Sangappa Mante, a freedom fighter neglected by the government

ಸರಕಾರದ ನಿರ್ಲಕ್ಷಕ್ಕೊಳಗಾದ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ

ಸರಕಾರದ ನಿರ್ಲಕ್ಷಕ್ಕೊಳಗಾದ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ

ಕೊಡೇಕಲ್ : ‘ಬರೀ ಭ್ರಷ್ಟಾಚಾರ ಮರಾಯ, ನಾನು ಬ್ರಿಟಿಷ್ ಕಾಲದಲ್ಲಿ ಇಂತಹ ಅವ್ಯವಸ್ಥೆ ದುರಾಡಳಿತ ಕಂಡವನಲ್ಲ. ಆಧುನಿಕ ರಾಜಕೀಯ ಪರಿಸ್ಥಿತಿನೇ ಈಗಿದೇ ನನಗೆ ಈವರೆಗೂ ಸರಕಾರ ಯಾವ ಸೌಲಭ್ಯ ಕೊಡುತ್ತಿಲ್ಲ. ಸಮೀಪದ ಕೊಡೇಕಲ್ ಗ್ರಾಮದ ಸುಮಾರು 102 ವರ್ಷದ ನೇಕಾರಿಗೆ ವೃತ್ತಿಯ ಸಂಗಪ್ಪ ಮಂಟೆ ಅವರ ಮನದಾಳದ ಮಾತುಗಳಿವು.

ದೇಶಕ್ಕೆ ಹೆಸರಿಗೆ ಮಾತ್ರ ಸ್ವಾತಂತ್ರ್ಯ ಸಿಕ್ಕಂತಾಗಿದೆ. ಎಲ್ಲೆಂದರಲ್ಲಿ ನಾವೇ ಎನ್ನುವ ಟಿವಿಯ ಮಾತು. ಹಣ ಕೊಟ್ಟರೆ ಅಧಿಕಾರಿಗಳಿಂದ ಕೆಲಸ ಸಾಧ್ಯ. ಇವೆಲ್ಲ ನನಗೆ ಬೇಡ ಎಂದು ನಾನು ನನ್ನ ವೃತ್ತಿಯಲ್ಲಿದ್ದೇನೆ ಎನ್ನುವ ಸಂಗಪ್ಪ ಮಂಟೆ ಅವರು ನೊಂದುಕೊಂಡು ಬದುಕು ಕಟ್ಟಿಕೊಂಡಿದ್ದು ಇಂದಿಗೂ ಇಳಿ ವಯಸ್ಸಿನಲ್ಲಿ ಜಗ್ಗದೇ ನೇಕಾರಿಕೆ ಮಾಡುತ್ತಿದ್ದುದು ಅಚ್ಚರಿ ಮೂಡಿಸಿದೆ.

ಆಸರೆ ಇಲ್ಲ: ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದ ಮಂಟೆ ಅವರು ಸುಮಾರು 15 ವರ್ಷದವರಿದ್ದಾಗಲೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿಕೊಂಡಿದ್ದರು. ಮಂಟೆ ನೇರ ದಿಟ್ಟ ನಿರಂತರದ ವ್ಯಕ್ತಿತ್ವದವರು. ಸ್ವಾತಂತ್ರ್ಯಕ್ಕೋಸ್ಕರ ಪ್ರಾಣ ಬಿಟ್ಟವರಲ್ಲಿ ನಮ್ಮ ಭಾಗದಲ್ಲಿ ಅಂದಿನ ಗುಲಬರ್ಗಾ ಜೈಲಲ್ಲಿ 3 ತಿಂಗಳ ಕಾಲ ಕಳೆದಿದ್ದಾರೆ. ಬ್ರೀಟಿಷರು ಸಿಕ್ಕ ಸಿಕ್ಕವರ ಮನೆ ಮನೆಗಳಲ್ಲಿ ಹೊಕ್ಕು ಆಸ್ತಿ ಪಾಸ್ತಿ ಲೂಟಿ ಮಾಡಿದ್ದಲ್ಲದೇ ನಮ್ಮನ್ನು ಕಂಡು ಓಡಿ ಹೋದ ‘ರಜಾಕರು’ ಕ್ರೂರತನ ಮೆರೆದು ನಮ್ಮನ್ನು ಗುಲಾಮಗಿರಿ ಮಾಡಿಕೊಂಡಿದ್ದರು ಎನ್ನುತ್ತಾರೆ. ಆದರೂ ನಾ ಜಗ್ಗದೇ ಸುರುಪುರ ರಾಜಾ ವೆಂಕಟಪ್ಪ ನಾಯಕತ್ವದಲ್ಲಿ ಹೋರಾಡಿದ್ದು ನಿಜಕ್ಕೂ ಎದೆಗಾರಿಕೆಗೆ ಯಾವುದೂ ಸಾಟಿ ಇಲ್ಲದಂತೆ ಕತೆ ಬಿಚ್ಚಿಟ್ಟಿದ್ದಾರೆ.

