ಇನ್ನೊಬ್ಬರ ಬೆಳವಣಿಗೆ ನೋಡಿ ಉರಿಯಬೇಡಿ-ಸಿದ್ಧಲಿಂಗ ದೇವರು

ಇನ್ನೊಬ್ಬರ ಬೆಳವಣಿಗೆ ನೋಡಿ ಉರಿಯಬೇಡಿ-ಸಿದ್ಧಲಿಂಗ ದೇವರು

ಮುದ್ದೇಬಿಹಾಳ : ದ್ವೇಷ ಮಾಡದೇ ಇರುವಷ್ಟು ದಿನ ಒಳ್ಳೆಯ ಕೆಲಸಗಳನ್ನು ಮಾಡಿ.ಪರಸ್ಪರ ಕಾಲೆಳೆಯಬೇಡಿ.ದ್ವೇಷ ಮಾಡಬೇಡಿ.ಇನ್ನೊಬ್ಬರ ಬೆಳವಣಿಗೆಯನ್ನು ನೋಡಿ ಹೊಟ್ಟೆ ಉರಿದುಕೊಳ್ಳಬೇಡಿ ಎಂದು ತಾಳಿಕೋಟಿ ಖಾಸ್ಗತೇಶ್ವರ ಮಠದ ಪೀಠಾಧಿಕಾರಿ ಸಿದ್ಧಲಿಂಗ ದೇವರು ನುಡಿದರು.

ತಾಲ್ಲೂಕಿನ ಖಿಲಾರಹಟ್ಟಿ ಗ್ರಾಮದಲ್ಲಿ ಸಮಾಜ ಸೇವಕ ಎಂ.ಎನ್.ಮದರಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಬೈದವರು,ಹೊಗಳಿದವರನ್ನು ಅಪ್ಪಿಕೊಳ್ಳುವ ಸಮಾಜ ಕುರುಬ ಸಮಾಜವಾಗಿದೆ.ಅತೀ ಹೆಚ್ಚು ಭಕ್ತಿಯಿಂದ ನಡೆದುಕೊಳ್ಳುವ ಸಮಾಜವೂ ಕುರುಬ ಸಮಾಜವಾಗಿದೆ.ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ.ಸಮಾಜದ ಹೆಸರು ತರುತ್ತವೆ. ನಿಜವಾದ ಸಿರಿವಂತ ವ್ಯಕ್ತಿ ಎಂದರೆ ಒಂದಿಷ್ಟು ಬಡಮಕ್ಕಳ ಕಲ್ಯಾಣ ಮಾಡಿ ಆ ಕಲ್ಯಾಣಕ್ಕೆ ಒಳಗಾದವರ ಮುಖದಲ್ಲಿ ನಗುವನ್ನು ಕಾಣುವವನೇ ನಿಜವಾದ ಸಿರಿವಂತ.ಕುರುಬ ಸಮಾಜ ಶ್ರಮ,ಕಾಯಕ ಸಿದ್ಧಾಂತದ ಮೇಲೆ ಜೀವನ ಮಾಡುತ್ತಿರುವ ಸಮಾಜವಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಸಿ.ಎಸ್.ನಾಡಗೌಡ ಮಾತನಾಡಿ,ನಿಮ್ಮ ಮನೆತನಕ್ಕೆ ಹೆಸರಿರುತ್ತದೆ.ಅದು ಒಂದು ದಿನಕ್ಕೆ ಬಂದ ಹೆಸರು ಅಲ್ಲ.ಅದರ ಹಿಂದೆ ನೂರಾರು,ಸಾವಿರಾರು ವರ್ಷಗಳ ಇತಿಹಾಸ ಇರುತ್ತದೆ.ಅದನ್ನು ಉಳಿಸಿಕೊಂಡು ಹೋಗುವ ಕೆಲಸ ಮಾಡಬೇಕು.ಸಣ್ಣ ಗುತ್ತಿಗೆದಾರರಾಗಿ ವೃತ್ತಿ ಆರಂಭಿಸಿದ ಎನ್.ಎಸ್.ಪೂಜಾರಿ ಅವರು ಇಂದು ಕೆಟಗರಿ ಗುತ್ತಿಗೆದಾರರಾಗಿ ಬೆಳೆದಿದ್ದಾರೆ.ಸಾಮೂಹಿಕ ವಿವಾಹದಂತಹ ಕೆಲಸಗಳ ಮುಖಾಂತರ ತಾಲ್ಲೂಕಿನಾದ್ಯಂತ ಮದರಿ ಅವರ ಮನೆತನದ ಹೆಸರು ಮೆರಗನ್ನು ತರುವಂತಹ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.

