Mutsadi Kashappan, a born and active political activist, passed away

ಹುಟ್ಟು ಹೋರಾಟಗಾರ ರಾಜಕೀಯ ಮುತ್ಸದಿ ಕಾಶಪ್ಪನವರ ಅಗಲಿಕೆ ಎರಡು ದಶಕಗಳು

ಹುಟ್ಟು ಹೋರಾಟಗಾರ ರಾಜಕೀಯ ಮುತ್ಸದಿ ಕಾಶಪ್ಪನವರ ಅಗಲಿಕೆ ಎರಡು ದಶಕಗಳು

ಹುನಗುಂದ-ಅಖಂಡ ವಿಜಯಪುರ ಮತ್ತು ಬಾಗಲಕೋಟಿ ಜಿಲ್ಲೆಯ ಹುನಗುಂದ ತಾಲೂಕಿನ ಕೃಷ್ಣ ನದಿಯ ದಡದಲ್ಲಿರುವ ಒಂದು ಪುಟ್ಟ ಗ್ರಾಮವಾದ ಹಾವರಗಿಯಲ್ಲಿ ಜನಿಸಿದ ಲಿಂ, ಎಸ್.ಆರ್.ಕಾಶಪ್ಪನವರ ಮೊದಲು ತಾಲೂಕ ಅಭಿವೃದ್ದಿ ಮಂಡಳಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ತಮ್ಮ ರಾಜಕೀಯ ಜರ್ನಿ ಆರಂಭಿಸುವ ಮೂಲಕ ರಾಜ್ಯ ಸರ್ಕಾರದ ಕ್ಯಾಬಿನೆಟ್ ದರ್ಜೆಯ ಮಂತ್ರಿ ಸ್ಥಾನದವರಿಗೂ ಸಾಗಿದರು. ಹಮ್ಮು ಬಿಮ್ಮಿಲ್ಲದ ಸರಳ ವ್ಯಕ್ತಿತ್ವದ ರಾಜಕಾರಣಿಯಾಗಿದ್ದರು. ಜಿಗಿಟುತನ ಹಾಗೂ ಜವಾರಿ ಭಾಷೆ ಮತ್ತು ಸ್ವಭಾವ ಅವರನ್ನು ಅಲ್ಲಿಯತನಕ ಕರೆದುಕೊಂಡು ಹೋಗಿದ್ದಲ್ಲದೇ ಇವರು ಇಂದಿಗೂ ಜನರ ಮನಸಿನಲ್ಲಿ ಸದಾ ಜನಾನುರಾಗಿ ಮತ್ತು ಮುತ್ಸದ್ದಿ ನಾಯಕ ಎನ್ನಿಸಿಕೊಂಡಿದ್ದರು.

೧೯೪೯ ಫೆಬ್ರವರಿ ೨೬ ರಂದು ಹಾವರಗಿಯಲ್ಲಿ ಜನಸಿದ ಲಿಂ, ಎಸ್. ಆರ್. ಕಾಶಪ್ಪನವರ ೨೦೦೩ ಜೂನ್ ೨೭ ರಂದು ಆಕಸ್ಮಿಕ ಅಫಘಾತದಲ್ಲಿ ನಿಧನರಾದರು. ಬದುಕಿದ್ದರೇ ರಾಜ್ಯದ ಲಿಂಗಾಯತ ಅಗ್ರಗಣ್ಯ ನಾಯಕರಾಗುತ್ತಿದ್ದರೆಂದು ಅವರಲ್ಲಿದ್ದ ಮುತ್ಸದ್ದಿ ನಾಯಕತ್ವ ಕಂಡಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಹೇಳುವ ಮೂಲಕ ಕಾಂಗ್ರೆಸ್‌ಗೆ ಕಾಶಪ್ಪನವರ ಅನಿವಾರ್ಯ ಆಗಿದ್ದರೆಂದು ಹೇಳಿದ ಮಾತು ಮರೆಯಲಾಗುವುದು.

