಗೆಯಿಂದ ಜಾಗೆ ಖರೀದಿಸುವ ಮಾತುಕತೆ ನಡೆದಾಗ ನಾನು ಐದು ಲಕ್ಷ ರೂ.ಕೊಡುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದೆ.ನಮಗೆ ಅದೇ ದೊಡ್ಡ ಮೊತ್ತ.ಆದರೆ ಇವರು ಇವರು 7 ಸಲ ಎಂ.ಎಲ್.ಎ ಆಗಿದ್ದಾರೆ.ಅವರೇ ಕೊಡಿಸಲಿ ನೂರಾರು ಕೋಟಿ ರೂ. ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ.ಬುದ್ದಿಗೇ ಇವರಿಗೆ ದರ್ಶನ ಇದೆಯೋ ಇಲ್ಲವೋ ಗೊತ್ತಿಲ್ಲ.ಸುಮ್ಮನೆ ಬಾಯಿ ಸಡಿಲ ಬಿಟ್ಟು ಮಾತನಾಡಿದರೆ ನಾನು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ.ಎಲೆಕ್ಷನ್‌ಗಾಗಿ ಮಾಡಿದ ಸಾಲವನ್ನೆ ತೀರಿಸಲು ಆಗುತ್ತಿಲ್ಲ.ನೀವು ಎಲ್ಲೆಲ್ಲಿ ಬೇನಾಮಿ ಆಸ್ತಿ ಮಾಡಿದ್ದೀರಿ ಗೊತ್ತಿಲ್ಲವೆ ? ಸೌಜನ್ಯದ ಭಾಷೆ ಬಳಸಿ ಮಾತನಾಡಬೇಕು.ಮಾಜಿ ಶಾಸಕರು,ಪಕ್ಷದ ರೈತ ಮೋರ್ಚಾ ಅಧ್ಯಕ್ಷರೊಬ್ಬರು ಮಾತನಾಡುವ ಸಂಸ್ಕೃತಿಯೇ ? ಧಾಟಿ ಎಂತಹದ್ದು ? ಬೇನಾಮಿ ಆಸ್ತಿ ನಾನು ಮಾಡಿದ್ದಕ್ಕೆ ದಾಖಲೆ ತೋರಿಸಿ ಎಂದು ನಾಡಗೌಡರು ಪ್ರಶ್ನಿಸಿದರು. ದೋಣಿ ಆಚೇಗೆ ಇರುವ 141 ಸರ್ವೆ ನಂಬರ್‌ದಲ್ಲಿ ಬರುವ ಭೂಮಿಯಲ್ಲಿ ಪ್ರಜಾಸೌಧ ಮಾಡಿದ್ದರೆ ಒಳ್ಳೆಯದೆಂದು ವಿಚಾರಿಸಿದಾಗ ಆ ಜಮೀನು ಖರೀದಿ ಹಾಕಿಕೊಂಡಿದ್ದಾರೆ ಎಂದು ತಿಳಿದು ಬಂದಿತ್ತು. ಟೆಂಡೆನ್ಸ್ ಆಕ್ಟ್ನಲ್ಲಿ 2013-14 ಕ್ಲಿಯರ್ ಇಲ್ಲ ಎಂದು ತಿಳಿದು ಬಂದಿತು.ಆದರೆ 139 ಎಕರೆ ಯಾವನರೆ ಒಬ್ಬ ದಡ್ಡ ಆಫೀಸರ್ ಡಿ ಕ್ಲಾಸ್ ಲ್ಯಾಂಡ್‌ನ್ನು ಲ್ಯಾಂಡ್ ರಿಫಾರ್ಮ್ ಆಕ್ಟ್ ಅಡಿ ಮಂಜೂರಿ ಮಾಡಲು ಬರುತ್ತದೆಯೇ ? ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಇಷ್ಟೊಂದು ಜಾಗೆ ಹೇಗೆ ಆಗಿದೆ ಎಂಬುದು ನಮಗೂ ಯಕ್ಷ ಪ್ರಶ್ನೆ. ಇದು ಹೇಗೆ ಆಗಿದೆ ಎಂದು ತನಿಖೆ ಮಾಡಲು ಒತ್ತಾಯಿಸಿದ್ದೇವೆ.ಇದರ ದಾಖಲೆಗಳು ಲಭ್ಯವಿಲ್ಲ.ಇಂತಹ ಜಾಗೆಯ ಬಗ್ಗೆ ಆಲೋಚಿಸಲು ಬರುತ್ತದೆಯೇ ? ಯಾರ ಮನೆಗೆ ದಾಖಲೆಗಳು ಹೋಗುತ್ತಿದ್ದವು ? ಟ್ರಿಬ್ಯೂನೆಲ್ ಒಂದು ನ್ಯಾಯಾಂಗ ವ್ಯವಸ್ಥೆ ಇದ್ದಂತೆ.ಅದು ಎಲ್ಲೂ ಬಹಿರಂಗಪಡಿಸುವOತಿಲ್ಲ.ಆದರೆ ಯಾರ ಅವಧಿಯಲ್ಲಿ ಈ ದಾಖಲೆಗಳು ಬದಲಾಗಿವೆ ಎಂಬುದು ತನಿಖೆ ಆಗಬೇಕು ಎಂದು ನಾಡಗೌಡರು ಹೇಳಿದರು.

