Congress leaders were confused about the figures in the press conference

Muddebihal: ಮಾಜಿ ಶಾಸಕ ನಡಹಳ್ಳಿ ಆರೋಪಕ್ಕೆ ಕೈ ಮುಖಂಡರ ಪ್ರತ್ಯುತ್ತರ…! ಸುದ್ದಿಗೋಷ್ಠಿಯಲ್ಲಿ ಅಂಕಿ ಅಂಶ ನೀಡುವಾಗ ಗೊಂದಲ

Muddebihal: ಮಾಜಿ ಶಾಸಕ ನಡಹಳ್ಳಿ ಆರೋಪಕ್ಕೆ ಕೈ ಮುಖಂಡರ ಪ್ರತ್ಯುತ್ತರ…! ಸುದ್ದಿಗೋಷ್ಠಿಯಲ್ಲಿ ಅಂಕಿ ಅಂಶ ನೀಡುವಾಗ ಗೊಂದಲ

ಮುದ್ದೇಬಿಹಾಳ : ಮತಕ್ಷೇತ್ರದ ಶಾಂತಿಯುತ ವಾತಾವರಣವನ್ನು ಕದಡುವ ಕಾರ್ಯಕ್ಕೆ ಮುಂದಾಗುವುದು ಹಿರಿಯ ರಾಜಕಾರಣಿಯಾಗಿರುವ ಮಾಜಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರಿಗೆ ಶೋಭೆ ತರುವುದಿಲ್ಲ ಎಂದು ಎಪಿಎಂಸಿ ಸದಸ್ಯ ವಾಯ್.ಎಚ್.ವಿಜಯಕರ್ ಹೇಳಿದರು.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ನಾಡಗೌಡರು ಕಳೆದ ಮೂವ್ವತ್ತು ವರ್ಷಗಳಲ್ಲಿ ಸಚಿವರಾಗಿದ್ದಾರೆ, ದೆಹಲಿ ಪ್ರತಿನಿಧಿಗಳಾಗಿದ್ದಾರೆ,ಪಕ್ಷದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಅವರ ಬಗ್ಗೆ ಮಾಜಿ ಶಾಸಕರು ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.

