MLA Kashapanavar has come to Adapur.. Continued argument..?

ಟಗರಿನ ಕಾಳಗಕ್ಕೆ ವೇದಿಕೆ ಸಜ್ಜು.. “ಯಾರಿವಳ‌ ಗಂಡ” ನಾಟಕ ಉದ್ಘಾಟನೆಗೆ ಶಾಸಕ ಕಾಶಪ್ಪನವರ ಆದಾಪೂರಕ್ಕೆ ಬರ್ತಿದ್ದಾರೆ.. ಮುಂದುವರಿಯುತ್ತಾ ವಾಗ್ವಾದ..?

ಟಗರಿನ ಕಾಳಗಕ್ಕೆ ವೇದಿಕೆ ಸಜ್ಜು.. “ಯಾರಿವಳ‌ ಗಂಡ” ನಾಟಕ ಉದ್ಘಾಟನೆಗೆ ಶಾಸಕ ಕಾಶಪ್ಪನವರ ಆದಾಪೂರಕ್ಕೆ ಬರ್ತಿದ್ದಾರೆ.. ಮುಂದುವರಿಯುತ್ತಾ ವಾಗ್ವಾದ..?

ಇಳಕಲ್: ತಾಲೂಕಿನ ಚಿಕ್ಕ ಆದಾಪೂರ ಗ್ರಾಮದಲ್ಲಿ ಗ್ರಾಮ ದೇವತೆ ಕಾಳಿಕಾ ದೇವಿ ಜಾತ್ರೆ ಅಂಗವಾಗಿ ಇಂದು (27-8-2024) ಆಯೋಜನೆಗೊಂಡಿರುವ “ಯಾರಿವಳ‌ ಗಂಡ” ಸಾಮಾಜಿಕ ನಾಟಕವನ್ನು ಉದ್ಘಾಟನೆಗೆ ಆಗಮಿಸುವುದು ಖಚಿತವಾಗಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನಲ್ ಗೆ ಸೇರಿ: https://t.me/dcgkannada

ನಿನ್ನೆ ಪ್ರದರ್ಶನಗೊಂಡ “ಕಿಲಾಡಿ ರಂಗಣ್ಣ” ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದ್ದ ಮಾಜಿ‌ ಶಾಸಕ ದೊಡ್ಡನಗೌಡ ಜಿ.‌ ಪಾಟೀಲ್ ಅವರ ಮಗ ರಾಜುಗೌಡ ಪಾಟೀಲ್ ಅವರು, ಶಾಸಕ ವಿಜಯಾನಂದ ಕಾಶಪ್ಪನವರ ಮೇಲೆ ಏಕವಚನದಲ್ಲಿಯೇ ವಾಗ್ದಾಳಿ ಮಾಡಿ.. “ನಾಳೆ ಬಾ ಆದಾಪೂರಕ್ಕ.. ಏನ್ ಮಾಡ್ತಿ ನೋಡ್ತಿವಿ” ಎಂದು ಅಬ್ಬರಿಸಿದ್ದಾರೆ.

ಇಂದು ಗ್ರಾಮಕ್ಕೆ ಆಗಮಿಸಲಿರುವ ಶಾಸಕ ವಿಜಯಾನಂದ ಕಾಶಪ್ಪನವರ ಅವರು ನಾಟಕ ಉದ್ಘಾಟನೆ ಮಾಡಿದ ನಂತರ ಏನು ಮಾತನಾಡುತ್ತಾರೆ ಎನ್ನುವ ಕುತೂಹಲ ಗ್ರಾಮಸ್ಥರಲ್ಲಿದೆ. ಈ ಕುತೂಹಲಕ್ಕೆ ರಾತ್ರಿ ಸುಮಾರು 11 ಗಂಟೆಗೆ ತೆರೆಬೀಳಲಿದೆ.