ಹಾವರಗಿಯಂತಹ ಸಣ್ಣ ಹಳ್ಳಿಯಿಂದ ತಮ್ಮ ರಾಜಕೀಯವನ್ನು ಆರಂಭಿಸಿ ಇವರು ಮೊದಲ ಬಾರಿಗೆ ತಾಲೂಕ ಅಭಿವೃದ್ಧಿ ಮಂಡಳಿ(ಟಿಡಿಬಿ) ಸದಸ್ಯರಾಗಿ ಮತ್ತು ಅಧ್ಯಕ್ಷರಾದರು. ೧೯೮೫ ರಲ್ಲಿ ವಿಧಾನಸಭೆ ಸ್ಪರ್ಧಿಸಿ ಅಲ್ಪ ಮತಗಳಿಂದ ಸೋಲನ್ನು ಕಂಡರೂ. ಛಲ ಬಿಡದೇ ಪಕ್ಷ ಸಂಘಟಿಸಿ ೧೯೮೯ ರಲ್ಲಿ ತಮ್ಮನ್ನು ಸೋಲಿಸಿದ ಲಿಂ,ಎಸ್.ಎಸ್.ಕಡಪಟ್ಟಿ ಅವರ ವಿರುದ್ದವೇ ಅತ್ಯಧಿಕ ಮತಗಳಿಂದ ಅವರನ್ನು ಸೋಲಿಸಿ ಮೊದಲು ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿದರು. ನಂತರ ಸತತ ಮೂರು ಬಾರಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಸೋಲಿಲ್ಲದ ಸರದಾರರಾಗಿದ್ದರು. ಮುಂದಿನ ರಾಜಕೀಯ ನಡೆ ಬೆರಗು ಹುಟ್ಟಿಸಿತ್ತು. ರಾಜಕೀಯ ಹೆಜ್ಜೆ ಮತ್ತು ಅವರ ದಿಟ್ಟ ನಿಲುವುಗಳು, ಪ್ರಾಮಾಣಿಕ ಜನಸೇವೆ, ಅವರಲ್ಲಿನ ಜಿಗುಟುತನ, ಜವಾರಿ ಸ್ವಭಾವ ಅವರನ್ನು ರಾಜ್ಯದ ಕ್ಯಾಬಿನೆಟ್ ಮಂತ್ರಿಯ ಹುದ್ದೆಯವರಗೂ ಕರೆದ್ಯೋಯಿತು.

ಸದಾ ರೈತಪರ ಚಿಂತಕರು-ಸದಾ ರೈತಪರ ಕಾಳಜಿಯುಳ್ಳ ಅವರು ಭೀಮಾನದಿ ಗೇಟ್ ಕಿತ್ತಿದ್ದು ಇಂದಿಗೂ ಕೂಡಾ ರೈತರು ಮರೆತ್ತಿಲ್ಲ. ಇಂತಹ ಎಂಟೆದೆಯ ರಾಜಕಾರಣಿ ಕಂಡಿದ್ದು ಅಪರೂಪ ಇಂದಿಗೂ ಅವರ ಬಗ್ಗೆ ಮಾತನಾಡುತ್ತಾರೆ. ತಮ್ಮ ಹತ್ತಿರದವರಿಗಿಂತ ವೈರಿಗಳನ್ನು ಮಾತಾಡಿಸುವ ಮತ್ತು ಅವರ ಮನಸ್ಸು ಬದಲಾಯಿಸುವ ಚಾಣಕ್ಯ. ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಾಡುತ್ತಿದ್ದರೂ ಗೆದ್ದ ನಂತರ ಕ್ಷೇತ್ರದ ಜನತೆಯನ್ನು ಪ್ರೀತಿ ವಿಶ್ವಾಸದಿಂದ ಕಾಣುವ ಮೂಲಕ ಒಂದು ರೀತಿಯ ಅಜಾತಶತ್ರುವೇ ಸರಿ.

ವಿಶಿಷ್ಠ ಉಡುಪು ಧಾರಣೆ-ಖಾದಿ ದೋತರ,ನೆಹರು ಶರ್ಟ್,ಉಣ್ಣೆಯ ಟೋಪಿ ಅವರ ಆಕರ್ಷಕ ಉಡುಪುಗಳಾಗಿದ್ದವು. ಜವಾರಿ ಮಾತು, ಒಂದಷ್ಟು ಒರಟುತನ, ಕ್ಷಣದಲ್ಲೇ ಮಗುವಿನಂತೆ ಮೃದುವಾಗುವ ಅವರ ಗುಣ ಒಮ್ಮೊಮ್ಮೆ ವರ್ಣರಂಜಿತ ವ್ಯಕ್ತತ್ವ. ತಾವು ಆಡಿದ್ದೇ ನಡೆಯಬೇಕೆಂಬ ಹಠದ ಸ್ವಭಾವ ಅವರದು.

