The land records given to lease were altered and purchased by crooks: Veeranna Charantimath accused

Hunagund: ಲೀಸ್ ಗೆ ನೀಡಿದ್ದ ಭೂ ದಾಖಲೆ ತಿದ್ದಿ ಖರೀದಿಸಿದ ದುರುಳರು: ವೀರಣ್ಣ ಚರಂತಿಮಠ ಆರೋಪ

Hunagund: ಲೀಸ್ ಗೆ ನೀಡಿದ್ದ ಭೂ ದಾಖಲೆ ತಿದ್ದಿ ಖರೀದಿಸಿದ ದುರುಳರು: ವೀರಣ್ಣ ಚರಂತಿಮಠ ಆರೋಪ

ಹುನಗುಂದ: ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಶಾಲೆಯ ಆವರಣಕ್ಕೆ 99 ವರ್ಷ ಮೂರು ಎಕರೆ ಆರು ಗುಂಟೆ ಲೀಸ್ ನೀಡಿದ ಜಾಗೆಯನ್ನು ಖಾಸಗಿ ಇಬ್ಬರು ವ್ಯಕ್ತಿಗಳು ಅಧಿಕಾರ ದುರಪಯೋಗ ಪಡಿಸಿಕೊಂಡು ಲೀಸ್ ಅಂತ ಇದ್ದಿದನ್ನು ಅಳಿಸಿ ಖುಷ್ಕಿ ಜಮೀನು ಅಂತ ಜಾಗೆಯನ್ನು ಖರೀದಿ ಮಾಡಿಕೊಂಡಿದ್ದಾರೆ ಎಂದು ವಿ.ಮ.ವಿ.ವ ಸಂಘದ ಕಾಯಾಧ್ಯಕ್ಷ ವೀರಣ್ಣ ಚರಂತಿಮಠ ಆರೋಪಿಸಿದರು.

Join Our Telegram: https://t.me/dcgkannada

ಪಟ್ಟಣದ ವಿ.ಮ.ವಿ.ವ ಸಂಘದ ಕಾರ್ಯಾಲಯದಲ್ಲಿ ಗುರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಲಕಲ್ಲ ವಿಜಯ ಮಹಾಂತೇಶ ಸ್ವಾಮಿಗಳು ಅದರ ಅಧ್ಯಕ್ಷತೆಯಲ್ಲಿ ಮಾರ್ಗದರ್ಶನದಲ್ಲಿ ಈ ಸಂಸ್ಥೆಯು ನಡೆಯುತ್ತಿದ್ದು, ನೂರಾರು ವರ್ಷಗಳ ಇತಿಹಾಸ ಹೊಂದಿದ ಈ ಸಂಸ್ಥೆ ಒಂದು ಸಾರ್ವಜನಿಕವಾದ ಈ ಸಂಸ್ಥೆಯಾಗಿದೆ ಎಂದರು.

ನಾಲ್ಕು ಕ್ಯಾಂಪಸ್‌ಗಳನ್ನು ಹೊಂದಿದ್ದು ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘಕ್ಕೆ 99 ವರ್ಷಗಳ ವರೆಗೆ ಲೀಸ್ ನೀಡಿದ ಬಿಂದುರಾವ್ ಕುಲಕರ್ಣಿ ನೀಡಿದ ರಿ.ಸ.ನಂ ೪೫೮/೧ ಕ್ಷೇತ್ರ ೩ ಎಕರೆ ೬ ಗುಂಟೆ ಮೊದಲು ಲೀಸ್ ಜಮೀನು ಇದ್ದು, ಶಾಲೆಯ ಆಟದ ಮೈದಾನ ಎಂದು ನೊಂದನೆಯಾಗಿದೆ ಎಂದರು.