ವಿಜ್ಜಾ.. ಇನ್ನೂ ನೀನು ಬೋ* ನಾನು ಸಜ್ಜಾಗಿ ನಿಂತಿದ್ದೇನೆ: ಏಕ ವಚನದಲ್ಲಿಯೇ ರಾಜುಗೌಡ ಪಾಟೀಲ್ ವಾಗ್ದಾಳಿ

ಇಳಕಲ್: “** ವಿಜ್ಜಾ.. ಇನ್ನೂ ನೀನು ಬೋ* ನಾನು ಸಜ್ಜಾಗಿ ನಿಂತಿದ್ದೇನೆ” ಎಂದು ಮಾಜಿ ಶಾಸಕ ದೊಡ್ಡನಗೌಡ ಜಿ. ಪಾಟೀಲ್ ಅವರ ಮಗನಾದ ರಾಜುಗೌಡ ಪಾಟೀಲ್ ಅವರು ಸವಾಲು ಹಾಕಿದರು.

ತಾಲೂಕಿನ ಚಿಕ್ಕ ಆದಾಪೂರ ಗ್ರಾಮದಲ್ಲಿ ಗ್ರಾಮ ದೇವತೆ ಕಾಳಿಕಾ ದೇವಿ ಜಾತ್ರೆಯ ಅಂಗವಾಗಿ ಆಯೋಜಿಸಿದ್ದ “ಕಿಲಾಡಿ ರಂಗಣ್ಣ” ಸಾಮಾಜಿಕ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು.

“ನಾನು ರಾಜಕೀಯ ಮಾತನಾಡಲು ಬಂದಿರಲಿಲ್ಲ. ಆದರೆ, ಇಳಕಲ್ ನಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಸುದ್ದಿಗೋಷ್ಠಿಯಲ್ಲಿ ನಮ್ಮ ತಂದೆಯವರಿಗೆ ದೊಡ್ಡನಗೌಡ ನೀ ದಡ್ಡ ಎಂದು ನಿಂದಿಸಿದ ಕಾರಣ ರಾಜಕೀಯ ಮಾತನಾಡಲೇ ಬೇಕಾದ ಅನಿವಾರ್ಯತೆ ಉಂಟಾಗಿದೆ” ಎಂದು ಮಾತು ಆರಂಭಿಸಿದರು.

“ನಾವು ಇಳಕಲ್ ನಲ್ಲಿ ಇರುವವರು. ಬಾಯಿಗೆ ಬಂದಂಗ ಮಾತನಾಡಿದರೆ ಸುಮ್ಮನೆ ಕೂರಲು ಆಗಲ್ಲ. ಇನ್ನು ಮುಂದೆ ನೀ ಬೊಗಳು.. ನಾನು ನೋಡ್ತಿನಿ…” ಎಂದು ಎಚ್ಚರಿಕೆ ರೀತಿ ಮಾತನಾಡಿದರು.

“ಅಭಿವೃದ್ಧಿ ಕೆಲಸ ಮಾಡುವುದನ್ನು ಬಿಟ್ಟು, ಬಾಯಿಗೆ ಬಂದಂಗ ಮಾತನಾಡುತ್ತಾ, ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿಯಾ? ನಾಳೆ‌ ಚಿಕ್ಕ ಆದಾಪೂರ ಗ್ರಾಮಕ್ಕೆ ಬರ್ತಿಯಲ್ಲ… ಬಾ.. ಏನು ಮಾಡ್ತಿ ನೋಡ್ತಿವಿ” ಎಂದು ಗುಡುಗಿದರು.

ವಾಗ್ವಾದಕ್ಕೆ ಕಾರಣ ಏನು?

ಇಳಕಲ್ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ನಂತರ ಶಾಸಕರು ಮತ್ತು ಮಾಜಿ‌ ಶಾಸಕರ ನಡುವಿನ ವಾಕ್ಸಮರ ಜೋರಾಗಿದೆ. ಈಗ ಮಾಜಿ ಶಾಸಕ ದೊಡ್ಡನಗೌಡ ಅವರ ಮಗನೂ ಮಾತಿನ ಮಲ್ಲ ಯುದ್ಧಕ್ಕೆ ಮತ್ತೆ ಪ್ರವೇಶವನ್ನು ಚಿಕ್ಕ ಆದಾಪೂರ ಗ್ರಾಮದಿಂದ‌ ಮಾಡಿದ್ದಾರೆ.

ಬಿಜೆಪಿ ನಾಯಕತ್ವ ಯಾರದ್ದು?

