ವಿಜಯಪುರ :ವಿಶ್ವಗುರು ಬಸವಣ್ಣನವರ ಭಾವಚಿತ್ರವನ್ನು ವಿರೂಪಗೊಳಿಸಿ, ಶರಣ ಸಂಸ್ಕತಿಯನ್ನು ನಾಶಮಾಡುವ ದುರುದ್ದೇಶದಿಂದ ಪ್ರಕಟಗೊಂಡಿರುವ ಆರೆಸ್ಸೆಸ್ ಪ್ರಣೀತ ‘ವಚನ ದರ್ಶನ’ (Vachana darshana) ಪುಸ್ತಕ ಬಿಡುಗಡೆಗೆ ವಿಜಯಪುರದಲ್ಲಿ ತೀವ್ರ ಪ್ರತಿರೋಧ ವ್ಯಕ್ತವಾಗಿದೆ.
ಶರಣ ಸಂಸ್ಕೃತಿ ರಕ್ಷಣಾ ಸಮಿತಿಯ ಸದಸ್ಯರು ಜಿಲ್ಲಾ ಉಸ್ತವಾರಿ ಸಚಿವರಾದ ಡಾ. ಎಂ.ಬಿ. ಪಾಟೀಲರು ಹಾಗೂ ಜಿಲ್ಲಾ ಆಪ್ತ ಜಿಲ್ಲಾಧಿಕಾರಿಗಳಿಗೆ ಮನವಿಯೊಂದನ್ನು ನೀಡಿದ್ದು, ಈ ಪುಸ್ತಕ (Vachana darshana) ಬಿಡುಗಡೆ ಕಾರ್ಯಕ್ರಮಕ್ಕೆ ಅನುಮತಿ ಕೊಡಬಾರದು ಎಂದು ವಿಜಯಪುರದ ಪ್ರಗತಿಪರ ಒಕ್ಕೂಟವು ಆಗ್ರಹಿಸಿದ್ದಾರೆ.
Join Out Telegram: https://t.me/dcgkannada
ಈ ಪುಸ್ತಕವು ಬಸವಣ್ಣನವರ ಸಿದ್ಧಾಂತಕ್ಕೆ ವಿರುದ್ಧವಾಗಿದ್ದು, ಇದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವಂತಹ ಕೃತಿಯಾಗಿದೆ ಎಂದು ಹೇಳಿದ್ದಾರೆ.
ಮನವಿ ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: BPL Card: ಬಿಪಿಎಲ್ ಕಾರ್ಡ್, ಗ್ಯಾರಂಟಿ ಯೋಜನೆ ರದ್ದು? ಸಚಿವ ಎಂ.ಬಿ.ಪಾಟೀಲ ಕ್ಲಾರಿಟಿ
ಶರಣ ಸಂಸ್ಕೃತಿ ರಕ್ಷಣಾ ಸಮಿತಿಯ ಸದಸ್ಯರಾದ ಕಲ್ಲಪ್ಪ ಕಡೆಚೂರ, ಹನಮಂತ ಚಿಂಚಿಲಿ, ಜಂಬುನಾಥ ಕಂಚಾಣಿ, ಬಸವರಾಜ ಕೊಂಡಗೊಳಿ, ಮಿಲಿಂದ ಚೆಂಚಲಕರ, ಚಂದ್ರಶೇಖರ ಘಂಟೆಪ್ಪಗೋಳ, ಡಾ. ರವಿ ಬಿರಾದಾರ, ಶಾಂತವೀರ ಥಾಲಬಾವಡಿ, ಮೋಹನ ಕಟ್ಟಿಮನಿ, ರಾಜೇಶ್ವರಿ ಯರನಾಳ, ರಾಜಶೇಖರ ಯರನಾಳ, ಅಕ್ಷಯಕುಮಾರ ಅಜಮನಿ, ಅನಿಲ ಹೊಸಮನಿ, ಪ್ರಭುಗೌಡ ಪಾಟೀಲ, ಚೆನ್ನು ಕಟ್ಟಿಮನಿ, ನಂದಕುಮಾರ ಗೊಬ್ಬೂರ, ದಾನೇಶ್ ಆವಟಿ, ಡಾ ಮಹಾಂತೇಶ್ ಮಡಿಕೇಶ್ವರ್ ,ಅಕ್ಷಯ ,ಈರಣ್ಣ ತೊಂಡೀಕಟ್ಟಿ , ಬಸವರಾಜ ಕಾರಕುರ ಮುಂತಾದವರು ಈ ಸಮಯದಲ್ಲಿ ಇದ್ದರು.