ಕುಲಕರ್ಣಿಯವರ ಕುಟುಂಬಸ್ಥರು ನಾಲ್ಕು ಜನರು ಸಂಸ್ಥೆಗೆ ೨೦೦೧ ರಲ್ಲಿ ೫೦ ಸಾವಿರವನ್ನು ತೆಗೆದುಕೊಂಡು ಸಂಸ್ಥೆಗೆ ಬಿಟ್ಟು ಕೊಟ್ಟಿದ್ದಾರೆ. ಇದರ ಮಧ್ಯೆ ಇಬ್ಬರು ಖಾಸಗಿ ವ್ಯಕ್ತಿಗಳು ಇನ್ನೂ ೨೨ ವರ್ಷ ಲೀಸ್ ಇದ್ದರೂ ಈ ರೀತಿಯಾಗಿ ಉದ್ದಟತನದ ಕೆಲಸವನ್ನು ಮಾಡಿದ್ದಾರೆ ಎಂದು ಆರೋಪಿಸಿದರು.

ಕೋರ್ಟನಲ್ಲಿ ರಾಜೀಯಾಗಿ ಡಿಗ್ರಿಯಾಗಿದೆ. ಸಂಸ್ಥೆಯ ಆವರಣ ಅಂತ ಆಗಿದೆ. ಅಧಿಕಾರ ಇದೆ ಅಂತ ಯಾವುದೇ ಉದ್ದಟತನ ಕೆಲಸವನ್ನು ಯಾರೂ ಮಾಡಬಾರದು ಈಗಾಗಲೇ ಕರ್ನಾಟಕ ಹೈಕೋಟ್ ತಡೆಯಾಜ್ಞೆಯನ್ನು ನೀಡಿದೆ ಎಂದು ಹೇಳಿದರು.

ಸಂಸ್ಥೆಯ ನಿರ್ದೇಶಕರಿಗೆ ಇಬ್ಬರಿಗೆ ಬೋಗಸ್ ಅಟ್ರಾಸಿಟಿ ಕೇಸ್ ಅವರು ಮಾಡಲಾಗಿದ್ದು. ಬೋಗಸ್ ಇದ್ದಾಗ ಯಾರನ್ನು ಅರೆಸ್ಟ್ ಮಾಡಲು ಬರುವುದಿಲ್ಲ ಕಾನೂನು ಕೇಳಿದ್ದೇವೆ. ಗುರವಾರ ರಾತ್ರಿ ಏಕಾಏಕಿಯಾಗಿ ಶಾಲೆಯ ಕೌಂಪೋಡನ್ನು ಎರಡು ಜೆಸಿಬಿ ಮತ್ತು ಹಿಟ್ಯಾಚಿಯಿಂದ ನಂಬರ ಪ್ಲೇಟ್ ತೆಗೆದು ಕೌಂಪೋಡ್ ಒಡೆಯುವ ಕೆಲಸವನ್ನು ಮಾಡಿದ್ದಾರೆ ಎಂದರು.

ಅವರ ಮೇಲೆ ನೂರಕ್ಕೆ ನೂರರಷ್ಟು ಮಾನನಷ್ಟ ಮೊಕದ್ದಮೆ ಕೇಸ್ ಹಾಕುತ್ತೇವೆ. ನ್ಯಾಯಾಲಯದ ತಡೆಯಾಜ್ಞೆ ಇರುವಾಗ ಈ ರೀತಿಯಾಗಿ ಮಾಡಿದಾಗ ಅವರ ಮೇಲೆ ಸೂಕ್ತ ಕ್ರಮವಹಿದ್ದೇವೆ ಎಂದರು.

ಅಧಿಕಾರಿಗಳು ಯಾರದೋ ಮಾತು ಕೇಳಿ ಕಾನೂನು ಬಿಟ್ಟು ಕೆಲಸ ಮಾಡಿದರೆ, ಅವರ ಮೇಲೆಯೂ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಕಾನೂನು ಬದ್ಧವಾದ ಕೆಲಸವನ್ನು ಮಾತ್ರ ಮಾಡಬೇಕು. ಅಧಿಕಾರ ಮತ್ತು ಸರ್ಕಾರ ಇಂದು ಇರುತ್ತೇ ನಾಳೆ ಹೋಗುತ್ತೆದೆ. ಆದ್ದರಿಂದ ಅಧಿಕಾರಿಗಳು ಕಾನೂನು ಮೀರಿ ಕೆಲಸವನ್ನು ಯಾವುದೇ ಕಾರಣಕ್ಕೆ ಮಾಡಬಾರದು ಎಂದರು.

