ಮುದ್ದೇಬಿಹಾಳ : ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಎಂ.ಬಿ.ಎಲ್.ಗ್ರೂಪ್ ನಿಂದ ಆಯೋಜಿಸಿದ್ದ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಾಮೆಂಟ್ನ ಫೈನಲ್ ಪಂದ್ಯಾವಳಿ ಸೋಮವಾರ ಜರುಗಿತು.
ಫೈನಲ್ನಲ್ಲಿ ಆಲಮಟ್ಟಿ ಸುಶಾಂತ-11 ತಂಡ ಹಾಗೂ ಬೂದಿಹಾಳ ಆರ್.ಕೆ ರಾಕೆಟ್ ತಂಡಗಳು ಮುಖಾಮುಖಿಯಾದವು.ಅದರಲ್ಲಿ ಮೊದಲು ಬ್ಯಾಟ್ ಮಾಡಿದ ಆಲಮಟ್ಟಿ ಸುಶಾಂತ ತಂಡ ನಿಗದಿತ ಹತ್ತು ಓವರ್ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 102 ರನ್ ಗಳಿಸಿತು.ಬಳಿಕ ಬ್ಯಾಟ್ ಮಾಡಿದ ಬೂದಿಹಾಳ ಆರ್.ಕೆ.ರಾಕೆಟ್ ತಂಡ ಆರು ವಿಕೆಟ್ ಕಳೆದುಕೊಂಡು 106 ರನ್ ಗಳಿಸಿ ಗೆಲುವು ಸಾಧಿಸಿತು.
ಪ್ರಶಸ್ತಿ ವಿಜೇತ ತಂಡಗಳಿಗೆ ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ, ಸಂಘಟಕರಾದ ಕಾಮರಾಜ ಬಿರಾದಾರ,ಹುಸೇನ್ ಮುಲ್ಲಾ, ರಂಜಾನ್ ನದಾಫ,ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ,ಯಲ್ಲಪ್ಪ ಮ್ಯಾಗೇರಿ,ಸಂಗಣ್ಣ ಮೇಲಿನಮನಿ,ಹುಲಗೇಶ ಈಳಗೇರ,ಪತ್ರಕರ್ತ ಶಂಕರ ಹೆಬ್ಬಾಳ,ಬಸವರಾಜ ಕುಂಬಾರ,ಸಿದ್ದು ಚಲವಾದಿ,ಯಾಸೀನ್ ಸೋಠೆ,ನಜೀರ ದಾಂಡಿಯಾ,ಸೋಹೇಬ ಪಟೇಲ್,ಅಡವಯ್ಯ ಹಿರೇಮಠ, ಯಾಸೀನ ಮಕಾನದಾರ ಮೊದಲಾದವರು ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ, ಆಟಗಳಲ್ಲಿ ಸೋಲು ಗೆಲುವು ಸಾಮಾನ್ಯ ಸಂಗತಿ.ಆದರೆ ಸ್ಪರ್ಧಾತ್ಮಕ ಮನೋಭಾವ ಎಲ್ಲರಲ್ಲೂ ಅಗತ್ಯವಾಗಿದೆ.ಕ್ರಿಕೆಟ್ಗೆ ಹಣ ಪ್ರಾಯೋಜಕತ್ವ ಮಾಡುವುದು ಯುವಕರ ದೈಹಿಕ ಸಾಮರ್ಥ್ಯ ಸದೃಢವಾಗಿರಬೇಕು.ಆರೋಗ್ಯ ಕಾಪಾಡಿಕೊಳ್ಳಬೇಕು ಎಂಬ ಸದುದ್ದೇಶ ಅಡಗಿದೆ ಎಂದರು. ಮುಖoಡ ಕಾಮರಾಜ ಬಿರಾದಾರ ಮಾತನಾಡಿ, ಕ್ರಿಕೆಟ್ ಟೂರ್ನಾಮೆoಟ್ ಯಶಸ್ವಿಗೆ ಸಹಕರಿಸಿದ ದಾನಿಗಳಿಗೆ ಅಭಿನಂದಿಸಿದರು.ಸರ್ಕಾರಿ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ನಾಮನಿರ್ದೇಶಿತ ಸದಸ್ಯ ಮಹ್ಮದರಫೀಕ ಶಿರೋಳ ಕಾರ್ಯಕ್ರಮ ನಿರೂಪಿಸಿದರು.
ಪ್ರಶಸ್ತಿ ಪಡೆದುಕೊಳ್ಳಲು ಆಟಗಾರರ ನಿರಾಸಕ್ತಿ:
ಫೈನಲ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಆಲಮಟ್ಟಿ ಹಾಗೂ ಬೂದಿಹಾಳ ತಂಡದ ಆಟಗಾರರು ಪಂದ್ಯ ಮುಗಿದು ಫಲಿತಾಂಶ ಬರುತ್ತಿದ್ದಂತೆ ಅಲ್ಲಲ್ಲಿ ಚದುರಿದರು.ಪ್ರಥಮ ಬಹುಮಾನದ ಪ್ರಾಯೋಜಕತ್ವ ವಹಿಸಿದ್ದ ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಸೇರಿದಂತೆ ಸಂಘಟಕರು,ಮುಖAಡರು ಬಹುಮಾನ ಸ್ವೀಕರಿಸಲು ಬರುವಂತೆ ಹತ್ತಾರು ಸಲ ಮೈಕ್ನಲ್ಲಿ ಕೂಗಿದರು ಬೇಗನೇ ಆಟಗಾರರು ಪ್ರಶಸ್ತಿ ಸ್ವೀಕರಿಸಲು ಬರಲಿಲ್ಲ.ಕಡೆಗೆ ಪ್ರಶಸ್ತಿ ಕೊಡುವ ಅತಿಥಿಗಳು ವೇದಿಕೆ ಬಿಟ್ಟು ಕೆಳಗಿಳಿದರೆ ಪ್ರಶಸ್ತಿ , ನಗದು ಹಣ ನಮ್ಮ ಜವಾಬ್ದಾರಿಯಲ್ಲ ಎಂದಾಗ ಆಟಗಾರರು ಪ್ರಶಸ್ತಿ ಸ್ವೀಕರಿಸಲು ಮುಂದೆ ಬಂದು ಬಹುಮಾನ ಪಡೆದುಕೊಂಡರು.







