ನಿಯಮ ಪಾಲಿಸದಿದ್ದರೆ ಲೈಸನ್ಸ್ ರದ್ದತಿಗೆ ಕ್ರಮ :
ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಅಳವಡಿಕೆ ಕಡ್ಡಾಯ



ಮುದ್ದೇಬಿಹಾಳ : ಸರ್ಕಾರದ ಆದೇಶದಂತೆ ಅಂಗಡಿ,ಸಂಘ ಸಂಸ್ಥೆಗಳು, ಕಚೇರಿಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಬಳಸಬೇಕು.ಇಲ್ಲದಿದ್ದರೆ ಅಂತಹ ವಾಣಿಜ್ಯ ಬಳಕೆಗೆ ನೀಡಲಾದ ಪರವಾಣಿಗೆ ರದ್ದುಗೊಳಿಸಲಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಬಿರಾದಾರ ಹೇಳಿದರು.


ಪಟ್ಟಣದ ಪುರಸಭೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂಗಡಿಕಾರರು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರದ ನಿರ್ದೇಶನದಂತೆ ಎಲ್ಲ ಅಂಗಡಿಗಳ ಮೇಲಿರುವ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕು.ಹಸಿರು ಪಟಾಕಿ ಬಳಕೆಯ ಕುರಿತಂತೆ ಸರ್ಕಾರದ ನಿರ್ದೇಶನವನ್ನು ಪಾಲಿಸಬೇಕು ಎಂದು ತಿಳಿಸಿದರು.


ತಹಶೀಲ್ದಾರ್ ಬಲರಾಮ ಕಟ್ಟಿಮನಿ ಮಾತನಾಡಿ, ಕರ್ನಾಟಕದಲ್ಲಿ ಜೀವನ ನಡೆಸುವ ನಾವೆಲ್ಲರೂ ಕನ್ನಡ ಭಾಷೆಯನ್ನು ಪ್ರೀತಿಸಬೇಕು.ಸರ್ಕಾರದ ಸುತ್ತೋಲೆಯನ್ನು ಪಾಲಿಸಬೇಕಾಗಿದ್ದು ಕಡ್ಡಾಯವಾಗಿದ್ದು ಕನ್ನಡ ಭಾಷೆಯನ್ನು ಹೆಚ್ಚು ಪ್ರಮಾಣದಲ್ಲಿ ನಾಮಫಲಕಗಳಲ್ಲಿ ಬಳಸಬೇಕು ಎಂದು ಹೇಳಿದರು.


ಕನ್ನಡಪರ ಸಂಘಟನೆಯ ಮುಖಂಡರಾದ ರಾಜುಗೌಡ ತುಂಬಗಿ, ಮಂಜು ಕೊಪ್ಪ, ಪುಂಡಲೀಕ ಮುರಾಳ, ವೀರೇಶ ಗುರುಮಠ ಮಾತನಾಡಿ, ಕನ್ನಡ ರಾಜೋತ್ಸವದಂದು ಅಂಗಡಿಗಳ ಮೇಲೆ ಕನ್ನಡದ ಧ್ವಜ ಹಾರಿಸಿ ಅಭಿಮಾನ ತೋರಬೇಕು ಎಂದು ಒತ್ತಾಯಿಸಿದರು.
ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಮುಖಂಡ ವಾಯ್.ಎಚ್.ವಿಜಯಕರ್, ವರ್ತಕ ಶರಣು ದೇಗಿನಾಳ, ವಿಕ್ರಂ ಓಸ್ವಾಲ್ ಮತ್ತಿತರರು ಮಾತನಾಡಿ , ಸರ್ಕಾರದ ಆದೇಶವನ್ನು ವ್ಯಾಪಾರಸ್ಥರು ಪಾಲಿಸಬೇಕು. ನಮ್ಮೂರಿನಲ್ಲಿ ಶೇ.70ರಷ್ಟು ಅಂಗಡಿಗಳ ನಾಮಫಲಕಗಳು ಕನ್ನಡದಲ್ಲಿಯೇ ಇದ್ದು ಇನ್ನುಳಿದವರು ಸರ್ಕಾರದ ಸುತ್ತೋಲೆಯಂತೆ ನಾಮಫಲಕಗಳನ್ನು ಅಳವಡಿಸಬೇಕು ಎಂದರು.