ವಿಧಾನಸಭೆ ಚುನಾವಣೆ ಪೂರ್ವದಲ್ಲಿಯೂ ಹೀಗೆ ಮಾತಿನ ಯುದ್ಧ ನಡೆಸಿದ್ದ ಕಾಶಪ್ಪನವರ ಮತ್ತು ದೊಡ್ಡನಗೌಡ ಅವರು ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ಸು ಕಂಡಿದ್ದರು. ಈಗ ತಾಲೂಕು ಬಿಜೆಪಿ ನಾಯಕತ್ವ ಚರ್ಚೆ ಜೋರಾಗಿರುವಾಗಲೇ ಮಾಜಿ ಶಾಸಕರು ತಮ್ಮ ಮಗನನ್ನು ಮತ್ತೆ ಮುನ್ನೆಲೆಗೆ ತರಲು ಮುಂದಾಗಿದ್ದಾರಾ ಎಂಬ ಚರ್ಚೆ ಸ್ಥಳೀಯ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

ಏತನ್ಮಧ್ಯೆ, ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಬಿಜೆಪಿ ಸೇರಿಸಿದ ನಂತರ ಎಸ್. ಆರ್. ನವಲಿಹಿರೇಮಠ ಅವರೂ ಬಿಜೆಪಿ ಸೇರುತ್ತಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಬಿಜೆಪಿ ನಾಯಕತ್ವ ಯಾರ ಬಳಿ ಉಳಿಯುತ್ತದೆ ಎಂಬುದು ಭಾರೀ ಕುತೂಹಲ ಮೂಡಿಸಿದೆ.

ಟಗರಿನ ಕಾಳಗಕ್ಕೆ ವೇದಿಕೆ ಸಜ್ಜು:

ಇಂದು(27-8-2024) ಮಧ್ಯಾಹ್ನ 3 ಗಂಟೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಟಗರಿನ ಕಾಳಗಕ್ಕೆ ಗ್ರಾಮದ ಗುರು ಹಿರಿಯರು ಚಾಲನೆ ನೀಡಲಿದ್ದಾರೆ.

ನಾಲ್ಕು ಬಹುಮಾನಗಳಿವೆ:

ಪ್ರಥಮ ಬಹುಮಾನ :
7001 ರೂಪಾಯಿ ಮತ್ತು ಟ್ರೋಫಿ
(ಕೊಡುಗೆ: ಚನ್ನಪ್ಪಗೌಡ ವೀ. ಗುಡಿಹಿಂದಿನ)

ದ್ವಿತೀಯ ಬಹುಮಾನ:
5001 ರೂಪಾಯಿ ಮತ್ತು ಟ್ರೋಫಿ
(ಕೊಡುಗೆ: ವೆಂಕನಗೌಡ ದೊ. ಅಗಸಿಮುಂದಿನ)

ತೃತೀಯ ಬಹುಮಾನ:
3001 ರೂಪಾಯಿ ಮತ್ತು ಟ್ರೋಫಿ
(ಕೊಡುಗೆ: ರಾಜುಗೌಡ ನಿಂ. ಜೋಗರೆಡ್ಡಿ)

ಚತುರ್ಥ ಬಹುಮಾನ:
2001 ರೂಪಾಯಿ ಮತ್ತು ಟ್ರೋಫಿ
(ಕೊಡುಗೆ: ಲಕ್ಷ್ಮಣ ಮ. ಜಾಡರ್)

ವೀಕ್ಷಕ ವಿವರಣೆಯನ್ನು ರಾಜುಗೌಡ ಶಂ. ಹನಮಗೌಡ್ರ ಅವರು ನೀಡಲಿದ್ದಾರೆ. ನಿರ್ಣಾಯಕರಾಗಿ ದೇವಪ್ಪ ಬ. ಬಡಕುರಿ, ಸೋಮಶೇಖರ ಕುರಿ, ಪರಸಪ್ಪ ಮಿಂಚೇರಿ, ಯಂಕಪ್ಪ ಕುರಿ ಪಂದ್ಯವನ್ನು ನಡೆಸಿಕೊಡಲಿದ್ದಾರೆ.

