ಮುದ್ದೇಬಿಹಾಳ : ಅಂಜುಮನ್ ಸಂಸ್ಥೆ ಪವಿತ್ರವಾದ ಸಂಸ್ಥೆಯಾಗಿದೆ. ಅಂಜುಮನ್ ಕಮೀಟಿ ಹದಿನೈದು ವರ್ಷಗಳಿಂದ ಅಭಿವೃದ್ಧಿ ಆಗಿಲ್ಲ.ಇದೊಂದು ಧಾರ್ಮಿಕ ಸಂಸ್ಥೆ. ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಈ ಸಂಸ್ಥೆಯಲ್ಲಿ ಹಸ್ತಕ್ಷೇಪ ನಾನು ಮಾಡುವುದರಿಂದ ಉಪಯೊಗ ಏನಿದೆ.ಅಲ್ಲಿ ನನ್ನ ಮಕ್ಕಳೇನಾದರೂ ಕಲಿಯುತ್ತಾರಾ ? ಅಲ್ಲಿ ಮಳಿಗೆ ಕೇಳಿದ್ದೀನಾ ? ಎಂದು ಶಾಸಕ ಸಿ.ಎಸ್.ನಾಡಗೌಡ ಪ್ರಶ್ನಿಸಿದರು.
ಪಟ್ಟಣದ ಹುಡ್ಕೋದ ಟಾಪ್ ಇನ್ ಟೌನ್ ಫಂಕ್ಷನ್ ಹಾಲ್ನಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಬಸರಕೋಡ ಪವಾಡ ಬಸವೇಶ್ವರ ದೇವಸ್ಥಾನದ ಮೂರ್ತಿ ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸ್ ಅಧಿಕಾರಿಗಳು,ಸಿಬ್ಬಂದಿ ಹಾಗೂ ಅಂಜುಮನ್ ಕಮೀಟಿ ನೂತನ ಸದಸ್ಯರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಜುಮನ್ ಸಂಸ್ಥೆಗೆ ಆಯ್ಕೆಯಾದವರು ಬಡವನ ಸಮಸ್ಯೆ ಬಗೆ ಹರಿಸುವ ಕೆಲಸ ಮಾಡಬೇಕು.ಸಮಾಜದ ವಿಷಯ ಬಂದಾಗ ಒಗ್ಗೂಡಿ ಹೋರಾಟ ಮಾಡಬೇಕು.ವಿಜಯಪುರದ ಅಂಜುಮನ್ ಆಸ್ತಿ ಬಿಟ್ಟರೆ ಮುದ್ದೇಬಿಹಾಳ, ತಾಳಿಕೋಟಿಯಲ್ಲಿ ಹೆಚ್ಚಿನ ಪ್ರಮಾಣದ ಆಸ್ತಿ ಸಂಸ್ಥೆಗಿದೆ.ಸರಕಾರದಿAದ ನೆರವು ಕೊಡುವುದಕ್ಕೆ ಸಾಧ್ಯವಿದೆ.ಅದಕ್ಕೆ ಹಣ ಮೀಸಲಾಗಿರಿಸಿದ್ದೇನೆ.ಸಿಎಂ ಐಡಿಯಲ್ಲಿ ಶೇ.7-10 ರಷ್ಟು ಅನುದಾನವನ್ಜು ಕೊಡುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಬಸರಕೋಡ ಘಟನೆ ರಾಜ್ಯದಲ್ಲಿಯೇ ಅತೀ ದೊಡ್ಡ ಸುದ್ದಿ ಮಾಡಿತ್ತು.ಜೀವ ಒತ್ತೆ ಇಟ್ಟು ಹೋರಾಟ ನಡೆಸಿ ಮೂರ್ತಿಯ ಬೆಳ್ಳಿ ವಾಪಸ್ ತಂದ ಅಧಿಕಾರಗಳನ್ನು ಗೌರವಿಸುವ ಕೆಲಸ ಮಾಡಬೇಕು.ನ್ಯಾಯಯುತ ವಾಗಿ ನಡೆದುಕೊಳ್ಳುವುದಕ್ಕೆ ಸಾಧ್ಯವಾದರೆ ರಾಮ ರಾಜ್ಯದ ಕನಸು ಈಡೇರಿಸಬಹುದು ಎಂದರು.
ಪೊಲೀಸರು ಇರದಿದ್ದರೆ ಮೂಲೆ ಮೂಲೆಯಲ್ಲು ಕೊಲೆ,ಹಗಲು ದರೋಡೆ,ಜಾತಿ ಜಾತಿ ವಿರಸ,ಕೋಮುಗಲಭೆ ಶಾಂತಿ ಭಂಗ ಉಂಟಾಗಿ ಅಶಾಂತೆ ಉಂಟಾಗುತ್ತಿತ್ತು.ವ್ಯವಸ್ಥೆಯನ್ನು ದೃಢಗೊಳಿಸುವ ಕೆಲಸ ಮಾಡಬೇಕು ಎಂದರು.ವಾಯ್.ಎಚ್.ವಿಜಯಕರ್,ಸಿಪಿಐ ಮೊಹ್ಮದ ಫಸಿವುದ್ದೀನ್,ಬಸರಕೋಡದ ಪ.ಬ.ದೇವಸ್ಥಾನ ಕಮಿಟಿ ಅಧ್ಯಕ್ಷ ಕೆ.ವಾಯ್.ಬಿರಾದಾರ,ಪಿಎಸೈ ಸಂಜಯ ತಿಪರೆಡ್ಡಿ,ಅಂಜುಮನ್ ಕಮೀಟಿ ಸದಸ್ಯ ಅಬ್ದುಲಗಫೂರ ಮಕಾನದಾರ ಮಾತನಾಡಿದರು.
ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ಗಣ್ಯರಾದ ಎಂ.ಆರ್.ನಾಡಗೌಡ್ರ ಕ್ರೆö ಪಿಎಸೈ ಆರ್.ಎಸ್.ಭಂಗಿ,ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ,ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ, ಮುತ್ತಣ್ಣ ಕಡಿ, ಬಾಲಾಜಿ ಶುಗರ್ಸ್ ನಿರ್ದೇಶಕ ರಾಹುಲಗೌಡ ಪಾಟೀಲ,ಎಚ್.ಬಿ.ಸಾಲಿಮನಿ ಇದ್ದರು.ಲಕ್ಷö್ಮಣ ಲಮಾಣಿ ನಿರೂಪಿಸಿದರು.







