ಮುದ್ದೇಬಿಹಾಳ : ನಾಗರಬೆಟ್ಟ ಏತನೀರಾವರಿ ಯೋಜನೆಗೆ ಸಂಬoಧಿಸಿದoತೆ ಅಲ್ಲಿ ಕುಟುಂಬವೊoದರ ವಯಕ್ತಿಕ ಸಮಸ್ಯೆ ಇದ್ದು ಅದನ್ನು ಗ್ಯಾರಂಟಿ ಸಮೀತಿ ಅಧ್ಯಕ್ಷ ಶಂಕರಗೌಡ ಹಿರೇಗೌಡರ ಅವರಿಗೆ ಪರಿಹಾರಕ್ಕೆ ಜವಾಬ್ದಾರಿ ವಹಿಸಿದ್ದೇವೆ.ಅವರನ್ನು ರೈತರನ್ನು ಕರೆದು ಮಾತನಾಡಿಸಿದ್ದೇವೆ.ಶೀಘ್ರದಲ್ಲಿ ಆ ಸಮಸ್ಯೆ ಬಗೆ ಹರಿಯುವ ವಿಶ್ವಾಸವಿದೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ಮುದ್ದೇಬಿಹಾಳದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನಾಗರಬೆಟ್ಟ ಏತ ನೀರಾವರಿ ಯೋಜನೆಯನ್ನು ಎಸ್.ಎನ್.ಬಿರಾದಾರ ಎಂಬ ಗುತ್ತಿಗೆದಾರರು ಮಾಡುತ್ತಿದ್ದಾರೆ.ರಾಜಕಾರಣಿಯೊಬ್ಬರು ಕೆಲವು ಮಾತುಗಳನ್ನು ಈ ವಿಚಾರವಾಗಿ ಆಡಿದ್ದಾರೆ.ಅದು ಮೂರ್ಖತನದ ಪರಮಾವಧಿ.ಗುತ್ತಿಗೆದಾರರನ್ನು ಎಲ್ಲಿಯೂ ನಾನು ಭೇಟಿಯಾಗುವಂತೆ ಹೇಳಿಲ್ಲ.ಅವರಿಂದ ಒಂದು ಕಪ್ ಚಹಾ ಅಲ್ಲ ನೀರನ್ನೂ ಕುಡಿದಿಲ್ಲ.ಇಂತಹ ಆರೋಪ ಮಾಡಿರುವವರು ಅದನ್ನು ಸಾಕ್ಷಿ ಸಮೇತ ಸಾಬೀತು ಮಾಡಬೇಕು.ಸಾಬೀತು ಮಾಡಿದರೆ ನಾನು ರಾಜಕೀಯದಿಂದ ನಿವೃತ್ತಿ ಆಗುತ್ತೇನೆ.ಇಲ್ಲದಿದ್ದಲ್ಲಿ ನೀವು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಶಾಸಕ ನಾಡಗೌಡರು ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ಹೆಸರು ಹೇಳದೇ ಸವಾಲು ಹಾಕಿದರು.
ಕೆಲವರು ಯಾರ ಬೆಳವಣಿಗೆಯನ್ನು ಸಹಿಸುವುದಿಲ್ಲ.ಒಳ್ಳೆಯವರನ್ನು ಗುಣಗಾಣವನ್ನು ಮಾಡುವುದಿಲ್ಲ.ಅವರದ್ದು ಸ್ಯಾಡಿಸ್ಟ ಮನೋಭಾವದವರು ಇದ್ದಾರೆ.ಇವರನ್ನು ಯಾಕೆ ಕಾರ್ಯಕ್ರಮಗಳಿಗೆ ಜನ ಕರೆಸುತ್ತಾರೆಯೋ ಗೊತ್ತಿಲ್ಲ.ದೊಡ್ಡವರನ್ನು ಬಯ್ಯುವುದಕ್ಕೆ ಕರೆಸುತ್ತಾರೆಯೋ ಹೇಗೆ ? ಇನ್ನು ಮುಂದೆ ಅಂತಹ ಸಮಾರಂಭಕ್ಕೆ ನಾನು ಹೋಗುವುದಿಲ್ಲ.ಅಂತಹವರನ್ನು ಕರೆದುಕೊಂಡು ಕಾರ್ಯಕ್ರಮ ಮಾಡಿ ಎಂದು ಹೇಳಿದರು.
