ಶಾಸಕ ನಾಡಗೌಡರ ಮನೆಗೆ ನನ್ನ ಚಪ್ಪಲಿಯೂ ಹೋಗಿಲ್ಲ-ಎ.ಎಸ್.ಪಾಟೀಲ ನಡಹಳ್ಳಿ

ಶಾಸಕ ನಾಡಗೌಡರ ಮನೆಗೆ ನನ್ನ ಚಪ್ಪಲಿಯೂ ಹೋಗಿಲ್ಲ-ಎ.ಎಸ್.ಪಾಟೀಲ ನಡಹಳ್ಳಿ

ಮುದ್ದೇಬಿಹಾಳ : ತಮಗೆ ಸಾಷ್ಟಾಂಗ ಹಾಕಿರುವುದಾಗಿ ಸುಳ್ಳು ಹೇಳಿಕೆ ಕೊಡುವುದನ್ನು ಮೊದಲು ಶಾಸಕ ನಾಡಗೌಡರು ನಿಲ್ಲಿಸಬೇಕು.ಹಾಗೊಂದು ವೇಳೆ ಸಾಕ್ಷಿ ಏನಾದರೂ ಇದ್ದರೆ ನನ್ನ ತಲೆ ನಾನೇ ತಗೆದುಕೊಳ್ಳಲು ಸಿದ್ದನಿದ್ದೇನೆ ಎಂದು ಮಾಜಿ ಶಾಸಕ,ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಪಟ್ಟಣದ ದಾಸೋಹ ನಿಲಯದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಆ ಅಯೋಗ್ಯನ ಮನೆಗೆ ನನ್ನ ಚಪ್ಪಲಿಯೂ ಹೋಗಿಲ್ಲ.ಅಷ್ಟೇ ಅಲ್ಲದೇ ಕಾಂಗ್ರೆಸ್, ಬಿಜೆಪಿಯಲ್ಲಿರುವಾಗಲೂ ಟಿಕೇಟ್ ಕೇಳುವ ಸಂದರ್ಭ ಬಂದಾಗ ಜಿಲ್ಲೆಯ ಯಾವ ನಾಯಕನ ಮನೆಗೂ ನಾನು ಹೋಗಿಲ್ಲ.ಏಕಚವನದಲ್ಲಿ ಮಾತನಾಡಬೇಡಿ ಎಂದಿರುವುದನ್ನು ಒಪ್ಪಿಕೊಳ್ಳುತ್ತೇನೆ.ಆದರೆ ಸುಳ್ಳು ಹೇಳುವುದನ್ನು ಮೊದಲು ನಾಡಗೌಡರು ನಿಲ್ಲಿಸಬೇಕು.ನಿಮಗಷ್ಟೇ ಕಾರ್ಯಕರ್ತರು,ಹಿಂಬಾಲಕರಿದ್ದಾರೆಯೇ ನಮ್ಮ ಕಾರ್ಯಕರ್ತರು,ಹಿಂಬಾಲಕರೇನು ಸುಮ್ಮನೆ ಕೂರುತ್ತಾರೆಯೇ ಎಂದು ನಡಹಳ್ಳಿ ಹೇಳಿದರು.

