ಶಾಸಕ ನಾಡಗೌಡರ ಮನೆಗೆ ನನ್ನ ಚಪ್ಪಲಿಯೂ ಹೋಗಿಲ್ಲ-ಎ.ಎಸ್.ಪಾಟೀಲ ನಡಹಳ್ಳಿ

ಶಾಸಕ ನಾಡಗೌಡರ ಮನೆಗೆ ನನ್ನ ಚಪ್ಪಲಿಯೂ ಹೋಗಿಲ್ಲ-ಎ.ಎಸ್.ಪಾಟೀಲ ನಡಹಳ್ಳಿ

ಮುದ್ದೇಬಿಹಾಳ : ತಮಗೆ ಸಾಷ್ಟಾಂಗ ಹಾಕಿರುವುದಾಗಿ ಸುಳ್ಳು ಹೇಳಿಕೆ ಕೊಡುವುದನ್ನು ಮೊದಲು ಶಾಸಕ ನಾಡಗೌಡರು ನಿಲ್ಲಿಸಬೇಕು.ಹಾಗೊಂದು ವೇಳೆ ಸಾಕ್ಷಿ ಏನಾದರೂ ಇದ್ದರೆ ನನ್ನ ತಲೆ ನಾನೇ ತಗೆದುಕೊಳ್ಳಲು ಸಿದ್ದನಿದ್ದೇನೆ ಎಂದು ಮಾಜಿ ಶಾಸಕ,ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಪಟ್ಟಣದ ದಾಸೋಹ ನಿಲಯದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಆ ಅಯೋಗ್ಯನ ಮನೆಗೆ ನನ್ನ ಚಪ್ಪಲಿಯೂ ಹೋಗಿಲ್ಲ.ಅಷ್ಟೇ ಅಲ್ಲದೇ ಕಾಂಗ್ರೆಸ್, ಬಿಜೆಪಿಯಲ್ಲಿರುವಾಗಲೂ ಟಿಕೇಟ್ ಕೇಳುವ ಸಂದರ್ಭ ಬಂದಾಗ ಜಿಲ್ಲೆಯ ಯಾವ ನಾಯಕನ ಮನೆಗೂ ನಾನು ಹೋಗಿಲ್ಲ.ಏಕಚವನದಲ್ಲಿ ಮಾತನಾಡಬೇಡಿ ಎಂದಿರುವುದನ್ನು ಒಪ್ಪಿಕೊಳ್ಳುತ್ತೇನೆ.ಆದರೆ ಸುಳ್ಳು ಹೇಳುವುದನ್ನು ಮೊದಲು ನಾಡಗೌಡರು ನಿಲ್ಲಿಸಬೇಕು.ನಿಮಗಷ್ಟೇ ಕಾರ್ಯಕರ್ತರು,ಹಿಂಬಾಲಕರಿದ್ದಾರೆಯೇ ನಮ್ಮ ಕಾರ್ಯಕರ್ತರು,ಹಿಂಬಾಲಕರೇನು ಸುಮ್ಮನೆ ಕೂರುತ್ತಾರೆಯೇ ಎಂದು ನಡಹಳ್ಳಿ ಹೇಳಿದರು.

