ಮುದ್ದೇಬಿಹಾಳ : ಪೊಲೀಸ್ ಕೆಲಸ ಅದೊಂದು ಥ್ಯಾಂಕಲೆಸ್ ಜಾಬ್ ಎಂಬ ಅಪವಾದದ ಮಧ್ಯೆ ನಮ್ಮ ಇಲಾಖೆಯ ಎಲ್ಲ ಅಧಿಕಾರಿ,ಸಿಬ್ಬಂದಿ ಕೈಗೊಂಡ ಬಸರಕೋಡದ ಬೆಳ್ಳಿ ಮೂರ್ತಿ ಕಳ್ಳತನ ಪ್ರಕರಣದ ಆರೋಪಿಗಳನ್ನು ಬಂಧಿಸಿ ಅವರಿಂದ ಬೆಳ್ಳಿ ವಶಕ್ಕೆ ಪಡೆದ ಕಾರಣದಿಂದ ಸಮಾಜ ಕೊಟ್ಟಿರುವ ಸನ್ಮಾನ,ಗೌರವ ನಮ್ಮ ಕರ್ತವ್ಯದ ಸಮಯದ ಮಹತ್ವದ ಕ್ಷಣಗಳಲ್ಲಿ ಒಂದಾಗಿದೆ ಎಂದು ಮುದ್ದೇಬಿಹಾಳ ಸಿಪಿಐ ಮೊಹ್ಮದ ಫಸಿವುದ್ದೀನ್ ಹೇಳಿದರು.
ತಾಲ್ಲೂಕಿನ ಬಸರಕೋಡ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೊಲೀಸ್ ಅಭಿನಂದನಾ ಕಾರ್ಯಕ್ರಮದಲ್ಲಿ ಕಳ್ಳತನ ಪ್ರಕರಣದಲ್ಲಿ ಪವಾಡ ಬಸವೇಶ್ವರರ ಬೆಳ್ಳಿ ಮೂರ್ತಿ ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿದ ಪ್ರಕರಣದ ತನಿಖಾ ತಂಡದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಸರಕೋಡದ ಮೂರ್ತಿ ಕಳ್ಳತನವಾದ ಕ್ಷಣದಿಂದ ಹಿರಿಯ ಪೊಲೀಸ್ ಅಧಿಕಾರಿಗಳು ನಮಗೆ ದಿನಕ್ಕೆ ಮೂರು ಬಾರಿ ಪ್ರಕರಣದ ಮಾಹಿತಿ ನೀಡಲು ಸೂಚನೆ ನೀಡಿದ್ದರು.ಬೆಳಗಾವಿ ಉತ್ತರ ವಲಯದ ಐಜಿಪಿ ಸಾಹೇಬರಾದ ಸಂದೀಪ ಪಾಟೀಲ,ಎಸ್ಪಿ ಲಕ್ಷö್ಮಣ ನಿಂಬರಗಿ,ಡಿವೈಎಸ್ಪಿ ಚಂದ್ರಕಾoತ ನಂದರೆಡ್ಡಿ ನಮ್ಮ ತನಿಖಾ ತಂಡಕ್ಕೆ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ಮಾಡಿ ಪ್ರಕರಣದ ಪತ್ತೆಗೆ ಸಹಕಾರ ನೀಡಿದರು.ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ವಾಯ್.ಬಿರಾದಾರ,ಸದಸ್ಯರಾದ ಶ್ರೀಶೈಲ ಮೇಟಿ,ಅಪ್ಪು ನಾಡಗೌಡ ಮೊದಲಾದವರು ನಮಗೆ ಪ್ರಕರಣದ ಪತ್ತೆಗೆ ತಮ್ಮ ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.
ಇನ್ನೋರ್ವ ಸಿಪಿಐ ರಾಮನಗೌಡ ಸಂಕನಾಳ ಮಾತನಾಡಿ, ಇಂತಹ ಸನ್ಮಾನ,ಅಭಿನಂದನೆಗಳು ಪೊಲೀಸರ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ.ಸಮಾಜಕ್ಕೆ ನಾವು ಉತ್ತರದಾಯಿಗಳಾಗಿ ಹೆಚ್ಚೆಚ್ಚು ಕೆಲಸಗಳನ್ನು ಮಾಡಬೇಕು.ಕಾನೂನು ಸುವ್ಯವಸ್ಥೆ ಕಾಪಾಡಲು ಕುಟುಂಬದ ಹಿತವನ್ನು ಬಲಿ ಕೊಟ್ಟು ಕೆಲಸ ಮಾಡುತ್ತಿರುತ್ತಾರೆ.ಬಸರಕೋಡದ ಪವಾಡ ಬಸವೇಶ್ವರ ಮೂರ್ತಿ ಕಳ್ಳತನವಾದಾಗ ನನಗೂ ವಯಕ್ತಿಕವಾಗಿ ನೋವಾಗಿತ್ತು.ಪತ್ತೆಯಾದಾಗ ನಮ್ಮ ಇಲಾಖೆಯ ಅಧಿಕಾರಿಗಳು,ಸಿಬ್ಬಂದಿಯ ಬಗ್ಗೆ ಮತ್ತಷ್ಟು ಹೆಮ್ಮೆಯುಂಟಾಯಿತು ಎಂದು ಹೇಳಿದರು.
