Nagmohan Dasa Report Omission Corrected: Manjunath Chalavadi

ನಾಗಮೋಹನ್ ದಾಸ ವರದಿ ಲೋಪ ಸರಿಪಡಿಸಿ: ಮಂಜುನಾಥ ಛಲವಾದಿ

ನಾಗಮೋಹನ್ ದಾಸ ವರದಿ ಲೋಪ ಸರಿಪಡಿಸಿ: ಮಂಜುನಾಥ ಛಲವಾದಿ

ಮುದ್ದೇಬಿಹಾಳ : ನ್ಯಾ ನಾಗಮೋಹನ್ ದಾಸ್ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಛಲವಾದಿ (ಹೊಲಯ ) ಸಮುದಾಯಕ್ಕೆ ಅನ್ಯಾಯ ಮಾಡಿದೆ, ಸರಿಯಾದ ದತ್ತಂಶ ಸಂಗ್ರಹಿಸದೆ ಹಿಂದಿನ ವರದಿಯನ್ನೇ ಕಾಫಿ ಪೇಸ್ಟ್ ಮಾಡಲಾಗಿದೆ ಎಂದು ಛಲವಾದಿ ಸಮಾಜದ ರಾಜ್ಯ ಸಮಿತಿ ಸದಸ್ಯ ಮಂಜುನಾಥ್ ಛಲವಾದಿ(ಬಸರಕೋಡ) ಆರೋಪಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಛಲವಾದಿ ಸಮಾಜಕ್ಕೆ ಸೇರಿದ ಅನೇಕ ಉಪಜಾತಿಗಳನ್ನು ವಿಂಗಡಿಸಿ, ಜನಸಂಖ್ಯೆ ಕಡಿಮೆ ಆಗುವಂತೆ ಮಾಡಿದೆ, ಬಲಗೈ ಸಮುದಾಯದ ಛಲವಾದಿ, ಹೊಲಯ, ಹೊಲರ್, ಪರಯ್ಯ, ಚಾಂಡಲ, ವಿವಿಧ ಉಪಜಾತಿಗಳ್ಳನ್ನು ವಿಂಗಡಿಸಿ ಸಾಮಾಜಿಕ ಅನ್ಯಾಯ ಮಾಡಲಾಗಿದೆ, ಶತಮಾನದಿಂದ ಶೋಷಣೆಗೆ ಒಳಗಾದ ಸಮಾಜವನ್ನು ರಾಜಕೀಯವಾಗಿ ಮುಗಿಸುವ ಕೆಲಸ ಇದಾಗಿದೆ, ವರದಿಯಲ್ಲಿನ ಲೋಪಗಳನ್ನು ಸರಿಪಡಿಸಿ ಜಾರಿ ಮಾಡಬೇಕು ಇಲ್ಲವಾದರೆ ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕ ಕೇಂದ್ರಗಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಆದಿ ಕರ್ನಾಟಕ, ಆದಿ ದ್ರಾವಿಡ ಉಪಜಾತಿಗಳಲ್ಲಿ ಶೇಕಡಾ 85 ಕ್ಕೂ ಹೆಚ್ಚು ಹೊಲೆಯ ಜಾತಿಗೆ ಸೇರಿದ ಜನರಿದ್ದು ಅವರನ್ನು ವಿಂಗಡಣೆ ಮಾಡಿ ಸಾಮಾಜಿಕ ನ್ಯಾಯ ದೊರಕದಂತೆ ಮಾಡಲಾಗಿದೆ, ಛಲವಾದಿ, ಹೊಲಯ ಎರಡನ್ನು ಸೇರಿಸಿದರೆ ಕರ್ನಾಟಕದಲ್ಲಿ ಬಲಗೈ ಸಮುದಾಯದ ಜನಸಂಖ್ಯೆ ಹೆಚ್ಚಾಗಲಿದೆ, ಸಾಮಾಜಿಕ ನ್ಯಾಯದ ಸಲುವಾಗಿ ಬಲಗೈ ಸಮುದಾಯದ ನಿಖರ ಸಂಖ್ಯೆ ನಮೂದಿಸಿ 7% ಒಳ ಮೀಸಲಾತಿ ಕಲ್ಪಿಸಬೇಕು ಎಂದು ಅಗ್ರಹಿಸಿದ್ದಾರೆ.

