Sanju Samson: ಅಬ್ಬಾ..!! ಸಂಜು ಸ್ಯಾಮ್ಸನ್ ಸ್ಟ್ರೈಕ್​​ರೇಟ್​​ ಕುರಿತು ಯಾರೂ ಕೆಮ್ಮಂಗಿಲ್ಲ.. ಯಾಕೆ ಗೊತ್ತಾ?

Sanju Samson: ಅಬ್ಬಾ..!! ಸಂಜು ಸ್ಯಾಮ್ಸನ್ ಸ್ಟ್ರೈಕ್​​ರೇಟ್​​ ಕುರಿತು ಯಾರೂ ಕೆಮ್ಮಂಗಿಲ್ಲ.. ಯಾಕೆ ಗೊತ್ತಾ?

T20 Match India vs South Africa: ಸೌತ್​​ ಆಫ್ರಿಕಾದ ಡರ್ಬನ್​ನಲ್ಲಿ ಸಂಜು ಸ್ಯಾಮ್ಸನ್ (Sanju Samson) ಶೋ ಸಖತ್​​ ಆಗಿ ಮೂಡಿಬಂತ್ತು. ಹೌದು, ಸಂಜು ಸ್ಯಾಮ್ಸನ್​ ಸ್ಪೋಟಕ ಆಟಕ್ಕೆ ಸೌತ್​ ಆಫ್ರಿಕಾ ಬೌಲರ್​ಗಳು ಕಕ್ಕಾಬಿಕ್ಕಿಯಾದರು.

ಸಿಕ್ಸ್​​.. ಸಿಕ್ಸ್​​.. ಸಿಕ್ಸ್​.. ಡರ್ಬನ್​ನಲ್ಲಿ ನಿನ್ನೆ ಸಿಕ್ಸರ್​​ಗಳ ಸುರಿಮಳೆ ಸುರಿಯಿತು. ಒಂದಲ್ಲ.. ಎರಡಲ್ಲ.. ಬರೋಬ್ಬರಿ 10 ಸಿಕ್ಸರ್​ಗಳು! ಇಡೀ ತಂಡದ್ದಲ್ಲ.. ಒಬ್ಬನೇ ಒಬ್ಬ ಸಿಡಿಸಿದ ಸಿಕ್ಸರ್​ಗಳಿವು!

ನಿನ್ನೆ ನಡೆದ ಸೌತ್​ ಆಫ್ರಿಕಾ ವಿರುದ್ಧದ T20 Matchನಲ್ಲಿ ಟಾಸ್​​ ಸೋತು ಬ್ಯಾಟಿಂಗ್​ಗಿಳಿದ ಟೀಮ್​ ಇಂಡಿಯಾ ಆರಂಭದಲ್ಲೇ ವಿಕೆಟ್​ ಕಳೆದುಕೊಂಡಿತು. ಓಪನರ್​ ಅಭಿಶೇಕ್​ ಶರ್ಮಾ 7 ರನ್​ಗಳಿಸಿ ಔಟಾದರು. 3ನೇ ಕ್ರಮಾಂಕದಲ್ಲಿ ಕ್ರಿಸ್​ಗೆ ಬಂದ ಸೂರ್ಯಕುಮಾರ್​ ಯಾದವ್​ ಅಬ್ಬರಿಸಿ ಮರೆಯಾದರು. 1 ಸಿಕ್ಸರ್​​, 2 ಬೌಂಡರಿ ಸಿಡಿಸಿದ ಸೂರ್ಯ 21 ರನ್​ಗಳಿಸಿ ನಿರ್ಗಮಿಸಿದರು.

ಒಂದೆಡೆ ವಿಕೆಟ್​ ಉರುಳ್ತಾ ಇದ್ರೆ, ಇನ್ನೊಂದೆಡೆ ಸೈಲೆಂಟ್ ಸ್ಟಾರ್​​ ಸಂಜು (Sanju Samson) ಫುಲ್​ ವೈಲೆಂಟ್​ ಆಗಿದ್ದರು. ಸೌತ್​ ಆಫ್ರಿಕಾ ಬೌಲರ್​​ಗಳ ಬೆಂಡೆತ್ತಿದ ಸಂಜು, ಸಿಕ್ಸರ್​ಗಳ ಮಳೆ ಸುರಿಸಿದರು. ಸಂಜು ಸ್ಯಾಮ್ಸನ್​ ಆಟಕ್ಕೆ ಸೌತ್​ ಆಫ್ರಿಕಾ ಬೌಲರ್​ಗಳ ಬಳಿ ಆನ್ಸರೇ ಇರಲಿಲ್ಲ. ಕ್ಯಾಪ್ಟನ್​ ಮರ್ಕರಮ್​ಗೆ ಫೀಲ್ಡ್​ ಪ್ಲೇಸ್​ಮೆಂಟ್​ ಮಾಡೋ ಟೆನ್ಶನ್​​ ಅನ್ನೋದು ಬರೆಲೇ ಇಲ್ಲ. ಸಂಜು ಹೊಡೆದ ಶಾಟ್ಸ್​​ಗಳು ಎಲ್ಲಾ ಬೌಂಡರಿಯಾಚೆ ಹೋಗುತ್ತಿದ್ದವು.

