ಮುದ್ದೇಬಿಹಾಳ : ಈಚೆಗೆ ಮುದ್ದೇಬಿಹಾಳದಲ್ಲಿ ಜರುಗಿದ್ದ ಹಿಂದೂ ಮಹಾಸಮ್ಮೇಳನದಲ್ಲಿ ಜಮಾಖರ್ಚು ಆಗಿ ಉಳಿತಾಯದ ಹಣದಲ್ಲಿ ಯಲಗೂರಿನ ಗೋಶಾಲೆಗೆ ಇಲ್ಲಿನ ಹಿಂದೂ ಸಮಾಜದ ಬಾಂಧವರು ಐದು ಟ್ರಾö್ಯಕ್ಟರ್ನಷ್ಟು ಮೇವು ಕಾಣಿಕೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಪಟ್ಟಣದ ಹನುಮಾನ ದೇವಸ್ಥಾನದಲ್ಲಿ ಬುಧವಾರ ಸಂಜೆ ಮೇವು ತುಂಬಿದ್ದ ಟ್ರಾö್ಯಕ್ಟರ್ಗಳಿಗೆ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಯಲಗೂರ ಗೋಶಾಲೆ ಕಾರ್ಯದರ್ಶಿ ವಿಠ್ಠಲ ಬಿರಾದಾರ, ಇದೇ ಮೊದಲ ಬಾರಿಗೆ ಮುದ್ದೇಬಿಹಾಳದ ಹಿಂದೂ ಸಮಾಜದವರು ಗೋವುಗಳಿಗೆ ಇಂತಹ ಕಷ್ಟಕಾಲದಲ್ಲಿ ಮೇವು ಒದಗಿಸುವ ಮೂಲಕ ಮೂಕ ಜಾನುವಾರುಗಳಿಗೆ ಆಸರೆಯಾಗಿದ್ದಾರೆ.ಸಮಾಜದಲ್ಲಿ ಸಾಕಷ್ಟು ಸಿರಿವಂತರು,ಉಳ್ಳವರು ಇದ್ದು ವ್ಯರ್ಥವಾಗಿ ಯಾವುದಕ್ಕೋ ಖರ್ಚು ಮಾಡುತ್ತಾರೆ.ಆದರೆ ನಮಗೆ ಕಾಮಧೇನು ಸ್ವರೂಪವಾಗಿರುವ ಗೋವಿನ ಸಂತತಿ ಉಳಿವಿಗೆ ಹಿಂದೇಟು ಹಾಕುತ್ತಾರೆ.ಆದರೆ ಮುದ್ದೇಬಿಹಾಳದ ಸಮಾಜದ ಬಾಂಧವರು ಇಂತಹದ್ದೊAದು ಮಾನವೀಯ ಸೇವೆ ಇಡೀ ರಾಜ್ಯಕ್ಕೆ ಮಾದರಿಯಾದ ಕಾರ್ಯವಾಗಲಿದೆ ಎಂದು ಹೇಳಿದರು.
ಹಿಂದೂ ಸಮಾಜದ ಮುಖಂಡ ಪ್ರಭು ಕಡಿ ಮಾತನಾಡಿ, ಹಿಂದೂ ಮಹಾ ಸಮ್ಮೇಳನದಲ್ಲಿ ಉಳಿದ ಹಣದಲ್ಲಿ ಗೋವುಗಳಿಗೆ ಸಹಾಯ ಮಾಡಬೇಕು ಎಂಬ ಒಮ್ಮತದ ತೀರ್ಮಾನವನ್ನು ಕೈಗೊಂಡು ಜಾನುವಾರುಗಳಿಗೆ ಮೇವು ಒದಗಿಸುವ ಸೇವೆ ಕೈಗೊಳ್ಳಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಹಿಂದೂ ಸಮಾಜದ ಪ್ರಮುಖರಾದ ವೆಂಕನಗೌಡ ಪಾಟೀಲ, ಮಾಣಿಕಚಂದ ದಂಡಾವತಿ, ಮುರಿಗೆಪ್ಪ ಮೋಟಗಿ,ಸಂಗಮೇಶ ನಾವದಗಿ, ಗುರುಸ್ವಾಮಿ ಬೂದಿಹಾಳಮಠ, ಉಮಾರಾಮ್ ಪಟೇಲ್,ಅಶೋಕ ಮಣಿ, ಮಹಾಂತೇಶ ಬೂದಿಹಾಳಮಠ, ಕಾಶೀನಾಥ ಹುಗ್ಗಿ, ಸುರೇಶ ಕಲಾಲ,ವಿಕ್ರಮ ಓಸ್ವಾಲ್,ಸಂಗನಗೌಡ ಪಾಟೀಲ,ಮೋತಿಲಾಲ ಕಲಾಲ,ಶ್ರೀಕಾಂತ ಹಿರೇಮಠ ಮೊದಲಾದವರು ಇದ್ದರು.ಬಜಾರ್ ಹನುಮಾನ ದೇವಸ್ಥಾನದಿಂದ ಪ್ರಮುಖ ಬೀದಿಯಲ್ಲಿ ಮೇವು ತುಂಬಿದ್ದ ಟ್ರಾö್ಯಕ್ಟರ್ಗಳನ್ನು ಮೆರವಣಿಗೆ ಮೂಲಕ ಯಲಗೂರಕ್ಕೆ ಕಳಿಸಿಕೊಡಲಾಯಿತು.
ಗೋವುಗಳು ಎಲ್ಲಿಯವರೆಗೆ ನಿಮಗೆ ಉಪಯೋಗಕ್ಕೆ ಬರುತ್ತವೆ ಅವುಗಳನ್ನು ಬಳಸಿಕೊಳ್ಳಿ.ಅವುಗಳಿಂದ ಉಪಯೋಗ ಇಲ್ಲ ಎಂದಾದಾಗ ಯಲಗೂರ ಗೋಶಾಲೆಗೆ ನೀಡಿ ನಾವು ಸಾಕುತ್ತೇವೆ.ದಯವಿಟ್ಟು ಅವುಗಳನ್ನು ಕೊಲ್ಲುವುದಕ್ಕೆ ಕೊಡಬೇಡಿ.
–ವಿಠಲ ಬಿರಾದಾರ,ಯಲಗೂರ ಗೋಶಾಲೆ ಕಾರ್ಯದರ್ಶಿ







