ಶಾಸಕರು, ಮಾಜಿ ಶಾಸಕರ ಹೆಸರಿನಲ್ಲಿ ಪುಢಾರಿಗಳಿಂದ ಹಣ ವಸೂಲಿ..! ತಾಂಡಾ ಮಂದಿಯ ಆಕ್ರೋಶ (ವಿಡಿಯೋ ನೋಡಿ)

ಶಾಸಕರು, ಮಾಜಿ ಶಾಸಕರ ಹೆಸರಿನಲ್ಲಿ ಪುಢಾರಿಗಳಿಂದ ಹಣ ವಸೂಲಿ..! ತಾಂಡಾ ಮಂದಿಯ ಆಕ್ರೋಶ (ವಿಡಿಯೋ ನೋಡಿ)


ಮುದ್ದೇಬಿಹಾಳ : ತಾಲ್ಲೂಕಿನ ಕೋಳೂರು ತಾಂಡಾದಲ್ಲಿ ( Koluru tanda) ಶತಮಾನಗಳಿಂದ ವಾಸಿಸುತ್ತಿರುವ ನಿವಾಸಿಗಳಿಗೆ ವಾಸಿಸುತ್ತಿರುವ ಜಾಗೆಯ ಕುರಿತು ಗೊಂದಲ ಸೃಷ್ಟಿಸಿ ಅದರ ದುರ್ಲಾಭ ಪಡೆದುಕೊಳ್ಳಲು ಹಾಲಿ, ಮಾಜಿ ಶಾಸಕರ ಹೆಸರುಗಳನ್ನು ಬಳಸಿಕೊಂಡು ಕೆಲವು ಪುಢಾರಿಗಳು ವಸೂಲಿ ದಂಧೆಗೆ ಇಳಿದಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದು ಬಂಜಾರ ಸಮಾಜದ ಮುಖಂಡ ರವಿ ನಾಯಕ ಆಗ್ರಹಿಸಿದರು.

Join Our Telegram: https://t.me/dcgkannada

ಪಟ್ಟಣದ ತಹಶೀಲ್ದಾರ್ ಕಚೇರಿಗೆ ಸೋಮವಾರ ತಾಂಡಾ ನಿವಾಸಿಗಳೊಂದಿಗೆ ಆಗಮಿಸಿದ್ದ ಅವರು ತಹಶೀಲ್ದಾರ್‌ರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.

ತಾಲ್ಲೂಕಿನ ಕೋಳೂರು ತಾಂಡಾ Koluru tanda) ನಿವಾಸಿಗಳು ತಾಂಡಾದ ಸರ್ವೆ ನಂ.167//3ಬ, 167//2, 167//1 , 169//* ರಲ್ಲಿನ ಮಾಲೀಕರುಗಳಿಗೆ ತಮ್ಮ ಸ್ವಂತ ಹಣವನ್ನು ಕೊಟ್ಟು ಅವತ್ತಿನ ಕಾಲದಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಆದರೆ ಈಚೇಗೆ ಸರ್ಕಾರದ ಸುತ್ತೋಲೆಯಂತೆ ನಮ್ಮ ತಾಂಡಾವನ್ನು ಕಂದಾಯ ಗ್ರಾಮವನ್ನಾಗಿ ಪರಿವರ್ತಿಸುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು ಇದರ ದುರುಪಯೋಗವನ್ನು ಮೂಲ ಮಾಲೀಕರೂ ಹಾಗೂ ಮಧ್ಯವರ್ತಿಗಳು ಪಡೆದುಕೊಂಡು ಇಲ್ಲಿನ ನಿವಾಸಿಗಳಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: Hunagund: 528 ವಿದ್ಯಾರ್ಥಿಗಳಿಗೆ ಒಂದೇ ಬಸ್..!

ಹಾಲಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ, ಮಾಜಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರ ಜೊತೆಗೆ ಇರುವ ಕೆಲವು ಪುಢಾರಿಗಳು ಈ ರೀತಿ ಬಡವರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿದ್ದು ಜನಪ್ರತಿನಿಧಿಗಳ ಮುಖಕ್ಕೆ ಕಪ್ಪು ಮಸಿ ಬಳಿಯುವ ಕುತಂತ್ರವೂ ನಡೆದಿದೆ. ಇದಕ್ಕೆ ಹಾಲಿ, ಮಾಜಿ ಶಾಸಕರು ಆಸ್ಪದ ಕೊಡದೇ ಅಂತವರಿಗೆ ತಿಳಿವಳಿಕೆ ಹೇಳಬೇಕು ಎಂದು ಮನವಿ ಮಾಡಿದರು.