Muddebihal: ರೈತರ ಆರ್ಥಿಕ ಬಲವರ್ಧನೆಗೆ ಸಹಕಾರಿಗಳು ಶ್ರಮಿಸಲಿ: ಸ್ವಾಮೀಜಿ
ಮುದ್ದೇಬಿಹಾಳ : ಶರಣ ವೀರೇಶ್ವರರ ಹೆಸರಿನಲ್ಲಿ ಸ್ಥಾಪಿತವಾದ ಬ್ಯಾಂಕ್ನಿಂದ ರೈತರು, ವ್ಯಾಪಾರಿಗಳ ಆರ್ಥಿಕ ಚೈತನ್ಯಕ್ಕೆ ಸಹಕಾರ ನೀಡುವ ಕಾರ್ಯ ಮುಂದೆ ಸಾಗಲಿ ಎಂದು ಉಪ್ಪಿನಬೆಟಗೇರಿ ವಿರುಪಾಕ್ಷ ಸ್ವಾಮೀಜಿ ಹೇಳಿದರು.
ಪಟ್ಟಣದ ದಾನೇಶ್ವರಿ ಪೆಟ್ರೋಲ್ ಹಿಂಭಾಗದಲ್ಲಿ ಬುಧವಾರ ನಾಲತವಾಡದ ಶರಣ ವೀರೇಶ್ವರ ಬ್ಯಾಂಕ್ ನೂತನ ಶಾಖೆಯ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿವಯೋಗಮಂದಿರದಲ್ಲಿ ಶರಣ ವೀರೇಶ್ವರರ ಪುತ್ಥಳಿ ಅವರ ಹೆಸರಿನ ಉದ್ಯಾನವನ ಇದೆ. ಅಲ್ಲಿ ಜಂಗಮ ವಟುಗಳಿಗೆ ಪಾಠ ಶಾಲೆಯಾಗಿದ್ದು ಶ್ರೇಷ್ಠ ಶರಣರ ಹೆಸರಿನಲ್ಲಿ ಬ್ಯಾಂಕು ಉತ್ತಮ ಅಭಿವೃದ್ಧಿ ಹೊಂದಿದೆ ಎಂದರು.
ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್ ಮಾತನಾಡಿ, ದಿ.ಬಿ.ಎಂ.ಅಂಗಡಿ ಅವರು ಹುಟ್ಟು ಹಾಕಿದ ಬ್ಯಾಂಕು ಇಂದು ಹೆಮ್ಮರವಾಗಿ ಬೆಳೆದಿದೆ.ಬ್ಯಾಂಕುಗಳ ಆರ್ಥಿಕ ಸದೃಢತೆಗೆ ಗ್ರಾಹಕರ ನಿಯಮಿತ ವ್ಯವಹಾರ ಆಧಾರವಾಗಿದೆ ಎಂದರು.
ಕೂಡಲಸಂಗಮ ಪಂಚಮಸಾಲಿ ಗುರುಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ,ಬ್ಯಾಂಕ್ ಅಧ್ಯಕ್ಷ ಮಹಾಂತಪ್ಪಗೌಡ ಪಾಟೀಲ್, ಗಣ್ಯ ವರ್ತಕ ಬಿ.ಸಿ.ಮೋಟಗಿ,ಸಲಹಾ ಸಮಿತಿ ಪ್ರಮುಖ ಶಾಂತಪ್ಪ ಕಮತ, ಯುವ ಉದ್ಯಮಿ ಭರತಗೌಡ ಪಾಟೀಲ ನಡಹಳ್ಳಿ, ಬ್ಯಾಂಕ ಪ್ರಧಾನ ವ್ಯವಸ್ಥಾಪಕ ನಾಗರಾಜ ಗಂಗನಗೌಡರ ಇದ್ದರು.ಡಿ.ಆರ್.ಮಳಖೇಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೀರೇಶ ಬಂಗಾರಗುಂಡ ವಚನಗೀತೆಗೆ ಭರತನಾಟ್ಯ ನೃತ್ಯಗೈದರು. ಸಂಗಮೇಶ ಶಿವಣಗಿ ಸಂಗಡಿಗರು ಪ್ರಾರ್ಥಿಸಿದರು. ರಾಜು ಹಾದಿಮನಿ ನಿರೂಪಿಸಿದರು.