ಸಮಾಜ ಸೇವಕ ಎಂಎನ್.ಮದರಿ ಮಾತನಾಡಿ, ನನ್ನ ತಂದೆಯ ಆಸೆಯಂತೆ ಖಿಲಾರಹಟ್ಟಿಯಲ್ಲಿಯೇ ಬೀರಲಿಂಗೇಶ್ವರ ದೇವಸ್ಥಾನ ಕಟ್ಟಿ 2005ರಲ್ಲಿ ಸಾಮೂಹಿಕ ವಿವಾಹ ಆರಂಭಗೊಳಿಸಿದೆವು.ಅದು 2026ರವರೆಗೆ ಮುಂದುವರೆದುಕೊOಡು ಬಂದಿದೆ.ನಮ್ಮಲ್ಲಿರು ಕಾರ್ಮಿಕರು,ಬಡವರ ಕುಟುಂಬದವರಿಗೆ ಅನುಕೂಲ ಒದಗಿಸಲು ಸಾಮೂಹಿಕ ವಿವಾಹಗಳನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು..

ಕಾಂಗ್ರೆಸ್ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ಮಾತನಾಡಿ, ತಮ್ಮ ಮಗನ ಮದುವೆಯಲ್ಲಿ ಬಡವರ ಮಕ್ಕಳಿಗೂ ಮದುವೆ ಮಾಡಿಕೊಟ್ಟಿರುವ ಮದರಿ ಅವರದ್ದು ಒಳ್ಳೆಯ ವ್ಯಕ್ತಿಯಾಗಿದ್ದಾರೆ.ಸಮಾಜದವರು ಇಂತವರನ್ನು ಬೆಳೆಸಬೇಕು.ಮಲ್ಲಿಕಾರ್ಜುನ ಮದರಿ, ಯರಝರಿ ಭಾಗದಲ್ಲಿ ಮಲ್ಲು ಅಪರಾಧಿ ಒಳ್ಳೆಯ ವ್ಯಕ್ತಿಗಳು.ನಿಮ್ಮನ್ನು ಯಾವ ರಾಜಕಾರಣಿಯೂ ಬೆಳೆಸುವುದಿಲ್ಲ.ಎಲ್ಲರೂ ಅವರವರ ಮಕ್ಕಳು,ಹೆಂಡoದಿರನ್ನೇ ಬೆಳೆಸುತ್ತಾರೆ.ಆದರೆ ನಿಮ್ಮ ಸಮಾಜದಲ್ಲಿ ನೀವೇ ಬೆಳೆಯಬೇಕು.ಈ ಕ್ಷೇತ್ರದಲ್ಲಿ ಕುರುಬ ಸಮಾಜದವರು ಶಾಸಕರಾಗಬೇಕು.ಈ ಭಾಗದಲ್ಲಿ ನೀರಾವರಿಗಾಗಿ ಹೋರಾಟ ನಡೆಯಬೇಕು.ಜನಪ್ರತಿನಿಧಿಗಳು ಇದಕ್ಕೆ ಇಚ್ಛಾಶಕ್ತಿ ತೋರಬೇಕು ಎಂದು ಹೇಳಿದರು.