ಸರ್ಕಾರಕ್ಕೆ ಪುಕ್ಕಟೆಯಾಗಿ ಜಮೀನು ಕೊಟ್ಟಿದ್ದೇವೆ.ಅದಕ್ಕಾಗಿ ನಮಗೆ ಪರಿಹಾರ ಕೊಡಬೇಕು ಎಂದು ವಿನಾಕಾರಣ ಕೆಲವು ಪಟ್ಟಭದ್ರರು ಸರಕಾರಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ ಮತ್ತು ಅಧಿಕಾರಿಗಳಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ.ಅಧಿಕಾರಿಗಳಿಗೆ ಧಮಕಿ ಹಾಕಿ ತಮಗೆ ಸಂಬಂಧಪಡದ ಜಾಗೆಯನ್ನು ತಮ್ಮ ಹೆಸರಿಗೆ ಬರೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಸದರಿ ವಿಷಯದಲ್ಲಿ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಬಡವರಿಗೆ ಅನ್ಯಾಯ ಆಗದಂತೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಒಂದು ವೇಳೆ ಇಂತಹ ದುರ್ಮಾರ್ಗದಿಂದ ಬಡವರಿಗೆ ತೊಂದರೆ ಕೊಡುವ ಕೆಲಸ ಮುಂದುವರೆದರೆ, ನಮ್ಮ ತಾಂಡಾವನ್ನು ಕಂದಾಯ ಗ್ರಾಮ ಮಾಡುವ ಅವಶ್ಯಕತೆ ಇರುವುದಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈಗಾಗಲೇ ಮೂಲ ಮಾಲೀಕರಿಗೆ ಹಣ ಕೊಟ್ಟು ಜಮೀನು ಖರೀದಿ ಮಾಡಿದ್ದು ಅವರಿಗೆ ಯಾವುದೇ ರೀತಿಯ ಪರಿಹಾರವನ್ನು ನೀಡಬಾರದು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಮನವಿಯನ್ನು ಶಿರಸ್ತೇದಾರ ಎಂ.ಎಸ್.ಬಾಗೇವಾಡಿ ಅವರಿಗೆ ಸಲ್ಲಿಸಿದರು.

ತಾಂಡಾದ ಪ್ರಮುಖರಾದ ಶಾಂತಾರಾಮ ಮೇಲ್ಮನಿ, ರಾಮಸ್ವಾಮಿ ಸೀತಿಮನಿ, ಪ್ರತಾಪ ಸೀತಿಮನಿ, ತುಳಜಾರಾಮ ಚವ್ಹಾಣ, ಸಯಭಾಷ ದಿಂಡೂರ, ಮುತ್ತು ಚವ್ಹಾಣ, ಪ್ರದೀಪ ರಾಠೋಡ, ವಿಕಾಸ ಚವ್ಹಾಣ, ಶಿವಾನಂದ ರಾಠೋಡ ಮೊದಲಾದವರು ಇದ್ದರು.

ಹಾಲಿ, ಮಾಜಿ ಶಾಸಕರು ರಾಜಕಾರಣ ಮಾಡುವಾಗ ರಾಜಕಾರಣ ಮಾಡಿ.ಬಡವರು ತೊಂದರೆಯಲ್ಲಿದ್ದಾಗ ಅವರಿಗೆ ಸಹಾಯಕ್ಕೆ ಬನ್ನಿ. ಕೆಲವರು ಅಧಿಕಾರಿಗಳಿಗೆ ಬ್ಲಾಕ್‌ಮೇಲ್ ಮಾಡುವುದು, ರೊಕ್ಕಾ ಎತ್ತುವುದು ಮಾಡುತ್ತಿದ್ದಾರೆ. ಅನವಶ್ಯಕವಾಗಿ ಬಡವರಿಗೆ ತೊಂದರೆ ಕೊಡುತ್ತಿರುವವರನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿ ಕ್ರಮ ಜರುಗಿಸಬೇಕು ಎಂದು ಬಂಜಾರ ಸಮಾಜದ ಮುಖಂಡ ರವಿ ನಾಯಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Latest News