ಯುವ ಉದ್ಯಮಿ ಭರತಗೌಡ ಪಾಟೀಲ ನಡಹಳ್ಳಿ,ಪವಾಡ ಬಸವೇಶ್ವರ ಸಂಸ್ಥೆಯ ಅಧ್ಯಕ್ಷ ಕೆ.ವಾಯ್.ಬಿರಾದಾರ,ಸಾಹಿತಿ ಬಿ.ಆರ್.ಪೊಲೀಸಪಾಟೀಲ,ಬ.ಬಾಗೇವಾಡಿ ಪಿಎಸ್ಐ ಸಂಜಯ ತಿಪರೆಡ್ಡಿ, ಕಪ್ಪತಗುಡ್ಡ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ,ಸಮಾಜ ಸೇವಕಿ ಮಂಗಳಾದೇವಿ ಬಿರಾದಾರ ಮಾತನಾಡಿದರು.ವಂದಾಲದ ಪವಾಡ ಬಸವೇಶ್ವರ ಶಾಖಾ ಮಠದ ಸ್ವಾಮೀಜಿ,ಅಪರಾಧ ವಿಭಾಗದ ಪಿಎಸೈ ರಂಗಪ್ಪ ಭಂಗಿ,ಸAಸ್ಥೆ ಉಪಾಧ್ಯಕ್ಷ ಎಂ.ಅರ್.ನಾಡಗೌಡ್ರ,ಸದಸ್ಯರಾದ ಸಿಂಧೂಬಲ್ಲಾಳರಾಜ ನಾಡಗೌಡ, ಬಾಲಾಜಿ ಶುರ್ಸ್ ನಿರ್ದೇಶಕ ರಾಹುಲಗೌಡ ಪಾಟೀಲ,ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ, ಬಿರಾದಾರ, ಅಪ್ಪುಗೌಡ ನಾಡಗೌಡ,ಗಣ್ಯರಾದ ಬಿ.ಸಿ.ಮೋಟಗಿ,ಸಂಗನಗೌಡ ಬಿರಾದಾರ,ಎಎಸ್ಐ ಎಂ.ಎನ್.ತಳವಾರ,ದೇವಾನAದ ಲಮಾಣಿ ಇದ್ದರು.ಪ್ರಕಾಶ ಗೋಂಧಳೆ ಹಾಗೂ ಉಮಾ ಹಂಚಿನಾಳ ನಿರೂಪಿಸಿದರು.
ಪೊಲೀಸ್ ತಂಡಕ್ಕೆ ತಲೆ ಬಾಗುವೆ-ಭರತಗೌಡ ಪಾಟೀಲ್ :
ಪವಾಡ ಬಸವೇಶ್ವರರ ಬಗ್ಗೆ ನಮ್ಮ ತಂದೆ ಎ.ಎಸ್.ಪಾಟೀಲ ನಡಹಳ್ಳಿ ಅವರಿಗೆ ಅಪಾರ ಭಕ್ತಿ.ಯಾವುದೇ ರಾಜಕೀಯ,ಕೌಟುಂಬಿಕ,ಧಾರ್ಮಿಕ,ಔದ್ಯೋಗಿಕ ನಿರ್ಧಾರಗಳನ್ನು ಕೈಗೊಳ್ಳುವುದಿದ್ದರೂ ಪವಾಡ ಬಸವೇಶ್ವರರ ಪೂಜಿಸದೇ ಮುಂದುವರೆಯುವುದಿಲ್ಲ.ಈ ಪ್ರಕರಣವನ್ನು ಪತ್ತೆ ಹಚ್ಚಿಸಿದ ಪೊಲೀಸ್ ಇಲಾಖೆಯ ಸಮಸ್ತ ತಂಡಕ್ಕೆ ನಡಹಳ್ಳಿ ಕುಟುಂಬದ ಪರವಾಗಿ ತಲೆಬಾಗಿ ವಂದಿಸುತ್ತೇನೆ ಎಂದು ಯುವ ಉದ್ಯಮಿ ಭರತಗೌಡ ಪಾಟೀಲ ನಡಹಳ್ಳಿ ಹೇಳಿದರು.