Latest News

ಮುದ್ದೇಬಿಹಾಳ : ಮಳೆಗೆ 17 ಮನೆಗಳಿಗೆ ಭಾಗಶಃ ಹಾನಿ

ಮುದ್ದೇಬಿಹಾಳ : ಮಳೆಗೆ 17 ಮನೆಗಳಿಗೆ ಭಾಗಶಃ ಹಾನಿ

ಮುದ್ದೇಬಿಹಾಳ : ತಾಲ್ಲೂಕಿನಲ್ಲಿ ಕಳೆದ ಮೂರು ದಿನಗಳಿಂದ ವಿರಾಮ ನೀಡುತ್ತ ಸುರಿಯುತ್ತಿರುವ ಮಳೆಯಿಂದ ಆಸ್ತಿಪಾಸ್ತಿಗಳಿಗೆ

ಸುಮಾರು 6 ಕೀಲೋ ಮೀಟರ್ ವರೆಗೆ ನಿಂತ ವಾಹನ ದಟ್ಟನೆ

ಸುಮಾರು 6 ಕೀಲೋ ಮೀಟರ್ ವರೆಗೆ ನಿಂತ ವಾಹನ ದಟ್ಟನೆ

ತಾಳಿಕೋಟೆ: ಡೋಣಿ ನದಿಯ ಪ್ರವಾಹದಿಂದ ವಿಜಯಪುರ ರಸ್ತೆಯ ಕೆಳಮಟ್ಟದ ಸೇತುವೆ ಜಲಾವೃತವಾಗಿರುವದು ಒಂದು ಕಡೆಯಾದರೆ

ಟ್ರ್ಯಾಕ್ಟ‌ರ್ ಹಾಯ್ದು ಏಳು ವರ್ಷದ ಬಾಲಕಿ ಸಾವು

ಟ್ರ್ಯಾಕ್ಟ‌ರ್ ಹಾಯ್ದು ಏಳು ವರ್ಷದ ಬಾಲಕಿ ಸಾವು

ಮುಧೋಳ: ಎರಡು ಬೈಕ್‌ಗಳ ಮುಖಾಮುಖಿ ಡಿಕ್ಕಿಯಿಂದ ಕೆಳಗೆ ಬಿದ್ದ ಬಾಲಕಿ ಮೇಲೆ ಹಿಂದಿನಿಂದ ಟ್ರ್ಯಾಕ್ಟ‌ರ್

ಶಾಸಕ ನಾಡಗೌಡರಿಂದ ಭೂಮಿಪೂಜೆ: ಆರೋಗ್ಯ ಘಟಕ ಪ್ರಯೋಗಾಲಯ ಉದ್ಘಾಟನೆ

ಶಾಸಕ ನಾಡಗೌಡರಿಂದ ಭೂಮಿಪೂಜೆ: ಆರೋಗ್ಯ ಘಟಕ ಪ್ರಯೋಗಾಲಯ ಉದ್ಘಾಟನೆ

ಮುದ್ದೇಬಿಹಾಳ : ಪಟ್ಟಣದ ಸರ್ಕಾರಿ ಆಸ್ಪತ್ರೆಯ ನವೀಕರಣ ಕಾರ್ಯದ ಭೂಮಿಪೂಜೆ ಹಾಗೂ ತಾಲ್ಲೂಕು ಆಸ್ಪತ್ರೆಯ

ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಚಯಗಳ ಲೋಕಾರ್ಪಣೆ

ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಚಯಗಳ ಲೋಕಾರ್ಪಣೆ

ಸಿದ್ಲೀಪುರ(ಶಿವಮೊಗ್ಗ ಜಿಲ್ಲೆ) ಆಗಸ್ಟ್‌ 04: ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಎಸ್‌ ಲಾಡ್‌ ಅವರು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಶಿವಮೊಗ್ಗ ತಾಲೂಕಿನ ಸಿದ್ಲೀಪುರದಲ್ಲಿ ನಿರ್ಮಿಸಲಾದ ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಚಯಗಳನ್ನು ಇಂದು ಲೋಕಾರ್ಪಣೆಗೊಳಿಸಿ ಕಾರ್ಮಿಕರ ಬಳಕೆಗೆ ಅನುಕೂಲ ಮಾಡಿಕೊಟ್ಟರು. ಜಿಲ್ಲೆಯ ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದಲ್ಲಿ ವಲಸೆ ಕಾರ್ಮಿಕರು ಹಾಗೂ ಅವರ ಕುಟುಂಬದ ಅವಲಂಬಿತರು ಉಳಿದುಕೊಳ್ಳಲು ಈ ವಸತಿ

ಬಡವರ ಕೈಗೆ ಹಣ ಬಂದಾಗ ಮಾತ್ರ ದೇಶದ ಪ್ರಗತಿ: ಸಚಿವ ಲಾಡ್

ಬಡವರ ಕೈಗೆ ಹಣ ಬಂದಾಗ ಮಾತ್ರ ದೇಶದ ಪ್ರಗತಿ: ಸಚಿವ ಲಾಡ್

ಶಿವಮೊಗ್ಗ, ಆಗಸ್ಟ್ 04 : ಬಡವರ ಕೈಯಲ್ಲಿ ಹಣ ಬಂದಾಗ ಮಾತ್ರ ದೇಶದ ಪ್ರಗತಿಯಾಗಲಿದ್ದು, ಬಡವರಿಗಾಗಿ ರೂಪಿಸಿರುವ ಯೋಜನೆಗಳನ್ನು ಅವರಿಗೆ ಸಮರ್ಪಕವಾಗಿ ತಲುಪಿಸಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಅವರು ಕರೆ ನೀಡಿದರು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಇವರ ಸಹಯೋಗದೊಂದಿಗೆ ಸೋಮವಾರ