ಪಂಚಮಸಾಲಿ ಸಮಾಜ ಅಗ್ರಗಣ್ಯ ನಾಯಕರು-ಕಾಶಪ್ಪನವರ ಪಂಚಮಸಾಲಿ ಸಮಾಜ ಸಂಘಟನೆಯಲ್ಲಿ ಅವರ ಕೊಡುಗೆ ಅಪಾರ. ಅದರ ರಾಜ್ಯಾಧ್ಯಕ್ಷರಾಗಿ ಗಮನಾರ್ಹ ಸೇವೆ ಮಾಡಿದ್ದರು. ರಾಜ್ಯದ ವಿವಿಧ ಕಡೆ ಸಮಾಜದ ಮುಖಂಡರು ಬೆಳೆಸಿ ರಾಜಕಾರಣದಲ್ಲಿ ಮಿಂಚಿ ಮರೆಯಾದ ಮಾಣಿಕ್ಯ. ಇಂತಹ ಮೇರು ನಾಯಕ ಮರೆಯಾಗಿ ಇಂದಿಗೆ ಎರಡು ಸಂಧಿವೆ. ಅಂತಹ ನಾಯಕರು ಮರಳಿ ಹುಟ್ಟಲಿ ಎನ್ನುವುದೇ ಅವರ ಅಭಿಮಾನಿಗಳ ಆಸೆವಾಗಿದೆ.
ಅಭಿವೃದ್ದಿಯ ಹರಿಕಾರರು-ತಮ್ಮ ೧೪ ವರ್ಷದ ಸುದೀರ್ಘ ಅಧಿಕಾರ ಅವಧಿಯಲ್ಲಿ ತಾಲೂಕಿನ ಕೋಟ್ಯಾಂತರ ರೂಪಾಯಿ ಅನುದಾನವನ್ನು ತಂದು ಮರೋಳ ಏತನೀರಾವರಿ, ಕೂಡಲಸಂಗಮ ಅಭಿವೃದ್ಧಿ, ಅಲ್ಲಿನ ಜಿಟಿಟಿಸಿ ಕಾಲೇಜು ಸ್ಥಾಪನೆ, ಶಾಲಾ ಕಾಲೇಜುಗಳ ಮಂಜೂರಿ ಮತ್ತು ನಿರ್ಮಾಣ, ಪಶು ಆಸ್ಪತ್ರೆ, ಸರ್ಕಾರಿ ಆಸ್ಪತ್ರೆ, ರಸ್ತೆ ಅಭಿವೃದ್ಧಿ, ಡಾಂಬರೀಕರಣ, ಅಡಿಹಾಳ ಸೇತುವೆ ನಿರ್ಮಾಣಕ್ಕೆ ಕನಸ್ಸು ಕಂಡವರು. ಮುಳಗಡೆ ಗ್ರಾಮಗಳ ಸ್ಥಳಾಂತರ, ವಿವಿಧ ಯೋಜನೆಯಲ್ಲಿ ಸಾವಿರಾರು ಮನೆಗಳ ನಿರ್ಮಾಣ, ಹುನಗುಂದದಲ್ಲಿ ತಾಲೂಕ ಕ್ರೀಡಾಂಗಣ, ಇಳಕಲ್ ಡೈಟ್ ಆರಂಭ ಸೇರಿದಂತೆ ನೂರಾರು ಕೋಟಿ ಅನುದಾನ ತಂದು ಇಡೀ ಮತಕ್ಷೇತ್ರದ ಅಭಿವೃದ್ಧಿಗೆ ಅವಿರತ ಶ್ರಮಿಸಿದ್ದರು.

