ನಂದವಾಡಗಿ: ತಾಲೂಕಿನ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂದವಾಡಗಿಯಲ್ಲಿ ಅತ್ಯುತ್ಸಾಹ, ಸಂಭ್ರಮ, ಸಡಗರದ ೭೮ ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ವರುಣರಾಜನು ಹೂಮಳೆ ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತು. ವೈಭವದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮವನ್ನು ಶಾಲೆಯ ಪ್ರಭಾರಿ ಮುಖ್ಯಗುರುಮಾತೆ ವಿ ಬಿ ಕುಂಬಾರ ಹಾಗೂ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಶ್ರೀಮತಿ ಜಯಶ್ರೀ ವಗ್ಗರರವರು ನೆರವೇರಿಸಿದರು.
Join Our Telegram: https://t.me/dcgkannada
ಶಾಲಾ ಮುಖ್ಯ ಗುರುಮಾತೆ ಕಾರ್ಯಕ್ರಮದ ಪ್ರಾಸ್ತಾವಿಕವಾಗಿ, ದೇಶಕ್ಕೆ ಸ್ವಾತಂತ್ರ್ಯ ಸಿಗುವಲ್ಲಿ ಅನೇಕ ಮಹಾನ ಹೋರಾಟಗಾರರ ತ್ಯಾಗ, ಬಲಿದಾನ, ಅವರ ಕೊಡುಗೆ ಶ್ರೇಷ್ಠವಾದದ್ದು, ನಾವು ದೇಶಕ್ಕಾಗಿ ಯಾವುದೇ ಸೇವೆ ಮಾಡಲು ಸಿದ್ದರಾಗಿರಬೇಕು. ಮಕ್ಕಳು ಉತ್ತಮ ಶಿಕ್ಷಣ ಪಡೆದು, ಸಾಧನೆಗೈಯುತ್ತ ದೇಶದ ಕೀರ್ತಿ ಪತಾಕೆಯನ್ನು ಹಾರಿಸಬೇಕು ಎಂದರು. ಶಾಲೆಯು ಉತ್ತಮ ರೀತಿಯಲ್ಲಿ ಅಭಿವೃದ್ಧಿಯಾಗುವಲ್ಲಿ ಎಸ್ ಡಿ ಎಂ ಸಿ ಹಾಗೂ ಗ್ರಾಮದ ನಾಗರಿಕರ ಸಹಕಾರ, ಸಹಾಯ ಬಹುಮುಖ್ಯ. ಶಾಲೆಗೆ ದಾನಿಗಳು ಕೊಡುಗೆಯನ್ನು ನೀಡುತ್ತಾ ಶಾಲೆಯ ಪ್ರಗತಿಗಾಗಿ ಸಹಕಾರ ನೀಡಿರುತ್ತಾರೆ ಎಂದು ಅವರಿಗೆ ಕೃತಜ್ಞತೆ, ಅಭಿನಂದನೆ ಸಲ್ಲಿಸಿದರು.
ಶಾಲೆಯ ವಿದ್ಯಾರ್ಥಿನಿಯರಿಂದ ಸ್ವಾತಂತ್ರ್ಯ ದಿನಾಚರಣೆಯ ಕುರಿತು ಭಾಷಣ, ಅನಿಸಿಕೆ ವ್ಯಕ್ತಪಡಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಮಾಡುವುದರ ಮೂಲಕ ದಿನಾಚರಣೆಗೆ ಮೆರುಗು ತಂದರು. ನಲಿಕಲಿ ಮಕ್ಕಳು, ಉಳಿದ ತರಗತಿಯ ಮಕ್ಕಳ ಭಾಷಣ, ನೃತ್ಯವು ಕಾರ್ಯಕ್ರಮವನ್ನು ಸುಂದರಗೊಳಿಸಿತು.

ದೇ ಸಂದರ್ಭದಲ್ಲಿ ಶಾಲೆಗೆ ಕೊಡುಗೆ ನೀಡಿದ ದಾನಿಗಳಿಗೆ ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಶ್ರೀಮತಿ ಜಯಶ್ರೀ ವಗ್ಗರ, ಉಪಾಧ್ಯಕ್ಷರು ಶ್ರೀ ಸುಭಾಷಗೌಡ ರಾಯನಗೌಡ್ರು, ಶ್ರೀ ಮಾಬೂಸಾಬ ಮುಜಾವರ, ಶ್ರೀ ಶಿವಪ್ಪ ಕಟಾoಬ್ಳಿ, ಶ್ರೀ ವೀರಭದ್ರಯ್ಯ ಮಠ, ಶ್ರೀಮತಿನಂದಿತಾ ಗೌಡರ, ಶ್ರೀಮತಿ ದೇವಮ್ಮ ಭಜಂತ್ರಿ, ಶಾಲಾ ಮುಖ್ಯ ಗುರುಮಾತೆ ಶ್ರೀಮತಿ ವಿ ಬಿ ಕುಂಬಾರ, ಸಹ ಶಿಕ್ಷಕಿಯರಾದ ಶ್ರೀಮತಿ ಜ್ಯೋತಿ, ಶ್ರೀಮತಿ ಜಿ ಆರ್ ನದಾಫ್, ಸಹ ಶಿಕ್ಷಕರಾದ ಶ್ರೀ ಎಸ್ ವಿ ಬಲೂಳದ, ಬಸವರಾಜ ಬಲಕುಂದಿ, ಡಾ. ವಿಶ್ವನಾಥ ತೋಟಿ, ಶ್ರೀ ಚಂದ್ರಶೇಖರ ಹುತಗಣ್ಣ, ಕುಮಾರಿ ಅಶ್ವಿನಿ ಕಪ್ಪರದ, ಉರ್ದು ಶಾಲೆಯ ಮುಖ್ಯ ಗುರುಮಾತೆ ಶ್ರೀಮತಿ ಗಂಗಾ, ಅತಿಥಿ ಶಿಕ್ಷಕಿಯರು, ಉರ್ದು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಶಿಕ್ಷಣ ಪ್ರೇಮಿ ಗೋಪಿ ಶಿಂಧೆ, ವಿದ್ಯಾರ್ಥಿನಿಯರು, ಪಾಲಕರು, ಪೋಷಕರು ನಂದವಾಡಗಿ ಗ್ರಾಮದ ಹಿರಿಯರು,ಯುವಕರು ಹಾಜರಿದ್ದರು.
ಇದನ್ನೂ ಓದಿ: Channapattana by election: ಇವರೆ ನೋಡಿ ಕಾಂಗ್ರೆಸ್ ಅಭ್ಯರ್ಥಿ…
ಕಾರ್ಯಕ್ರಮ ನಿರೂಪಣೆ ಬಸವರಾಜ ಬಲಕುಂದಿ, ವಿಶ್ವನಾಥ ತೋಟಿ ನಿರ್ವಹಿಸಿದರು, ಶ್ರೀ ಚಂದ್ರಶೇಖರ ಹುತಗಣ್ಣ ಸ್ವಾಗತಿಸಿದರು, ಕುಮಾರಿ ಅಶ್ವಿನಿ ಕಪ್ಪರದ ವಂದಿಸಿದರು.