ಕೆಲಸ ಬಾಕಿ ಇದೆ ಎನ್ನುವ ಅವರು, ಅವರ ಮಾವನೇ ಆ ಕೆಲಸ ಮಾಡುತ್ತಿದ್ದಾರೆ.ಅದನ್ನು ಪರಿಗರಿಸುವುದಕ್ಕೆ ಏನು ಪ್ರಯತ್ನ ಮಾಡಿದ್ದಾರೆ.ಗುತ್ತಿಗೆದಾರರ ಬಗ್ಗೆ ಗೌರವ ಇದೆ.ಆದರೆ ನೀವು ಚುನಾವಣೆ ಇದ್ದಾಗ ೧೫ ದಿನ ಮುಂಚೆ ಬಂದು ನಮ್ಮನ್ನು ಸೇರಿಕೊಂಡಿದ್ದಿರಿ.ಆದರೆ ಉದ್ಧಟತಬದ ಮಾತು ಸರಿಯಲ್ಲ.ಸಿನೇಮಾದಲ್ಲಿ ಹಿರೋಯಿನ್ ಜಗ್ಗಾಡುವಾಗ ಜನ ಸೀಟಿ ಹೊಡೆದು ಚಪ್ಪಾಳೆ ತಟ್ಟುತ್ತಾರಲ್ಲ.ಆ ಮನಸ್ಥಿತಿ ಜನ ಇವರು ಎಂದು ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ಹೆಸರು ಹೇಳದೇ ಟೀಕಿಸಿದರು.
‘ಕೆಲವರದ್ದು ಸ್ಯಾಡಿಸ್ಟ್ ಮನೋಭಾವ’ ಗುತ್ತಿಗೆದಾರರಿಂದ ನಯಾಪೈಸೆ ಕೇಳಿದ್ದರೆ ರಾಜಕೀಯ ನಿವೃತ್ತಿ-ನಾಡಗೌಡ
‘ಕೆಲವರದ್ದು ಸ್ಯಾಡಿಸ್ಟ್ ಮನೋಭಾವ’ ಗುತ್ತಿಗೆದಾರರಿಂದ ನಯಾಪೈಸೆ ಕೇಳಿದ್ದರೆ ರಾಜಕೀಯ ನಿವೃತ್ತಿ-ನಾಡಗೌಡ
Latest News
ದಿ.ದೇಶಮುಖ ದಂಪತಿ ಪುಣ್ಯಸ್ಮರಣೆ: ಸಕ್ರಿಯ ರಾಜಕಾರಣಕ್ಕೆ ದೇಶಮುಖ ಮನೆತನದ ಕುಡಿ ಮರಳಲಿ-ಕತ್ತಿ
ಮುದ್ದೇಬಿಹಾಳ : ಕಲುಷಿತಗೊಂಡಿರುವ ರಾಜಕೀಯ ಕ್ಷೇತ್ರದ ಶುದ್ಧೀಕರಣಕ್ಕೆ ದೇಶಮುಖ ಮನೆತನದಂತ ಕುಟುಂಬದವರು ಸಕ್ರಿಯ ರಾಜಕಾರಣದಲ್ಲಿರಬೇಕು
ನನ್ನ ಜನ ರಾಜೀನಾಮೆ ಕೊಡು ಎಂದರೆ ಕೊಡುತ್ತೇನೆ-ಸಿ.ಎಸ್.ನಾಡಗೌಡ
ಮುದ್ದೇಬಿಹಾಳ : ತಮಗೆ ಷಡ್ಯಂತ್ರದಿಂದ ಸಚಿವ ಸ್ಥಾನ ಕೈ ತಪ್ಪಿದ್ದು ಇದಕ್ಕಾಗಿ ತಮ್ಮ ಸ್ಥಾನಕ್ಕೆ
ಪತ್ರಕರ್ತ ಗುಲಾಂ ದಫೇದಾರ ನಾಮಪತ್ರ ಸಲ್ಲಿಕೆ: ಅಂಜುಮನ್ ಗತವೈಭವ ಮರುಸ್ಥಾಪಿಸಲು ಯತ್ನ-ಅಬ್ದುಲಗಫೂರ್ ಮಕಾನದಾರ
ಮುದ್ದೇಬಿಹಾಳ : ಸ್ವಾತಂತ್ರ ಪೂರ್ವದಲ್ಲಿ ಹುಟ್ಟಿರುವ ಅಂಜುಮನ್ ಇಸ್ಲಾಂ ಕಮೀಟಿಯ ಆರಂಭದಲ್ಲಿದ್ದ ವೈಭವವನ್ನು ಮರಳಿ
ಎಕರೆಗೆ 50 ಸಾವಿರ ರೂ.ಪರಿಹಾರ ನೀಡಿ-ಎನ್.ರವಿಕುಮಾರ್