ಏಳೇಳು ಜನ್ಮಕ್ಕು ಇಂತವರನ್ನು ಜನ ಎಂ.ಎಲ್.ಮಾಡುವುದಿಲ್ಲ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಸುಪ್ರೀಂ.ಸಾರ್ವಜನಿಕ ಜೀವನದಲ್ಲಿರುವವರು ಘನತೆ,ಗೌರವ ಬಿಟ್ಟು ಮಾತನಾಡಬಾರದು.ಇನ್ನು ಏಳೇಳು ಜನ್ಮಕ್ಕೂ ಇಂತಹವರನ್ನು ನಮ್ಮ ಜನ ಎಂಎಲ್‌ಎ ಮಾಡುವುದಿಲ್ಲ.ಮುಂದೆ ನಿಮ್ಮನ್ನು ನನ್ನನ್ನು ತಿರಸ್ಕಾರ ಮಾಡಬಹುದು.ಆದರೆ ನಿಮ್ಮನ್ನು ಮಾತ್ರ ಯಾವ ಕಾಲಕ್ಕೂ ಚುನಾಯಿಸುವುದಿಲ್ಲ ಎಂದು ನಾಡಗೌಡರು ಭವಿಷ್ಯ ನುಡಿದರು.

Latest News

ಪಿಎಸ್‌ಐ ಸಂಜಯ ತಿಪರೆಡ್ಡಿಗೆ ಸನ್ಮಾನ:                                       ಜೀವ ಪಣಕ್ಕಿಟ್ಟು ಕಳ್ಳರನ್ನು ಬಂಧಿಸಿದ ದಕ್ಷ ಅಧಿಕಾರಿ ತಿಪರೆಡ್ಡಿ

ಪಿಎಸ್‌ಐ ಸಂಜಯ ತಿಪರೆಡ್ಡಿಗೆ ಸನ್ಮಾನ: ಜೀವ ಪಣಕ್ಕಿಟ್ಟು ಕಳ್ಳರನ್ನು ಬಂಧಿಸಿದ ದಕ್ಷ ಅಧಿಕಾರಿ ತಿಪರೆಡ್ಡಿ

ಮುದ್ದೇಬಿಹಾಳ : ಜೀವ ಪಣಕ್ಕಿಟ್ಟು ಅಂತರಾಜ್ಯದ ಕಳ್ಳರನ್ನು ಹೆಡೆಮುರಿ ಕಟ್ಟಿದ ದಕ್ಷ ಅಧಿಕಾರಿ ಸಂಜಯ

ಹೆಸ್ಕಾಂ ಎಇಇ ಆರ್.ಆರ್.ಹಂಡಿ ಭಾಗಿ :                                              ಹೆಸ್ಕಾಂ ಕಚೇರಿಯಲ್ಲಿ ನಾರಾಯಣಗುರು,ನೂಲಿಯ ಚಂದಯ್ಯ ಜಯಂತಿ

ಹೆಸ್ಕಾಂ ಎಇಇ ಆರ್.ಆರ್.ಹಂಡಿ ಭಾಗಿ : ಹೆಸ್ಕಾಂ ಕಚೇರಿಯಲ್ಲಿ ನಾರಾಯಣಗುರು,ನೂಲಿಯ ಚಂದಯ್ಯ ಜಯಂತಿ

ಮುದ್ದೇಬಿಹಾಳ : ಬ್ರಹ್ಮಶ್ರೀ ನಾರಾಯಣಗುರು ಹಾಗೂ ಶರಣ ನೂಲಿಯ ಚಂದಯ್ಯನವರು ಕಾಯಕದ ಮಹತ್ವ ಸಾರುವ

‘ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಾಡಗೌಡರು ಮನೆಗೆ ಹೋಗಲಿ’

‘ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಾಡಗೌಡರು ಮನೆಗೆ ಹೋಗಲಿ’

ಮುದ್ದೇಬಿಹಾಳ : ರಾಜ್ಯಾದ್ಯಂತ ಬರದ ಪರಿಸ್ಥಿತಿ ಇದ್ದರೂ ವಿಜಯಪುರ ಜಿಲ್ಲೆಯಲ್ಲಿ ಕೇವಲ ಮೂರು ತಾಲ್ಲೂಕುಗಳನ್ನು

