MLA Kashapanavar has come to Adapur.. Continued argument..?

ಟಗರಿನ ಕಾಳಗಕ್ಕೆ ವೇದಿಕೆ ಸಜ್ಜು.. “ಯಾರಿವಳ‌ ಗಂಡ” ನಾಟಕ ಉದ್ಘಾಟನೆಗೆ ಶಾಸಕ ಕಾಶಪ್ಪನವರ ಆದಾಪೂರಕ್ಕೆ ಬರ್ತಿದ್ದಾರೆ.. ಮುಂದುವರಿಯುತ್ತಾ ವಾಗ್ವಾದ..?

ಟಗರಿನ ಕಾಳಗಕ್ಕೆ ವೇದಿಕೆ ಸಜ್ಜು.. “ಯಾರಿವಳ‌ ಗಂಡ” ನಾಟಕ ಉದ್ಘಾಟನೆಗೆ ಶಾಸಕ ಕಾಶಪ್ಪನವರ ಆದಾಪೂರಕ್ಕೆ ಬರ್ತಿದ್ದಾರೆ.. ಮುಂದುವರಿಯುತ್ತಾ ವಾಗ್ವಾದ..?

ಇಳಕಲ್: ತಾಲೂಕಿನ ಚಿಕ್ಕ ಆದಾಪೂರ ಗ್ರಾಮದಲ್ಲಿ ಗ್ರಾಮ ದೇವತೆ ಕಾಳಿಕಾ ದೇವಿ ಜಾತ್ರೆ ಅಂಗವಾಗಿ ಇಂದು (27-8-2024) ಆಯೋಜನೆಗೊಂಡಿರುವ “ಯಾರಿವಳ‌ ಗಂಡ” ಸಾಮಾಜಿಕ ನಾಟಕವನ್ನು ಉದ್ಘಾಟನೆಗೆ ಆಗಮಿಸುವುದು ಖಚಿತವಾಗಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನಲ್ ಗೆ ಸೇರಿ: https://t.me/dcgkannada

ನಿನ್ನೆ ಪ್ರದರ್ಶನಗೊಂಡ “ಕಿಲಾಡಿ ರಂಗಣ್ಣ” ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದ್ದ ಮಾಜಿ‌ ಶಾಸಕ ದೊಡ್ಡನಗೌಡ ಜಿ.‌ ಪಾಟೀಲ್ ಅವರ ಮಗ ರಾಜುಗೌಡ ಪಾಟೀಲ್ ಅವರು, ಶಾಸಕ ವಿಜಯಾನಂದ ಕಾಶಪ್ಪನವರ ಮೇಲೆ ಏಕವಚನದಲ್ಲಿಯೇ ವಾಗ್ದಾಳಿ ಮಾಡಿ.. “ನಾಳೆ ಬಾ ಆದಾಪೂರಕ್ಕ.. ಏನ್ ಮಾಡ್ತಿ ನೋಡ್ತಿವಿ” ಎಂದು ಅಬ್ಬರಿಸಿದ್ದಾರೆ.

ಇಂದು ಗ್ರಾಮಕ್ಕೆ ಆಗಮಿಸಲಿರುವ ಶಾಸಕ ವಿಜಯಾನಂದ ಕಾಶಪ್ಪನವರ ಅವರು ನಾಟಕ ಉದ್ಘಾಟನೆ ಮಾಡಿದ ನಂತರ ಏನು ಮಾತನಾಡುತ್ತಾರೆ ಎನ್ನುವ ಕುತೂಹಲ ಗ್ರಾಮಸ್ಥರಲ್ಲಿದೆ. ಈ ಕುತೂಹಲಕ್ಕೆ ರಾತ್ರಿ ಸುಮಾರು 11 ಗಂಟೆಗೆ ತೆರೆಬೀಳಲಿದೆ.