ನಾಡಗೌಡರ ಮನೆತನ ಬ್ರಿಟಿಷರ ಗುಲಾಮರಾಗಿತನದಲ್ಲಿತ್ತು.1932ರಲ್ಲಿ ಹಿಂದೆ ಇದ್ದ ಎಲ್ಲ ದಾಖಲೆಗಳು ಇವರ ವಶದಲ್ಲಿದ್ದವು.ಆಗ ದಾಖಲೆಗಳನ್ನು ತಿದ್ದಿ 20 ಸಾವಿರ ಎಕರೆ ಜಮೀನು ಲಪಟಾಯಿಸಿದ್ದರು.ಬಹಿರಂಗ ಚರ್ಚೆಗೆ ಬಂದಲ್ಲಿ ಎಲ್ಲ ದಾಖಲೆಗಳನ್ನು ತೆರೆದಿಡುವುದಕ್ಕೆ ನಾನು ಸಿದ್ದನಿದ್ದೇನೆ.ನಾನು ದ್ವೇಷದ ರಾಜಕಾರಣ ಎಂದಿಗೂ ಮಾಡಿಲ್ಲ.ಟ್ರಿಬ್ಯೂನಲ್ ದಾಖಲೆಗಳು ನಿಮ್ಮ ಮನೆಗೆ ತಗೆದುಕೊಂಡು ಹೋಗಬೇಕಿತ್ತೇ ಎಂದು ಪ್ರಶ್ನಿಸಿದ ನಡಹಳ್ಳಿ, 1932ರಲ್ಲಿ ನಂತರ ದೇವರಾಜು ಅರಸು ಅವರು ಊಳುವವನೆ ಭೂ ಒಡೆಯ ಎಂದು ಕಾಯ್ದೆ ಜಾರಿಗೆ ತಂದಾಗ ನಾವು ದಾನ ಮಾಡಿದ್ದೇವೆ ಎಂದು ಹಳ್ಳಿಗಳಲ್ಲಿ ರೈತರಿಗೆ ಹೇಳಿಕೊಂಡು ನಂತರ ಅವರ ಮೇಲೆ ದೌರ್ಜನ್ಯ ನಡೆಸಿ ವಾಪಸ್ ಜಮೀನು ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ನಾಲತವಾಡದಲ್ಲಿ ದೇಶಮುಖ ಅಮ್ಮನವರ ಜಮೀನು ಮಾರಾಟಕ್ಕಿದೆ ಎಂದಿದ್ದರು.ಅದನ್ನು ನಮಗೆ ಪರಿಚಿತರಿರುವ ಯಲಗೂರಿನ ಶೆಟ್ಟರೊಬ್ಬರು ಖರೀದಿ ಮಾಡಿದ್ದಾರೆ.ಅದು ಬೇನಾಮಿ ಅಲ್ಲ.ಅದು ಕೂಡಾ ಟೆಂಡೆನ್ಸಿಯಲ್ಲಿದೆ ಎಂದು ನಾಡಗೌಡರು ಹೇಳುತ್ತಾರೆ.ಮತ್ತೊಂದೆಡೆ ಚುನಾವಣೆಯಲ್ಲಿ ದೇಶಮುಖರ ಮಕ್ಕಳ ಎದುರಿಗೆ ಮತ ಭಿಕ್ಷೆ ಕೇಳಲು ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು.

ತಾಳಿಕೋಟಿ ಪ್ರಜಾಸೌಧ ವಿವಾದ : ತಾಳಿಕೋಟಿಯಲ್ಲಿ ಶಾಸಕ ನಾಡಗೌಡರು ತಮ್ಮ ಹಿಂಬಾಲಕರ ಮೂಲಕ 40 ಎಕರೆ ಜಮೀನು ತಗೆದುಕೊಂಡಿದ್ದು ಅದರಲ್ಲಿ ಪ್ರಭುಗೌಡ ಮದರಕಲ್ ಎಂಬುವರು ಹಾಗೂ ಇನ್ನಿತರರು ಎರಡು ಎಕರೆ ಕೊಡುವುದಾಗಿ ಹೇಳುತ್ತಿದ್ದಾರೆ.ಆದರೆ ಆ ಜಾಗೆಯ ಅಭಿವೃದ್ಧಿಗೆ ಸರ್ಕಾರದಿಂದ 8 ಕೋಟಿ ರೂ. ದುರ್ಬಳಕೆ ಮಾಡಿಕೊಳ್ಳುವ ಹುನ್ನಾರ ನಡೆದಿದೆ. ಸರ್ಕಾರದ ಹಣದಲ್ಲಿ ಇವರ ಜಮೀನು ಅಭಿವೃದ್ಧಿಗೊಳಿಸುವುದಕ್ಕೆ ನಾವು ಬಿಡುವುದಿಲ್ಲ.ನಿಮಗೆ ತಾಕತ್ತು ಇದ್ದರೆ ನನ್ನ ಮೇಲೆ ಮಾನಹಾನಿ ಕೇಸು ಹಾಕಿ ಎಂದು ಹಾಲಿ ಶಾಸಕ ನಾಡಗೌಡರಿಗೆ ಮಾಜಿ ಶಾಸಕ ನಡಹಳ್ಳಿ ಸವಾಲು ಹಾಕಿದರು.