ಶೇರುದಾರರಿಗೆ ಶೇ.12 ರಷ್ಟು ಲಾಭಾಂಶ ಘೋಷಣೆ;              ಶರಣ ವೀರೇಶ್ವರ ಬ್ಯಾಂಕಿಗೆ 1.15 ಕೋಟಿ ರೂ.ಲಾಭ-ಎಂ.ಎಸ್.ಪಾಟೀಲ್

ಶೇರುದಾರರಿಗೆ ಶೇ.12 ರಷ್ಟು ಲಾಭಾಂಶ ಘೋಷಣೆ; ಶರಣ ವೀರೇಶ್ವರ ಬ್ಯಾಂಕಿಗೆ 1.15 ಕೋಟಿ ರೂ.ಲಾಭ-ಎಂ.ಎಸ್.ಪಾಟೀಲ್

ಮುದ್ದೇಬಿಹಾಳ / ನಾಲತವಾಡ : ಗ್ರಾಹಕರ ಉತ್ತಮ ಸಹಕಾರ ಹಾಗೂ ಶೇರುದಾರರ ಬೆಂಬಲ,ಆಡಳಿತ ಮಂಡಳಿಯ

ಅವೈಜ್ಞಾನಿಕ ಆದಾಯ ಮಿತಿ ರದ್ದುಗೊಳಿಸಲು ವಿಕಲಚೇತನರ ಆಗ್ರಹ

ಅವೈಜ್ಞಾನಿಕ ಆದಾಯ ಮಿತಿ ರದ್ದುಗೊಳಿಸಲು ವಿಕಲಚೇತನರ ಆಗ್ರಹ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಸರಕಾರ ಸಾಮಾಜಿಕ ಭದ್ರತೆ ಯೋಜನೆಗಳ ಅಡಿ ನೀಡಲಾಗುವ ಮಾಶಾಸನಕ್ಕೆ

ಎಂಎಲ್‌ಎ,ಮಂತ್ರಿಗಳ ವೇತನ,ಭತ್ಯೆ ಕಡಿತಗೊಳಿಸಿ-ಎ.ಎಸ್.ಪಾಟೀಲ್ ನಡಹಳ್ಳಿ

ಎಂಎಲ್‌ಎ,ಮಂತ್ರಿಗಳ ವೇತನ,ಭತ್ಯೆ ಕಡಿತಗೊಳಿಸಿ-ಎ.ಎಸ್.ಪಾಟೀಲ್ ನಡಹಳ್ಳಿ

ಮುದ್ದೇಬಿಹಾಳ : ಹಿಂದೆoದೂ ಕಂಡರಿಯದoತ ಭೀಕರ ಬರಗಾಲ ಈ ವರ್ಷ ಬಂದಿದ್ದು ರೈತರ ಖಾತೆಗೆ

ಅಂಜುಮನ್ ಚುನಾವಣೆಯಲ್ಲಿ ಮಹತ್ವದ ಬೆಳವಣಿಗೆ: ಮಕಾನದಾರ,ದಫೇದಾರ,ಸೋಠೆ,ಗೋಲಂದಾಜಗೆ ಹೈಕೋರ್ಟ್ ಬಿಗ್ ರಿಲೀಫ್

ಅಂಜುಮನ್ ಚುನಾವಣೆಯಲ್ಲಿ ಮಹತ್ವದ ಬೆಳವಣಿಗೆ: ಮಕಾನದಾರ,ದಫೇದಾರ,ಸೋಠೆ,ಗೋಲಂದಾಜಗೆ ಹೈಕೋರ್ಟ್ ಬಿಗ್ ರಿಲೀಫ್

ಮುದ್ದೇಬಿಹಾಳ : ಮಹತ್ವದ ಬೆಳವಣಿಗೆಯೊಂದರಲ್ಲಿ ಪಟ್ಟಣದ ಅಂಜುಮನ್ ಇಸ್ಲಾಂ ಕಮೀಟಿ ಚುನಾವಣೆಯಲ್ಲಿ ತಿರಸ್ಕಾರಗೊಂಡಿದ್ದ ನಾಲ್ವರ

