ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(Narendra Modi) ನಾಯಕತ್ವದಲ್ಲಿ ಭಾರತ ಮುನ್ನುಗುತ್ತಿದೆ. ಕಳೆದ ಹಲವು ವರ್ಷಗಳಿಂದ ಪ್ರತಿ ಒಂದು ವಿಚಾರದಲ್ಲೂ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಮೂಲಕ ದಿಟ್ಟ ನೀತಿಯನ್ನು ಅನುಸುತ್ತಿದೆ. ಇಂತಹ ಪರಿಸ್ಥಿತಿ ಇರುವಾಗ ಇದೀಗ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವನ್ನು ಉರುಳಿಸಲು ಅಮೆರಿಕದಲ್ಲಿ (CIA) ಕುತಂತ್ರ ನಡೆಯುತ್ತಿರುವ ಬಗ್ಗೆ ವರದಿಯೊಂದು ಆತಂಕಕ್ಕೆ ಕಾರಣವಾಗಿದೆ.
ಮತ್ತಷ್ಟು ಸುದ್ದಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಗೆ ಸೇರಿಕೊಳ್ಳಿ.. https://t.me/dcgkannada
ಅಮೆರಿಕದ ಗುಪ್ತಚರ ಇಲಾಖೆ ಸಿಐಎ(CIA) ಭಾರತದ ಪ್ರತಿಪಕ್ಷ ಹಾಗೂ ಎನ್ಡಿಎ(NDA) ಮಿತ್ರಪಕ್ಷ ನಾಯಕರನ್ನು ಬಳಸಿಕೊಂಡು ಸರ್ಕಾರ ಕೆಡುವು ಪ್ರಯತ್ನ ನಡೆಸುತ್ತಿರುವ ಎಂಬ ವಿಚಾರ ಸ್ಫೋಟಗೊಂಡಿದೆ.
Thank you, Member of Parliament and leader of AlMIM @asadowaisi for your kind hospitality and for sharing your informed and important views on a range of shared issues and concerns. I look forward to continuing our discussions! #USIndiaFWD pic.twitter.com/WsDTVzKI0h
— Consul General Jennifer Larson (@USCGHyderabad) August 12, 2024
ಹೌದು, ರಷ್ಯಾದ ಸುದ್ದಿ ಮಾಧ್ಯಮ ಸ್ಪಟ್ನಿಕ್ ಈ ಶಾಕಿಂಗ್ ವರದಿಯನ್ನು ಬಿತ್ತರಿಸಿದೆ. ಈ ಬಾರಿ ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವಲ್ಲಿ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮತ್ತು ಬಿಹಾರದ ಸಿಎಂ ನಿತೀಶ್ ಕುಮಾರ್ ಅವರು ಪ್ರಮುಖ ಪಾತ್ರವಹಿಸಿದ್ದರು. ಇವರಿಬ್ಬರ ಸಹಾಯವಿಲ್ಲದೇ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ಬಿಜೆಪಿಗೆ ಸುಲಭದ ಮಾತಾಗಿರಲಿಲ್ಲ. ಇದೀಗ ಇದೇ ವಿಚಾರವನ್ನು ಬಂಡವಾಳ ಮಾಡಿಕೊಂಡಿರುವ CIA ಆಂಧ್ರದ ಬಾಪಿಸ್ಟ್ ಚರ್ಚ್ ಮತ್ತು ಚಂದ್ರಬಾಬು ನಾಯ್ಡುವನ್ನು ಅವರನ್ನು ಬಳಿಸಿಕೊಂಡು ಮೋದಿ ಸರ್ಕಾರವನ್ನು ಕೆಡವಲು ಸಂಚು ರೂಪಿಸಿದೆ. ಆ ಮೂಲಕ ಭಾರತದಲ್ಲಿ ಅತಂತ್ರ ಸೃಷ್ಟಿಸಲು ಅಮೆರಿಕ ಯತ್ನಿಸುತ್ತಿದೆ ಎಂದು ಸ್ಪಟ್ನಿಕ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
It was an honor to meet Andhra Pradesh Chief Minister Nara Chandrababu Naidu today. I very much admire his vision for the state, and fully agree with him that the United States and Andhra Pradesh must continue to work together in such important fields as trade, technology,… pic.twitter.com/lHnF29Fy82
— Consul General Jennifer Larson (@USCGHyderabad) July 31, 2024
ಇದನ್ನೂ ಓದಿ: ಉದ್ಯೋಗ ಸಿಗದ ಹತಾಶೆ; ಯುವಕ ಆತ್ಮಹತ್ಯೆ..! “I am a big failure” ಎಂದು ಡೆತ್ ನೋಟ್
ಇದಕ್ಕೆ ಪೂರಕ ಎಂಬಂತೆ ಯುಎಸ್ ಕೌನ್ಸುಲ್ ಜನರಲ್ ಜೆನ್ನಿಫರ್ ಲಾರ್ಸನ್ ಅವರು ಹೈದರಾಬಾದ್ನಲ್ಲಿ ಚಂದ್ರಬಾಬು ನಾಯ್ಡು, A.I.M.I.M ನಾಯಕ ಅಸಾದುದ್ದೀನ್ ಓವೈಸಿ, ತೆಲಂಗಾಣ ಸಿಎಂ ರೇವಂತ್ ರೆಡ್ಡಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
I had an excellent meeting today with Telangana Chief Minister @revanth_anumula on the eve of his departure to the United States to mobilize new investments. Hyderabad hosts close to 200 U.S. companies and continues to absorb more and more in several high-end tech sectors such as… pic.twitter.com/GAkPrvMkf7
— Consul General Jennifer Larson (@USCGHyderabad) August 2, 2024
ಭಾರತದ ಮೇಲೆ ಏನು ಪರಿಣಾಮ?
ಉಸಾನಾಸ್ ಫೌಂಡೇಶನ್ನ ಸಂಸ್ಥಾಪಕ ಮತ್ತು ನಿರ್ದೇಶಕ ಡಾ. ಅಭಿನವ್ ಪಾಂಡ್ಯ ಅವರು ಭಾರತದಲ್ಲಿ ಅಶಾಂತಿಯನ್ನು ಪ್ರಚೋದಿಸುವ ಗುಂಪುಗಳಿಗೆ ಯುಎಸ್ ಬೆಂಬಲ ನಿಗ್ರಹಿಸುವ ಬಗ್ಗೆ “ನಿಜವಾದ ಆತಂಕಗಳನ್ನು” ವ್ಯಕ್ತಪಡಿಸಿದ್ದಾರೆ.
ಮೋದಿಯವರ ವಿದೇಶಾಂಗ ನೀತಿ ಧೋರಣೆಯನ್ನು ಹಾಳುಮಾಡಲು ಲೋಕಸಭೆ ಚುನಾವಣೆಯಲ್ಲಿ ಯುಎಸ್ ಮಧ್ಯಪ್ರವೇಶಿಸಿರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.