ದಿವ್ಯ ಸಾನಿಧ್ಯ ವಹಿಸಿದ್ದ ಸರೂರು ಹಾಲುಮತ ಗುರುಪೀಠದ ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ, ಕುರುಬ ಜನಾಂಗದವರು ಮೂಢನಂಬಿಕೆಗಳನ್ನು ಬಿಡಬೇಕು.ಪ್ರಾಣಿಬಲಿ ಕೊಡಬಾರದು.ಬೇಟೆ ಮಾಡುವುದನ್ನು ಬಿಟ್ಟರೆ ನೀವು ಅಧಿಕಾರದಲ್ಲಿ ಆಳ್ವಿಕೆ ನಡೆಸಬಹುದಾಗಿದೆ ಎಂದು ಕಿವಿಮಾತು ಹೇಳಿದರು.ಸಿದ್ಧನಕೊಳ್ಳದ ಕಲಾಪೋಷಕ ಮಠದ ಶಿವಕುಮಾರ ಸ್ವಾಮೀಜಿ,ಕಾಂಗ್ರೆಸ್ ಮುಖಂಡ ವಾಯ್.ಎಚ್.ವಿಜಯಕರ್ ಮಾತನಾಡಿದರು.ಅಂಕಲಿಮಠದ ನಿರುಪಾದೀಶ್ವರ ಸ್ವಾಮೀಜಿ,ಯರಝರಿ ಯಲ್ಲಾಲಿಂಗೇಶ್ವರ ಮಠದ ಮಲ್ಲಾರಲಿಂಗ ಸ್ವಾಮೀಜಿ,ಸರೂರಿನ ಶಿವಯ್ಯ ಗುರುವಿನ,ಕಾಡಸಿದ್ದೇಶ್ವರ ಮಠದ ರಮಾನಂದ ಸ್ವಾಮೀಜಿ,ಅರವಿಂದ ಒಡೆಯರ್, ಲಿಂಗಬೀರದೇವರು, ಕೆಂಚರಾಯ ಮುತ್ಯಾ,ವಕೀಲರಾದ ಬಿ.ಜೆ.ಜಗ್ಗಲ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ ,ಅಧ್ಯಕ್ಷತೆ ವಹಿಸಿದ್ದ ಪ್ರಥಮ ದರ್ಜೆ ಗುತ್ತಿಗೆದಾರ ನೀಲಕಂಠಪ್ಪ ಪೂಜಾರಿ, ಮುಖಂಡರಾದ ಮಲಕೇಂದ್ರಾಯಗೌಡ ಪಾಟೀಲ,ಗಂಗಾಧರರಾವ ನಾಡಗೌಡ ,ಬಿ.ಎಸ್.ಶಿರೋಳ,ಕೆಂಚಪ್ಪ ಬಿರಾದಾರ ಪುರಸಭೆ ಮಾಜಿ ಸದಸ್ಯೆ ಸಂಗಮ್ಮ ದೇವರಳ್ಳಿ,ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಮಾಜಿ ನಿರ್ದೇಶಕಿ ಶ್ರೀದೇವಿ ಮದರಿ,ಯಲ್ಲಪ್ಪ ನಾಯಕಮಕ್ಕಳ, ಗುತ್ತಿಗೆದಾರರಾದ ಎಚ್.ಎಮ್.ನಾಯಕ,ಎಂ.ಎಚ್.ಬೊಮ್ಮನಹಳ್ಳಿ ಇದ್ದರು.V.S. ಮಳಗಾವಿ ಹಾಗೂ ನೀಲಮ್ಮ MAGI ಪ್ರಾರ್ಥಿಸಿದರು.ವೀರೇಶ ಗೂಡಲಮನಿ ಸ್ವಾಗತಿಸಿದರು.ಬಾಲು ಕರೇಕಲ್ಲ ನಿರೂಪಿಸಿದರು. ಪುಸ್ತಕ ಬಿಡುಗಡೆ: ಬ.ಬಾಗೇವಾಡಿ ಸಮಾಜ ಕಲ್ಯಾಣ ಇಲಾಖೆಯ ನೌಕರ,ಸಾಹಿತಿ ವೀರೇಶ ಗೂಡಲಮನಿ ಅವರು ಬರೆದ ಮನ್ನಿರೇಶ್ವರ ಮಹಾತ್ಮೆ ಪುಸ್ತಕವನ್ನು ಸಿದ್ಧನಕೊಳ್ಳದ ಶಿವಕುಮಾರ ಸ್ವಾಮೀಜಿ,ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು,ಶಾಸಕ ಸಿ.ಎಸ್.ನಾಡಗೌಡ,ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ ಬಿಡುಗಡೆ ಮಾಡಿದರು.

