ಮುದ್ದೇಬಿಹಾಳ : ನಾಗರಬೆಟ್ಟ ಏತ ನೀರಾವರಿ ಯೋಜನೆಗೆ ಸಂಬoಧಿಸಿದoತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಜೂ.8 ರಿಂದ ಆಲಮಟ್ಟಿ ಕೆಬಿಜೆಎನ್ಎಲ್ ಮುಖ್ಯ ಇಂಜಿನಿಯರ್ ಕಚೇರಿ ಮುಂದೆ ರೈತರ ಬೃಹತ್ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ ತಿಳಿಸಿದರು.
ಪಟ್ಟಣದ ಹುಡ್ಕೋದಲ್ಲಿರುವ ಪಂಜುರ್ಲಿ ಹೊಟೇಲ್ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ನಾಗರಬೆಟ್ಟ ಏತ ನೀರಾವರಿ ಯೋಜನೆಗೆ ಸಂಬoಧಿಸಿದoತೆ ಜುಲೈ ತಿಂಗಳ ಒಳಗಾಗಿ ಸಂಪೂರ್ಣ ಕಾಮಗಾರಿ ಮುಗಿಸಿಕೊಡಬೇಕು. ಆಗಷ್ಟ ಒಂದರoದು ನೀರು ಕಾಲುವೆಗೆ ನೀರು ಹರಿಸಬೇಕು. ಅವಾರ್ಡ್ ಪ್ರತಿ ನೀಡಿ, ಎಲ್ಲಾ ರೈತರಿಗೂ ಪರಿಹಾರ ನೀಡಬೇಕು. ಇನ್ನೊಮ್ಮೆ ಸರ್ವೇ ಮಾಡಿ ನ್ಯಾಯಯುತವಾಗಿ ಮಾಲ್ಕಿ ಆಸ್ತಿಗಳಿಗೂ ಪರಿಹಾರ ನೀಡಬೇಕು.ಕಾಲುವೆ ಕಾಮಗಾರಿ ಸಂಪೂರ್ಣ ಮುಗಿಸಬೇಕು. ನೀಲನಕಾಶೆಗಿಂತ ಹೆಚ್ಚಿನ ಭೂಮಿ ಕಳೆದುಕೊಂಡ ರೈತರಿಗೆ ಅವಾರ್ಡ್ ಹಾಗೂ ಪ್ರತಿ ನೀಡಬೇಕು ಎಂದು ಹೇಳಿದರು.
ಹೋರಾಟಕ್ಕೆ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ, ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಪಾಲ್ಗೊಳ್ಳಲಿದ್ದು ಯೋಜನೆಗೆ ಸಂಬoಧಿಸಿದoತೆ 14ಕ್ಕೂ ಅಧಿಕ ಹಳ್ಳಿಗಳ ರೈತರು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಕಲ್ಲು ಸೊನ್ನದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ, ಬ.ಬಾಗೇವಾಡಿ ತಾಲ್ಲೂಕಿನ ಅಧ್ಯಕ್ಷರಾದ ಸಿದ್ರಾಮಪ್ಪ ಹೊರ್ತಿ,ನಿಡಗುಂದಿ ತಾಲೂಕಿನ ಅಧ್ಯಕ್ಷ ಸೀತಪ್ಪ ಗಣಿ,ನಿಡಗುಂದಿ ತಾಲೂಕಿನ ಉಪಾಧ್ಯಕ್ಷ ಸಾಬಣ್ಣ ಅಂಗಡಿ, ಹುಣಸಗಿ ತಾಲೂಕಿನ ಅಧ್ಯಕ್ಷ ಮಲ್ಲನಗೌಡ ನಗನೂರು ಇದ್ದರು.
ರೈತರಿಗೆ ಬಾಕಿ 46.85 ಕೋಟಿ ರೂ.ಬಾಕಿ :
ನಾಗರಬೆಟ್ಟ ಏತ ನೀರಾವರಿ ಯೋಜನೆಗೆ ಸಂಬoಧಿಸಿದoತೆ ಮಾಹಿತಿ ಕೆಬಿಜೆಎನ್ಎಲ್ ಅಧಿಕಾರಿಗಳೇ ನೀಡಿರುವ ಅಧಿಕೃತ ಮಾಹಿತಿಯನ್ನು ನೀಡಿದ ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ, ಒಟ್ಟು 346 ಎಕರೆ ಜಮೀನು ಈ ಯೋಜನೆಗೆ ಅಗತ್ಯವಾಗಿದ್ದು 31 ಪ್ರಕರಣಗಳು ಇವೆ.ಇದರಲ್ಲಿ ಈಗಾಗಲೇ 111 ಎಕರೆಗೆ ಸಂಬAಧಿಸಿದ 14 ಪ್ರಕರಣಗಳಿಗೆ 7.41 ಕೋಟಿ ರೂ.ಹಣ ರೈತರಿಗೆ ಪಾವತಿಸಲಾಗಿದೆ.ಇನ್ನುಳಿದ 232 ಎಕರೆ ಜಮೀನಿಗೆ ಸಂಬAಧಿಸಿದ 17 ಪ್ರಕರಣಗಳಿಗೆ ಒಟ್ಟು 46.85 ಕೋಟಿ ರೂ.ಹಣ ರೈತರಿಗೆ ಪಾವತಿಸಬೇಕಾಗಿದೆ.ಇನ್ನುಳಿದಂತೆ ಕಾಲುವೆ ಕಾಮಗಾರಿಗೆ ಸಂಬAಧಿಸಿದAತೆ ನಾಗರಬೆಟ್ಟ,ಹಿರೇಮುರಾಳ,ಸರೂರ ಗ್ರಾಮಗಳಲ್ಲಿ ನಾಲ್ವರು ರೈತರಿಂದ ಯೋಜನೆಗೆ ಕಾಲುವೆಯ ಕಾಮಗಾರಿ ನಿರ್ಮಾಣಕ್ಕೆ ಅಡ್ಡಿಪಡಿಸಲಾಗಿದೆ ಎಂದು ಇಲಾಖೆಯವರು ತಿಳಿಸಿದ್ದಾರೆ ಎಂದು ಹೇಳಿದರು.
ಸದರಿ ಯೋಜನೆಗೆ ಸಂಬoಧಿಸಿದoತೆ ಎಲ್ಲ ಬಾಕಿ ಇರುವ ಕೆಲಸಗಳನ್ನು ಅಧಿಕಾರಿಗಳು ಮುಗಿಸಬೇಕು.ಕಾಲುವೆ ಕಾಮಗಾರಿ ತಡೆಗಟ್ಟಿರುವ ರೈತರ ಮನವೊಲಿಸಿ ಅವರಿಗೆ ಅವಾರ್ಡ್ ಕಾಪಿ ಕೊಡುವ ಕಾರ್ಯ ಮಾಡಬೇಕು.ಅಲ್ಲಿಯವರೆಗೆ ನಮ್ಮ ಸಂಘದಿAದ ಧರಣಿ,ಪ್ರತಿಭಟನೆ ಮುಂದುವರೆಯಲಿದೆ ಎಂದು ಹೇಳಿದರು.