ಈ ಹಿಂದೆ ಹುಡ್ಕೋದಲ್ಲಿ ನಿವೇಶನ ಖರೀದಿಯಾಗದ ಸಮಯದಲ್ಲಿ ಹೆಚ್ಚು ಸೈಟ್ ಕೊಂಡವರಿಗೆ ರಿಯಾಯಿತಿ ನೀಡುವುದಾಗಿ ತಿಳಿಸಿದ್ದರು.ಅದರಂತೆ ನಾಡಗೌಡರು ಹೆಚ್ಚಿಗೆ ಸೈಟ್ ಖರೀದಿಸಿದ್ದಾರೆ. ಅದರಲ್ಲಿ ತಪ್ಪು ಹುಡುಕುವಂತದ್ದೇನಿದೆ ಎಂದ ವಿಜಯಕರ್, ಮಾಜಿ ಶಾಸಕ ನಡಹಳ್ಳಿಯವರು ಪರ್ಸೆಂಟೇಜ್ ಪಡೆದು ನಿರ್ಮಿಸಿದ ಸಿಸಿ ರಸ್ತೆಗಳೆಲ್ಲ ಬಿರುಕು ಬಿಟ್ಟಿವೆ.ಅಭಿವೃದ್ಧಿ ಎಂದರೆ ಕೇವಲ ಸಿಸಿ ರಸ್ತೆ ಅಲ್ಲ.ಹಿಂದಿನ ಸಿಪಿಐ ಯಾರ ಮನೆಯ ಪ್ಯೂನ್ ಆಗಿ ಕೆಲಸ ಮಾಡುತ್ತಿದ್ದರು ಎಂಬುದು ಕ್ಷೇತ್ರದ ಜನತೆಗೆ ಗೊತ್ತಿದೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಮಾತನಾಡಿ, ಮತಕ್ಷೇತ್ರದಲ್ಲಿ ಒಂದೂವರೆ ವರ್ಷದ ಅವಧಿಯಲ್ಲಿ ಶಾಸಕ ನಾಡಗೌಡರು, ಲೋಕೋಪಯೋಗಿ ಇಲಾಖೆಗೆ 115.8 ಕೋಟಿ ರೂ., ಸಣ್ಣ ನೀರಾವರಿಗೆ 15.75 ಕೋಟಿ., ಮುದ್ದೇಬಿಹಾಳ, ನಾಲತವಾಡ ಹಾಗೂ ತಾಳಿಕೋಟಿ ಪಟ್ಟಣಗಳ ಯುಜಿಡಿಗಾಗಿ ಅಮೃತ 2.0 ಯೋಜನೆಗಾಗಿ 132.8ಕೋಟಿ ರೂ., ಮುದ್ದೇಬಿಹಾಳ ಮತಕ್ಷೇತ್ರದ ಪ್ರೌಢಶಾಲೆಗಳಿಗಾಗಿ ಒಂದು ಕೋಟಿ,,ಮುಖ್ಯಮಂತ್ರಿ ವಿಶೇಷ ಅನುದಾನ ಯೋಜನೆಯಡಿ 25 ಕೋಟಿ., ರಾಜೀವ ಗಾಂಧಿ ವಸತಿ ಯೋಜನೆ ಅಡಿ 49 ಕೋಟಿ, ತಾಳಿಕೋಟಿ ಹಾಗೂ ನಾಲತವಾಡದಲ್ಲಿ ರೈತಸಂಪರ್ಕ ಕೇಂದ್ರಕ್ಕೆ 4ಕೋಟಿ ರೂ., ರಸ್ತೆಗಾಗಿ ಸಿಎಂ ವಿಶೇಷ ಅನುದಾನ 50 ಕೋಟಿ, ಮುದ್ದೇಬಿಹಾಳ, ತಾಳಿಕೋಟಿ,ನಾಲತವಾಡದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪನೆ, ಸಣ್ಣ ನೀರಾವರಿ ಇಲಾಖೆಯಿಂದ 1.12 ಕೋಟಿ ರೂ., ರೂ.ಬಿಡುಗಡೆ ಆಗಿದೆ.

ಈ ಎಲ್ಲ ಯೋಜನೆಗಳು ನಾಡಗೌಡರ ಅವಧಿಯಲ್ಲಿ ಚಾಲ್ತಿಯಲ್ಲಿರುವಂತಹದ್ದಾಗಿವೆ. ಮಾಜಿ ಶಾಸಕ ನಡಹಳ್ಳಿಯವರು ಆರೋಪ ಮಾಡುವ ಮುನ್ನ ಯೋಚಿಸಿ ಮಾತನಾಡುವುದನ್ನು ಕಲಿತುಕೊಳ್ಳಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ಕಾಂಗ್ರೆಸ್ ಮುಖಂಡ ಕಾಮರಾಜ ಬಿರಾದಾರ ಮಾತನಾಡಿದರು.ಮುಖಂಡರಾದ ಸುರೇಶಗೌಡ ಪಾಟೀಲ್ ಇಂಗಳಗೇರಿ, ಅಬ್ದುಲಗಫೂರ ಮಕಾನದಾರ, ಬಾಪುಗೌಡ ಪೀರಾಪೂರ, ಗುತ್ತಿಗೆದಾರ ಯಲ್ಲಪ್ಪ ಚಲವಾದಿ, ಪ್ರಭುರಾಜ ಕಲ್ಬುರ್ಗಿ, ಸಂಗಣ್ಣ ನಾಲತವಾಡ, ತಿಪ್ಪಣ್ಣ ಗೋನಾಳ, ಶ್ರೀಕಾಂತ ಚಲವಾದಿ, ರಾಜು ರಾಯಗೊಂಡ ಮತ್ತಿತರರು ಇದ್ದರು.