ನಾಡಗೌಡರಿಗೆ ಊರಲ್ಲಿ ಪ್ರಜಾಸೌಧ ನಿರ್ಮಿಸಬೇಕು ಎಂಬ ಬಗ್ಗೆ ಎಳ್ಳಷ್ಟು ಆಸಕ್ತಿ ಇಲ್ಲ.ಊರಲ್ಲಿ ಆಗುವುದು ಅವರಿಗೆ ಬೇಕಾಗಿಲ್ಲ.ಪ್ರಭುಗೌಡ ಮದರಕಲ್ ಹಾಗೂ ಇನ್ನೊಂದಿಬ್ಬರ ಹೆಸರಿನಲ್ಲಿ ನಾಡಗೌಡರು ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಇಡೀ ತಾಳಿಕೋಟಿ ಜನ ಹೇಳುತ್ತಿದ್ದಾರೆ ಎಂದು ನಡಹಳ್ಳಿ ಆರೋಪಿಸಿದರು.

ತಾಳಿಕೋಟಿ ಜನ ಮುದ್ದೇಬಿಹಾಳಕ್ಕೆ ಬರುತ್ತಿದ್ದರು.ಮೂರುವರೆ ಕಿ.ಮೀ ಹೋಗುವುದು ದೊಡ್ಡದೇ ಎನ್ನುತ್ತಿದ್ದಾರೆ.ಪ್ರಜಾಸೌಧ ನಿರ್ಮಾಣಕ್ಕೆ ಎರಡುವರೆ ಎಕರೆ ಜಮೀನು ಬೇಕು ಎಂದು ರೂಲ್ಸ್ ಇದೆಯಾ? ಯಾರು ಕೊಡುತ್ತಾರೆ ಊರಲ್ಲಿ ಅಷ್ಟು ಜಮೀನು. ಎಕರೆ ಜಮೀನು ಐದು-ಹತ್ತು ಕೋಟಿ ರೂ.ಆಗಿದೆ.ಐಬಿ,ಪುರಸಭೆ,ಕೆಇಬಿ ಜಾಗೆ ಇದೆ.ಅಲ್ಲಿ ಪ್ರಜಾಸೌಧ ಮಾಡಿ.ನನಗೆ ಧಮಕಿ ಕೊಡಲು ಬಂದರೆ ಹತ್ತು ಪಟ್ಟು ಧಮಕಿ ಕೊಡುವ ದಾಖಲಾತಿಗಳು ನನ್ನ ಬಳಿ ನಿಮ್ಮವರೇ ತಂದುಕೊಟ್ಟಿದ್ದಾರೆ.

ಮುದ್ದೇಬಿಹಾಳ,ವಿಜಯಪುರ ಮೊದಲಾದ ಹುಡ್ಕೋಗಳಲ್ಲಿ ನೀವು ಎಷ್ಟು ಹಗರಣ ಮಾಡಿದ್ದೀರಿ.ಇವರ ಅಧ್ಯಕ್ಷತೆಯಲ್ಲಿರುವ ಕೆಎಸ್‌ಡಿಎಲ್ ನಿಗಮದಲ್ಲಿ ಎಷ್ಟೆಲ್ಲ ಟೆಂಡರ್ ಅವ್ಯವಹಾರಗಳಿವೆ ಎಂಬುದನ್ನು ಬಹಿರಂಗಪಡಿಸುತ್ತೇನೆ ಎಂದು ನಡಹಳ್ಳಿ ಹೇಳಿದರು.

ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ್ ಪಂಪಣ್ಣವರ , ಗಿರೀಶಗೌಡ ಪಾಟೀಲ್ , ಮದನಸ್ವಾಮಿ, ಕೆಂಚಪ್ಪ ಬಿರಾದಾರ, ವೈ.ಟಿ. ಗೌಡರ, ಅಶೋಕ ರಾಥೋಡ,ಸಿದ್ದರಾಜ ಹೊಳಿ , ಬಸವರಾಜ
ಚಿತ್ತರಗಿ , ಚೇತನ ಸಂಗಮ, ಪುರಸಭೆ ಮಾಜಿ ಸದಸ್ಯೆ ಸಹನಾ ಬಡಿಗೇರ , ಸಂಗಮ್ಮ ದೇವರಳ್ಳಿ,ಅಪ್ಪಣ್ಣ ಧನ್ನೂರ , ಶ್ರೀಶೈಲ್ ದೊಡಮನಿ,ಮಲ್ಲಣ್ಣ ತಂಗಡಗಿ, ಹರೀಶ ನಾಟೀಕಾರ , ಮಹಾಂತೇಶ್ ಗಂಗನಗೌಡರ,ನಾಗೇಶ ಕವಡಿಮಟ್ಟಿ,ಸಂತೋಷ್ ಗೌಡರ ಮೊದಲಾದವರು ಇದ್ದರು.

ಕಲೆಕ್ಷನ್ ಏಜೆಂಟ್ ಸುರೇಶ ನಾಡಗೌಡ : ನಡಹಳ್ಳಿ ವಾಗ್ದಾಳಿ ನಿಮ್ಮ ಸಾಕು ಪುತ್ರ, ರಾಜಕೀಯವಾಗಿ ಕಲೆಕ್ಷನ್ ಮಾಡುವ ಸಾಕು ಪುತ್ರ. ಕಲೆಕ್ಷನ್ ಏಜೆಂಟ್ ಸುರೇಶ ನಾಡಗೌಡ ಆಗಿದ್ದಾರೆ.ತಾಲ್ಲೂಕಿನ ಎಲ್ಲ ಕೆಲಸಗಳನ್ನು ಲ್ಯಾಂಡ್ ಆರ್ಮಿಯವರಿಗೆ ಕೊಟ್ಟು ಕಲೆಕ್ಷನ್ ಎಜೆಂಟ್ ಆಗಿ ಸುರೇಶ ನಾಡಗೌಡ ಕೆಲಸ ಮಾಡುತ್ತಿದ್ದಾರೆ ಎಂದು ನಡಹಳ್ಳಿ ಆರೋಪಿಸಿದರು.ಪ್ರಜಾಸೌಧ ಹೋರಾಟಕ್ಕೆ ಬಂದವರಿಗೆಲ್ಲರಿಗೂ ಪುರಸಭೆಯಿಂದ ಮುಖ್ಯಾಧಿಕಾರಿ ನೋಟಿಸ್ ಕೊಡುತ್ತಿದ್ದಾರೆ. ಅಲ್ಲಿ ಪ್ರಭುಗೌಡ ಮದರಕಲ್ ಅಂಗಡಿಕಾರರಿಗೆ ಕರೆ ಮಾಡಿ ನೀವು ಒತ್ತುವರಿ ಮಾಡಿಕೊಂಡು ಅಂಗಡಿ ಕಟ್ಟಿಕೊಂಡಿಲ್ಲವೇ ಎಂದು ಫೋನ್ ಮಾಡಿ ಹೋರಾಟಗಾರರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ನಡಹಳ್ಳಿ ಹೇಳಿದರು. ಶಾಸಕ ನಾಡಗೌಡ ಒಬ್ಬ ಚಾಡಿಕೋರರು: ಕಾಂಗ್ರೆಸ್ಸಿನಲ್ಲಿದ್ದಾಗ ನಾಲ್ಕಾರು ಜನ ಶಾಸಕರು ಒಂದೆಡೆ ಸೇರಿ ಮಾತನಾಡುತ್ತಿರುವಾಗ ಅಲ್ಲಿಗೆ ನಾಡಗೌಡರು ಬಂದರೆ ಎಲ್ಲರೂ ಸುಮ್ಮನಿರಿ ಚಾಡಿಕೋರ ಬಂದರು ಎನ್ನುತ್ತಿದ್ದರು.ಚಾಡಿ ಹೇಳುವುದರಲ್ಲಿ ಇವರು ನಂ.1 ಆಗಿದ್ದಾರೆ ಎಂದು ನಡಹಳ್ಳಿ ಟೀಕಿಸಿದರು.