ವಿಜ್ಜಾ.. ಇನ್ನೂ ನೀನು ಬೋ* ನಾನು ಸಜ್ಜಾಗಿ ನಿಂತಿದ್ದೇನೆ: ಏಕ ವಚನದಲ್ಲಿಯೇ ರಾಜುಗೌಡ ಪಾಟೀಲ್ ವಾಗ್ದಾಳಿ

ಇಳಕಲ್: “** ವಿಜ್ಜಾ.. ಇನ್ನೂ ನೀನು ಬೋ* ನಾನು ಸಜ್ಜಾಗಿ ನಿಂತಿದ್ದೇನೆ” ಎಂದು ಮಾಜಿ ಶಾಸಕ ದೊಡ್ಡನಗೌಡ ಜಿ. ಪಾಟೀಲ್ ಅವರ ಮಗನಾದ ರಾಜುಗೌಡ ಪಾಟೀಲ್ ಅವರು ಸವಾಲು ಹಾಕಿದರು.

ತಾಲೂಕಿನ ಚಿಕ್ಕ ಆದಾಪೂರ ಗ್ರಾಮದಲ್ಲಿ ಗ್ರಾಮ ದೇವತೆ ಕಾಳಿಕಾ ದೇವಿ ಜಾತ್ರೆಯ ಅಂಗವಾಗಿ ಆಯೋಜಿಸಿದ್ದ “ಕಿಲಾಡಿ ರಂಗಣ್ಣ” ಸಾಮಾಜಿಕ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು.

“ನಾನು ರಾಜಕೀಯ ಮಾತನಾಡಲು ಬಂದಿರಲಿಲ್ಲ. ಆದರೆ, ಇಳಕಲ್ ನಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಸುದ್ದಿಗೋಷ್ಠಿಯಲ್ಲಿ ನಮ್ಮ ತಂದೆಯವರಿಗೆ ದೊಡ್ಡನಗೌಡ ನೀ ದಡ್ಡ ಎಂದು ನಿಂದಿಸಿದ ಕಾರಣ ರಾಜಕೀಯ ಮಾತನಾಡಲೇ ಬೇಕಾದ ಅನಿವಾರ್ಯತೆ ಉಂಟಾಗಿದೆ” ಎಂದು ಮಾತು ಆರಂಭಿಸಿದರು.

“ನಾವು ಇಳಕಲ್ ನಲ್ಲಿ ಇರುವವರು. ಬಾಯಿಗೆ ಬಂದಂಗ ಮಾತನಾಡಿದರೆ ಸುಮ್ಮನೆ ಕೂರಲು ಆಗಲ್ಲ. ಇನ್ನು ಮುಂದೆ ನೀ ಬೊಗಳು.. ನಾನು ನೋಡ್ತಿನಿ…” ಎಂದು ಎಚ್ಚರಿಕೆ ರೀತಿ ಮಾತನಾಡಿದರು.

“ಅಭಿವೃದ್ಧಿ ಕೆಲಸ ಮಾಡುವುದನ್ನು ಬಿಟ್ಟು, ಬಾಯಿಗೆ ಬಂದಂಗ ಮಾತನಾಡುತ್ತಾ, ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿಯಾ? ನಾಳೆ‌ ಚಿಕ್ಕ ಆದಾಪೂರ ಗ್ರಾಮಕ್ಕೆ ಬರ್ತಿಯಲ್ಲ… ಬಾ.. ಏನು ಮಾಡ್ತಿ ನೋಡ್ತಿವಿ” ಎಂದು ಗುಡುಗಿದರು.

ವಾಗ್ವಾದಕ್ಕೆ ಕಾರಣ ಏನು?

ಇಳಕಲ್ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ನಂತರ ಶಾಸಕರು ಮತ್ತು ಮಾಜಿ‌ ಶಾಸಕರ ನಡುವಿನ ವಾಕ್ಸಮರ ಜೋರಾಗಿದೆ. ಈಗ ಮಾಜಿ ಶಾಸಕ ದೊಡ್ಡನಗೌಡ ಅವರ ಮಗನೂ ಮಾತಿನ ಮಲ್ಲ ಯುದ್ಧಕ್ಕೆ ಮತ್ತೆ ಪ್ರವೇಶವನ್ನು ಚಿಕ್ಕ ಆದಾಪೂರ ಗ್ರಾಮದಿಂದ‌ ಮಾಡಿದ್ದಾರೆ.

ಬಿಜೆಪಿ ನಾಯಕತ್ವ ಯಾರದ್ದು?