22 ಜೋಡಿ ನವಜೀವನಕ್ಕೆ ಪದಾರ್ಪಣೆ:
ಸಮಾಜ ಸೇವಕ ಎಂ.ಎನ್.ಮದರಿ ಅವರ ನೇತೃತ್ವದಲ್ಲಿ ಜರುಗಿದ ಸಾಮೂಹಿಕ ವಿವಾಹದಲ್ಲಿ ಒಟ್ಟು 22 ಜೋಡಿಗಳು ನವಜೀವನಕ್ಕೆ ಕಾಲಿರಿಸಿದರು.ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಬಾಲ್ಯವಿವಾಹ ನಡೆಯದಂತೆ ನೋಡಿಕೊಂಡರು.ಪೊಲೀಸ್ ಇಲಾಖೆಯಿಂದ ಭದ್ರತೆ ಒದಗಿಸಲಾಗಿತ್ತು.

Latest News

ದಿ.ದೇಶಮುಖ ದಂಪತಿ ಪುಣ್ಯಸ್ಮರಣೆ:                                           ಸಕ್ರಿಯ ರಾಜಕಾರಣಕ್ಕೆ ದೇಶಮುಖ ಮನೆತನದ ಕುಡಿ ಮರಳಲಿ-ಕತ್ತಿ

ದಿ.ದೇಶಮುಖ ದಂಪತಿ ಪುಣ್ಯಸ್ಮರಣೆ: ಸಕ್ರಿಯ ರಾಜಕಾರಣಕ್ಕೆ ದೇಶಮುಖ ಮನೆತನದ ಕುಡಿ ಮರಳಲಿ-ಕತ್ತಿ

ಮುದ್ದೇಬಿಹಾಳ : ಕಲುಷಿತಗೊಂಡಿರುವ ರಾಜಕೀಯ ಕ್ಷೇತ್ರದ ಶುದ್ಧೀಕರಣಕ್ಕೆ ದೇಶಮುಖ ಮನೆತನದಂತ ಕುಟುಂಬದವರು ಸಕ್ರಿಯ ರಾಜಕಾರಣದಲ್ಲಿರಬೇಕು

ನನ್ನ ಜನ ರಾಜೀನಾಮೆ ಕೊಡು ಎಂದರೆ ಕೊಡುತ್ತೇನೆ-ಸಿ.ಎಸ್.ನಾಡಗೌಡ

ನನ್ನ ಜನ ರಾಜೀನಾಮೆ ಕೊಡು ಎಂದರೆ ಕೊಡುತ್ತೇನೆ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ತಮಗೆ ಷಡ್ಯಂತ್ರದಿಂದ ಸಚಿವ ಸ್ಥಾನ ಕೈ ತಪ್ಪಿದ್ದು ಇದಕ್ಕಾಗಿ ತಮ್ಮ ಸ್ಥಾನಕ್ಕೆ

ಪತ್ರಕರ್ತ ಗುಲಾಂ ದಫೇದಾರ ನಾಮಪತ್ರ ಸಲ್ಲಿಕೆ:                            ಅಂಜುಮನ್ ಗತವೈಭವ ಮರುಸ್ಥಾಪಿಸಲು ಯತ್ನ-ಅಬ್ದುಲಗಫೂರ್ ಮಕಾನದಾರ