ಬೇರೆಯವರ ಮಾತು ಕೇಳಿ ಕೆಲಸವನ್ನು ಮಾಡಿದರೆ ಅಧಿಕಾರಿಗಳೇ ನೇರ ಹೋಣೆಯನ್ನು ಮಾಡಲಾಗುವುದು. ಕಾನೂನು ಬಿಟ್ಟು ನಾವು ಏನು ಮಾಡುವುದಿಲ್ಲ ಕಾನೂನು ಪ್ರಕಾರ ಕ್ರಮವಹಿಸಿ ಕೆಲ¸ವನ್ನು ಸಂಸ್ಥೆಯ ಹಿತದೃಷ್ಟಿಯಿಂದ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: Astrology: ಹಣದ ವಿಚಾರದಲ್ಲಿ ಇಂದು ನೀವು ಜಾಗರೂಕರಾಗಿ ಇರುವುದು ಉತ್ತಮ

ಗೌರವ ಕಾರ್ಯದರ್ಶಿ ಡಾ.ಮಹಾಂತೇಶ ಕಡಪಟ್ಟಿ, ನಿರ್ದೇಶಕರಾದ ಅರುಣೋದಯ ದುದ್ಗಿ, ರವಿ ಹುಚನೂರ , ಬಸವರಾಜ ಕೆಂದೂರ, ಮಹಾಂತೇಶ ಕತ್ತಿ ಇತರರು ಇದ್ದರು.

Latest News

Gruhalakshmi Yojane: ಸಂಕ್ರಾಂತಿಗೆ ಸರ್ಕಾರದಿಂದ ಬಂಪರ್ ಆಫರ್

Gruhalakshmi Yojane: ಸಂಕ್ರಾಂತಿಗೆ ಸರ್ಕಾರದಿಂದ ಬಂಪರ್ ಆಫರ್

ಗೃಹಲಕ್ಷ್ಮಿ ಯೋಜನೆಯ (Gruhalakshmi Yojane) 16ನೇ ಕಂತಿನ ಹಣದ ಕುರಿತು ಮಾಹಿತಿ ಇಲ್ಲಿದೆ. ಪ್ರತಿ

Gold Rate: ₹90 ಸಾವಿರ ಗಡಿ ದಾಟುವುದು ಫಿಕ್ಸ್!!

Gold Rate: ₹90 ಸಾವಿರ ಗಡಿ ದಾಟುವುದು ಫಿಕ್ಸ್!!

Gold Rate: ನವದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ 10 ಗ್ರಾಂ ಚಿನ್ನದ ಧಾರಣೆಯು ಮತ್ತೆ

Adhar Card Loan: 50 ಸಾವಿರ ರೂಪಾಯಿವರೆಗೆ ಯಾವುದೇ ಶ್ಯೂರಿಟಿ ಇಲ್ಲದೆ ಪಡೆಯಲು ಅವಕಾಶ!

Adhar Card Loan: 50 ಸಾವಿರ ರೂಪಾಯಿವರೆಗೆ ಯಾವುದೇ ಶ್ಯೂರಿಟಿ ಇಲ್ಲದೆ ಪಡೆಯಲು ಅವಕಾಶ!

