ಮುದ್ದೇಬಿಹಾಳ : ಪಟ್ಟಣದ ಪ್ರತಿಷ್ಠಿತ ಅಂಜುಮನ್ ಇಸ್ಲಾಂ ಕಮೀಟಿಯ ನೂತನ ಪದಾಧಿಕಾರಿಗಳನ್ನು ಸೋಮವಾರ ಆಯ್ಕೆ ಮಾಡಲಾಗಿದೆ.ಅಧ್ಯಕ್ಷ,ಕಾರ್ಯದರ್ಶಿ ಹಾಗೂ ಖಜಾಂಚಿ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದರೆ ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಸಲಾಯಿತು.
ನೂತನ ಅಧ್ಯಕ್ಷರಾಗಿ ಅಲ್ಲಾಭಕ್ಷö್ಯ ದೇಸಾಯಿ, ಕಾರ್ಯದರ್ಶಿಯಾಗಿ ನೂರೇಹುಸೇನ್ ನದಾಫ,ಖಜಾಂಚಿಯಾಗಿ ಲಾಲಸಾಬ ಮೋಮಿನ ಅವಿರೋಧವಾಗಿ ಆಯ್ಕೆಯಾದರೆ ಉಪಾಧ್ಯಕ್ಷ ಸ್ಥಾನಕ್ಕೆ ಸುಲೇಮಾನ ಮಮದಾಪೂರ ಹಾಗೂ ಇರ್ಫಾನ್ ಕೂಡಗಿ ಮಧ್ಯೆ ಪೈಪೋಟಿ ನಡೆಯಿತು.ಇದರಲ್ಲಿ ಕೈ ಎತ್ತುವ ಮೂಲಕ ಮತದಾನ ಮಾಡಲಾಯಿತು.16 ಮತಗಳ ಬಹುಮತದೊಂದಿಗೆ ಇರ್ಫಾನ್ ಕೂಡಗಿ ಉಪಾಧ್ಯಕ್ಷರಾಗಿ ಚುನಾಯಿತರಾದರೆ ಅವರ ಪ್ರತಿಸ್ಪರ್ಧಿ ಸುಲೇಮಾನಗೆ 9 ಮತಗಳು ಲಭಿಸಿ ಚುನಾವಣೆಯಲ್ಲಿ ಪರಾಭವಗೊಂಡರು.
ಆಯ್ಕೆ ಪ್ರಕ್ರಿಯೆ ನಡೆಸಿದ ಅಂಜುಮನ್ ಆಡಳಿತಾಧಿಕಾರಿ ಹಾಗೂ ವಕ್ಭ್ ಬೋರ್ಡ್ ಜಿಲ್ಲಾ ಅಧಿಕಾರಿ ತಬಸ್ಸುಮ್ ಮಹೇಶವಾಡಗಿ(ಮುಲ್ಲಾ), ಕಮೀಟಿಯ ನಿಯಮಾವಳಿಯಂತೆ ಚುನಾವಣೆ ನಡೆಸಲಾಗಿದೆ.ನೋಟಿಸ್ ಕೊಡುವ ವಿಚಾರದಲ್ಲಿ ಉಂಟಾಗಿದ್ದ ಗೊಂದಲದ ಕುರಿತು ಪ್ರತಿಕ್ರಿಯಿಸಿದ ಅವರು, ಸರ್ವ ಸದಸ್ಯರು ಪದಾಧಿಕಾರಿಗಳ ಆಯ್ಕೆಗೆ ನಮ್ಮ ಸಹಮತ ಇದೆ ಎಂದು ತಿಳಿಸಿದ್ದರಿಂದ ತ್ವರಿತವಾಗಿ ಪದಾಧಿಕಾರಿಗಳ ಆಯ್ಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ಕೊಡುವುದರಲ್ಲಿ ವಿಳಂಬಗೊoಡಿರುವ ಕುರಿತು ಸುದ್ದಿಗಾರರು ಪ್ರಶ್ನೆ ಮಾಡಿದಾಗ ಉತ್ತರಿಸಿದ ವಕ್ಭ್ ಅಧಿಕಾರಿ ಮುಲ್ಲಾ, ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಿ ಚುನಾಯಿತ ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಲಾಗಿದೆ.ವಿಳಂಬವಾಗಿರುವುದು ನಿಜ.ಸೋಮವಾರದಂದೇ ಎಲ್ಲ ಸದಸ್ಯರಿಗೂ ಪ್ರಮಾಣ ಪತ್ರ ನೀಡಲಾಗಿದೆ ಎಂದು ಉತ್ತರಿಸಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಚುನಾಯಿತರಾದ 25 ಸದಸ್ಯರು ಆಯ್ಕೆ ಪ್ರಕ್ರಿಯೆಯಲ್ಲಿ ಹಾಜರಾಗಿದ್ದರು.
ಚುನಾವಣೆ ಪ್ರಕ್ರಿಯೆಯಲ್ಲಿ ಹಾಜರಿದ್ದ ಸದಸ್ಯರು:
ಅಬ್ದುಲಮಜೀದ ಮಕಾನದಾರ,ಡೋಂಗ್ರಿಸಾಬ ಢವಳಗಿ,ಅಲ್ಲಾಭಕ್ಷ ದೇಸಾಯಿ,ಇರ್ಫಾನಅಲಿ ಕೂಡಗಿ,ರಂಜಾನ್ ನದಾಫ,ನೂರೇಹುಸೇನ್ ನದಾಫ, ಅಬ್ದುಲಗಫೂರ ಮಕಾನದಾರ,ಲಾಲಸಾಬ ಮೋಮಿನ,ಅಬ್ದುಲಅಜೀಜ ನಾಯ್ಕೋಡಿ,ಇಸಾಕಶಾ ಮಕಾನದಾರ,ಮಹ್ಮದರಫೀಕ ನಾಗರಾಳ,ಹುಸೇನಬಾದಶಾ ಸಾಲಿಮನಿ, ಯಾಸೀನ ಸೋಠೆ,ಅತಾವುಲ್ಲಾಷಾ ಮಕಾನದಾರ,ಇಸ್ಮಾಯಿಲ್ ಗೊಳಸಂಗಿ,ಅಸ್ಲA ನಾಗೂರ,ಶಬ್ಬೀರ ಕಲ್ಮನಿ,ಇಸ್ಮಾಯಿಲ ಗೋಲಂದಾಜ,ಮಹೆಬೂಬ ಮುಲ್ಲಾ,ಉಮರಫಾರೂಕ