ಎಲ್ಲೆಂದರಲ್ಲಿ ಬಾಳೆಕಂಬ ,ಚೆಂಡು ಹೂವು ಮಾರುವಂತಿಲ್ಲ:
ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ಮಾತನಾಡಿ, ದೀಪಾವಳಿ ಸಮಯದಲ್ಲಿ ಬಾಳೇಕಂಬ, ಹೂವು ಮತ್ತಿತರ ಸಾಮಗ್ರಿಗಳನ್ನು ಎಲ್ಲೆಂದರಲ್ಲಿ ಹಚ್ಚಿ ಮಾರುವಂತಿಲ್ಲ.ವಿಶೇಷವಾಗಿ ಬಸವೇಶ್ವರ ವೃತ್ತದ ಆಸುಪಾಸಿನಲ್ಲಿ ಬಾಳೆ ಕಂಬ ಮಾರಾಟ ಮಾಡುವಂತಿಲ್ಲ.ಅದಕ್ಕಾಗಿ ಪುರಸಭೆಯಿಂದ ಗುರುತಿಸುವ ಸ್ಥಳದಲ್ಲಿ ಮಾರಾಟ ಮಾಡಬೇಕು.ಕೆರೆ ಸಮೀಪದಲ್ಲಿರುವ ಖಾಸ್ಗತೇಶ್ವರ ಮಠದ ಖಾಲಿ ಜಾಗೆಯಲ್ಲಿ ಬಾಳೇ ಕಂಬ, ಹೂವು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.ಸಭೆಯಲ್ಲಿ ಅಗ್ನಿಶಾಮಕ ಠಾಣೆಯ ಅಧಿಕಾರಿ ಪ್ರಮೋದ ಸುಂಕದ, ಪುರಸಭೆ ಸದಸ್ಯ ರಫೀಕ ದ್ರಾಕ್ಷಿ,ವರ್ತಕರಾದ ನಿಂಗಣ್ಣ ಚಟ್ಟೇರ, ವಿ.ಕೆ.ದೇಶಪಾಂಡೆ, ಮಹಾಂತೇಶ ಬೂದಿಹಾಳಮಠ, ಚಂದ್ರು ಕಲಾಲ,ರಾಜಶೇಖರ ಹೊಳಿ ಮೊದಲಾದವರು ಇದ್ದರು.

Latest News

ಬರಪೀಡಿತ ಪಟ್ಟಿಯಿಂದ ಮುದ್ದೇಬಿಹಾಳ ಮತಕ್ಷೇತ್ರ ಔಟ್: ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ವಿರುದ್ಧ ಶಾಸಕ ನಾಡಗೌಡರ ತೀವ್ರ ವಾಗ್ದಾಳಿ

ಬರಪೀಡಿತ ಪಟ್ಟಿಯಿಂದ ಮುದ್ದೇಬಿಹಾಳ ಮತಕ್ಷೇತ್ರ ಔಟ್: ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ವಿರುದ್ಧ ಶಾಸಕ ನಾಡಗೌಡರ ತೀವ್ರ ವಾಗ್ದಾಳಿ

ಮುದ್ದೇಬಿಹಾಳ : ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ

ಎರಡು ಅಂಬ್ಯುಲೆನ್ಸ್ ಜನಸೇವೆಗೆ ಲೋಕಾರ್ಪಣೆ:                     70 ಸಾವಿರ ಹುದ್ದೆಗಳ ಭರ್ತಿಗೆ ಕಾನೂನು ತೊಡಕು-ಶಾಸಕ ನಾಡಗೌಡ

ಎರಡು ಅಂಬ್ಯುಲೆನ್ಸ್ ಜನಸೇವೆಗೆ ಲೋಕಾರ್ಪಣೆ: 70 ಸಾವಿರ ಹುದ್ದೆಗಳ ಭರ್ತಿಗೆ ಕಾನೂನು ತೊಡಕು-ಶಾಸಕ ನಾಡಗೌಡ

ಮುದ್ದೇಬಿಹಾಳ : ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಸಿಎಸ್‌ಆರ್ ಅನುದಾನದಲ್ಲಿ ಮುದ್ದೇಬಿಹಾಳ ಹಾಗೂ

ಎಐ ಚಾಲಿತ ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ಚಾಲನೆ; ಆರಕ್ಷಕರು ಸಮಾಜದ ರಕ್ಷಕರು,ಅವರನ್ನು ಬಳಸಿಕೊಳ್ಳಬಾರದು-ನಾಡಗೌಡ

ಎಐ ಚಾಲಿತ ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ಚಾಲನೆ; ಆರಕ್ಷಕರು ಸಮಾಜದ ರಕ್ಷಕರು,ಅವರನ್ನು ಬಳಸಿಕೊಳ್ಳಬಾರದು-ನಾಡಗೌಡ

ಮುದ್ದೇಬಿಹಾಳ : ಹೆಚ್ಚುತ್ತಿರುವ ಜನಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಪೊಲೀಸ್ ಇಲಾಖೆ ಮತ್ತಷ್ಟು ದಕ್ಷತೆಯಿಂದ