ನಾಡಗೌಡರ ಮನೆತನ ಬ್ರಿಟಿಷರ ಗುಲಾಮರಾಗಿತನದಲ್ಲಿತ್ತು.1932ರಲ್ಲಿ ಹಿಂದೆ ಇದ್ದ ಎಲ್ಲ ದಾಖಲೆಗಳು ಇವರ ವಶದಲ್ಲಿದ್ದವು.ಆಗ ದಾಖಲೆಗಳನ್ನು ತಿದ್ದಿ 20 ಸಾವಿರ ಎಕರೆ ಜಮೀನು ಲಪಟಾಯಿಸಿದ್ದರು.ಬಹಿರಂಗ ಚರ್ಚೆಗೆ ಬಂದಲ್ಲಿ ಎಲ್ಲ ದಾಖಲೆಗಳನ್ನು ತೆರೆದಿಡುವುದಕ್ಕೆ ನಾನು ಸಿದ್ದನಿದ್ದೇನೆ.ನಾನು ದ್ವೇಷದ ರಾಜಕಾರಣ ಎಂದಿಗೂ ಮಾಡಿಲ್ಲ.ಟ್ರಿಬ್ಯೂನಲ್ ದಾಖಲೆಗಳು ನಿಮ್ಮ ಮನೆಗೆ ತಗೆದುಕೊಂಡು ಹೋಗಬೇಕಿತ್ತೇ ಎಂದು ಪ್ರಶ್ನಿಸಿದ ನಡಹಳ್ಳಿ, 1932ರಲ್ಲಿ ನಂತರ ದೇವರಾಜು ಅರಸು ಅವರು ಊಳುವವನೆ ಭೂ ಒಡೆಯ ಎಂದು ಕಾಯ್ದೆ ಜಾರಿಗೆ ತಂದಾಗ ನಾವು ದಾನ ಮಾಡಿದ್ದೇವೆ ಎಂದು ಹಳ್ಳಿಗಳಲ್ಲಿ ರೈತರಿಗೆ ಹೇಳಿಕೊಂಡು ನಂತರ ಅವರ ಮೇಲೆ ದೌರ್ಜನ್ಯ ನಡೆಸಿ ವಾಪಸ್ ಜಮೀನು ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ನಾಲತವಾಡದಲ್ಲಿ ದೇಶಮುಖ ಅಮ್ಮನವರ ಜಮೀನು ಮಾರಾಟಕ್ಕಿದೆ ಎಂದಿದ್ದರು.ಅದನ್ನು ನಮಗೆ ಪರಿಚಿತರಿರುವ ಯಲಗೂರಿನ ಶೆಟ್ಟರೊಬ್ಬರು ಖರೀದಿ ಮಾಡಿದ್ದಾರೆ.ಅದು ಬೇನಾಮಿ ಅಲ್ಲ.ಅದು ಕೂಡಾ ಟೆಂಡೆನ್ಸಿಯಲ್ಲಿದೆ ಎಂದು ನಾಡಗೌಡರು ಹೇಳುತ್ತಾರೆ.ಮತ್ತೊಂದೆಡೆ ಚುನಾವಣೆಯಲ್ಲಿ ದೇಶಮುಖರ ಮಕ್ಕಳ ಎದುರಿಗೆ ಮತ ಭಿಕ್ಷೆ ಕೇಳಲು ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು.

ತಾಳಿಕೋಟಿ ಪ್ರಜಾಸೌಧ ವಿವಾದ : ತಾಳಿಕೋಟಿಯಲ್ಲಿ ಶಾಸಕ ನಾಡಗೌಡರು ತಮ್ಮ ಹಿಂಬಾಲಕರ ಮೂಲಕ 40 ಎಕರೆ ಜಮೀನು ತಗೆದುಕೊಂಡಿದ್ದು ಅದರಲ್ಲಿ ಪ್ರಭುಗೌಡ ಮದರಕಲ್ ಎಂಬುವರು ಹಾಗೂ ಇನ್ನಿತರರು ಎರಡು ಎಕರೆ ಕೊಡುವುದಾಗಿ ಹೇಳುತ್ತಿದ್ದಾರೆ.ಆದರೆ ಆ ಜಾಗೆಯ ಅಭಿವೃದ್ಧಿಗೆ ಸರ್ಕಾರದಿಂದ 8 ಕೋಟಿ ರೂ. ದುರ್ಬಳಕೆ ಮಾಡಿಕೊಳ್ಳುವ ಹುನ್ನಾರ ನಡೆದಿದೆ. ಸರ್ಕಾರದ ಹಣದಲ್ಲಿ ಇವರ ಜಮೀನು ಅಭಿವೃದ್ಧಿಗೊಳಿಸುವುದಕ್ಕೆ ನಾವು ಬಿಡುವುದಿಲ್ಲ.ನಿಮಗೆ ತಾಕತ್ತು ಇದ್ದರೆ ನನ್ನ ಮೇಲೆ ಮಾನಹಾನಿ ಕೇಸು ಹಾಕಿ ಎಂದು ಹಾಲಿ ಶಾಸಕ ನಾಡಗೌಡರಿಗೆ ಮಾಜಿ ಶಾಸಕ ನಡಹಳ್ಳಿ ಸವಾಲು ಹಾಕಿದರು.

ನಾಡಗೌಡರಿಗೆ ಊರಲ್ಲಿ ಪ್ರಜಾಸೌಧ ನಿರ್ಮಿಸಬೇಕು ಎಂಬ ಬಗ್ಗೆ ಎಳ್ಳಷ್ಟು ಆಸಕ್ತಿ ಇಲ್ಲ.ಊರಲ್ಲಿ ಆಗುವುದು ಅವರಿಗೆ ಬೇಕಾಗಿಲ್ಲ.ಪ್ರಭುಗೌಡ ಮದರಕಲ್ ಹಾಗೂ ಇನ್ನೊಂದಿಬ್ಬರ ಹೆಸರಿನಲ್ಲಿ ನಾಡಗೌಡರು ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಇಡೀ ತಾಳಿಕೋಟಿ ಜನ ಹೇಳುತ್ತಿದ್ದಾರೆ ಎಂದು ನಡಹಳ್ಳಿ ಆರೋಪಿಸಿದರು.

ತಾಳಿಕೋಟಿ ಜನ ಮುದ್ದೇಬಿಹಾಳಕ್ಕೆ ಬರುತ್ತಿದ್ದರು.ಮೂರುವರೆ ಕಿ.ಮೀ ಹೋಗುವುದು ದೊಡ್ಡದೇ ಎನ್ನುತ್ತಿದ್ದಾರೆ.ಪ್ರಜಾಸೌಧ ನಿರ್ಮಾಣಕ್ಕೆ ಎರಡುವರೆ ಎಕರೆ ಜಮೀನು ಬೇಕು ಎಂದು ರೂಲ್ಸ್ ಇದೆಯಾ? ಯಾರು ಕೊಡುತ್ತಾರೆ ಊರಲ್ಲಿ ಅಷ್ಟು ಜಮೀನು. ಎಕರೆ ಜಮೀನು ಐದು-ಹತ್ತು ಕೋಟಿ ರೂ.ಆಗಿದೆ.ಐಬಿ,ಪುರಸಭೆ,ಕೆಇಬಿ ಜಾಗೆ ಇದೆ.ಅಲ್ಲಿ ಪ್ರಜಾಸೌಧ ಮಾಡಿ.ನನಗೆ ಧಮಕಿ ಕೊಡಲು ಬಂದರೆ ಹತ್ತು ಪಟ್ಟು ಧಮಕಿ ಕೊಡುವ ದಾಖಲಾತಿಗಳು ನನ್ನ ಬಳಿ ನಿಮ್ಮವರೇ ತಂದುಕೊಟ್ಟಿದ್ದಾರೆ.

ಮುದ್ದೇಬಿಹಾಳ,ವಿಜಯಪುರ ಮೊದಲಾದ ಹುಡ್ಕೋಗಳಲ್ಲಿ ನೀವು ಎಷ್ಟು ಹಗರಣ ಮಾಡಿದ್ದೀರಿ.ಇವರ ಅಧ್ಯಕ್ಷತೆಯಲ್ಲಿರುವ ಕೆಎಸ್‌ಡಿಎಲ್ ನಿಗಮದಲ್ಲಿ ಎಷ್ಟೆಲ್ಲ ಟೆಂಡರ್ ಅವ್ಯವಹಾರಗಳಿವೆ ಎಂಬುದನ್ನು ಬಹಿರಂಗಪಡಿಸುತ್ತೇನೆ ಎಂದು ನಡಹಳ್ಳಿ ಹೇಳಿದರು.

ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ್ ಪಂಪಣ್ಣವರ , ಗಿರೀಶಗೌಡ ಪಾಟೀಲ್ , ಮದನಸ್ವಾಮಿ, ಕೆಂಚಪ್ಪ ಬಿರಾದಾರ, ವೈ.ಟಿ. ಗೌಡರ, ಅಶೋಕ ರಾಥೋಡ,ಸಿದ್ದರಾಜ ಹೊಳಿ , ಬಸವರಾಜ
ಚಿತ್ತರಗಿ , ಚೇತನ ಸಂಗಮ, ಪುರಸಭೆ ಮಾಜಿ ಸದಸ್ಯೆ ಸಹನಾ ಬಡಿಗೇರ , ಸಂಗಮ್ಮ ದೇವರಳ್ಳಿ,ಅಪ್ಪಣ್ಣ ಧನ್ನೂರ , ಶ್ರೀಶೈಲ್ ದೊಡಮನಿ,ಮಲ್ಲಣ್ಣ ತಂಗಡಗಿ, ಹರೀಶ ನಾಟೀಕಾರ , ಮಹಾಂತೇಶ್ ಗಂಗನಗೌಡರ,ನಾಗೇಶ ಕವಡಿಮಟ್ಟಿ,ಸಂತೋಷ್ ಗೌಡರ ಮೊದಲಾದವರು ಇದ್ದರು.

ಕಲೆಕ್ಷನ್ ಏಜೆಂಟ್ ಸುರೇಶ ನಾಡಗೌಡ : ನಡಹಳ್ಳಿ ವಾಗ್ದಾಳಿ ನಿಮ್ಮ ಸಾಕು ಪುತ್ರ, ರಾಜಕೀಯವಾಗಿ ಕಲೆಕ್ಷನ್ ಮಾಡುವ ಸಾಕು ಪುತ್ರ. ಕಲೆಕ್ಷನ್ ಏಜೆಂಟ್ ಸುರೇಶ ನಾಡಗೌಡ ಆಗಿದ್ದಾರೆ.ತಾಲ್ಲೂಕಿನ ಎಲ್ಲ ಕೆಲಸಗಳನ್ನು ಲ್ಯಾಂಡ್ ಆರ್ಮಿಯವರಿಗೆ ಕೊಟ್ಟು ಕಲೆಕ್ಷನ್ ಎಜೆಂಟ್ ಆಗಿ ಸುರೇಶ ನಾಡಗೌಡ ಕೆಲಸ ಮಾಡುತ್ತಿದ್ದಾರೆ ಎಂದು ನಡಹಳ್ಳಿ ಆರೋಪಿಸಿದರು.ಪ್ರಜಾಸೌಧ ಹೋರಾಟಕ್ಕೆ ಬಂದವರಿಗೆಲ್ಲರಿಗೂ ಪುರಸಭೆಯಿಂದ ಮುಖ್ಯಾಧಿಕಾರಿ ನೋಟಿಸ್ ಕೊಡುತ್ತಿದ್ದಾರೆ. ಅಲ್ಲಿ ಪ್ರಭುಗೌಡ ಮದರಕಲ್ ಅಂಗಡಿಕಾರರಿಗೆ ಕರೆ ಮಾಡಿ ನೀವು ಒತ್ತುವರಿ ಮಾಡಿಕೊಂಡು ಅಂಗಡಿ ಕಟ್ಟಿಕೊಂಡಿಲ್ಲವೇ ಎಂದು ಫೋನ್ ಮಾಡಿ ಹೋರಾಟಗಾರರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ನಡಹಳ್ಳಿ ಹೇಳಿದರು. ಶಾಸಕ ನಾಡಗೌಡ ಒಬ್ಬ ಚಾಡಿಕೋರರು: ಕಾಂಗ್ರೆಸ್ಸಿನಲ್ಲಿದ್ದಾಗ ನಾಲ್ಕಾರು ಜನ ಶಾಸಕರು ಒಂದೆಡೆ ಸೇರಿ ಮಾತನಾಡುತ್ತಿರುವಾಗ ಅಲ್ಲಿಗೆ ನಾಡಗೌಡರು ಬಂದರೆ ಎಲ್ಲರೂ ಸುಮ್ಮನಿರಿ ಚಾಡಿಕೋರ ಬಂದರು ಎನ್ನುತ್ತಿದ್ದರು.ಚಾಡಿ ಹೇಳುವುದರಲ್ಲಿ ಇವರು ನಂ.1 ಆಗಿದ್ದಾರೆ ಎಂದು ನಡಹಳ್ಳಿ ಟೀಕಿಸಿದರು.

ಗುಲಾಮಗಿರಿತನ ಆಡಳಿತ ಕೊನೆಗೊಳಿಸುವುದಕ್ಕೆ ನಾನು ಇಲ್ಲಿಗೆ ರಾಜಕಾರಣ ಮಾಡುವುದಕ್ಕೆ ಬಂದಿದ್ದೇನೆ.ನನ್ನ ರಾಜಕಾರಣ ಯಾವತ್ತಿದ್ದರೂ ನಿಮ್ಮ ವಿರುದ್ದವೇ ? ಯಾವತ್ತಿಗೂ ನಾಡಗೌಡರೊಂದಿಗೆ ರಾಜಕಾರಣದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ.ಅಲ್ಲದೇ ತಾಳಿಕೋಟಿಯಲ್ಲಿ ಈಗ ನೀವು ಬೇನಾಮಿಯಾಗಿ ಗಳಿಸಿರುವ ಆಸ್ತಿಯಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಬಿಡುವುದಿಲ್ಲ ಎಂದು ನಡಹಳ್ಳಿ ಹೇಳಿದರು.

Latest News

ದಿ.ದೇಶಮುಖ ದಂಪತಿ ಪುಣ್ಯಸ್ಮರಣೆ:                                           ಸಕ್ರಿಯ ರಾಜಕಾರಣಕ್ಕೆ ದೇಶಮುಖ ಮನೆತನದ ಕುಡಿ ಮರಳಲಿ-ಕತ್ತಿ

ದಿ.ದೇಶಮುಖ ದಂಪತಿ ಪುಣ್ಯಸ್ಮರಣೆ: ಸಕ್ರಿಯ ರಾಜಕಾರಣಕ್ಕೆ ದೇಶಮುಖ ಮನೆತನದ ಕುಡಿ ಮರಳಲಿ-ಕತ್ತಿ

ಮುದ್ದೇಬಿಹಾಳ : ಕಲುಷಿತಗೊಂಡಿರುವ ರಾಜಕೀಯ ಕ್ಷೇತ್ರದ ಶುದ್ಧೀಕರಣಕ್ಕೆ ದೇಶಮುಖ ಮನೆತನದಂತ ಕುಟುಂಬದವರು ಸಕ್ರಿಯ ರಾಜಕಾರಣದಲ್ಲಿರಬೇಕು

ನನ್ನ ಜನ ರಾಜೀನಾಮೆ ಕೊಡು ಎಂದರೆ ಕೊಡುತ್ತೇನೆ-ಸಿ.ಎಸ್.ನಾಡಗೌಡ

ನನ್ನ ಜನ ರಾಜೀನಾಮೆ ಕೊಡು ಎಂದರೆ ಕೊಡುತ್ತೇನೆ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ತಮಗೆ ಷಡ್ಯಂತ್ರದಿಂದ ಸಚಿವ ಸ್ಥಾನ ಕೈ ತಪ್ಪಿದ್ದು ಇದಕ್ಕಾಗಿ ತಮ್ಮ ಸ್ಥಾನಕ್ಕೆ

ಪತ್ರಕರ್ತ ಗುಲಾಂ ದಫೇದಾರ ನಾಮಪತ್ರ ಸಲ್ಲಿಕೆ:                            ಅಂಜುಮನ್ ಗತವೈಭವ ಮರುಸ್ಥಾಪಿಸಲು ಯತ್ನ-ಅಬ್ದುಲಗಫೂರ್ ಮಕಾನದಾರ

ಪತ್ರಕರ್ತ ಗುಲಾಂ ದಫೇದಾರ ನಾಮಪತ್ರ ಸಲ್ಲಿಕೆ: ಅಂಜುಮನ್ ಗತವೈಭವ ಮರುಸ್ಥಾಪಿಸಲು ಯತ್ನ-ಅಬ್ದುಲಗಫೂರ್ ಮಕಾನದಾರ

ಮುದ್ದೇಬಿಹಾಳ : ಸ್ವಾತಂತ್ರ ಪೂರ್ವದಲ್ಲಿ ಹುಟ್ಟಿರುವ ಅಂಜುಮನ್ ಇಸ್ಲಾಂ ಕಮೀಟಿಯ ಆರಂಭದಲ್ಲಿದ್ದ ವೈಭವವನ್ನು ಮರಳಿ

ಎಕರೆಗೆ 50 ಸಾವಿರ ರೂ.ಪರಿಹಾರ ನೀಡಿ-ಎನ್.ರವಿಕುಮಾರ್

ಎಕರೆಗೆ 50 ಸಾವಿರ ರೂ.ಪರಿಹಾರ ನೀಡಿ-ಎನ್.ರವಿಕುಮಾರ್

ಮುದ್ದೇಬಿಹಾಳ : ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಭೀಕರ ಬರಗಾಲ ತಲೆದೋರಿದ್ದು ರೈತರ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ:      ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ: ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಮುದ್ದೇಬಿಹಾಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ) ಹಾಗೂ ಮದರಿಯ ಚೈತ್ರಾ ಆರೋಗ್ಯ ಮತ್ತು ಶಿಕ್ಷಣ ಸೇವಾ ಟ್ರಸ್ಟ್(ರಿ) ಸಹಯೋಗದಲ್ಲಿ ಪತ್ರಿಕಾ ಹಾಗೂ ವೈದ್ಯರ ದಿನಾಚರಣೆಯ ಅಂಗವಾಗಿ ಜು.26 ರಂದು ಬೆಳಗ್ಗೆ 10.00ಕ್ಕೆ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಿವೃತ್ತ ನೌಕರರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ, ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ. ಹುನಗುಂದ-ಮುದ್ದೇಬಿಹಾಳದ ಗಚ್ಚಿನಮಠ-ಹೊಸಮಠದ ಅಮರೇಶ್ವರ ದೇವರು ದಿವ್ಯ ಸಾನಿಧ್ಯ ವಹಿಸುವರು.ಕಾನಿಪ ಧ್ವನಿ ರಾಜ್ಯ ಅಧ್ಯಕ್ಷ

650 ಅಂಕ ಪಡೆದ ಮಾನಸಾ ಎಚ್. ಪ್ರಥಮ:                 ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

650 ಅಂಕ ಪಡೆದ ಮಾನಸಾ ಎಚ್. ಪ್ರಥಮ: ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜು ಹಾಗೂ ನೀಟ್ ಅಕಾಡೆಮಿಯ 2026ರ ನೀಟ್ ಫಲಿತಾಂಶ ಪ್ರಕಟಗೊಂಡಿದ್ದು 12 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕ ಪಡೆದುಕೊಂಡಿದ್ದಾರೆ. ನೀಟ್ ಫಲಿತಾಂಶದ ಕುರಿತು ಮಾಹಿತಿ ನೀಡಿರುವ ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲ್, ಆಡಳಿತಾಧಿಕಾರಿ ಅಮೀತಗೌಡ ಪಾಟೀಲ ಅವರು, ಈ ಬಾರಿ 190ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟು ದೊರೆಯುವ ನಿರೀಕ್ಷೆ ಇದೆ ಎಂದು ತಿಳಿಸಿದರು.ನೀಟ್‌ನಲ್ಲಿ 500ಕ್ಕೂ ಅಧಿಕ 140 ವಿದ್ಯಾರ್ಥಿಗಳು,