ಅನುದಾನ ಬಿಡುಗಡೆಯ ನಿಖರ ಅಂಕಿ ಸಂಖ್ಯೆ ; ಮುಖಂಡರ ಅಸ್ಪಷ್ಟತೆ

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಅವರು, ಮುದ್ದೇಬಿಹಾಳ ಮತಕ್ಷೇತ್ರಕ್ಕೆ 350 ಕೋಟಿ ರೂ. ಅನುದಾನ ಶಾಸಕ ನಾಡಗೌಡರು ಶಾಸಕರಾದ ಒಂದೂವರೆ ವರ್ಷದ ಅವಧಿಯಲ್ಲಿ ಬಿಡುಗಡೆಯಾಗಿದೆ ಎಂದು ಹೇಳಿದರೆ, ಇನ್ನೋರ್ವ ಮುಖಂಡ ವಾಯ್.ಎಚ್.ವಿಜಯಕರ್, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ನಾಡಗೌಡರು 250 ಕೋಟಿಗೂ ಅಧಿಕ ಅನುದಾನ ತಂದಿದ್ದಾರೆ ಎಂದು ಹೇಳುವ ಮೂಲಕ ವಿರೋಧ ಪಕ್ಷದವರ ಆರೋಪಕ್ಕೆ ಸ್ಪಷ್ಟವಾದ ಉತ್ತರವನ್ನು ದಾಖಲೆ ಸಮೇತವಾಗಿ ಮಾಧ್ಯಮದವರಿಗೆ ಒದಗಿಸುವುದಕ್ಕೆ ಆಗಲಿಲ್ಲ.

ಇದನ್ನೂ ಓದಿ: ಇವರೇ ಮುಂದಿನ ಸಿಎಂ ದಿನಪತ್ರಿಕೆಯಲ್ಲಿ ಜಾಹೀರಾತು!

Latest News

ಮಹಿಳಾ ಆಯೋಗದ ಅಧ್ಯಕ್ಷೆ ಹೆಸರು ದುರುಪಯೋಗ ಮಾಡಿಲ್ಲ;                                                                                          ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

ಮಹಿಳಾ ಆಯೋಗದ ಅಧ್ಯಕ್ಷೆ ಹೆಸರು ದುರುಪಯೋಗ ಮಾಡಿಲ್ಲ; ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

ಮುದ್ದೇಬಿಹಾಳ : ತಾಲ್ಲೂಕಿನ ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದ ‘ಡಿ’ ದರ್ಜೆ ಸಿಬ್ಬಂದಿ ಕುಸುಮಾ

ಪುನೀತ ಹಿಪ್ಪರಗಿ ಅಧ್ಯಕ್ಷರಾಗಿ ಆಯ್ಕೆ:                          ಮುದ್ದೇಬಿಹಾಳ : ಕಾರ್ಗಿಲ್ ಸ್ಮಾರಕ ಸಮಿತಿಗೆ ನೂತನ ಪದಾಧಿಕಾರಿಗಳು

ಪುನೀತ ಹಿಪ್ಪರಗಿ ಅಧ್ಯಕ್ಷರಾಗಿ ಆಯ್ಕೆ: ಮುದ್ದೇಬಿಹಾಳ : ಕಾರ್ಗಿಲ್ ಸ್ಮಾರಕ ಸಮಿತಿಗೆ ನೂತನ ಪದಾಧಿಕಾರಿಗಳು

ಮುದ್ದೇಬಿಹಾಳ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಕಾರ್ಗಿಲ್ ವೀರಯೋಧರ ಸ್ಮಾರಕ

ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೆಸರು ಹೇಳಿ ಬ್ಲಾಕ್‌ಮೇಲ್ ಆರೋಪ

ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೆಸರು ಹೇಳಿ ಬ್ಲಾಕ್‌ಮೇಲ್ ಆರೋಪ

ಮುದ್ದೇಬಿಹಾಳ : ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರ ಹೆಸರು ಹೇಳಿಕೊಂಡು ಸ್ಥಳೀಯ

ಬೆಳೆವಿಮೆ ಪರಿಹಾರ ವಿತರಣೆಯಲ್ಲಿ ರೈತರಿಗೆ ವಂಚನೆ-ಆರೋಪ

ಬೆಳೆವಿಮೆ ಪರಿಹಾರ ವಿತರಣೆಯಲ್ಲಿ ರೈತರಿಗೆ ವಂಚನೆ-ಆರೋಪ

ತಾಳಿಕೋಟಿ : ತಾಲ್ಲೂಕಿನ ಮೂಕಿಹಾಳ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ರೈತರಿಗೆ ಪ್ರಧಾನ ಮಂತ್ರಿ

ಮುದ್ದೇಬಿಹಾಳ,ನಾಲತವಾಡ ಸರಕಾರಿ ಆಸ್ಪತ್ರೆಗಳ ಆಡಳಿತ ವೈದ್ಯರ ವರ್ಗಾವಣೆ

ಮುದ್ದೇಬಿಹಾಳ,ನಾಲತವಾಡ ಸರಕಾರಿ ಆಸ್ಪತ್ರೆಗಳ ಆಡಳಿತ ವೈದ್ಯರ ವರ್ಗಾವಣೆ

ಮುದ್ದೇಬಿಹಾಳ : ಶಾಸಕ ಸಿ.ಎಸ್.ನಾಡಗೌಡರ ಶಿಫಾರಸ್ಸಿನ ಮೇರೆಗೆ ಮುದ್ದೇಬಿಹಾಳ ಹಾಗೂ ನಾಲತವಾಡ ಸಾರ್ವಜನಿಕ ಆಸ್ಪತ್ರೆಗಳ ಆಡಳಿತ ವೈದ್ಯಾಧಿಕಾರಿಗಳನ್ನು ವರ್ಗಾವಣೆ ಮಾಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಆದೇಶಿಸಿದ್ದಾರೆ. ಮುದ್ದೇಬಿಹಾಳ ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾಗಿ ಪ್ರಭಾರ ಅಧಿಕಾರದಲ್ಲಿದ್ದ ಚಿಕ್ಕ ಮಕ್ಕಳ ತಜ್ಞ ವೈದ್ಯ ಡಾ.ಪರಶುರಾಮ ವಡ್ಡರ ಅವರನ್ನು ನಾಲತವಾಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಡಳಿತ ಪ್ರಭಾರ ಹುದ್ದೆಗೆ ವರ್ಗಾಯಿಸಿದ್ದು ಅಲ್ಲಿ ಪ್ರಭಾರ ಹುದ್ದೆಯಲ್ಲಿದ್ದ ಪ್ರಸೂತಿ ತಜ್ಞ

ಕಂದಗನೂರಿನಲ್ಲಿ ರೈತನ ಮೇಲೆ ಹುಚ್ಚನಾಯಿ ದಾಳಿ

ಕಂದಗನೂರಿನಲ್ಲಿ ರೈತನ ಮೇಲೆ ಹುಚ್ಚನಾಯಿ ದಾಳಿ

ಮುದ್ದೇಬಿಹಾಳ : ಹುಚ್ಚು ನಾಯಿಯೊಂದು ಮನೆಯ ಮುಂದೆ ಮಲಗಿದ್ದ ರೈತನ ಮೇಲೆ ಭೀಕರವಾಗಿ ದಾಳಿ ಮಾಡಿ ಕಚ್ಚಿ ಪರಾರಿಯಾಗಿರುವ ಘಟನೆ ತಾಲ್ಲೂಕಿನ ಕಂದಗನೂರಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಕಂದಗನೂರ ಗ್ರಾಮದ ರೈತ ಮಕ್ತುಮಸಾಬ ರಹಿಮಾನಸಾಬ ಮೂಕಿಹಾಳ(೬೮) ಹುಚ್ಚು ನಾಯಿ ಕಡಿತದಿಂದ ಗಾಯಗೊಂಡಿರುವ ವ್ಯಕ್ತಿ.ಮನೆ ಮುಂದೆ ಮಲಗಿದ್ದಾಗ ಎಲ್ಲಿಂದಲೋ ಬಂದಿದ್ದ ಹುಚ್ಚು ನಾಯಿ ದಾಳಿ ಮಾಡಿದೆ.ಮನಬಂದAತೆ ರೈತನ ಹೊಟ್ಟೆ ಪಕ್ಕದಲ್ಲಿ,ಕೈಗೆ ಭೀಕರವಾಗಿ ಕಚ್ಚಿದೆ.ಇದರ ಪರಿಣಾಮ ತೀವ್ರವಾಗಿ ಗಾಯಗೊಂಡಿರುವ ಮಕ್ತುಮಸಾಬನನ್ನು ಮುದ್ದೇಬಿಹಾಳ ಸರಕಾರಿ