ಪತ್ರಕರ್ತ ಗುಲಾಂ ದಫೇದಾರ ನಾಮಪತ್ರ ಸಲ್ಲಿಕೆ: ಅಂಜುಮನ್ ಗತವೈಭವ ಮರುಸ್ಥಾಪಿಸಲು ಯತ್ನ-ಅಬ್ದುಲಗಫೂರ್ ಮಕಾನದಾರ

ಮುದ್ದೇಬಿಹಾಳ : ಸ್ವಾತಂತ್ರ ಪೂರ್ವದಲ್ಲಿ ಹುಟ್ಟಿರುವ ಅಂಜುಮನ್ ಇಸ್ಲಾಂ ಕಮೀಟಿಯ ಆರಂಭದಲ್ಲಿದ್ದ ವೈಭವವನ್ನು ಮರಳಿ

ಎಕರೆಗೆ 50 ಸಾವಿರ ರೂ.ಪರಿಹಾರ ನೀಡಿ-ಎನ್.ರವಿಕುಮಾರ್

ಎಕರೆಗೆ 50 ಸಾವಿರ ರೂ.ಪರಿಹಾರ ನೀಡಿ-ಎನ್.ರವಿಕುಮಾರ್

ಮುದ್ದೇಬಿಹಾಳ : ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಭೀಕರ ಬರಗಾಲ ತಲೆದೋರಿದ್ದು ರೈತರ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ:      ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ: ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಮುದ್ದೇಬಿಹಾಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ) ಹಾಗೂ ಮದರಿಯ ಚೈತ್ರಾ ಆರೋಗ್ಯ ಮತ್ತು ಶಿಕ್ಷಣ ಸೇವಾ ಟ್ರಸ್ಟ್(ರಿ) ಸಹಯೋಗದಲ್ಲಿ ಪತ್ರಿಕಾ ಹಾಗೂ ವೈದ್ಯರ ದಿನಾಚರಣೆಯ ಅಂಗವಾಗಿ ಜು.26 ರಂದು ಬೆಳಗ್ಗೆ 10.00ಕ್ಕೆ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಿವೃತ್ತ ನೌಕರರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ, ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ. ಹುನಗುಂದ-ಮುದ್ದೇಬಿಹಾಳದ ಗಚ್ಚಿನಮಠ-ಹೊಸಮಠದ ಅಮರೇಶ್ವರ ದೇವರು ದಿವ್ಯ ಸಾನಿಧ್ಯ ವಹಿಸುವರು.ಕಾನಿಪ ಧ್ವನಿ ರಾಜ್ಯ ಅಧ್ಯಕ್ಷ

650 ಅಂಕ ಪಡೆದ ಮಾನಸಾ ಎಚ್. ಪ್ರಥಮ:                 ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

650 ಅಂಕ ಪಡೆದ ಮಾನಸಾ ಎಚ್. ಪ್ರಥಮ: ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜು ಹಾಗೂ ನೀಟ್ ಅಕಾಡೆಮಿಯ 2026ರ ನೀಟ್ ಫಲಿತಾಂಶ ಪ್ರಕಟಗೊಂಡಿದ್ದು 12 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕ ಪಡೆದುಕೊಂಡಿದ್ದಾರೆ. ನೀಟ್ ಫಲಿತಾಂಶದ ಕುರಿತು ಮಾಹಿತಿ ನೀಡಿರುವ ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲ್, ಆಡಳಿತಾಧಿಕಾರಿ ಅಮೀತಗೌಡ ಪಾಟೀಲ ಅವರು, ಈ ಬಾರಿ 190ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟು ದೊರೆಯುವ ನಿರೀಕ್ಷೆ ಇದೆ ಎಂದು ತಿಳಿಸಿದರು.ನೀಟ್‌ನಲ್ಲಿ 500ಕ್ಕೂ ಅಧಿಕ 140 ವಿದ್ಯಾರ್ಥಿಗಳು,