ಪ್ರವೇಶ ಫೀ: 301 ರೂಪಾಯಿ

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ‌8123485661 (ಯಂಕಪ್ಪ), 8088917431 (ಶಂಕರ್), 8310414151 (ಹನಮಂತ), 9742797909 (ರಾಜು) ಸಂಪರ್ಕಿಸಿ.

Latest News

ವಿದ್ಯಾಸ್ಪೂರ್ತಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ:      ಸ್ವಾತಂತ್ರ್ಯದ ಉಳಿವಿಗೆ ಶ್ರಮಿಸೋಣ-ರಾಜೇಶ್ವರಿ ಪಾಟೀಲ್

ವಿದ್ಯಾಸ್ಪೂರ್ತಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ: ಸ್ವಾತಂತ್ರ್ಯದ ಉಳಿವಿಗೆ ಶ್ರಮಿಸೋಣ-ರಾಜೇಶ್ವರಿ ಪಾಟೀಲ್

ಮುದ್ದೇಬಿಹಾಳ : ಲಕ್ಷಾಂತರ ಜನ ಹಿರಿಯರು,ಯುವಕರ ತ್ಯಾಗ,ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತಿದ್ದು ಅದನ್ನು

ತಂಗಡಗಿಯಲ್ಲಿ ಧ್ವಜಾರೋಹಣ: ಪೊಲೀಸರಿಗೆ ಸನ್ಮಾನ

ತಂಗಡಗಿಯಲ್ಲಿ ಧ್ವಜಾರೋಹಣ: ಪೊಲೀಸರಿಗೆ ಸನ್ಮಾನ

ಮುದ್ದೇಬಿಹಾಳ : ತಾಲ್ಲೂಕಿನ ತಂಗಡಗಿ ಗ್ರಾಮದ ಸ್ನೇಹಸಿರಿ ಸೇವಾ ಸಂಘದಿಂದ 80ನೇ ಸ್ವಾತಂತ್ರ್ಯೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.

ಮುದ್ದೇಬಿಹಾಳದಲ್ಲಿ ಸಂಭ್ರಮದ 80ನೇ ಸ್ವಾತಂತ್ರ್ಯೋತ್ಸವ; ಬರಗಾಲದ ಹೆಸರಿನಲ್ಲಿ ಜನರ ದಾರಿ ತಪ್ಪಿಸುವ ಹುನ್ನಾರ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳದಲ್ಲಿ ಸಂಭ್ರಮದ 80ನೇ ಸ್ವಾತಂತ್ರ್ಯೋತ್ಸವ; ಬರಗಾಲದ ಹೆಸರಿನಲ್ಲಿ ಜನರ ದಾರಿ ತಪ್ಪಿಸುವ ಹುನ್ನಾರ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಈ ವರ್ಷ ಹಿಂದೆoದಿಗಿoತಲೂ ಅಧಿಕ ಪ್ರಮಾಣದಲ್ಲಿ ಬರಗಾಲ ಕಾಡುತ್ತಿದೆ.ಆದರೆ ಕೆಲವರು ಬರಗಾಲವನ್ನು

ಶೇರುದಾರರಿಗೆ ಶೇ.12 ರಷ್ಟು ಲಾಭಾಂಶ ಘೋಷಣೆ;              ಶರಣ ವೀರೇಶ್ವರ ಬ್ಯಾಂಕಿಗೆ 1.15 ಕೋಟಿ ರೂ.ಲಾಭ-ಎಂ.ಎಸ್.ಪಾಟೀಲ್

ಶೇರುದಾರರಿಗೆ ಶೇ.12 ರಷ್ಟು ಲಾಭಾಂಶ ಘೋಷಣೆ; ಶರಣ ವೀರೇಶ್ವರ ಬ್ಯಾಂಕಿಗೆ 1.15 ಕೋಟಿ ರೂ.ಲಾಭ-ಎಂ.ಎಸ್.ಪಾಟೀಲ್

