ಮುದ್ದೇಬಿಹಾಳ : ಮುಖ್ಯಮಂತ್ರಿಗಳು ಹೇಳಿದಂತೆ ನೀವು ಮತದಾರರಾಗಿ ನೋಂದಾಯಿಸಿಕೊಳ್ಳದಿದ್ದರೆ ಸರಕಾರದ ಯಾವುದೇ ಯೋಜನೆ ಕೊಡುವುದಕ್ಕೆ ಬರುವುದಿಲ್ಲ.ಪಂಚ ಗ್ಯಾರಂಟಿ ಹಿಡಿದು ಗಂಗಾಕಲ್ಯಾಣ,ಮಕ್ಕಳ ಸ್ಕಾಲರಶಿಪ್ ಸೇರಿದಂತೆ ಸರ್ಕಾರಿ ಯೋಜನೆಗಳು ನಿಮಗೆ ದೊರೆಯುವುದಿಲ್ಲ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ಪಟ್ಟಣದ ವಿಜಯ ಮಹಾಂತೇಶ ಮಂಗಲಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಎಲ್ಎ-2 ಗಳಿಗಾಗಿ ಏರ್ಪಡಿಸಿದ್ದ ಎಸ್ಆಯ್ಆರ್ ಪ್ರಕ್ರಿಯೆ ಕುರಿತು ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.ಮತದಾನ ನಿಮ್ಮ ಜೀವನದ ಹಕ್ಕು.ಸರ್ಕಾರದ ಎಲ್ಲ ಯೋಜನೆಗಳನ್ನು ಪಡೆದುಕೊಳ್ಳಬೇಕಾದರೆ ಎನ್ರೋಲಮೆಂಟ್ ಆಗುವುದು ಕಡ್ಡಾಯವಾಗಿದೆ.ಈ ಯೋಜನೆಗೆ ಸರ್ವೈಲೆನ್ಸ್ ಎಂದು ಹೆಸರಿಟ್ಟಿದ್ದಾರೆ.ದೇಶದಲ್ಲಿ ಪೊಲೀಸರು ತನಿಖೆ ನಡೆಸುವಂತೆ ನಮ್ಮ ಮತವನ್ನು ನಾವು ಪಡೆದುಕೊಳ್ಳಬೇಕಾದ ದುಸ್ಥಿತಿ ಎದುರಾಗಿದೆ.ಇದು ನಮ್ಮ ಪರಿಸ್ಥಿತಿ ಬಂದಿದೆ.ಸಾಮಾನ್ಯ ಪ್ರಜೆಯಾಗಿ ನ್ಯಾಯಬದ್ಧ ಹಕ್ಕು ಇರುವುದನ್ನು ಪ್ರಶ್ನೆ ಮಾಡಿ ನೀನು ಯೋಗ್ಯನಿದ್ದಿಯೋ ಇಲ್ಲವೋ ಎಂಬುದನ್ನು ತಿಳಿಸಬೇಕು ಎಂಬುವುದೇ ವಿರ್ಯಾಸವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಬಡವರ ಪರ ಕಾರ್ಯಕ್ರಮಗಳನ್ನು ಕೊಟ್ಟಿರುವುದು,ಈಚೇಗೆ ವಿಧಾನಪರಿಷತ್ ಚುನಾವಣೆಯಲ್ಲಿ ಬಹುಮತ ಇಲ್ಲದಿದ್ದರೂ ಕಾಂಗ್ರೆಸ್ ಜಯಭೇರಿ ಬಾರಿಸಿರುವುದು ಬಿಜೆಪಿಗರಿಗೆ ನುಂಗಲಾರದ ತುತ್ತಾಗಿದೆ.ಅದಕ್ಕಾಗಿ ಅಡ್ಡಮತದಾನ ಮಾಡಿದವರನ್ನು ಪತ್ತೆ ಹಚ್ಚುವುದಕ್ಕೆ ಧರ್ಮಸ್ಥಳದಲ್ಲಿ ಆಣೆ ಬೇಡ ಎಂದು ಅವರೇ ಹೇಳುತ್ತಿದ್ದಾರೆ ಎಂದು ಹೇಳಿದರು.
ಇನ್ನೆರಡು ತಿಂಗಳೊಳಗೆ ಪಂಚಾಯಿತಿ,ತಾಪO,ಜಿಪO,ಪುರಸಭೆ ಚುನಾವಣೆ ನಡೆಯಲಿವೆ.ಆಗಸ್ಟ್ ಕೊನೆಯಲ್ಲಿ ಚುನಾವಣೆ ಘೋಷಣೆಯಾಗಲಿವೆ.ಮತದಾರರ ಪಟ್ಟಿಯಲ್ಲಿ ಈ ಹಿಂದೆ ಹೇಗಿತ್ತು ಹಾಗೆಯೇ ಹೆಸರು ಬರೆಯಬೇಕು. ನನ್ನ ಕಾರ್ಯಕರ್ತರು ನನ್ನ ಜೀವಾಳ,ಬೆನ್ನೆಲುಬಾಗಿ ನಿಂತಿದ್ದಾರೆ.ಇತಿಹಾಸ ಮರೆಯುವಂತಹದ್ದಲ್ಲ.ಎಸ್ಆಯ್ಆರ್ ಅಲಕ್ಷ ಮಾಡಬೇಡಿ.ನಾಳೆ ಬರುವ ಮಕ್ಕಳಿಗೆ ಇದೊಂದೇ ಪಕ್ಷ ಆಗಿದೆ.ವಲಸೆ ಹೋದವರನ್ನು ಕರೆಯಿಸಿ ಎನ್ರೋಲಮೇಂಟ್ ಮಾಡಿಸಿ ಎಲೆಕ್ಷನ್ ಆಯೋಗಕ್ಕೆ,ಮೋದಿಯವರಿಗೆ ಸವಾಲು ಇಡಿ ಎಂದು ಹೇಳಿದರು.
2002ರಲ್ಲಿ ಏನಿದೆ ಅದನ್ನೆ ಬರೆಯಿಸಿ.ವಾರ್ಡನಲ್ಲಿ ಅಲ್ಪಸಂಖ್ಯಾತರು ದುಡಿಯುವುದಕ್ಕೆ ಬೇರೆಡೆ ಹೋಗುತ್ತಾರೆ.ಹಳ್ಳಿಯಲ್ಲಿ ಹೊಲಕ್ಕೆ ದುಡಿಯಲು ಹೋಗುತ್ತಾರೆ.ಆದ್ದರಿಂದ ಇದರ ಕುರಿತು ಜಾಗೃತಿ ಮೂಡಿಸಬೇಕು.ಎಸ್.ಐ.ಆರ್ ಅರ್ಜಿಗಳನ್ನು ಮತದಾರರಿಗೆ ತಲುಪಿಸುವ ಕೆಲಸ ಕಾರ್ಯಕರ್ತರು ಮಾಡಬೇಕು.ದಿನಾಂಕ ಮತ್ತೆ ವಿಸ್ತರಣೆಯಾಗುವುದಿಲ್ಲ ಎಂದು ಹೇಳಿದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ,ಕೆಪಿಸಿಸಿಯಿಂದ ಆಗಮಿಸಿದ್ದ ಪೃಥ್ವಿರಾಜ,ರಜತ್ ತಾಂಬೆ ಮಾತನಾಡಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಮತ್ತಿತರರು ಇದ್ದರು.