ಗ್ರಾಮೀಣ ಭಾಗದ ಯುವಕರ ಉದ್ಯೋಗಾವಕಾಶಕ್ಕಾಗಿ ಹೊಸ ಕಾಲೇಜು

ಗ್ರಾಮೀಣ ಭಾಗದ ಯುವಕರ ಉದ್ಯೋಗಾವಕಾಶಕ್ಕಾಗಿ ಹೊಸ ಕಾಲೇಜು

ಮುದ್ದೇಬಿಹಾಳ : ಪಾರ್ವತಿಬಾಯಿ ಭೂರಮಲ್ ಓಸ್ವಾಲ್ ಕುಟುಂಬದವರು ಪರಿಶ್ರಮದಿಂದ ಗಳಿಸಿದ ಆಸ್ತಿಯನ್ನು ದಾನ ಮಾಡುವ

ನಿಯಮ ಉಲ್ಲಂಘಿಸಿ ಚುನಾವಣೆಗೆ ಮುಂದಾದರೇ ಅಧಿಕಾರಿ? : ಆ.31 ರಂದು ಅಂಜುಮನ್ ಕಮೀಟಿ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ

ನಿಯಮ ಉಲ್ಲಂಘಿಸಿ ಚುನಾವಣೆಗೆ ಮುಂದಾದರೇ ಅಧಿಕಾರಿ? : ಆ.31 ರಂದು ಅಂಜುಮನ್ ಕಮೀಟಿ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ

ಮುದ್ದೇಬಿಹಾಳ : ಕರ್ನಾಟಕ ವಕ್ಭ್ ಕಾಯ್ದೆ 1995ರ ಸಂಬAಧಿತ ನಿಬಂಧನೆಗಳು ಹಾಗೂ ಕರ್ನಾಟಕ ರಾಜ್ಯ ವಕ್ಭ್ ನಿಯಮಗಳು 2017ರ ನಿಯಮ 25ರ ಅನ್ವಯ ವಿಜಯಪುರ ಜಿಲ್ಲಾ ವಕ್ಭ್ ಅಧಿಕಾರಿಗಳು ಅಂಜುಮನ್ ಕಮೀಟಿಯ ನೂತನ ಆಡಳಿತ ಮಂಡಳಿಯ ಅಧ್ಯಕ್ಷರು,ಉಪಾಧ್ಯಕ್ಷರು,ಕಾರ್ಯದರ್ಶಿಗಳು ಹಾಗೂ ಖಜಾಂಚಿಯ ಆಯ್ಕೆಗೆ ಹೊರಡಿಸಿರುವ ನೋಟಿಸ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಆಯ್ಕೆಯಾದ ಸದಸ್ಯರಿಗೆ ಅದ್ಯಕ್ಷ,ಉಪಾಧ್ಯಕ್ಷರ ಆಯ್ಕೆಗೆ ನಡೆಸುವ ಸಭೆಯನ್ನು ನಡೆಸಲು ನೋಟಿಸ್‌ನ್ನು ನೋಂದಾಯಿತ ಅಂಚೆ ಮೂಲಕ ಒಂದು ವಾರದ ಕಾಲಾವಕಾಶದಲ್ಲಿ ಕಳಿಸಬೇಕು

ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಸನ್ಮಾನ ;                                      ಎರಡು ತಿಂಗಳಲ್ಲಿ ಬಾಕಿ ಹಣ ಬಿಡುಗಡೆಗೆ ಕ್ರಮ-ಸಚಿವ ಜಾರಕಿಹೊಳಿ

ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಸನ್ಮಾನ ; ಎರಡು ತಿಂಗಳಲ್ಲಿ ಬಾಕಿ ಹಣ ಬಿಡುಗಡೆಗೆ ಕ್ರಮ-ಸಚಿವ ಜಾರಕಿಹೊಳಿ

ವಿಜಯಪುರ : ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆ ಸೇರಿದಂತೆ ಗುತ್ತಿಗೆದಾರರ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಈಡೇರಿಸುವುದಾಗಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ತಿಳಿಸಿದ್ದಾರೆ. ವಿಜಯಪುರ ನಗರದ ಜಿಲ್ಲಾ ಗುತ್ತಿಗೆದಾರರ ಸಂಘದ ನೂತನ ಕಟ್ಟಡ ಭೂಮಿ ಪೂಜೆ ಸಮಾರಂಭಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಭೇಟಿಯಾದ ವೇಳೆ ಮುದ್ದೇಬಿಹಾಳ ಮತಕ್ಷೇತ್ರದ ಕೊಣ್ಣೂರ ಗ್ರಾಮದ ಸಿಸಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿಗಾಗಿ ಸುಮಾರು ೨ಕೋಟಿ