ಬಾಕ್ಸ್ ಸುದ್ದಿ-ಸದಾ ರೈತಪರ ಕಾಳಜಿಯುಳ್ಳ ಅವರು ರೈತರಿಗಾಗಿ ಭೀಮಾನದಿ ಗೇಟ್ ಕಿತ್ತಿದ್ದನ್ನು ಇಂದಿಗೂ ಕೂಡಾ ರೈತರು ಮರೆತ್ತಿಲ್ಲ. ಜನಸಾಮಾನ್ಯರ ಮಧ್ಯದಲ್ಲಿ ಬೆಳೆದು ಬಂದ ಎಸ್‌ಆರ್‌ಕೆ ಸರ್ವ ಸಮಾಜ ಮತ್ತು ಸಮುದಾಯಗಳ ದೀಮಂತ ನಾಯಕರಾಗಿದ್ದರು. ಸದಾ ತಾವಂದು ಕೊಂಡಂತೆ ನಡೆಬೇಕು ಎನ್ನುವ ಹಠವಾದಿಗಳಾಗಿದ್ದರು. ಹೋರಾಟದಲ್ಲಿ ಒಂದು ಹೆಜ್ಜೆ ಮುಂದಿದ್ದರು. ಪಂಚಮಸಾಲಿ ಸಮಾಜದ ಅಗ್ರಗಣ್ಯ ನಾಯಕರಾಗಿ ಸಮಾಜ ಸಂಘಟನೆಯಲ್ಲಿ ಅವರ ಕೊಡುಗೆ ಅಪಾರವಾಗಿತ್ತು. ಇಂತಹ ಜನಾನುರಾಗಿ, ಮುತ್ಸದ್ದಿ ನಾಯಕರು ಮರೆಯಾಗಿ ಇಂದಿಗೆ ಎರಡು ದಶಕಗಳು.

Latest News

ಕಾನಿಪ ಧ್ವನಿ ಸಂಘಟನೆಯಿOದ ರಾಜ್ಯಪಾಲರು,ಸಿಎಂಗೆ ಮನವಿ:                                                                                   ‘ತಗಡೂರುಗೆ ಕೊಟ್ಟಿರುವ ಅಕಾಡೆಮಿ ಪ್ರಶಸ್ತಿ,ಸ್ಥಾನಮಾನ ಅನರ್ಹಗೊಳಿಸಿ’

ಕಾನಿಪ ಧ್ವನಿ ಸಂಘಟನೆಯಿOದ ರಾಜ್ಯಪಾಲರು,ಸಿಎಂಗೆ ಮನವಿ: ‘ತಗಡೂರುಗೆ ಕೊಟ್ಟಿರುವ ಅಕಾಡೆಮಿ ಪ್ರಶಸ್ತಿ,ಸ್ಥಾನಮಾನ ಅನರ್ಹಗೊಳಿಸಿ’

ಮುದ್ದೇಬಿಹಾಳ : ರಾಜ್ಯಮಟ್ಟದ ದಿನಪತ್ರಿಕೆಯೊಂದರಲ್ಲಿ ಬೆಂಗಳೂರು ನಗರ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ಯನಿರತ ಪತ್ರಕರ್ತರ ಸಂಘದ

ಅಂಜುಮನ್ ಕಮೀಟಿ ನೂತನ ಪದಾಧಿಕಾರಿಗಳ ಸನ್ಮಾನ: ಶೈಕ್ಷಣಿಕೆ ಪ್ರಗತಿಗೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ-ಮನಿಯಾರ್

ಅಂಜುಮನ್ ಕಮೀಟಿ ನೂತನ ಪದಾಧಿಕಾರಿಗಳ ಸನ್ಮಾನ: ಶೈಕ್ಷಣಿಕೆ ಪ್ರಗತಿಗೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ-ಮನಿಯಾರ್

ಮುದ್ದೇಬಿಹಾಳ : ಅಂಜುಮನ್ ಸಂಸ್ಥೆ ಕೇವಲ ಬಡವರು,ಅನಾಥರು ಆರ್ಥಿಕವಾಗಿ ಹಿಂದುಳಿದವರಿಗಾಗಿ ಸಮಾಜದ ಪ್ರತಿಯೊಬ್ಬರಿಗೂ ಸೇರಿದ

ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ :                                           ಅಂಜುಮನ್ ಕಮೀಟಿಗೆ ಅಲ್ಲಾಭಕ್ಷ ದೇಸಾಯಿ(ಲಾರಾ) ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ : ಅಂಜುಮನ್ ಕಮೀಟಿಗೆ ಅಲ್ಲಾಭಕ್ಷ ದೇಸಾಯಿ(ಲಾರಾ) ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಮುದ್ದೇಬಿಹಾಳ : ಪಟ್ಟಣದ ಪ್ರತಿಷ್ಠಿತ ಅಂಜುಮನ್ ಇಸ್ಲಾಂ ಕಮೀಟಿಯ ನೂತನ ಪದಾಧಿಕಾರಿಗಳನ್ನು ಸೋಮವಾರ ಆಯ್ಕೆ

ನಿಯಮ ಉಲ್ಲಂಘಿಸಿ ಚುನಾವಣೆಗೆ ಮುಂದಾದರೇ ಅಧಿಕಾರಿ? : ಆ.31 ರಂದು ಅಂಜುಮನ್ ಕಮೀಟಿ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ

ನಿಯಮ ಉಲ್ಲಂಘಿಸಿ ಚುನಾವಣೆಗೆ ಮುಂದಾದರೇ ಅಧಿಕಾರಿ? : ಆ.31 ರಂದು ಅಂಜುಮನ್ ಕಮೀಟಿ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ

ಮುದ್ದೇಬಿಹಾಳ : ಕರ್ನಾಟಕ ವಕ್ಭ್ ಕಾಯ್ದೆ 1995ರ ಸಂಬAಧಿತ ನಿಬಂಧನೆಗಳು ಹಾಗೂ ಕರ್ನಾಟಕ ರಾಜ್ಯ

ಅಂಜುಮನ್ ಕಮೀಟಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ  ಪ್ರಮಾಣಪತ್ರ ಕೊಡದ ಚುನಾವಣಾಧಿಕಾರಿ…!

ಅಂಜುಮನ್ ಕಮೀಟಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ಕೊಡದ ಚುನಾವಣಾಧಿಕಾರಿ…!

ಮುದ್ದೇಬಿಹಾಳ : ಅಂಜುಮನ್ ಇಸ್ಲಾಂ ಕಮೀಟಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಕೊಡುವ ಕಾರ್ಯ ಚುನಾವಣಾಧಿಕಾರಿಗಳಿಂದ ಆಗದೇ ಇರುವುದು ಅಚ್ಚರಿ ಹಾಗೂ ತೀವ್ರ ಚರ್ಚೆಗೆ ಗ್ರಾಸವಾಗಿದೆ.ನ್ಯಾಯಾಲಯದ ಆದೇಶಕ್ಕೆ ಒಳಪಟ್ಟಂತೆ ಫಲಿತಾಂಶ ಪ್ರಕಟಿಸಿರುವ ಚುನಾವಣಾಧಿಕಾರಿಯೂ ಆಗಿರುವ ಔದ್ರಾಮ್ ಹಾಗೂ ಕೇರ್‌ಟೇಕರ್ ಆಗಿರುವ ತಬಸ್ಸುಮ ಮುಲ್ಲಾ ಅವರು ಆಯ್ಕೆಯಾದ ಸದಸ್ಯರಿಗೆ ಪ್ರಮಾಣಪತ್ರ ಕೊಡದೇ ಇರುವುದು ಯಾತಕ್ಕಾಗಿ ಎಂಬುದು ಆಯ್ಕೆಯಾಗಿರುವ ಹಲವು ಸದಸ್ಯರ ಪ್ರಶ್ನೆಯಾಗಿದೆ. ಸಾಮಾನ್ಯವಾಗಿ ಯಾವುದೇ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಕಾನೂನು ಬದ್ಧವಾಗಿ

ಬ್ರಹ್ಮಶ್ರೀ ನಾರಾಯಣಗುರು ಜಯಂತಿ;                                        ಅನಿಷ್ಠ ಪದ್ಧತಿಗಳ ವಿರುದ್ಧ ಜಾಗೃತಿ ಮೂಡಿಸಿದ ಮಹಾನ್ ಸಂತ

ಬ್ರಹ್ಮಶ್ರೀ ನಾರಾಯಣಗುರು ಜಯಂತಿ; ಅನಿಷ್ಠ ಪದ್ಧತಿಗಳ ವಿರುದ್ಧ ಜಾಗೃತಿ ಮೂಡಿಸಿದ ಮಹಾನ್ ಸಂತ

ಮುದ್ದೇಬಿಹಾಳ : ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿ ಜಾಗೃತಿ ಮೂಡಿಸಿದ ಮಹಾನ್ ಸಂತ ಬ್ರಹ್ಮಶ್ರೀ ನಾರಾಯಣಗುರು ಅವರು ಎಂದು ತಹಶೀಲ್ದಾರ್ ಆನಂದ ಕೋಲಾರ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದ ಎದುರಿಗೆ ಇರುವ ವೃತ್ತದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆರ್ಯ ಈಡಿಗ ಸಮಾಜದ ಅಧ್ಯಕ್ಷ ಎ.ಗಣೇಶ ಅನ್ನಗೌನಿ,ಮುಖಂಡರಾದ ಟಿ.ವಿಜಯಭಾಸ್ಕರ್,ಎ.ಚಂದ್ರಶೇಖರ,ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ,ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