ಮುದ್ದೇಬಿಹಾಳ : ಪಟ್ಟಣದ ಸರಕಾರಿ ಆಸ್ಪತ್ರೆಯು ಸೇರಿದಂತೆ ತಾಲ್ಲೂಕಿನಲ್ಲಿಯ ಸರ್ಕಾರಿ ಆಸ್ಪತ್ರೆಗಳ ಆವರಣ,ಒಳ ಹೊರಗಡೆ ಶುಚಿತ್ವಕ್ಕೆ ಅಲ್ಲಿಯ ಆಡಳಿತ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹಸಿರು ತೋರಣ ಗೆಳೆಯರ ಬಳಗದ ಸಂಚಾಲಕ ಮಹಾಬಳೇಶ ಗಡೇದ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ಹಸಿರು ತೋರಣ ಗೆಳೆಯರ ಬಳಗ, ಆರೋಗ್ಯ ರಕ್ಷಾ ಸಮಿತಿ,ಅರಣ್ಯ ಇಲಾಖೆ ಹಾಗೂ ಪುರಸಭೆ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಡವರು,ಮಧ್ಯಮವರ್ಗದವರಿಗೆ ಕೈಗೆಟುಕುವ ಆರೋಗ್ಯ ಸೇವೆ ದೊರೆಯುವುದು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ.ಸಾಧ್ಯವಾದಷ್ಟು ಸಂಬoಧಪಟ್ಟ ಇಲಾಖೆ,ಅಧಿಕಾರಿಗಳು ಶುಚಿತ್ವಕ್ಕೆ ಆದ್ಯತೆ ನೀಡಲು ವಿನಂತಿಸುತ್ತೇವೆ.ನಾವೂ ಕೈ ಜೋಡಿಸುತ್ತೇವೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಮಾತನಾಡಿ, ಸರ್ಕಾರಿ ಆಸ್ಪತ್ರೆಯ ಶುಚಿತ್ವಕ್ಕೆ ಆದ್ಯತೆ ನೀಡಲಾಗಿದೆ.ಪುರಸಭೆಯಿಂದ ನಿತ್ಯವೂ ನಗರದ ಶುಚಿತ್ವಕ್ಕೆ ನಮ್ಮ ಪೌರಕಾರ್ಮಿಕರು ಶ್ರಮಿಸುತ್ತಿದ್ದಾರೆ ಎಂದರು.
ಸರ್ಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಡಾ.ವಿಜಯಕುಮಾರ ಗೂಳಿ ಮಾತನಾಡಿ, ಆಸ್ಪತ್ರೆಯ ಶುಚಿತ್ವಕ್ಕೆ ಆದ್ಯತೆ ಕೊಡುವುದಕ್ಕಾಗಿ ಪರಿಸರ ಪರ ಸಂಘಟನೆಯವರು,ಅರಣ್ಯ ಇಲಾಖೆಯವರು,ಪುರಸಭೆಯವರು, ಆರೋಗ್ಯ ರಕ್ಷಾ ಸಮಿತಿಯ ಪದಾಧಿಕಾರಿಗಳು ಮುಂದಾಗಿರುವುದು ಶ್ಲಾಘನೀಯ ಸಂಗತಿ ಎಂದರು.
ಪ್ರಮುಖರಾದ ಸುನೀಲ ಮನಗೂಳಿ ಮಾತನಾಡಿ, ಬಡವರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕಾನಿಂಗ್ ಯಂತ್ರದ ಸೇವೆ ಒದಗಿಸಬೇಕು ಎಂದರು.
ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷ ಅಮರೇಶ ಗೂಳಿ, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ ಬಸವರಾಜ ಬಿಜ್ಜೂರ, ವೈದ್ಯ ಡಾ.ಅಸ್ಪಾಕ್, ಆರೋಗ್ಯ ನಿರೀಕ್ಷಕ ಎಂ.ಎಸ್.ಗೌಡರ,ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿ ಬಸನಗೌಡ ಬಿರಾದಾರ, ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳಿ ನಿರ್ದೇಶಕ ಆನಂದಗೌಡ ಬಿರಾದಾರ, ಹಸಿರು ತೋರಣ ಗೆಳೆಯರ ಬಳಗದ ಮಾಜಿ ಅಧ್ಯಕ್ಷ ರವಿ ಗೂಳಿ,ನಿವೃತ್ತ ಶಿಕ್ಷಕ ಬಿ.ಎಚ್.ಬಳಬಟ್ಟಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ರಫೀಕ ಶಿರೋಳ ಮೊದಲಾದವರು ಮಾತನಾಡಿದರು.
ಹಡಲಗೇರಿ ರಸ್ತೆಯಲ್ಲಿರುವ ಆಸ್ಪತ್ರೆಯ ಆವರಣವನ್ನು ಪುರಸಭೆ ಸಹಕಾರದೊಂದಿಗೆ ಅರಣ್ಯ ಇಲಾಖೆ, ಹಸಿರು ತೋರಣ ಗೆಳೆಯರ ಬಳಗ,ಆರೋಗ್ಯ ರಕ್ಷಾ ಸಮಿತಿ ಪದಾಧಿಕಾರಿಗಳು ಶುಚಿತ್ವಕ್ಕಾಗಿ ಶ್ರಮದಾನ ಮಾಡಿದರು.
ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಸದು ಮಠ, ಅಂಬರೀಶ ಬಿರಾದಾರ,ವಕೀಲ ಎಸ್.ಎಂ.ಪಾಟೀಲ,ಪುರಸಭೆ ಆರೋಗ್ಯ ನಿರೀಕ್ಷಕರಾದ ಜಾವೇದ ನಾಯ್ಕೋಡಿ,ಮಹಾಂತೇಶ ಕಟ್ಟಿಮನಿ, ಆರೋಗ್ಯ ಇಲಾಖೆಯ ವಿಠ್ಠಲ ಕಿಲಾರಟ್ಟಿ, ಸಂತೋಷ ಅಂಗಡಗೇರಿ, ಮಹ್ಮದರಫೀಕ ಬಾಗವಾನ, ಸದಾಶಿವ ಮಾಗಿ,ಹಸಿರು ತೋರಣ ಗೆಳೆಯರ ಬಳಗದ ಸದಸ್ಯರಾದ ಬಿ.ಎಸ್.ಮೇಟಿ,ಶ್ರೀಶೈಲ ಮರೋಳ,ಸೋಮಶೇಖರ ಚೀರಲದಿನ್ನಿ,ನಾಗಭೂಷಣ ನಾವದಗಿ,ಅಮರನಾಥ ಕಡಕೋಳ,ಕಿರಣ ಪಾಟೀಲ,ಅಶೋಕ ರೇವಡಿ,ಸುರೇಶ ಕಲಾಲ, ಡಾ.ಚಂದ್ರಶೇಖರ ಶಿವಯೋಗಿಮಠ,ಅರಣ್ಯಾಧಿಕಾರಿ ಗಿರೀಶ ಆಲಕುಡೆ,ರಾಜಶೇಖರ ಕಲ್ಯಾಣಮಠ,ಸಂತೋಷ ನಾಯಕ,ವಿ.ವಿ.ಪವಾಡಶೆಟ್ಟಿ ಮೊದಲಾದವರು ಇದ್ದರು.