ಗುಲಾಮಗಿರಿತನ ಆಡಳಿತ ಕೊನೆಗೊಳಿಸುವುದಕ್ಕೆ ನಾನು ಇಲ್ಲಿಗೆ ರಾಜಕಾರಣ ಮಾಡುವುದಕ್ಕೆ ಬಂದಿದ್ದೇನೆ.ನನ್ನ ರಾಜಕಾರಣ ಯಾವತ್ತಿದ್ದರೂ ನಿಮ್ಮ ವಿರುದ್ದವೇ ? ಯಾವತ್ತಿಗೂ ನಾಡಗೌಡರೊಂದಿಗೆ ರಾಜಕಾರಣದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ.ಅಲ್ಲದೇ ತಾಳಿಕೋಟಿಯಲ್ಲಿ ಈಗ ನೀವು ಬೇನಾಮಿಯಾಗಿ ಗಳಿಸಿರುವ ಆಸ್ತಿಯಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಬಿಡುವುದಿಲ್ಲ ಎಂದು ನಡಹಳ್ಳಿ ಹೇಳಿದರು.

Latest News

ಮುದ್ದೇಬಿಹಾಳ : ಪರಿಸರ ರಕ್ಷಕ” ಪ್ರಶಸ್ತಿ ಗೆ ಅರ್ಜಿ ಆಹ್ವಾನ

ಮುದ್ದೇಬಿಹಾಳ : ಪರಿಸರ ರಕ್ಷಕ” ಪ್ರಶಸ್ತಿ ಗೆ ಅರ್ಜಿ ಆಹ್ವಾನ

ಮುದ್ದೇಬಿಹಾಳ : ಪಟ್ಟಣದ ಹಸಿರು ತೋರಣ ಗೆಳೆಯರ ಬಳಗ ಪ್ರತಿ ವರ್ಷ ಜೂನ್ 5

ಮುದ್ದೇಬಿಹಾಳ : ಮೇ.24 ರಂದು ಕ್ರಿಕೆಟ್ ಪಂದ್ಯಾವಳಿ ಫೈನಲ್

ಮುದ್ದೇಬಿಹಾಳ : ಮೇ.24 ರಂದು ಕ್ರಿಕೆಟ್ ಪಂದ್ಯಾವಳಿ ಫೈನಲ್

ಮುದ್ದೇಬಿಹಾಳ : ಎಂ.ಬಿ.ಎಲ್ ಗ್ರೂಪನಿಂದ ಪಟ್ಟಣದಲ್ಲಿ ಮೂರು ವಾರಗಳಿಂದ ಜರುಗುತ್ತಿದ್ದ ಹಾರ್ಡ್ ಟೆನ್ನಿಸ್ ಬಾಲ್

4 ತಿಂಗಳ ಗರ್ಭಿಣಿ ಆತ್ಮಹತ್ಯೆ..!

4 ತಿಂಗಳ ಗರ್ಭಿಣಿ ಆತ್ಮಹತ್ಯೆ..!

ಕಲಬುರಗಿ: ಪ್ರೀತಿಸಿ ಮದುವೆಯಾದ ಪತಿಯ ನಿರಂತರ ಕಿರುಕುಳಕ್ಕೆ ಬೇಸತ್ತು 4 ತಿಂಗಳ ಗರ್ಭಿಣಿಯೊಬ್ಬರು ತವರು

ಅಧ್ಯಕ್ಷರಾಗಿ ಬಿ.ಎಚ್.ಮುದ್ನೂರ ಪುನರಾಯ್ಕೆ:            ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷರಾಗಿ ಬಿ.ಎಚ್.ಮುದ್ನೂರ ಪುನರಾಯ್ಕೆ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸನ್ 2026-31ನೇ ಅವಧಿಗೆ