ಡರ್ಬನ್​ನ T20 Matchನಲ್ಲಿ 10 ಸಿಕ್ಸರ್​ ಸಿಡಿಸಿ ಮಿಂಚಿದ ಸಂಜು (Sanju Samson) ಸ್ಯಾಮ್ಸನ್​ 7 ಕ್ಲಾಸಿಕ್​ ಬೌಂಡರಿಗಳನ್ನೂ ಚಚ್ಚಿದ್ರು. ಬರೋಬ್ಬರಿ 214ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್​ ಬೀಸಿದ ಸ್ಯಾಮ್ಸನ್​ 47 ಎಸೆತಗಳಲ್ಲೇ ಸೆಂಚುರಿ ಸಿಡಿಸಿ ಮಿಂಚಿದರು.

ಸಂಜು ಸ್ಯಾಮ್ಸನ್​ಗೆ ಸಾಥ್​ ಕೊಟ್ಟ ತಿಲಕ್​ ವರ್ಮಾ 18 ಎಸೆತಗಳಲ್ಲೇ 33 ರನ್​ ಚಚ್ಚಿದ್ರು. 3 ಬೌಂಡರಿ, 2 ಸಿಕ್ಸರ್​ಗಳನ್ನ ಬಾರಿಸಿದರು. 33 ರನ್​ಗಳಿಸಿ ತಿಲಕ್​ ವರ್ಮಾ ಔಟಾದರೆ ಶತಕದ ಬೆನ್ನಲ್ಲೇ ಸಂಜು ಸ್ಯಾಮ್ಸನ್​ ವಿಕೆಟ್​ ಒಪ್ಪಿಸಿದರು. ಇದ್ರೊಂದಿಗೆ ಟೀಮ್​ ಇಂಡಿಯಾ ಕುಸಿತ ಆರಂಭವಾಯ್ತು.

ಹಾರ್ದಿಕ್​ ಪಾಂಡ್ಯ, ರಿಂಕು ಸಿಂಗ್​, ಅಕ್ಷರ್​ ಪಟೇಲ್​ ಅಲ್ಪ ಮೊತ್ತಕ್ಕೆ ಔಟಾದರು. ಪರಿಣಾಮ ಟೀಮ್​ ಇಂಡಿಯಾ ಕೊನೆಯ 6 ಓವರ್​ಗಳಲ್ಲಿ ಕೇವಲ 40 ರನ್​ಗಳಿಸಿತು. ಅಂತಿಮವಾಗಿ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 202 ರನ್​ ಕಲೆ ಹಾಕಿತು.

Latest News

ಎರಡು ಕಾರು ಮುಖಾಮುಖಿ ಡಿಕ್ಕಿಯಾಗಿ ತಾಯಿ-ಮಗ ದುರ್ಮರಣ! ಮತ್ತೊಬ್ಬ ಮಗ-ತಂದೆ ಸ್ಥಿತಿ ಗಂಭೀರ

ಎರಡು ಕಾರು ಮುಖಾಮುಖಿ ಡಿಕ್ಕಿಯಾಗಿ ತಾಯಿ-ಮಗ ದುರ್ಮರಣ! ಮತ್ತೊಬ್ಬ ಮಗ-ತಂದೆ ಸ್ಥಿತಿ ಗಂಭೀರ

ಬಾಗಲಕೋಟೆ: ಎರಡು ‌ಕಾರುಗಳು ನಡುವೆ ಮುಖಾಮುಖಿಯಾಗಿ ಡಿಕ್ಕಿ ಸಂಭವಿಸಿದ ಪರಿಣಾಮ ಒಂದೇ ಕಾರಿನಲ್ಲಿದ್ದ ಇಬ್ಬರು

ಎರಡು ಕಾರು ಮುಖಾಮುಖಿ ಡಿಕ್ಕಿಯಾಗಿ ತಾಯಿ-ಮಗ ದುರ್ಮರಣ! ಮತ್ತೊಬ್ಬ ಮಗ-ತಂದೆ ಸ್ಥಿತಿ ಗಂಭೀರ

ಎರಡು ಕಾರು ಮುಖಾಮುಖಿ ಡಿಕ್ಕಿಯಾಗಿ ತಾಯಿ-ಮಗ ದುರ್ಮರಣ! ಮತ್ತೊಬ್ಬ ಮಗ-ತಂದೆ ಸ್ಥಿತಿ ಗಂಭೀರ

ಬಾಗಲಕೋಟೆ: ಎರಡು ‌ಕಾರುಗಳು ನಡುವೆ ಮುಖಾಮುಖಿಯಾಗಿ ಡಿಕ್ಕಿ ಸಂಭವಿಸಿದ ಪರಿಣಾಮ ಒಂದೇ ಕಾರಿನಲ್ಲಿದ್ದ ಇಬ್ಬರು

ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅರಿತುಕೊಳ್ಳಿ-ಅಂಗಡಿ

ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅರಿತುಕೊಳ್ಳಿ-ಅಂಗಡಿ

ಮುದ್ದೇಬಿಹಾಳ : ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಸಂಪೂರ್ಣವಾಗಿ ತಮ್ಮನ್ನು ಆಧುನಿಕ ಮಾಧ್ಯಮಗಳಲ್ಲಿ ಮಗ್ನರಾಗಿದ್ದು ಮಾನವೀಯ

ಕೂಲಿ ಕೆಲಸಕ್ಕೆ ಬಂದಿದ್ದ ಮಹಾರಾಷ್ಟ್ರ ಮೂಲದ ಕಾರ್ಮಿಕ ಸಿಡಿಲಿಗೆ ಬಲಿ

ಕೂಲಿ ಕೆಲಸಕ್ಕೆ ಬಂದಿದ್ದ ಮಹಾರಾಷ್ಟ್ರ ಮೂಲದ ಕಾರ್ಮಿಕ ಸಿಡಿಲಿಗೆ ಬಲಿ

ಮುದ್ದೇಬಿಹಾಳ : ಕೆಬಿಜೆಎನ್‌ಎಲ್‌ದಿಂದ ಎ.ಎಲ್.ಬಿ.ಸಿ ಕಾಲುವೆಯ ಕೆಲಸಕ್ಕೆಂದು ಬಂದಿದ್ದ ಕಾರ್ಮಿಕನೋರ್ವ ಸಿಡಿಲಿಗೆ ಬಲಿಯಾಗಿರುವ ಘಟನೆ

ತೆರಬಂಡಿ ಸ್ಪರ್ಧೆ: ರೂಢಗಿ ಎತ್ತುಗಳಿಗೆ ಬಹುಮಾನ

ತೆರಬಂಡಿ ಸ್ಪರ್ಧೆ: ರೂಢಗಿ ಎತ್ತುಗಳಿಗೆ ಬಹುಮಾನ

ಮುದ್ದೇಬಿಹಾಳ : ತಾಲ್ಲೂಕಿನ ಹುಲ್ಲೂರು ತಾಂಡಾದ ಮಾರುತೇಶ್ವರ ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ತೆರಬಂಡಿ ಸ್ಪರ್ಧೆಯಲ್ಲಿ ಶ್ರೀ ಲಕ್ಷ್ಮಿದೇವಿ ಕಮೀಟಿ ರೂಢಗಿ ಎತ್ತುಗಳು ಪ್ರಥಮ, ರೂಢಗಿ ಎಸ್.ಕೆ.ಟಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡವು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸಂತೋಷ ಚವ್ಹಾಣ, ಗ್ರಾಮೀಣ ಪ್ರದೇಶದಲ್ಲಿ ರೈತರು ಎತ್ತುಗಳ ಸಂಸ್ಕೃತಿಯನ್ನು ಜೀವಂತವಾಗಿಡುವ ಸಲುವಾಗಿ ಇಂತಹ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದರು. ಗ್ರಾಪಂ ಸದಸ್ಯ ಶಿವಾನಂದ ಲಮಾಣಿ, ಮಾಜಿ ಸದಸ್ಯ ಥಾವರಪ್ಪ

ಶ್ರೀ ಗದಿಗೆಪ್ಪಗೌಡ ವ್ಹಿ ಕೋನಪ್ಪನವರ ನಿಧನ.

ಶ್ರೀ ಗದಿಗೆಪ್ಪಗೌಡ ವ್ಹಿ ಕೋನಪ್ಪನವರ ನಿಧನ.

ಬಾಗಲಕೋಟೆ :ಮುರನಾಳ ಗ್ರಾಮದ ಶ್ರೀ ಗದಿಗೆಪ್ಪಗೌಡ ವೆಂಕಪ್ಪ ಕೋನಪ್ಪನವರ ( ೮೩ ) ಇವರು ವಿದ್ಯಾಗಿರಿ , ಬಾಗಲಕೋಟೆ ನಿವಾಸದಲ್ಲಿ ಸ್ವರ್ಗಸ್ಥರಾದರು. ಸೋಮವಾರ ದಿ ೧೨ ಮೇ ೨೦೨೫ ರಂದು ಬೆಳಿಗ್ಗೆ ೧೦ ಗಂಟೆಗೆ ನಂದೀಶ್ವರ ನಗರ, ವಿದ್ಯಾಗಿರಿ ಬಾಗಲಕೋಟೆ ದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವದು. ಸಂಪರ್ಕ ಮೊಬೈಲ್ ನಂಬರ್9740339050 _ಓಂ ಶಾಂತಿ