Adhar Card Loan: ನಿಮಗೆ ತಕ್ಷಣ ಹಣದ ಅವಶ್ಯಕತೆ ಇದೆಯಾ? ಶ್ಯೂರಿಟಿ ಇಲ್ಲದೆ ಸಾಲ

ಸಿ.ಎಲ್.ಬಿರಾದಾರ ಅಧ್ಯಕ್ಷ, ಜಿ.ಬಿ.ಪಾಟೀಲ್ ಉಪಾಧ್ಯಕ್ಷ; ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್‌ಗೆ ಹೊಸಬರ ಆಯ್ಕೆ

ಸಿ.ಎಲ್.ಬಿರಾದಾರ ಅಧ್ಯಕ್ಷ, ಜಿ.ಬಿ.ಪಾಟೀಲ್ ಉಪಾಧ್ಯಕ್ಷ; ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್‌ಗೆ ಹೊಸಬರ ಆಯ್ಕೆ

ಮುದ್ದೇಬಿಹಾಳ : ಅನಿರೀಕ್ಷಿತ ಫಲಿತಾಂಶವನ್ನು ಇಲ್ಲಿನ ದಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್‌ನ ನೂತನ

Prize Money Scholarship: ವಿದ್ಯಾರ್ಥಿಗಳ ಖಾತೆಗೆ 35 ಸಾವಿರ ಜಮಾ!

Prize Money Scholarship: ವಿದ್ಯಾರ್ಥಿಗಳ ಖಾತೆಗೆ 35 ಸಾವಿರ ಜಮಾ!

Prize Money Scholarship 2025: ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ಕಡೆಯಿಂದ ಗುಡ್ ನ್ಯೂಸ್ ನೀಡಿದೆ. 2024 ಮತ್ತು 2025 ನೇ ಸಾಲಿನ ಮೆಟ್ರಿಕ್ ನಂತರ ವಿದ್ಯಾರ್ಥಿಗಳು ಹಾಗೂ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಅರ್ಜಿಯನ್ನು ಕರೆಯಲಾಗಿದೆ. Join Our Telegram: https://t.me/dcgkannada ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಶಿಕ್ಷಣ ಅನುಕೂಲಕ್ಕಾಗಿ ಸಾಕಷ್ಟು ಯೋಜನೆ ಮತ್ತು ಸ್ಕಾಲರ್ಶಿಪ್ ಗಳನ್ನು ಜಾರಿಗೆ ತರುತ್ತಿದೆ ಮತ್ತು ಅವರ ಪರೀಕ್ಷೆ ಉತ್ತಮವಾಗಿ ಪಾಸಾಗಿದ್ದರೆ ಸಾಕು.

Jio: ಕೇವಲ ₹601 ವರ್ಷಪೂರ್ತಿ free 5G ಯೋಜನೆ

Jio: ಕೇವಲ ₹601 ವರ್ಷಪೂರ್ತಿ free 5G ಯೋಜನೆ

Jio: ₹601 5G ರೀಚಾರ್ಜ್ ಯೋಜನೆಯು Jio ಬಳಕೆದಾರರಿಗೆ, ವಿಶೇಷವಾಗಿ ಇಡೀ ವರ್ಷಕ್ಕೆ ಅನಿಯಮಿತ 5G ಡೇಟಾವನ್ನು ಬಯಸುವವರಿಗೆ ಆಕರ್ಷಕ ಕೊಡುಗೆಯಾಗಿದೆ. Jio ₹601 5G ರೀಚಾರ್ಜ್ ಯೋಜನೆ ಮುಖ್ಯಾಂಶಗಳು ವೆಚ್ಚ : ಒಂದು ವರ್ಷಕ್ಕೆ ₹601.ಪ್ರಯೋಜನಗಳು : 12 ತಿಂಗಳವರೆಗೆ ಅನಿಯಮಿತ 5G ಡೇಟಾ.ಅರ್ಹತೆ : Jio 5G ಸಿಮ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ.ವಿನಾಯಿತಿಗಳು : 4G ಸಿಮ್ ಬಳಕೆದಾರರಿಗೆ ಅನ್ವಯಿಸುವುದಿಲ್ಲ. Join Our Telegram: https://t.me/dcgkannada ಈ