ವಿಧಾನಸಭೆ ಚುನಾವಣೆ ಪೂರ್ವದಲ್ಲಿಯೂ ಹೀಗೆ ಮಾತಿನ ಯುದ್ಧ ನಡೆಸಿದ್ದ ಕಾಶಪ್ಪನವರ ಮತ್ತು ದೊಡ್ಡನಗೌಡ ಅವರು ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ಸು ಕಂಡಿದ್ದರು. ಈಗ ತಾಲೂಕು ಬಿಜೆಪಿ ನಾಯಕತ್ವ ಚರ್ಚೆ ಜೋರಾಗಿರುವಾಗಲೇ ಮಾಜಿ ಶಾಸಕರು ತಮ್ಮ ಮಗನನ್ನು ಮತ್ತೆ ಮುನ್ನೆಲೆಗೆ ತರಲು ಮುಂದಾಗಿದ್ದಾರಾ ಎಂಬ ಚರ್ಚೆ ಸ್ಥಳೀಯ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

ಏತನ್ಮಧ್ಯೆ, ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಬಿಜೆಪಿ ಸೇರಿಸಿದ ನಂತರ ಎಸ್. ಆರ್. ನವಲಿಹಿರೇಮಠ ಅವರೂ ಬಿಜೆಪಿ ಸೇರುತ್ತಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಬಿಜೆಪಿ ನಾಯಕತ್ವ ಯಾರ ಬಳಿ ಉಳಿಯುತ್ತದೆ ಎಂಬುದು ಭಾರೀ ಕುತೂಹಲ ಮೂಡಿಸಿದೆ.

ಟಗರಿನ ಕಾಳಗಕ್ಕೆ ವೇದಿಕೆ ಸಜ್ಜು:

ಇಂದು(27-8-2024) ಮಧ್ಯಾಹ್ನ 3 ಗಂಟೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಟಗರಿನ ಕಾಳಗಕ್ಕೆ ಗ್ರಾಮದ ಗುರು ಹಿರಿಯರು ಚಾಲನೆ ನೀಡಲಿದ್ದಾರೆ.

ನಾಲ್ಕು ಬಹುಮಾನಗಳಿವೆ:

ಪ್ರಥಮ ಬಹುಮಾನ :
7001 ರೂಪಾಯಿ ಮತ್ತು ಟ್ರೋಫಿ
(ಕೊಡುಗೆ: ಚನ್ನಪ್ಪಗೌಡ ವೀ. ಗುಡಿಹಿಂದಿನ)

ದ್ವಿತೀಯ ಬಹುಮಾನ:
5001 ರೂಪಾಯಿ ಮತ್ತು ಟ್ರೋಫಿ
(ಕೊಡುಗೆ: ವೆಂಕನಗೌಡ ದೊ. ಅಗಸಿಮುಂದಿನ)

ತೃತೀಯ ಬಹುಮಾನ:
3001 ರೂಪಾಯಿ ಮತ್ತು ಟ್ರೋಫಿ
(ಕೊಡುಗೆ: ರಾಜುಗೌಡ ನಿಂ. ಜೋಗರೆಡ್ಡಿ)

ಚತುರ್ಥ ಬಹುಮಾನ:
2001 ರೂಪಾಯಿ ಮತ್ತು ಟ್ರೋಫಿ
(ಕೊಡುಗೆ: ಲಕ್ಷ್ಮಣ ಮ. ಜಾಡರ್)

ವೀಕ್ಷಕ ವಿವರಣೆಯನ್ನು ರಾಜುಗೌಡ ಶಂ. ಹನಮಗೌಡ್ರ ಅವರು ನೀಡಲಿದ್ದಾರೆ. ನಿರ್ಣಾಯಕರಾಗಿ ದೇವಪ್ಪ ಬ. ಬಡಕುರಿ, ಸೋಮಶೇಖರ ಕುರಿ, ಪರಸಪ್ಪ ಮಿಂಚೇರಿ, ಯಂಕಪ್ಪ ಕುರಿ ಪಂದ್ಯವನ್ನು ನಡೆಸಿಕೊಡಲಿದ್ದಾರೆ.

ಪ್ರವೇಶ ಫೀ: 301 ರೂಪಾಯಿ

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ‌8123485661 (ಯಂಕಪ್ಪ), 8088917431 (ಶಂಕರ್), 8310414151 (ಹನಮಂತ), 9742797909 (ರಾಜು) ಸಂಪರ್ಕಿಸಿ.