ಮುದ್ದೇಬಿಹಾಳ : ಆ.8 ರಂದು ಪದ ಪ್ರದಾನ,ಜಾನಪದ ಬುಡಕಟ್ಟು ದಿನಾಚರಣೆ

ಮುದ್ದೇಬಿಹಾಳ : ಆ.8 ರಂದು ಪದ ಪ್ರದಾನ,ಜಾನಪದ ಬುಡಕಟ್ಟು ದಿನಾಚರಣೆ

ಮುದ್ದೇಬಿಹಾಳ : ಕನ್ನಡ ಜಾನಪದ ಪರಿಷತ್ ತಾಲೂಕು ಘಟಕದ ಉದ್ಘಾಟನೆ,ಪದ ಪ್ರದಾನ ಹಾಗೂ ಜಾನಪದ ಬುಡಕಟ್ಟು ದಿನಾಚರಣೆ ಸಮಾರಂಭ ಆ.8 ರಂದು ಮದ್ಯಾಹ್ನ 12.30ಕ್ಕೆ ಪಟ್ಟಣದ ಎಂಜಿಎoಕೆ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಪರಿಷತ್ ರಾಜ್ಯಾಧ್ಯಕ್ಷ ಜಾನಪದ ಎಸ್.ಬಾಲಾಜಿ ಉದ್ಘಾಟಿಸುವರು.ಎಂಜಿಎAಕೆ ಸಂಸ್ಥೆಯ ಅಧ್ಯಕ್ಷ ಮನೋಹರ ಕೋರಿ ಉಪಸ್ಥಿತರಿರುವರು.ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು.ಬಾಗಲಕೋಟ ಕಜಾಪ ಜಿಲ್ಲಾಧ್ಯಕ್ಷ ಡಿ.ಎಂ.ಸಾಹುಕಾರ ಪ್ರಾಸ್ತಾವಿಕ ನುಡಿಗಳನ್ನಾಡುವರು. ಕಜಾಪ ಜಿಲ್ಲಾ ಸಂಚಾಲಕ ಪುಂಡಲೀಕ ಮುರಾಳ

ಅಂತರ್‌ರಾಜ್ಯ ಕಳ್ಳರ ಬಂಧನ :                                       ಬಸರಕೋಡದ ಪವಾಡ ಬಸವೇಶ್ವರರ ಮೂರ್ತಿ ಕರಗಿಸಿ ಮಾರಿದ್ದ ಗಟ್ಟಿ ಬೆಳ್ಳಿ ವಶಕ್ಕೆ

ಅಂತರ್‌ರಾಜ್ಯ ಕಳ್ಳರ ಬಂಧನ : ಬಸರಕೋಡದ ಪವಾಡ ಬಸವೇಶ್ವರರ ಮೂರ್ತಿ ಕರಗಿಸಿ ಮಾರಿದ್ದ ಗಟ್ಟಿ ಬೆಳ್ಳಿ ವಶಕ್ಕೆ

ಮುದ್ದೇಬಿಹಾಳ(ವಿಜಯಪುರ ಜಿಲ್ಲೆ ): ತಾಲ್ಲೂಕಿನ ಬಸರಕೋಡ ಗ್ರಾಮದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ ಭೇದಿಸಿರುವ ವಿಜಯಪುರ ಜಿಲ್ಲೆಯ ಪೊಲೀಸರು ಗುಜರಾತ ಮೂಲದ ಅಂತರಾಜ್ಯ ಮಟ್ಟದ ಮೂವರು ಕಳ್ಳರನ್ನು ಬಂಧಿಸಿ ಅವರಿಂದ ತುಂಡರಿಸಿದ ಬೆಳ್ಳಿ ಹಾಗೂ ಬೆಳ್ಳಿ ತುಣುಕು ಸೇರಿ ಹಲವು ಸಾಮಗ್ರಿ ವಶಕ್ಕೆ ಪಡೆದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬೆಳಗಾವಿ ಉತ್ತರ ವಲಯದ ಐಜಿಪಿ ಸಂದೀಪ ಪಾಟೀಲ ಅವರು,ಕಳೆದ ಜು. 5 ರಂದು ರಾತ್ರಿ ಬಸರಕೋಡದ ಪವಾಡಬಸವೇಶ್ವರ