ಮುದ್ದೇಬಿಹಾಳ / ನಾಲತವಾಡ : ಗ್ರಾಹಕರ ಉತ್ತಮ ಸಹಕಾರ ಹಾಗೂ ಶೇರುದಾರರ ಬೆಂಬಲ,ಆಡಳಿತ ಮಂಡಳಿಯ

ಆ.11,12 ರಂದು ಶಾಸಕ ನಾಡಗೌಡರಿಂದ ಬರ ಪರಿಸ್ಥಿತಿ ವೀಕ್ಷಣೆ

ಆ.11,12 ರಂದು ಶಾಸಕ ನಾಡಗೌಡರಿಂದ ಬರ ಪರಿಸ್ಥಿತಿ ವೀಕ್ಷಣೆ

ಮುದ್ದೇಬಿಹಾಳ : ಕೆಎಸ್‌ಡಿಎಲ್ ಅಧ್ಯಕ್ಷ,ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಬರ ಪರಿಸ್ಥಿತಿ ಕುರಿತು ಆ.11,12 ರಂದು ಅವಲೋಕನ ನಡೆಸಿ ಬೆಳೆ ವೀಕ್ಷಣೆ ಮಾಡಲಿದ್ದಾರೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ. ಆ.11 ರದು ಬೆಳಗ್ಗೆ 11.30ಕ್ಕೆ ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಬರ ಪರಿಸ್ಥಿತಿ ಕುರಿತು ಚರ್ಚೆ, ಮದ್ಯಾಹ್ನ 2.30ಕ್ಕೆ ಬರಪೀಡಿತ ಪ್ರದೇಶಗಳಾದ ಹರಿಂದ್ರಾಳ,ಹಡಲಗೇರಿ ಗ್ರಾಮಗಳಲ್ಲಿ ಹತ್ತಿ,ತೊಗರಿ,ಸಜ್ಜೆ ಬೆಳೆಗಳ ವೀಕ್ಷಣೆ,ಸಂಜೆ 4ಕ್ಕೆ ಢವಳಗಿ ಹೋಬಳಿಯ ಹತ್ತಿ ತೊಗರಿ ಬೆಳೆಗಳ ವೀಕ್ಷಣೆ

ಸದಾ ಮುಖ ಗಂಟು ಹಾಕಿಕೊಂಡು ಇರಬೇಡಿ-ಜಯಸಿದ್ದೇಶ್ವರ ಶ್ರೀ

ಸದಾ ಮುಖ ಗಂಟು ಹಾಕಿಕೊಂಡು ಇರಬೇಡಿ-ಜಯಸಿದ್ದೇಶ್ವರ ಶ್ರೀ

ಮುದ್ದೇಬಿಹಾಳ : ಹಣ, ಆಸ್ತಿ, ಅಂತಸ್ತು, ಐಶ್ವರ್ಯ, ಉದ್ಯೋಗ ಮುಂತಾದವುಗಳ ಕೊರತೆಯಿಂದ ಮನುಷ್ಯ ಬಡವನಾಗುವುದಿಲ್ಲ ಬದಲಿಗೆ ಪರಸ್ಪರ ಮಾತನಾಡದಿರುವುದರಿಂದ, ಮುಖ ಗಂಟು ಹಾಕಿರುವುದರಿಂದ ಬಡವನಾಗಿ ಕಾಣುತ್ತಾನೆ. ಮನುಷ್ಯ ಬದುಕಿನಲ್ಲಿ ನೂರು ಕಾಲ ಬದುಕಿರುವಷ್ಟು ನಗು ಸಂಗ್ರಹಿಸಬೇಕು. ಗೆಳೆಯರ ನಡುವೆ ಸರಿ, ತಪ್ಪುಗಳ ಆರೋಗ್ಯಕರ ಚರ್ಚೆ ನಡೆಯಬೇಕು ಎಂದು ಹಿರೂರು ಜಯಸಿದ್ದೇಶ್ವರ ಸ್ವಾಮೀಜಿ ಹೇಳಿದರು. ಪಟ್ಟಣದ ಹಡಲಗೇರಿ ರಸ್ತೆ ಪಕ್ಕದಲ್ಲಿರುವ ಶ್ರೀ ಪದ್ಮಾವತಿ ದೇವಸ್ಥಾನದ ಸಮುದಾಯ ಭವನದಲ್ಲಿ ವಿಬಿಸಿ ಪ್ರೌಢಶಾಲೆಯ 1985-86ನೇ