ಕಾಗದ ಹಿಡಿದು ಅಲೆದಾಡಿದ್ದರು: ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಯವರನ್ನು ಭೇಟಿ ಮಾಡಿದ್ದ ಮಂಟೆ ಅವರು ಈಗಿನ ಅಧಿಕಾರಿಗಳು ರಾಜಕೀಯ ನಾಯಕರು ಅವರ ಮಾತುಗಳೇ ಬಂಡವಾಳ, ಯಾವದೇ ಸರಕಾರ ಅಥವಾ ಪಕ್ಷ ಒಳ್ಳೆಯದ್ದೇ ಇರುತ್ತೆ ಆದರೆ ಆಡಳಿತ ನಡೆಸೋರೇ ಭ್ರಷ್ಟರು, ಸ್ವತಂತ್ರ ಸಿಕ್ಕ ನಂತರ ಸೌಲಭ್ಯಗಳು ಸಿಗಬಹುದು ಎಂದು ದಾಖಲೆಗಳನ್ನು ಹಿಡಿದು ಅಲೆದಾಡಿದೆ. ಎಲ್ಲೆ ಹೋದರೂ ಲಂಚವೇ ಕೇಳಿ ಬಂದಿತು. ಈಗ ಮಾಸಿಕ 10 ಸಾವಿರ ಹೊರತು ಈವರೆಗೂ ಆಸರೆ ಮನೆ ಅಥವಾ ನನ್ನ ಕಾಯಕದ ನೇಕಾರಿಕೆಗೆ ಸಂಬಂಧಿಸಿದ ಯಾವದೇ ಸೌಲಭ್ಯ ಕೊಡಲು ಭ್ರಷ್ಟ ಅಧಿಕಾರಿಗಳು ಮುಂದೆ ಬರಲಿಲ್ಲ. ಒಂದು ಮನೆ ಕೇಳಿದರೆ 20 ಸಾವಿರ ಕೇಳುತ್ತಾರೆ ಯಾಕೆ ಹಣ ಕೊಡಬೇಕು ಎನ್ನುತ್ತಾರೆ ಹೋರಾಟಗಾರ ಸಂಗಪ್ಪ ಮಂಟೆ.

ಜಿಲ್ಲಾ ವರದಿಗಾರ : ಶಿವು ರಾಠೋಡ ಯಾದಗಿರಿ

Latest News

ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರ: ಕಲ್ಲಪ್ಪ ಜಂಜಿಗಡ್ಡಿ

ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರ: ಕಲ್ಲಪ್ಪ ಜಂಜಿಗಡ್ಡಿ

ನಾರಾಯಣಪುರ : ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರವಾಗಿದೆ ಎಂದು ಕೊಡೇಕಲ್ ಉಪತಶೀಲ್ದಾರ ಕಲ್ಲಪ್ಪ

ಸರಕಾರದ ನಿರ್ಲಕ್ಷಕ್ಕೊಳಗಾದ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ

ಸರಕಾರದ ನಿರ್ಲಕ್ಷಕ್ಕೊಳಗಾದ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ

ಕೊಡೇಕಲ್ : ‘ಬರೀ ಭ್ರಷ್ಟಾಚಾರ ಮರಾಯ, ನಾನು ಬ್ರಿಟಿಷ್ ಕಾಲದಲ್ಲಿ ಇಂತಹ ಅವ್ಯವಸ್ಥೆ ದುರಾಡಳಿತ

ತ್ರಿವೇಣಿ ಶಿಕ್ಷಣ ಸಂಸ್ಥೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ತ್ರಿವೇಣಿ ಶಿಕ್ಷಣ ಸಂಸ್ಥೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

​ ಮುಧೋಳ : ದೇಶಾಭಿಮಾನ ಪ್ರತಿಯೊಬ್ಬರಲ್ಲಿ ಸ್ವಪ್ರೇರಣೆಯಿಂದ ಮೂಡಿದಾಗ ಮಾತ್ರ ದೇಶ ಅಭಿವೃದ್ಧಿಯತ್ತ ಸಾಗಲು