ಮುದ್ದೇಬಿಹಾಳ : ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಭೀಕರ ಬರಗಾಲ ತಲೆದೋರಿದ್ದು ರೈತರ
ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ: ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ
ಮುದ್ದೇಬಿಹಾಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ) ಹಾಗೂ ಮದರಿಯ ಚೈತ್ರಾ ಆರೋಗ್ಯ ಮತ್ತು ಶಿಕ್ಷಣ ಸೇವಾ ಟ್ರಸ್ಟ್(ರಿ) ಸಹಯೋಗದಲ್ಲಿ ಪತ್ರಿಕಾ ಹಾಗೂ ವೈದ್ಯರ ದಿನಾಚರಣೆಯ ಅಂಗವಾಗಿ ಜು.26 ರಂದು ಬೆಳಗ್ಗೆ 10.00ಕ್ಕೆ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಿವೃತ್ತ ನೌಕರರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ, ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ. ಹುನಗುಂದ-ಮುದ್ದೇಬಿಹಾಳದ ಗಚ್ಚಿನಮಠ-ಹೊಸಮಠದ ಅಮರೇಶ್ವರ ದೇವರು ದಿವ್ಯ ಸಾನಿಧ್ಯ ವಹಿಸುವರು.ಕಾನಿಪ ಧ್ವನಿ ರಾಜ್ಯ ಅಧ್ಯಕ್ಷ
650 ಅಂಕ ಪಡೆದ ಮಾನಸಾ ಎಚ್. ಪ್ರಥಮ: ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ
ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜು ಹಾಗೂ ನೀಟ್ ಅಕಾಡೆಮಿಯ 2026ರ ನೀಟ್ ಫಲಿತಾಂಶ ಪ್ರಕಟಗೊಂಡಿದ್ದು 12 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕ ಪಡೆದುಕೊಂಡಿದ್ದಾರೆ. ನೀಟ್ ಫಲಿತಾಂಶದ ಕುರಿತು ಮಾಹಿತಿ ನೀಡಿರುವ ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲ್, ಆಡಳಿತಾಧಿಕಾರಿ ಅಮೀತಗೌಡ ಪಾಟೀಲ ಅವರು, ಈ ಬಾರಿ 190ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟು ದೊರೆಯುವ ನಿರೀಕ್ಷೆ ಇದೆ ಎಂದು ತಿಳಿಸಿದರು.ನೀಟ್ನಲ್ಲಿ 500ಕ್ಕೂ ಅಧಿಕ 140 ವಿದ್ಯಾರ್ಥಿಗಳು,







