ಮುದ್ದೇಬಿಹಾಳ : ಸಾರ್ವಜನಿಕರಿಗೆ ನಮ್ಮಿಂದ ಸಾಧ್ಯವಷ್ಟರ ಮಟ್ಟಿಗೆ ಉತ್ತಮ ಸೇವೆ ನೀಡಲು ಶ್ರಮಿಸುತ್ತೇವೆ.ಕೆಲವು ಸಂದರ್ಭಗಳಲ್ಲಿ ಜಿಲ್ಲಾ ಆಸ್ಪತ್ರೆಗೆ ಬರೆದುಕೊಡುವುದು ಅನಿವಾರ್ಯವಾಗುತ್ತದೆ.ಇಂತಹ ಸಮಯದಲ್ಲಿ ನಾಗರಿಕರು ಆರೋಗ್ಯ ಇಲಾಖೆ ವೈದ್ಯರು,ಸಿಬ್ಬಂದಿಯೊAದಿಗೆ ಸಂಯಮದಿAದ ನಡೆದುಕೊಳ್ಳಬೇಕು ಎಂದು ಪ್ರಸೂತಿ ತಜ್ಞ ಡಾ.ರಂಗನಾಥ ವೈದ್ಯ ಅಭಿಪ್ರಾಯಪಟ್ಟರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಆರೋಗ್ಯ ರಕ್ಷಾ ಸಮಿತಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.ಮೊದಲಿನಂತೆ ಈಗ ವೈದ್ಯಕೀಯ ಸೇವೆ ಅಷ್ಟೊಂದು ಸುಲಭದ್ದಾಗಿಲ್ಲ.ಆದರೆ ಸರ್ಕಾರ ಒದಗಿಸಿರುವ ಸೌಲಭ್ಯಗಳಿಂದ ಜನರಿಗೆ ಉತ್ತಮ ಸೇವೆ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
ಆಡಳಿತ ವೈದ್ಯಾಧಿಕಾರಿ ಡಾ.ಪರಶುರಾಮ ವಡ್ಡರ, ಅತ್ಯಂತ ಕ್ರಿಯಾಶೀಲ ಹಾಗೂ ಪ್ರಸೂತಿ ವಿಭಾಗದಲ್ಲಿ ಉತ್ತಮ ಹೆಸರು ಮಾಡಿರುವ ಡಾ.ರಂಗನಾಥ ಅವರು ನಮ್ಮ ಆಸ್ಪತ್ರೆಗೆ ಆಗಮಿಸಿರುವುದು ಸಂತಸದ ಸಂಗತಿಯಾಗಿದ್ದು ಬಡವರಿಗೆ ಒಳ್ಳೆಯ ಸೇವೆ ನೀಡಲು ಮತ್ತಷ್ಟು ಶ್ರಮಿಸುತ್ತೇವೆ ಎಂದರು.
ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಡಾ.ವಿಜಯಕುಮಾರ ಗೂಳಿ ಮಾತನಾಡಿ,ಸರ್ಕಾರಿ ಆಸ್ಪತ್ರೆಯಲ್ಲಿ ಬಡವರಿಗೆ ಏನೆಲ್ಲಾ ಸೇವೆ ಲಭ್ಯವಿದೆಯೋ ಅದನ್ನು ಒದಗಿಸುವುದಕ್ಕೆ ಆರೋಗ್ಯ ಇಲಾಖೆಯೊಂದಿಗೆ ನಾವೆಲ್ಲ ಕೈಜೋಡಿಸುತ್ತೇವೆ.ಇನ್ನೂ ಅಗತ್ಯವಿರುವ ಅನುದಾನವನ್ನು ಶಾಸಕರ ಗಮನಕ್ಕೆ ತಂದು ಒದಗಿಸಲು ಪ್ರಯತ್ನಿಸುತ್ತೇವೆ.ಆದರೆ ಸರ್ಕಾರಿ ಆಸ್ಪತ್ರೆಯ ಹೆಸರು ಒಳ್ಳೆಯ ರೀತಿಯಲ್ಲಿ ಬೆಳೆಸುವ ಜವಾಬ್ದಾರಿ ವೈದ್ಯಕೀಯ ಸಿಬ್ಬಂದಿ ಮೇಲಿದೆ ಎಂದರು.