ಎಸ್.ಎಸ್.ಎಲ್.ಸಿ ಮರುಮೌಲ್ಯಮಾಪನದ ಫಲಿತಾಂಶ : ನಾಗರಬೆಟ್ಟದ ಆಕ್ಸಫರ್ಡ್ ಮಠ್ಸ್ ಸಂಸ್ಥೆಯ ಶೃತಿ ರಾಜ್ಯಕ್ಕೆ 2ನೇ ರ‍್ಯಾಂಕ್

ಎಸ್.ಎಸ್.ಎಲ್.ಸಿ ಮರುಮೌಲ್ಯಮಾಪನದ ಫಲಿತಾಂಶ : ನಾಗರಬೆಟ್ಟದ ಆಕ್ಸಫರ್ಡ್ ಮಠ್ಸ್ ಸಂಸ್ಥೆಯ ಶೃತಿ ರಾಜ್ಯಕ್ಕೆ 2ನೇ ರ‍್ಯಾಂಕ್

ಮುದ್ದೇಬಿಹಾಳ : ಸನ್ 2026 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮರು ಮೌಲ್ಯಮಾಪನದಲ್ಲಿ ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ ಮಠ್ಸ್ ಸಮೂಹ ಸಂಸ್ಥೆಯ ಎಸ್.ಡಿ.ಕೆ ಪ್ರೌಢಶಾಲೆಯ ವಿದ್ಯಾರ್ಥಿನಿ ಶೃತಿ ಶಿವನಗೌಡ ಪೀರಾಪೂರ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ. ಈ ಮೊದಲು ಫಲಿತಾಂಶ ಪ್ರಕಟಗೊಂಡಾಗ ಶೃತಿಗೆ 617 ಅಂಕ ಪಡೆದುಕೊಂಡಿದ್ದಳು.ಶಾಲೆಯ ಆಡಳಿತ ಮಂಡಳಿ ಹಾಗೂ ಪಾಲಕರು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದಾಗ ಮತ್ತೆ ಏಳು ಅಂಕಗಳು ಶೃತಿಗೆ ಲಭಿಸಿವೆ.ಆ ಮೂಲಕ ಶೃತಿ ಕನ್ನಡ ಮಾಧ್ಯಮದಲ್ಲಿ

ಎಸ್.ಎಸ್.ಎಲ್.ಸಿ ಟಾಪರ್‌’ಳಿಗೆ ಶಾಸಕರ ಗೌರವ:  ನಾಗರಬೆಟ್ಟದ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ-ನಾಡಗೌಡ ಶ್ಲಾಘನೆ

ಎಸ್.ಎಸ್.ಎಲ್.ಸಿ ಟಾಪರ್‌’ಳಿಗೆ ಶಾಸಕರ ಗೌರವ: ನಾಗರಬೆಟ್ಟದ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ-ನಾಡಗೌಡ ಶ್ಲಾಘನೆ

ಮುದ್ದೇಬಿಹಾಳ : ಯಾವುದೇ ಒಂದು ಸಾಧನೆ ಇರಲಿ ಅಲ್ಲಿ ಆತ್ಮಸ್ಥೆರ್ಯ ಪ್ರಮುಖ ಪಾತ್ರ ವಹಿಸುತ್ತದೆ. ಈಗಿನ ಹೆಣ್ಣು ಮಕ್ಕಳು ಮಾಡುವ ಸಾಧನೆಯನ್ನು ಪುರುಷ ಪ್ರಧಾನ ಸಮಾಜ ತಲೆ ಎತ್ತಿ ನೋಡುವಂತೆ ಆಗಿದೆ ಎಂದು ಕೆಎಸ್‌ಡಿಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು. ತಾಲ್ಲೂಕಿನ ನಾಗರಬೆಟ್ಟ ಆಕ್ಸ್ಫರ್ಡ್ ಪಾಟೀಲ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಮರು ಮೌಲ್ಯಮಾಪನದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್‌ಗಳಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು. ನಾಗರಬೆಟ್ಟದ ಆಕ್ಸಫರ್ಡ್