Sanju Samson: ಅಬ್ಬಾ..!! ಸಂಜು ಸ್ಯಾಮ್ಸನ್ ಸ್ಟ್ರೈಕ್​​ರೇಟ್​​ ಕುರಿತು ಯಾರೂ ಕೆಮ್ಮಂಗಿಲ್ಲ.. ಯಾಕೆ ಗೊತ್ತಾ?

Sanju Samson: ಅಬ್ಬಾ..!! ಸಂಜು ಸ್ಯಾಮ್ಸನ್ ಸ್ಟ್ರೈಕ್​​ರೇಟ್​​ ಕುರಿತು ಯಾರೂ ಕೆಮ್ಮಂಗಿಲ್ಲ.. ಯಾಕೆ ಗೊತ್ತಾ?

T20 Match India vs South Africa: ಸೌತ್​​ ಆಫ್ರಿಕಾದ ಡರ್ಬನ್​ನಲ್ಲಿ ಸಂಜು ಸ್ಯಾಮ್ಸನ್ (Sanju Samson) ಶೋ ಸಖತ್​​ ಆಗಿ ಮೂಡಿಬಂತ್ತು. ಹೌದು, ಸಂಜು ಸ್ಯಾಮ್ಸನ್​ ಸ್ಪೋಟಕ ಆಟಕ್ಕೆ ಸೌತ್​ ಆಫ್ರಿಕಾ ಬೌಲರ್​ಗಳು ಕಕ್ಕಾಬಿಕ್ಕಿಯಾದರು.

ಸಿಕ್ಸ್​​.. ಸಿಕ್ಸ್​​.. ಸಿಕ್ಸ್​.. ಡರ್ಬನ್​ನಲ್ಲಿ ನಿನ್ನೆ ಸಿಕ್ಸರ್​​ಗಳ ಸುರಿಮಳೆ ಸುರಿಯಿತು. ಒಂದಲ್ಲ.. ಎರಡಲ್ಲ.. ಬರೋಬ್ಬರಿ 10 ಸಿಕ್ಸರ್​ಗಳು! ಇಡೀ ತಂಡದ್ದಲ್ಲ.. ಒಬ್ಬನೇ ಒಬ್ಬ ಸಿಡಿಸಿದ ಸಿಕ್ಸರ್​ಗಳಿವು!

ನಿನ್ನೆ ನಡೆದ ಸೌತ್​ ಆಫ್ರಿಕಾ ವಿರುದ್ಧದ T20 Matchನಲ್ಲಿ ಟಾಸ್​​ ಸೋತು ಬ್ಯಾಟಿಂಗ್​ಗಿಳಿದ ಟೀಮ್​ ಇಂಡಿಯಾ ಆರಂಭದಲ್ಲೇ ವಿಕೆಟ್​ ಕಳೆದುಕೊಂಡಿತು. ಓಪನರ್​ ಅಭಿಶೇಕ್​ ಶರ್ಮಾ 7 ರನ್​ಗಳಿಸಿ ಔಟಾದರು. 3ನೇ ಕ್ರಮಾಂಕದಲ್ಲಿ ಕ್ರಿಸ್​ಗೆ ಬಂದ ಸೂರ್ಯಕುಮಾರ್​ ಯಾದವ್​ ಅಬ್ಬರಿಸಿ ಮರೆಯಾದರು. 1 ಸಿಕ್ಸರ್​​, 2 ಬೌಂಡರಿ ಸಿಡಿಸಿದ ಸೂರ್ಯ 21 ರನ್​ಗಳಿಸಿ ನಿರ್ಗಮಿಸಿದರು.

ಒಂದೆಡೆ ವಿಕೆಟ್​ ಉರುಳ್ತಾ ಇದ್ರೆ, ಇನ್ನೊಂದೆಡೆ ಸೈಲೆಂಟ್ ಸ್ಟಾರ್​​ ಸಂಜು (Sanju Samson) ಫುಲ್​ ವೈಲೆಂಟ್​ ಆಗಿದ್ದರು. ಸೌತ್​ ಆಫ್ರಿಕಾ ಬೌಲರ್​​ಗಳ ಬೆಂಡೆತ್ತಿದ ಸಂಜು, ಸಿಕ್ಸರ್​ಗಳ ಮಳೆ ಸುರಿಸಿದರು. ಸಂಜು ಸ್ಯಾಮ್ಸನ್​ ಆಟಕ್ಕೆ ಸೌತ್​ ಆಫ್ರಿಕಾ ಬೌಲರ್​ಗಳ ಬಳಿ ಆನ್ಸರೇ ಇರಲಿಲ್ಲ. ಕ್ಯಾಪ್ಟನ್​ ಮರ್ಕರಮ್​ಗೆ ಫೀಲ್ಡ್​ ಪ್ಲೇಸ್​ಮೆಂಟ್​ ಮಾಡೋ ಟೆನ್ಶನ್​​ ಅನ್ನೋದು ಬರೆಲೇ ಇಲ್ಲ. ಸಂಜು ಹೊಡೆದ ಶಾಟ್ಸ್​​ಗಳು ಎಲ್ಲಾ ಬೌಂಡರಿಯಾಚೆ ಹೋಗುತ್ತಿದ್ದವು.

