ಮುದ್ದೇಬಿಹಾಳ : ಕರ್ನಾಟಕ ವಕ್ಭ್ ಕಾಯ್ದೆ 1995ರ ಸಂಬAಧಿತ ನಿಬಂಧನೆಗಳು ಹಾಗೂ ಕರ್ನಾಟಕ ರಾಜ್ಯ ವಕ್ಭ್ ನಿಯಮಗಳು 2017ರ ನಿಯಮ 25ರ ಅನ್ವಯ ವಿಜಯಪುರ ಜಿಲ್ಲಾ ವಕ್ಭ್ ಅಧಿಕಾರಿಗಳು ಅಂಜುಮನ್ ಕಮೀಟಿಯ ನೂತನ ಆಡಳಿತ ಮಂಡಳಿಯ ಅಧ್ಯಕ್ಷರು,ಉಪಾಧ್ಯಕ್ಷರು,ಕಾರ್ಯದರ್ಶಿಗಳು ಹಾಗೂ ಖಜಾಂಚಿಯ ಆಯ್ಕೆಗೆ ಹೊರಡಿಸಿರುವ ನೋಟಿಸ್ ಇದೀಗ ವಿವಾದಕ್ಕೆ ಕಾರಣವಾಗಿದೆ.
ಆಯ್ಕೆಯಾದ ಸದಸ್ಯರಿಗೆ ಅದ್ಯಕ್ಷ,ಉಪಾಧ್ಯಕ್ಷರ ಆಯ್ಕೆಗೆ ನಡೆಸುವ ಸಭೆಯನ್ನು ನಡೆಸಲು ನೋಟಿಸ್ನ್ನು ನೋಂದಾಯಿತ ಅಂಚೆ ಮೂಲಕ ಒಂದು ವಾರದ ಕಾಲಾವಕಾಶದಲ್ಲಿ ಕಳಿಸಬೇಕು ಎಂದು ವಕ್ಭ್ ಬೋರ್ಡ್ನ 2017ರ ನಿಯಮ 24ರಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ.
ಆದರೆ ಇಲ್ಲಿನ ಜಿಲ್ಲಾ ವಕ್ಭ್ ಅಧಿಕಾರಿ ಸದಸ್ಯರಿಗೆ ಆ.28 ರಂದು ನೋಟಿಸ್ ನೀಡಿದ್ದು 31ರಂದು ಚುನಾವಣೆ ನಡೆಸುವುದಾಗಿ ತಿಳಿಸಿದ್ದಾರೆ.ಇದು ಅಂಜುಮನ್ ಕಮೀಟಿಯ ಆಡಳಿತ ಮಂಡಳಿಯ ಅಧ್ಯಕ್ಷರು,ಉಪಾಧ್ಯಕ್ಷರು,ಕಾರ್ಯದರ್ಶಿಗಳು,ಖಜಾಂಚಿ ಆಯ್ಕೆಯ ನಿಯಮ ಉಲ್ಲಂ|ಘನೆ ಮಾಡಿದಂತಾಗಿದೆ ಎಂಬ ದೂರುಗಳು ಕೇಳಿ ಬಂದಿವೆ.
ಆಡಳಿತ ಅಧಿಕಾರಿಯೂ ಆಗಿರುವ ಜಿಲ್ಲಾ ವಕ್ಭ್ ಬೋರ್ಡ್ ಅಧಿಕಾರಿ ತಬಸ್ಸುಮ್ ಮುಲ್ಲಾ ಅವರು, ಮುದ್ದೇಬಿಹಾಳ ಅಂಜುಮನ್ ಇಸ್ಲಾಂ ಸಂಸ್ಥೆ ನೂತನವಾಗಿ ಚುನಾಯಿತರಾದ ವ್ಯವಸ್ಥಾಪಕ ಸಮಿತಿ ಸದಸ್ಯರುಗಳ ಪ್ರಥಮ ಶಾಸನಬದ್ಧ ಅಧಿಕೃತ ಸಭೆಯನ್ನು ಆ.31 ರಂದು ಮದ್ಯಾಹ್ನ 12ಕ್ಕೆ ಅಂಜುಮನ್ ಇಸ್ಲಾಂ ಕಮೀಟಿ ಕಚೇರಿಯಲ್ಲಿ ಕರೆಯಲಾಗಿದೆ ಎಂದು ತಮ್ಮದೇ ಸಹಿಯುಳ್ಳ ನೋಟಿಸ್ನ್ನು ಚುನಾಯಿತ ಸದಸ್ಯರುಗಳಿಗೆ ನೇರವಾಗಿ ಸಿಬ್ಬಂದಿ ಮೂಲಕ ಕಳಿಸಿದ್ದಾರೆ ಎನ್ನಲಾಗಿದೆ.
ಸಭೆಯ ಅಧ್ಯಕ್ಷತೆಯನ್ನು ಅಂಜುಮನ್ ಇಸ್ಲಾಂ ಕಮೀಟಿ ಆಡಳಿತಾಧಿಕಾರಿಗಳು ಮತ್ತು ವಕ್ಭ್ ಬೋರ್ಡ್ ಜಿಲ್ಲಾ ಅಧಿಕಾರಿಗಳು ವಹಿಸಲಿದ್ದು ಒಂದು ವಾರ ಸಮಯ ಕೊಡದೇ ಎರಡೇ ದಿನದಲ್ಲಿ ಆಡಳಿತ ಮಂಡಳಿ ಪದಾಧಿಕಾರಿಗಳ ಮುಂದಾಗಿರುವುದು ತೀವ್ರ ಅಚ್ಚರಿಗೆ ಕಾರಣವಾಗಿದೆ.
ಅಂಜುಮನ್ ಕಮೀಟಿಗೆ ಚುನಾವಣೆ ನಡೆದ ಬಳಿಕ ಈವರೆಗೂ ಚುನಾಯಿತ ಸದಸ್ಯರಿಗೆ ಪ್ರಮಾಣ ಪತ್ರಗಳನ್ನು ಕೊಡುವ ಕೆಲಸ ಚುನಾವಣಾಧಿಕಾರಿಗಳಾದ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್ ಅವರಿಂದ ಆಗಿಲ್ಲ.ಕೇರ್ಟೇಕರ್ ಹಾಗೂ ಜಿಲ್ಲಾ ವಕ್ಭ್ ಬೋರ್ಡ್ ಅಧಿಕಾರಿಗೆ ಕರೆ ಮಾಡಿದರೂ ಅವರು ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ.ಒಟ್ಟಾರೆ ಅಂಜುಮನ್ ಸಂಸ್ಥೆಯ ಚುನಾವಣೆ ಪ್ರಜಾಪ್ರಭುತ್ವದ ಆಧಾರದ ಮೇಲೆ ನಡೆದಿದೆಯೋ ಅಥವಾ ಏಕಚಕ್ರಾಧಿಪತ್ಯದ ಆಧಾರದಲ್ಲಿ ನಡೆದಿದೆಯೋ ಗೊತ್ತಾಗುತ್ತಿಲ್ಲ ಎಂದು ಮುಸ್ಲಿಂ ಸಮಾಜದ ಪ್ರಗತಿಪರರು ಪ್ರಶ್ನಿಸುತ್ತಿದ್ದಾರೆ.