ಪತ್ರಕರ್ತ ಶಂಕರ ಈ.ಹೆಬ್ಬಾಳ ಮಾತನಾಡಿ, ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಗೆ ಖ್ಯಾತ ಪ್ರಸೂತಿ ತಜ್ಞ ಡಾ.ರಂಗನಾಥ ವೈದ್ಯರವರು ಆಗಮಿಸಿರುವುದು ಬಡ ಮತ್ತು ಮಧ್ಯಮ ವರ್ಗದವರಿಗೆ ತುಂಬಾ ಅನುಕೂಲವಾಗಲಿದೆ.50-60 ಸಾವಿರ ರೂ.ಖಾಸಗಿ ಆಸ್ಪತ್ರೆಗಳಲ್ಲಿ ಹಣ ಕೊಟ್ಟು ಹೆರಿಗೆ ಮಾಡಿಸಿಕೊಂಡು ಬರುವ ಶಕ್ತಿ ಇಲ್ಲದವರಿಗೆ ಮುದ್ದೇಬಿಹಾಳ ಆಸ್ಪತ್ರೆಯ ಪ್ರಸೂತಿ ವಿಭಾಗ ಸಂಜೀವಿನಿಯAತೆ ಕೆಲಸ ಮಾಡಲಿದೆ.ಮುದ್ದೇಬಿಹಾಳದ ಸುತ್ತಮುತ್ತಲಿನ ಜನರು ಹೆರಿಗೆಗಾಗಿ ವಿಜಯಪುರ,ಬಾಗಲಕೋಟೆಗೆ ತೆರಳುವ ಬದಲು ತಾಲ್ಲೂಕು ಆಸ್ಪತ್ರೆಯಲ್ಲಿ ಉತ್ತಮ ಸೇವೆ ಇನ್ನು ಮುಂದೆ ದೊರೆಯುವ ಆಶಾಭಾವನೆ ವ್ಯಕ್ತವಾಗಿದೆ.ಸಾರ್ವಜನಿಕರು ಸರಕಾರಿ ಆಸ್ಪತ್ರೆ ವೈದ್ಯರು,ಸಿಬ್ಬಂದಿಯೊAದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು.ಉತ್ತಮ ವೈದ್ಯರು ಲಭ್ಯವಿದ್ದು ಉತ್ತಮ ಆಸ್ಪತ್ರೆ ಪ್ರಶಸ್ತಿ ಮುದ್ದೇಬಿಹಾಳ ಸಾರ್ವಜನಿಕ ಆಸ್ಪತ್ರೆ ಪಡೆದುಕೊಳ್ಳುವಂತಾಗಲಿ ಎಂದು ಹೇಳಿದರು.
ಡಾ.ಶಿವಾನಂದ ನಾಡಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಕ್ಷತಾ ಚಲವಾದಿ, ರಾಜ್ಯ ಸರ್ಕಾರಿ ನೌಕರ ಸಂಘದ ನಿರ್ದೇಶಕ ವಿಠ್ಠಲ ಕಿಲಾರಟ್ಟಿ, ಶುಶ್ರೂಷಕ ಸಂಘದ ಮುಖಂಡ ಶಿವಣ್ಣ ಮಾಗಿ ಮಾತನಾಡಿದರು. ಆರೋಗ್ಯ ರಕ್ಷಾ ಸಮೀತಿ ನಾಮನಿರ್ದೇಶಿತ ಸದಸ್ಯರಾದ ಶಿವನಗೌಡ ಪಾಟೀಲ, ಮಹ್ಮದರಫೀಕ ಶಿರೋಳ,ಸದು ಮಠ,ಅಂಬರೀಶ ಬಿರಾದಾರ,ಮಾಬೂಬಿ ಬಾಗವಾನ,ಡಾ.ಕೌಸರ,ಇಲಾಖೆ ನೌಕರರರಾದ ಮೊಮ್ಮದರಫಿಕ ಬಾಗವಾನ, ಅಯ್ಯಮ್ಮ ಕೊಣ್ಣೂರ , ಬಸವರಾಜ ಹಾವೇರಿ, ಬಸವರಾಜ ಬಡಿಗೇರ, ಯಲಗೂರೇಶ ತೊನಶ್ಯಾಳ , ರೇಖಾ ಜಾಯಗೊಂಡ, ಸಂತೋಷ ಅಂಗಡಗೇರಿ, ವೀರೇಶ್ ಜಿಂಜಿಗಡ್ಡಿ ,ರಾಜು ರಾಥೋಡ, ಪ್ರವೀಣ್ ಓದಿ, ಬಗಲಿ, ವಿ ವಿ.ಪವಾಡಶೆಟ್ಟಿ ಮಾಂತೇಶ ಹಿರೇಮಠ ಪಾಲ್ಗೊಂಡಿದ್ದರು.