ಮಕ್ಕಳ ಮನಸ್ಸಿನಲ್ಲಿ ದೇಶಪ್ರೇಮದ ಬೀಜ ಬಿತ್ತಿ : ಅಶೋಕ ಮಣಿ

ಮಕ್ಕಳ ಮನಸ್ಸಿನಲ್ಲಿ ದೇಶಪ್ರೇಮದ ಬೀಜ ಬಿತ್ತಿ : ಅಶೋಕ ಮಣಿ

ಮುದ್ದೇಬಿಹಾಳ : ಮಕ್ಕಳ ಮನಸ್ಸಿನಲ್ಲಿ ಬಾಲ್ಯದಿಂದಲೇ ದೇಶಪ್ರೇಮದ ಬೀಜ ಬಿತ್ತಿ ಅವರನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ

ಬೆಳೆ ಸಮೀಕ್ಷೆದಾರರಿಗೆ ಕಿಟ್ ವಿತರಣೆ

ಬೆಳೆ ಸಮೀಕ್ಷೆದಾರರಿಗೆ ಕಿಟ್ ವಿತರಣೆ

ಮುದ್ದೇಬಿಹಾಳ : ರೈತರ ಬೆಳೆದ ಬೆಳೆ ವಿವರಗಳನ್ನು ದಾಖಲಿಸುವಲ್ಲಿ ಬೆಳೆಯ ಸಮೀಕ್ಷೆದಾರರ ಪಾತ್ರವು ಅತಿ ಮುಖ್ಯವಾಗಿದ್ದು ಅವರ ಬೇಡಿಕೆಯಂತೆ ಐಡಿ ಕಾರ್ಡ್ ಹಾಗೂ ಕಿಟ್ ವಿತರಿಸಲಾಗಿದೆ ಎಂದು ತಹಸೀಲ್ದಾರ್ ಕೀರ್ತಿ ಚಾಲಕ್ ತಿಳಿಸಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೈತರ ಹಾಗೂ ಸರ್ಕಾರದ ಪ್ರತಿನಿಧಿಯಾಗಿ ಈ ಬೆಳೆ ಸಮೀಕ್ಷೆದಾರರು ಕಾರ್ಯನಿರ್ವಹಿಸಲಿದ್ದಾರೆ ಎಂದರು. ಸಹಾಯಕ ಕೃಷಿ ನಿರ್ದೇಶಕ ಎಸ್. ಡಿ. ಭಾವಿಕಟ್ಟಿ, ಕೃಷಿ ಅಧಿಕಾರಿಗಳಾದ ಗೋವಿಂದರೆಡ್ಡಿ

ಬಲಗೈ ಸಮುದಾಯದಿಂದ ಪ್ರತಿಭಟನೆ ನ್ಯಾ. ನಾಗಮೋಹನ್‌ದಾಸ್ ವರದಿ ತಿರಸ್ಕರಿಸಲು ಆಗ್ರಹ

ಬಲಗೈ ಸಮುದಾಯದಿಂದ ಪ್ರತಿಭಟನೆ ನ್ಯಾ. ನಾಗಮೋಹನ್‌ದಾಸ್ ವರದಿ ತಿರಸ್ಕರಿಸಲು ಆಗ್ರಹ

ಮುದ್ದೇಬಿಹಾಳ : ಕುಲಶಾಸ್ತ್ರಿಯ ಅಧ್ಯಯನದ ಕೊರತೆ, ಬಲಗೈ ಸಮುದಾಯದ ವಿರುದ್ಧ ದ್ವೇಷಪೂರಿತ ನಿರ್ಧಾರವಾಗಿರುವ ಒಳಮೀಸಲಾತಿ ಕೊಡುವ ಹಿನ್ನೆಲೆಯಲ್ಲಿ ನ್ಯಾ. ನಾಗಮೋಹನದಾಸ್ ನೀಡಿರುವ ವರದಿಯನ್ನು ಸರ್ಕಾರ ಅಂಗೀಕರಿಸಬಾರದು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ತಾಲ್ಲೂಕು ಒಕ್ಕೂಟದ ನೇತೃತ್ವದಲ್ಲಿ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಅಂಬೇಡ್ಕರ್ ಸರ್ಕಲ್‌ದಿಂದ ಆರಂಭಗೊಂಡ ಪ್ರತಿಭಟನೆ ಸಂಗೊಳ್ಳಿ ರಾಯಣ್ಣ ವೃತ್ತ, ಬಸವೇಶ್ವರ ವೃತ್ತ, ತಹಸೀಲ್ದಾರ್ ಕಚೇರಿಗೆ ಆಗಮಿಸಿತು. ಮುಖಂಡ ಹರೀಶ ನಾಟೀಕಾರ, ಚೆನ್ನಪ್ಪ ವಿಜಯಕರ್