ಮುದ್ದೇಬಿಹಾಳ : ತಾಲೂಕಿನ ಹುಲ್ಲೂರ ತಾಂಡಾ(ವೆಂಕಟೇಶ ನಗರ) ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಬಸು ದೇವರ ಜಾತ್ರಾ ಮಹೋತ್ಸವದಲ್ಲಿ ನೂತನವಾಗಿ ಕರ್ನಾಟಕ ಸರಕಾರದ ಬಂಜಾರ ಭಾಷಾ ಅಕಾಡೆಮಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಸ್ಥಳೀಯ ನಿವಾಸಿ ಡಾ. ಮೋತಿಲಾಲ ರೂಪಲಪ್ಪ ಚವ್ಹಾಣ ಅವರನ್ನು ಜಾತ್ರಾ ಕಮೀಟಿ ಹಾಗೂ ತಾಂಡಾದ ಹಿರಿಯರು ರಾಜಕೀಯ ಮುಖಂಡರ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ. ಮೋತಿಲಾಲ ರೂಪಲಪ್ಪ ಚವ್ಹಾಣ ಮಾತನಾಡಿ ನನಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸಭಾಪತಿ ರುದ್ರಪ್ಪ ಲಮಾಣಿ ಅವರ ಸರಕಾರ ಅಧಿಕಾರ ನೀಡಿದ್ದಾರೆ. ನಮ್ಮ ಬಂಜಾರ ಸಂಸ್ಕೃತಿ ಭಾಷೆ ಉಳಿಯಲು ನಿಷ್ಪಕ್ಷಪಾತದಿಂದ ನನ್ನ ಅಧಿಕಾರ ನಡೆಸುತ್ತೇನೆ ಎಂದರು.
ಊರಿನ ಹಿರಿಯರಾದ ಬಾಬು ನಾಯಕ, ವಾಲು ನಾಯಕ, ರಾಮು ರಾಠೋಡ, ಖುಬಪ್ಪ ರಾಠೋಡ, ನಿವೃತ್ತ ಮೀನುಗಾರಿಕೆ ಸಹಾಯಕ ನಿರ್ದೇಶಕ ಬಿ ಎಸ್ ಲಮಾಣಿ, ಡಾ.ತಿರುಪತಿ ಶಿರಡಿನಾಯಕ, ಕಾಂಗ್ರೆಸ್ ಮುಖಂಡ ಸಂತೋಷ ಚವ್ಹಾಣ, ಗ್ರಾ.ಪಂ ಸದಸ್ಯ ಶಿವಾನಂದ ಲಮಾಣಿ, ಮಾಜಿ ಗ್ರಾ.ಪಂ ಸದಸ್ಯ ಥಾವರಪ್ಪ ಜಾಧವ, ನಿವೃತ್ತ ಸಿ.ಪಿ.ಆಯ್ ಶಿವಾನಂದ ನಾಯಕ, ಜಾತ್ರಾ ಕಮೀಟಿ ಅಧ್ಯಕ್ಷ ಶಾಂತಪ್ಪ ರಾಠೋಡ, ಜಾತ್ರಾ ಕಮೀಟಿ ಮುಖಂಡ ಸಂತೋಷ ಚವ್ಹಾಣ, ವಕೀಲರಾದ ತುಕಾರಾಮ ಹುಲ್ಲೂರ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