Latest News

ಪ್ರತಿಭಾ ಕಾರಂಜಿಯಲ್ಲಿ ಮಕ್ಕಳ ಕಲರವ

ಪ್ರತಿಭಾ ಕಾರಂಜಿಯಲ್ಲಿ ಮಕ್ಕಳ ಕಲರವ

ನಾಲತವಾಡ: ಸಮೀಪದ ಲೊಟಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತಿಯ ಕಾಂತಿ ಮಕ್ಕಳ ಮೂಲಕ

ಮಹಿಳೆಯರಿಗೆ ಋತುಚಕ್ರ ರಜೆ :ಸರ್ಕಾರದಿಂದ ಮಾನವೀಯ ಸಂವೇದನೆಯ ಆದೇಶ-ಸಂಗೀತಾ ನಾಡಗೌಡ

ಮಹಿಳೆಯರಿಗೆ ಋತುಚಕ್ರ ರಜೆ :ಸರ್ಕಾರದಿಂದ ಮಾನವೀಯ ಸಂವೇದನೆಯ ಆದೇಶ-ಸಂಗೀತಾ ನಾಡಗೌಡ

ಮುದ್ದೇಬಿಹಾಳ : ರಾಜ್ಯ ಸರ್ಕಾರ ಎರಡು ದಿನಗಳ ಹಿಂದಷ್ಟೇ ರಾಜ್ಯದ ಸರ್ಕಾರಿ,ಖಾಸಗಿ.ಗುತ್ತಿಗೆ,ಹೊರಗುತ್ತಿಗೆ ಕ್ಷೇತ್ರದಲ್ಲಿ ಸೇವೆ

ನ.16 ರಂದು ವಿಜಯಪುರದಲ್ಲಿ ಪದಗ್ರಹಣ  :       ಮುದ್ದೇಬಿಹಾಳ A.I.B.S.S ಸಂಘಕ್ಕೆ ಬಹಾದ್ದೂರ ರಾಠೋಡ ಪುನರಾಯ್ಕೆ

ನ.16 ರಂದು ವಿಜಯಪುರದಲ್ಲಿ ಪದಗ್ರಹಣ : ಮುದ್ದೇಬಿಹಾಳ A.I.B.S.S ಸಂಘಕ್ಕೆ ಬಹಾದ್ದೂರ ರಾಠೋಡ ಪುನರಾಯ್ಕೆ

ಮುದ್ದೇಬಿಹಾಳ : ಬಂಜಾರಾ ಸಮಾಜದ ಸಂಘಟನೆಯನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟಲು, ಸಮಾಜದ ಮಕ್ಕಳು ಶೈಕ್ಷಣಿಕ,ಔದ್ಯೋಗಿಕ

ಅಸ್ಕಿ ಫೌಂಡೇಶನ್‌ದಿಂದ 50 ಸಾವಿರ ರೂ.ನೆರವು: ಕೆಬಿಜೆಎನ್‌ಎಲ್‌ದಿಂದ ರಕ್ಷಣಾಗೋಡೆ ನಿರ್ಮಾಣಕ್ಕೆ ಸಿ.ಬಿ.ಅಸ್ಕಿ ಒತ್ತಾಯ

ಅಸ್ಕಿ ಫೌಂಡೇಶನ್‌ದಿಂದ 50 ಸಾವಿರ ರೂ.ನೆರವು: ಕೆಬಿಜೆಎನ್‌ಎಲ್‌ದಿಂದ ರಕ್ಷಣಾಗೋಡೆ ನಿರ್ಮಾಣಕ್ಕೆ ಸಿ.ಬಿ.ಅಸ್ಕಿ ಒತ್ತಾಯ

ಮುದ್ದೇಬಿಹಾಳ : ತಂಗಡಗಿ ಇಳಿಜಾರಿನಿಂದ ಶಿರೋಳ ಗ್ರಾಮದ ಬಳಿ ಹಾಯ್ದು ಹೋಗಿರುವ ಕೆಬಿಜೆಎನ್‌ಎಲ್‌ನ ಎಡದಂಡೆ

MUDDEBIHAL :  ಕಾಲುವೆಯಲ್ಲಿ ಜಾರಿ ಬಿದ್ದು ಮೂವರು ಕಣ್ಮರೆ : ಮುಂದುವರೆದ ಶೋಧ ಕಾರ್ಯ

MUDDEBIHAL : ಕಾಲುವೆಯಲ್ಲಿ ಜಾರಿ ಬಿದ್ದು ಮೂವರು ಕಣ್ಮರೆ : ಮುಂದುವರೆದ ಶೋಧ ಕಾರ್ಯ

ಮುದ್ದೇಬಿಹಾಳ ತಾಲ್ಲೂಕಿನ ಶಿರೋಳ ಗ್ರಾಮದ ಸಮೀಪದಲ್ಲಿ ಕಾಲುವೆಯಲ್ಲಿ ಕಾಲು ಜಾರಿ ಮೂವರು ಬಿದ್ದಿರುವ ಘಟನೆ ಮಂಗಳವಾರ ಮದ್ಯಾಹ್ನ ನಡೆದಿದೆ. ಈ ಘಟನೆ ಹಿನ್ನೆಲೆಯಲ್ಲಿ ಅಗ್ನಿಶಾಮಕ ಠಾಣೆ ಹಾಗೂ ಪೊಲೀಸ್ ಇಲಾಖೆಯಿಂದ ಶೋಧ ಕಾರ್ಯ ಮುಂದುವರೆದಿದೆ. ಮಹೆಬೂಬ ನಗರದ ಪಕ್ಕದಲ್ಲಿರುವ ಆಶ್ರಯ ಕಾಲನಿಯಲ್ಲಿ ವಾಸವಿದ್ದ ಸುಡಗಾಡ ಸಿದ್ಧ ಜನಾಂಗದ ಇಬ್ಬರು ಯುವಕರು, ಓರ್ವ ಯುವತಿ ಕಾಲುವೆಯಲ್ಲಿ ಮುಳುಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರಿಂದ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ. ಬಸಮ್ಮ ಚೆನ್ನಪ್ಪ ಕೊಣ್ಣೂರ(21),

ಐದು ದಿನಗಳ ಹೋರಾಟ ಅಂತ್ಯ :                                       ಟನ್ ಕಬ್ಬಿಗೆ 3264 – ಬಾಲಾಜಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ  ಅಧಿಕೃತ ಘೋಷಣೆ

ಐದು ದಿನಗಳ ಹೋರಾಟ ಅಂತ್ಯ : ಟನ್ ಕಬ್ಬಿಗೆ 3264 – ಬಾಲಾಜಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಅಧಿಕೃತ ಘೋಷಣೆ

ಮುದ್ದೇಬಿಹಾಳ : ಕಬ್ಬಿನ ರಿಕವರಿ ಆಧಾರದ ಮೇಲೆ ಟನ್ ಕಬ್ಬಿಗೆ 3264 ರೂ.ನೀಡುವುದಾಗಿ ತಾಲ್ಲೂಕಿನ ಯರಗಲ್ ಮದರಿ ಬಾಲಾಜಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಶನಿವಾರ ಅಧಿಕೃತ ಘೋಷಣೆ ಮಾಡಿದ್ದು ಕಳೆದ ಐದು ದಿನಗಳಿಂದ ತಾಲ್ಲೂಕಿನ ಅಮರಗೋಳ ಕ್ರಾಸ್ ಬಳಿ ನಡೆಯುತ್ತಿದ್ದ ರೈತರ ಹೋರಾಟ ಅಂತ್ಯಗೊAಡಿದೆ. ತಾಲ್ಲೂಕಿನ ಅಮರಗೋಳ ಕ್ರಾಸ್ ಬಳಿ ಕಬ್ಬಿನ ವಾಹನಗಳನ್ನು ತಡೆದು ನಿಲ್ಲಿಸಿ ಕರ್ನಾಟಕ ರೈತ ಸಂಘ ಹಾಗೂ ರೈತಪರ ಸಂಘಟನೆಯ ಮುಖಂಡರು ಹೋರಾಟ ಆರಂಭಿಸಿದ್ದರು.ಇಲ್ಲಿನ