ಮುದ್ದೇಬಿಹಾಳ : ನೂತನ ಬಿಇಓ ಎಂ.ಎಸ್.ಬಡದಾನಿ ಅಧಿಕಾರ ಸ್ವೀಕಾರ

ಮುದ್ದೇಬಿಹಾಳ : ನೂತನ ಬಿಇಓ ಎಂ.ಎಸ್.ಬಡದಾನಿ ಅಧಿಕಾರ ಸ್ವೀಕಾರ

ಮುದ್ದೇಬಿಹಾಳ : ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ಎಂ.ಎಸ್.ಬಡದಾನಿ ಅವರಿಗೆ ತಾಲ್ಲೂಕಿನ ಅನುದಾನಿತ

ಕಲಾವಿದರ ಸಂಘ ಉದ್ಘಾಟನೆ:                                                           ಸಮಾಜ ಬಯಸುವುದನ್ನು ಕಲಾವಿದ ನೀಡುತ್ತಾನೆ-ಹೂಗಾರ

ಕಲಾವಿದರ ಸಂಘ ಉದ್ಘಾಟನೆ: ಸಮಾಜ ಬಯಸುವುದನ್ನು ಕಲಾವಿದ ನೀಡುತ್ತಾನೆ-ಹೂಗಾರ

ಮುದ್ದೇಬಿಹಾಳ : ಗ್ರಾಮೀಣ ಭಾಗದಲ್ಲಿ ಜನಪದ ಹಾಡುಗಳಲ್ಲಿ ಅಶ್ಲೀಲತೆ ಹೆಚ್ಚುತ್ತಿದ್ದು ಅದಕ್ಕೆ ಕಡಿವಾಣ ಹಾಕಬೇಕು ಎಂದು ಎಲ್ಲರೂ ಹೇಳುತ್ತಾರೆ.ಆದರೆ ಜನರು,ಸಮಾಜ ಬಯಸುವುದನ್ನೇ ಬಡ ಕಲಾವಿದರು ನೀಡುತ್ತಾರೆ.ಮೊದಲು ಸಮಾಜ ಯಾವುದನ್ನು ಕಲಾವಿದರಿಂದ ಬಯಸಬೇಕು ಎಂಬುದನ್ನು ಆತ್ಮಾವಲೋಕನಕ್ಕೆ ಇದು ಸಕಾಲ ಎಂದು ಹಾಸ್ಯ ಕಲಾವಿದ ಗೋಪಾಲ ಹೂಗಾರ ಹೇಳಿದರು. ಪಟ್ಟಣದ ಓಸ್ವಾಲ್ ಫಂಕ್ಷನ್ ಹಾಲ್ನಲ್ಲಿ ಹಮ್ಮಿಕೊಂಡಿದ್ದ ಪಂ.ಪುಟ್ಟರಾಜ ಗವಾಯಿಗಳ ಜನಪದ ಹಾಗೂ ಸಾಂಸ್ಕೃತಿಕ ಕಲಾವಿದರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಬಹುತೇಕ ಕಡೆಗಳಲ್ಲಿ

ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆ ಸೇವೆಗೆ ನಾಗಲಕ್ಷ್ಮೀ ಚೌಧರಿ  ಮೆಚ್ಚುಗೆ

ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆ ಸೇವೆಗೆ ನಾಗಲಕ್ಷ್ಮೀ ಚೌಧರಿ ಮೆಚ್ಚುಗೆ

ಮುದ್ದೇಬಿಹಾಳ : ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ಕೊಡುವ ಪ್ರಮಾಣ ಪತ್ರವೇ ನಿಮ್ಮ ಸೇವೆಯ ನಿಜವಾದ ಅರ್ಹತೆಯಾಗಿದೆ.ಒಳ್ಳೆಯ ಸೇವೆ ನೀಡುವುದನ್ನು ಮುಂದುವರೆಸಿಕೊoಡು ಸಾಗಿ ಎಂದು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭಾನುವಾರ ಭೇಟಿ ನೀಡಿ ಆಸ್ಪತ್ರೆಯ ಮೂಲಸೌಕರ‍್ಯಗಳನ್ನು ವೀಕ್ಷಿಸಿ ಬಾಣಂತಿಯರ ಕೊಠಡಿ,ಹೆರಿಗೆ ಕೊಠಡಿಗಳನ್ನು ಪರಿಶೀಲನೆ ನಡೆಸಿದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದಿದ್ದ ರೋಗಿಗಳನ್ನು ಅವರ ಸಂಬoಧಿಕರನ್ನು ಮಾತನಾಡಿಸಿ ಆಸ್ಪತ್ರೆಯ ಸೇವೆ ಬಗ್ಗೆ ಮೆಚ್ಚುಗೆ