Muddebihal: Patil elected president, Ramodagi unopposed as vice president

Muddebihal: ಪಾಟೀಲ್ ಅಧ್ಯಕ್ಷ, ರಾಮೋಡಗಿ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ

Muddebihal: ಪಾಟೀಲ್ ಅಧ್ಯಕ್ಷ, ರಾಮೋಡಗಿ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ

ಮುದ್ದೇಬಿಹಾಳ : ತಾಲೂಕಿನ ಹಿರೇಮುರಾಳ ಗ್ರಾಮದ ಶ್ರೀ ಸಂಗಮೇಶ್ವರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಲ್ಲನಗೌಡ ಪಾಟೀಲ್, ಉಪಾಧ್ಯಕ್ಷರಾಗಿ ಚಂದ್ರಶೇಖರ ರಾಮೋಡಗಿ ಅವರು ಅವಿರೋಧ ಆಯ್ಕೆಯಾದರು.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada

ತಾಲ್ಲೂಕಿನ ಹಿರೇಮುರಾಳದಲ್ಲಿ ಸಂಘದ ಕಚೇರಿಯಲ್ಲಿ ಸೋಮುವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಮಲ್ಲನಗೌಡ ಪಾಟೀಲ್, ಉಪಾಧ್ಯಕ್ಷರಾಗಿ ಚಂದ್ರಶೇಖರ ರಾಮೋಡಗಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ ಉತ್ನಾಳ ಘೋಷಿಸಿದರು.

ನೂತನ ಅಧ್ಯಕ್ಷ ಮಲ್ಲನಗೌಡ ಬಿ ಪಾಟೀಲ್ ಮಾತನಾಡಿ,ಸಂಘದ ಸ್ವಂತ ಕಟ್ಟಡದ ಕಾಮಗಾರಿ ಚಾಲನೆಯಲ್ಲಿದ್ದು ಕೆಲವೇ ತಿಂಗಳಲ್ಲಿ ನೂತನ ಕಟ್ಟಡ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಅಮರೇಶ ಬಿ.ಬಾಗೇವಾಡಿ ಮತ್ತು ಸಿಬ್ಬಂದಿ ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು ಸನ್ಮಾನಿಸಿದರು.

ಇದನ್ನೂ ಓದಿ: ‘ಶಾಸಕರೇ ಉತ್ತರ ಕೊಡಲಿ, ಅವರ ಬಾಲಂಗೋಚಿಗಳಲ್ಲ’-ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರ ವಾಗ್ದಾಳಿ

ಸಂಘದ ನಿರ್ದೇಶಕರು, ಮುಖಂಡರಾದ ಗಿರೀಶಗೌಡ ಪಾಟೀಲ್, ನಾಗರಾಜ ರಾಮೋಡಗಿ, ರಮೇಶ ವಗ್ಗರ, ಮಲ್ಲಣ್ಣ ರಕ್ಕಸಗಿ, ಬಿ.ಬಿ.ಪಾಟೀಲ್ ಮೊದಲಾದವರು ಇದ್ದರು.

Latest News

ಅಸ್ಕಿ ಫೌಂಡೇಶನ್‌ದಿಂದ 50 ಸಾವಿರ ರೂ.ನೆರವು: ಕೆಬಿಜೆಎನ್‌ಎಲ್‌ದಿಂದ ರಕ್ಷಣಾಗೋಡೆ ನಿರ್ಮಾಣಕ್ಕೆ ಸಿ.ಬಿ.ಅಸ್ಕಿ ಒತ್ತಾಯ

ಅಸ್ಕಿ ಫೌಂಡೇಶನ್‌ದಿಂದ 50 ಸಾವಿರ ರೂ.ನೆರವು: ಕೆಬಿಜೆಎನ್‌ಎಲ್‌ದಿಂದ ರಕ್ಷಣಾಗೋಡೆ ನಿರ್ಮಾಣಕ್ಕೆ ಸಿ.ಬಿ.ಅಸ್ಕಿ ಒತ್ತಾಯ

ಮುದ್ದೇಬಿಹಾಳ : ತಂಗಡಗಿ ಇಳಿಜಾರಿನಿಂದ ಶಿರೋಳ ಗ್ರಾಮದ ಬಳಿ ಹಾಯ್ದು ಹೋಗಿರುವ ಕೆಬಿಜೆಎನ್‌ಎಲ್‌ನ ಎಡದಂಡೆ

ಕಾಲುವೆಗೆ ಬಿದ್ದು ಮೂವರ ಸಾವು ಪ್ರಕರಣ: ಅಗ್ನಿಶಾಮಕ,ಪೊಲೀಸರ ಕಾರ್ಯಾಚರಣೆ : ಮತ್ತಿಬ್ಬರ ಶವ ಕಾಲುವೆಯಿಂದ ಹೊರಕ್ಕೆ

ಕಾಲುವೆಗೆ ಬಿದ್ದು ಮೂವರ ಸಾವು ಪ್ರಕರಣ: ಅಗ್ನಿಶಾಮಕ,ಪೊಲೀಸರ ಕಾರ್ಯಾಚರಣೆ : ಮತ್ತಿಬ್ಬರ ಶವ ಕಾಲುವೆಯಿಂದ ಹೊರಕ್ಕೆ

ಮುದ್ದೇಬಿಹಾಳ : ತಾಲ್ಲೂಕಿನ ಶಿರೋಳ ರಸ್ತೆಯಲ್ಲಿರುವ ಕೆಬಿಜೆಎನ್‌ಎಲ್ ಎಡದಂಡೆ ಕಾಲುವೆಗೆ ಜಾರಿ ಬಿದ್ದಿದ್ದ ಮೂವರ