ಡರ್ಬನ್​ನ T20 Matchನಲ್ಲಿ 10 ಸಿಕ್ಸರ್​ ಸಿಡಿಸಿ ಮಿಂಚಿದ ಸಂಜು (Sanju Samson) ಸ್ಯಾಮ್ಸನ್​ 7 ಕ್ಲಾಸಿಕ್​ ಬೌಂಡರಿಗಳನ್ನೂ ಚಚ್ಚಿದ್ರು. ಬರೋಬ್ಬರಿ 214ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್​ ಬೀಸಿದ ಸ್ಯಾಮ್ಸನ್​ 47 ಎಸೆತಗಳಲ್ಲೇ ಸೆಂಚುರಿ ಸಿಡಿಸಿ ಮಿಂಚಿದರು.

ಸಂಜು ಸ್ಯಾಮ್ಸನ್​ಗೆ ಸಾಥ್​ ಕೊಟ್ಟ ತಿಲಕ್​ ವರ್ಮಾ 18 ಎಸೆತಗಳಲ್ಲೇ 33 ರನ್​ ಚಚ್ಚಿದ್ರು. 3 ಬೌಂಡರಿ, 2 ಸಿಕ್ಸರ್​ಗಳನ್ನ ಬಾರಿಸಿದರು. 33 ರನ್​ಗಳಿಸಿ ತಿಲಕ್​ ವರ್ಮಾ ಔಟಾದರೆ ಶತಕದ ಬೆನ್ನಲ್ಲೇ ಸಂಜು ಸ್ಯಾಮ್ಸನ್​ ವಿಕೆಟ್​ ಒಪ್ಪಿಸಿದರು. ಇದ್ರೊಂದಿಗೆ ಟೀಮ್​ ಇಂಡಿಯಾ ಕುಸಿತ ಆರಂಭವಾಯ್ತು.

ಹಾರ್ದಿಕ್​ ಪಾಂಡ್ಯ, ರಿಂಕು ಸಿಂಗ್​, ಅಕ್ಷರ್​ ಪಟೇಲ್​ ಅಲ್ಪ ಮೊತ್ತಕ್ಕೆ ಔಟಾದರು. ಪರಿಣಾಮ ಟೀಮ್​ ಇಂಡಿಯಾ ಕೊನೆಯ 6 ಓವರ್​ಗಳಲ್ಲಿ ಕೇವಲ 40 ರನ್​ಗಳಿಸಿತು. ಅಂತಿಮವಾಗಿ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 202 ರನ್​ ಕಲೆ ಹಾಕಿತು.

Latest News

ಅಸ್ವಸ್ಥಗೊಂಡ ಬಿದ್ದಿದ್ದ ನರಿ ಮರಿಗೆ ಚಿಕಿತ್ಸೆ:                ಮಾನವೀಯತೆ ಮೆರೆದ ಯುವಕರು, ಅಧಿಕಾರಿಗಳ ತಂಡ

ಅಸ್ವಸ್ಥಗೊಂಡ ಬಿದ್ದಿದ್ದ ನರಿ ಮರಿಗೆ ಚಿಕಿತ್ಸೆ: ಮಾನವೀಯತೆ ಮೆರೆದ ಯುವಕರು, ಅಧಿಕಾರಿಗಳ ತಂಡ

ಮುದ್ದೇಬಿಹಾಳ : ವಾಯುವಿಹಾರಕ್ಕೆಂದು ಹೋಗಿದ್ದ ಮೂವರು ಯುವಕರ ತಂಡವೊoದರ ಕಣ್ಣಿಗೆ ಬಿದ್ದ ಅಸ್ವಸ್ಥಗೊಂಡ ನರಿ

ಅಧಿಸೂಚನೆ ಪ್ರಕಟ; ನಾಮಪತ್ರ ಸಲ್ಲಿಕೆ ಶುರು;           ಮುದ್ದೇಬಿಹಾಳ ಅಂಜುಮನ್ ಕಮೀಟಿಗೆ ಚುನಾವಣೆ ಘೋಷಣೆ

ಅಧಿಸೂಚನೆ ಪ್ರಕಟ; ನಾಮಪತ್ರ ಸಲ್ಲಿಕೆ ಶುರು; ಮುದ್ದೇಬಿಹಾಳ ಅಂಜುಮನ್ ಕಮೀಟಿಗೆ ಚುನಾವಣೆ ಘೋಷಣೆ

ಮುದ್ದೇಬಿಹಾಳ : ಇಲ್ಲಿಯ ಪ್ರತಿಷ್ಠಿತ ಅಂಜುಮನ್ ಇಸ್ಲಾಂ ಕಮೀಟಿಯ ಆಡಳಿತ ಮಂಡಳಿ ಸದಸ್ಯರ ಆಯ್ಕೆಗೆ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ:      ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ: ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಮುದ್ದೇಬಿಹಾಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ) ಹಾಗೂ ಮದರಿಯ ಚೈತ್ರಾ ಆರೋಗ್ಯ ಮತ್ತು

650 ಅಂಕ ಪಡೆದ ಮಾನಸಾ ಎಚ್. ಪ್ರಥಮ:                 ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

650 ಅಂಕ ಪಡೆದ ಮಾನಸಾ ಎಚ್. ಪ್ರಥಮ: ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜು ಹಾಗೂ ನೀಟ್

ಎನ್ರೋಲ್‌ಮೆಂಟ್ ಆಗದಿದ್ದರೆ ಸರ್ಕಾರಿ ಯೋಜನೆಗಳು ಸಿಗಲ್ಲ-ನಾಡಗೌಡ

ಎನ್ರೋಲ್‌ಮೆಂಟ್ ಆಗದಿದ್ದರೆ ಸರ್ಕಾರಿ ಯೋಜನೆಗಳು ಸಿಗಲ್ಲ-ನಾಡಗೌಡ

ಮುದ್ದೇಬಿಹಾಳ : ಮುಖ್ಯಮಂತ್ರಿಗಳು ಹೇಳಿದಂತೆ ನೀವು ಮತದಾರರಾಗಿ ನೋಂದಾಯಿಸಿಕೊಳ್ಳದಿದ್ದರೆ ಸರಕಾರದ ಯಾವುದೇ ಯೋಜನೆ ಕೊಡುವುದಕ್ಕೆ ಬರುವುದಿಲ್ಲ.ಪಂಚ ಗ್ಯಾರಂಟಿ ಹಿಡಿದು ಗಂಗಾಕಲ್ಯಾಣ,ಮಕ್ಕಳ ಸ್ಕಾಲರಶಿಪ್ ಸೇರಿದಂತೆ ಸರ್ಕಾರಿ ಯೋಜನೆಗಳು ನಿಮಗೆ ದೊರೆಯುವುದಿಲ್ಲ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ವಿಜಯ ಮಹಾಂತೇಶ ಮಂಗಲಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಎಲ್‌ಎ-2 ಗಳಿಗಾಗಿ ಏರ್ಪಡಿಸಿದ್ದ ಎಸ್‌ಆಯ್‌ಆರ್ ಪ್ರಕ್ರಿಯೆ ಕುರಿತು ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.ಮತದಾನ ನಿಮ್ಮ ಜೀವನದ ಹಕ್ಕು.ಸರ್ಕಾರದ ಎಲ್ಲ ಯೋಜನೆಗಳನ್ನು ಪಡೆದುಕೊಳ್ಳಬೇಕಾದರೆ ಎನ್ರೋಲಮೆಂಟ್ ಆಗುವುದು ಕಡ್ಡಾಯವಾಗಿದೆ.ಈ

32 ಕೆಜಿ ಬೆಳ್ಳಿ ವಿಗ್ರಹ ಹೊತ್ತೊಯ್ದ ಕಳ್ಳರು:                         ಬಸರಕೋಡದ ಪವಾಡ ಬಸವೇಶ್ವರರ ವಿಗ್ರಹ ಕಳ್ಳತನ

32 ಕೆಜಿ ಬೆಳ್ಳಿ ವಿಗ್ರಹ ಹೊತ್ತೊಯ್ದ ಕಳ್ಳರು: ಬಸರಕೋಡದ ಪವಾಡ ಬಸವೇಶ್ವರರ ವಿಗ್ರಹ ಕಳ್ಳತನ

ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡದ ಐತಿಹಾಸಿಕ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಬಸವೇಶ್ವರ ವಿಗ್ರಹವನ್ನೇ ಕಳ್ಳರು ಕದ್ದೊಯ್ದಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದ್ದು ಭಕ್ತರು ಹಾಗೂ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಘಟನೆ ಹಿನ್ನೆಲೆ : ಬಸರಕೋಡದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಬೆಳಗಿನ ಜಾವ ಆರ್ಚಕರು ಕರೆ ಮಾಡಿ ದೇವಸ್ಥಾನದ ವಿಗ್ರಹ ಕಾಣಿಸುತ್ತಿಲ್ಲ, ಕಳ್ಳತನವಾಗಿದೆ ಎಂದು ಕರೆ ಮಾಡಿ ತಿಳಿಸಿದ ಕೂಡಲೇ ಆಡಳಿತ ಮಂಡಳಿಯ ಸದಸ್ಯರೆಲ್ಲ ಸೇರಿ ಪೊಲೀಸರಿಗೆ ಮಾಹಿತಿ ನೀಡಿದೆವು.ದೇವಸ್ಥಾನದ ಸಿಸಿ