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಗೆ ಬಿರಾದಾರ ನೇಮಕ

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಗೆ ಬಿರಾದಾರ ನೇಮಕ

ಮುದ್ದೇಬಿಹಾಳ : ಪಟ್ಟಣದ ಏಪಿಎಂಸಿ ವರ್ತಕ ಮಲ್ಲನಗೌಡ ಬಿರಾದಾರ ಅವರನ್ನು ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ

ಮುದ್ದೇಬಿಹಾಳ : ಅಂಜುಮನ್ ಸಂಸ್ಥೆಯ ಅಭಿವೃದ್ಧಿಗೆ ಕೈ ಜೋಡಿಸೋಣ

ಮುದ್ದೇಬಿಹಾಳ : ಅಂಜುಮನ್ ಸಂಸ್ಥೆಯ ಅಭಿವೃದ್ಧಿಗೆ ಕೈ ಜೋಡಿಸೋಣ

ಮುದ್ದೇಬಿಹಾಳ : ಮುಸ್ಲಿಂ ಸಮಾಜದ ಪ್ರಾತಿನಿಧಿಕ ಸಂಸ್ಥೆ ಅಂಜುಮನ್ ಇಸ್ಲಾಂ ಕಮೀಟಿಗೆ ಆಡಳಿತ ಮಂಡಳಿ

ಹಿರಿಯ ರಾಜಕಾರಣಿ ನಾಡಗೌಡರನ್ನು ಕಾಂಗ್ರೆಸ್ ಹೈಕಮಾಂಡ್‌ ಗೌರವದಿಂದ ನಡೆಸಿಕೊಳ್ಳಬೇಕು – ಸಂಗನಗೌಡ ಬಿರಾದಾರ(ಜಿಟಿಸಿ)

ಹಿರಿಯ ರಾಜಕಾರಣಿ ನಾಡಗೌಡರನ್ನು ಕಾಂಗ್ರೆಸ್ ಹೈಕಮಾಂಡ್‌ ಗೌರವದಿಂದ ನಡೆಸಿಕೊಳ್ಳಬೇಕು – ಸಂಗನಗೌಡ ಬಿರಾದಾರ(ಜಿಟಿಸಿ)

ಮುದ್ದೇಬಿಹಾಳ : ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ಶಾಸಕರಾಗಿರುವ ಸಿ.ಎಸ್.ನಾಡಗೌಡ ಅವರಿಗೆ ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಆದ್ಯತೆ ಕಲ್ಪಿಸಬೇಕು ಎಂದು ಗಣ್ಯವರ್ತಕ ಸಂಗನಗೌಡ ಬಿರಾದಾರ(ಜಿಟಿಸಿ) ಹೇಳಿದರು. ಪಟ್ಟಣದ ಏಪಿಎಂಸಿಯಲ್ಲಿರುವ ಹನುಮಂತ ದೇವರ ಗುಡಿಯಲ್ಲಿ ದಿ ಅಡತ ಮರ್ಚಂಟ್ಸ್ ಅಸೋಸಿಯೇಷನ್‌ದಿಂದ ವರ್ತಕರ ನೇತೃತ್ವದಲ್ಲಿ ಶುಕ್ರವಾರ ನಾಡಗೌಡರಿಗೆ ಸಚಿವ ಸ್ಥಾನ ದೊರೆಯಲಿ ಎಂದು ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ನಿಷ್ಠಾವಂತರಾಗಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ನಾಡಗೌಡರಿಗೆ ಹೈಕಮಾಂಡ್ ಹೇಳಿದಂತೆ

‘ರೈತರ ಆಶೀರ್ವಾದದಿಂದ ನೀವು ಶಾಸಕರಾಗಿದ್ದೀರಿ, ಅವರ ಬೆಂಬಲಕ್ಕೆ ನಿಲ್ಲಿ’-ಶಾಂತಗೌಡ ಪಾಟೀಲ ನಡಹಳ್ಳಿ

‘ರೈತರ ಆಶೀರ್ವಾದದಿಂದ ನೀವು ಶಾಸಕರಾಗಿದ್ದೀರಿ, ಅವರ ಬೆಂಬಲಕ್ಕೆ ನಿಲ್ಲಿ’-ಶಾಂತಗೌಡ ಪಾಟೀಲ ನಡಹಳ್ಳಿ

ಮುದ್ದೇಬಿಹಾಳ : ಕಬ್ಬು ಬೆಳೆದಿರುವ ರೈತರು ಕೇಳುತ್ತಿರುವ ನ್ಯಾಯಯುತ ಬೆಲೆ 3500 ರೂ ಘೋಷಣೆ ಮಾಡದೇ ಸರ್ಕಾರ ಮೌನವಾಗಿದೆ.ಕ್ಷೇತ್ರದ ಶಾಸಕರು ರೈತರಿಂದಲೇ ಶಾಸಕರಾಗಿದ್ದೀರಿ ಅವರಿಗೆ ಬೆಂಬಲ ನೀಡುವ ಕಾರ್ಯ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು. ತಾಲ್ಲೂಕಿನ ತಂಗಡಗಿ ಸಮೀಪದ ಅಮರಗೋಳ ಕ್ರಾಸ್ ಬಳಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಕಬ್ಬಿಗೆ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ನಡೆದಿರುವ ಮೂರನೇ ದಿನದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದರು.