Rampur Public Fund Festival Committee completes 58 years

ರಾಂಪುರ ಸಾರ್ವಜನಿಕ ಗಜಾನನ ಉತ್ಸವ ಸಮಿತಿಗೆ 58 ವರ್ಷ ಭರ್ತಿ

ರಾಂಪುರ ಸಾರ್ವಜನಿಕ ಗಜಾನನ ಉತ್ಸವ ಸಮಿತಿಗೆ 58 ವರ್ಷ ಭರ್ತಿ

ಮುಧೋಳ : ರನ್ನನಗರಿ ಮುಧೋಳದ ಗಣೇಶ ಉತ್ಸವಕ್ಕೆ ತನ್ನದೆಯಾದ ಇತಿಹಾಸ ಇದೆ. 58 ವರ್ಷಗಳ ಹಿಂದೆ ಕೆಲವು ಸಮಾನ ಮನಸ್ಕರು ಸೇರಿ ಮೊದಲ ಭಾರಿಗೆ ಇಲ್ಲಿನ ರಾಂಪುರ ಗಲ್ಲಿಯಲ್ಲಿ ಹಿಂದು ಧರ್ಮ ಜಾಗೃತಿಗಾಗಿ ಸಾರ್ವಜನಿಕ ಗಣೇಶ ಉತ್ಸವ ಪ್ರಾರಂಭವಾಗಿದ್ದು ಒಂದು ವರ್ಷವೂ ಬಿಡದೆ ನಡೆದುಕೊಂಡು ಬಂದ ನಗರದ ಮೊದಲ ಮಹಾಗಣಪತಿ ಉತ್ಸವ ಇದಾಗಿದೆ.

ನಗರಕ್ಕೂ ಪಕ್ಕದ ಮಹಾರಾಷ್ಟ್ರದ ಕೆಲವು ನಗರಗಳಿಗೂ ಆರ್ಥಿಕ, ಸಾಮಾಜಿಕ, ಕೌಟಿಂಬಿಕ, ಧಾರ್ಮಿಕ ಅವಿನಾಭಾವ ಸಂಬಂಧಗಳಿಂದ ಇಲ್ಲಿ ಹೆಚ್ಚಾಗಿ ಮರಾಠಿ ಭಾಷಿಕರು ಹೆಚ್ಚಾಗಿದ್ದ ಸಮಯವದು, ನಗರದಿಂದ ಇಬ್ಬರು ವ್ಯಕ್ತಿಗಳು ಪ್ರತಿನಿತ್ಯ ಪುಣೆ ನಗರಕ್ಕೆ ವಿವಿದ ವಾಣಿಜ್ಯ ಸಾಮಗ್ರಿಗಳನ್ನು ಸಾಗಿಸಲು ಟ್ರಕ್ ಚಾಲಕರಾಗಿ ಕಾಯಕ ಮಾಡುವಾಗ ಮಹಾರಾಷ್ಟ್ರದ ಪುಣೆ ನಗರದಲ್ಲಿ ಭಾರಿ ಪ್ರಮಾಣದ ಸಾರ್ವಜನಿಕ ಗಣೇಶೋತ್ಸವ ನೋಡಿ ಬಂದು ನಮ್ಮೂರಲ್ಲಿ ಯಾಕೆ ಮಾಡಬಾರದು ಎಂದು ತಿರ್ಮಾನಿಸಿ ಪ್ರಾರಂಭಿಸಿದ ಸಾರ್ವಜನಿಕ ಗಜಾನನ ಉತ್ಸವ ಸಮಿತಿಯ ಗಣೇಶನೇ ಮುಧೋಳದ ಪ್ರಪ್ರಥಮ ಸಾರ್ವಜನಿಕ ಗಣಪತಿ.

ಕೇವಲ ಕೆಲವು ಸಮುದಾಯದ ಮನೆಗಳಲ್ಲಿ ಮಾತ್ರ ಪ್ರತಿಷ್ಠಾಪನೆ ಮಾಡುವ ಈ ಸಂಪ್ರದಾಯವನ್ನು ಪ್ರಪ್ರಥಮವಾಗಿ ಸಾರ್ವಜನಿಕವಾಗಿ 1968ರಲ್ಲಿ ಪ್ರಾರಂಭಿಸಲಾಯಿತು. ಸ್ವಾತಂತ್ರ್ಯ ಪೂರ್ವದಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದ ಸಾರ್ವಜನಿಕ ಗಣೇಶ ಉತ್ಸವ ನಂತರ ಕಡಿಮೆಯಾಗಿ ನಂತರ ಅರವತ್ತರ ದಶಕದಲ್ಲಿ ಮತ್ತೆ ಪ್ರಾರಂಭವಾಯಿತು. ಅಂತಹ ಸಮಯದಲ್ಲಿ ಮೊದಲಿನಿಂದಲು ಹಿಂದು ಸಂಪ್ರದಾಯ, ಸಂಸ್ಕೃತಿಗೆ ಹೆಚ್ಚು ಪ್ರಾದ್ಯಾನ್ಯತೆ ಕೊಡುತ್ತಿದ್ದ ಮುಧೋಳ ಸಂಸ್ಥಾನದ ಬಾಜಿರಾವ್, ವೆಂಕಟೇಶ, ಮಾಲೋಜಿರಾವ್ ಘೋರ್ಪಡೆ ರಾಜರ ಕುಟುಂಬ ಸ್ವತಂತ್ರ್ಯ ನಂತರವೂ ಈ ತರಹದ ಸಂಪ್ರದಾಯಕ್ಕೆ ಆಧ್ಯತೆ ನೀಡುತ್ತಾ ಬಂದಿದೆ.

ಇತಿಹಾಸ: ಟ್ರಕ್ ಚಾಲಕರಾಗಿದ್ದ ಇಬ್ಬರನ್ನು ಕರೆದುಕೊಂಡು ಮಹಾರಾಷ್ಟದ ಪುಣೆ ನಗರದಲ್ಲಿ ಗಣೇಶ ಉತ್ಸವ ನೋಡಿಕೊಂಡು ಬಂದ ರಾಂಪುರ ಗಲ್ಲಿಯ ಬ್ರಾಹ್ಮಣ ಹಾಗೂ ಮರಾಠಾ ಸಮುದಾಯ ಜೊತೆಗೆ ಇತರ ಹಿಂದು ಮುಖಂಡರು 1968ರಲ್ಲಿ ಪ್ರಥಮ ಭಾರಿಗೆ ಸಾರ್ವಜನಿಕ ಗಜಾನನ ಉತ್ಸವ ಸಮಿತಿ ಸ್ಥಾಪನೆ ಮಾಡಿ ಗಣೇಶ ಉತ್ಸವವನ್ನು ಬಹು ವಿಜೃಂಭಣೆಯಿಂದ ಪ್ರಾರಂಭಿಸಿದರು. ಮೊದಲ ವರ್ಷ ಐದು ದಿನದ ಗಣೇಶನನ್ನು ಪ್ರತಿಷ್ಠಾಪನೆ ಮಾಡಿ ವಿಸರ್ಜನೆ ಸಲುವಾಗಿ ಮುಷ್ಟಾನ ಭೋಜನವನ್ನು ಸಾರ್ವಜನಿಕರಿಗೆ ದಾರಿ ಹೋಕರಿಗೆ ಹಾಕಿ ಖ್ಯಾತಿ ಪಡೆದ ಈ ಸಮಿತಿ ಅಂದಿನಿಂದ ಇಂದಿನವರೆಗೆ ಏಳು ದಿನದ ಗಣೇಶ ಉತ್ಸವದ ವಿಸರ್ಜನ ಮುಂಚೆ ಅದೇ ಮೃಷ್ಠಾನ್ನ ಭೋಜವನನ್ನು ಹಾಕುತ್ತಾ ಬಂದಿದ್ದಾರೆ. ಈ ಗಣೇಶ ಉತ್ಸವದಲ್ಲಿ ಪ್ರಸಾದ ಸವಿಯದ ಮುಧೋಳಿಗರು ಇಲ್ಲ, ಎನ್ನಬಹುದಾದಷ್ಟು ಇಲ್ಲಿನ ಪ್ರಸಾದ ವ್ಯವಸ್ಥೆ ಅಚ್ಚುಕಟ್ಟಾಗಿ ಇರುತ್ತದೆ.

ಮಹಾರಾಷ್ಟ್ರದ ಸಂಪ್ರದಾಯ ಹಾಗೂ ಸಂಘಟನೆ ಮತ್ತು ಹಿಂದು ಧರ್ಮದ ಉಳಿವಿಗಾಗಿ ಸ್ಥಾಪನೆಯಾದ ಈ ಗಣೇಶ ಉತ್ಸವ ಸಮಿತಿ ಅದರಂತೆ ಆ ಉದ್ದೇಶ ಈಡೇರಿಕೆಗಾಗಿ ಸಾಕಷ್ಟು ಯತ್ನಗಳು ನಡೆಯುತ್ತಾ ಬಂದಿವೆ. ಹೀಗಾಗಿ ಈ ಗಣೇಶ ಎಲ್ಲರಿಗೂ ಮಾದರಿಯಾಗಿದ್ದಾನೆ. ಜೊತೆಗೆ ತೆರಬಂಡಿ, ವಿದ್ಯಾರ್ಥಿಗಳ ನೃತ್ಯ, ಮೊಸರು ಗಡಿಗೆ ಒಡೆಯುವ ಸ್ಪರ್ಧೆ ಸೇರಿದಂತೆ ಐವತ್ತು ವರ್ಷ ಮೇಲ್ಪಟ್ಟ ಹಿರಿಯರಿಗೆ ಸೈಕಲ್ ಸ್ಪರ್ಧೆಗಳನ್ನು ಆಯೋಜನೆ ಮಾಡಿದ್ದು ಐವತ್ತನೆಯ ವರ್ಷದ ಸಂಭ್ರಮಾಚರಣೆಯಲ್ಲಿ ಲೋಗೋ ಬಿಡುಗಡೆ ಕಾರ್ಯ ಪ್ರಾರಂಭವಾಗಿದ್ದು ಅಂದಿನಿಂದ ಇಂದಿನವರೆಗೆ ಮುಂಚಿತವಾಗಿ ಲೋಗೋ ಬಿಡುಗಡೆ ಕಾರ್ಯಕ್ರಮ ಜರುತ್ತದೆ. ಮುಂಬೈದಲ್ಲಿನ ಲಾಲಬಾಗ್ ರಾಜಾ ರೀತಿಯಲ್ಲಿ ಇಲ್ಲಿ ಡಬಲ್ ಶೇಟ್ ಗಣೇಶ ಸ್ಥಾಪನೆ ಸಾಮಾನ್ಯವಾಗಿದೆ.

ಸಂಘಟಿಕರು, ರಾಂಪುರ ಗಲ್ಲಿಯಲ್ಲಿ ಎಲ್ಲರೂ ವಿದ್ಯಾವಂತರಾಗಿದ್ದರಿಂದ ಈ ಉತ್ಸವವನ್ನು ದಾಖಲಿಸಿ ಇಂದಿನವರೆಗೆ ನಡೆಸಿಕೊಂಡು ಬಂದಿರುವ ಅಣ್ಣಾರಾವ್ ಭಕ್ಷಿ, ಭೀಮರಾವ್ ಟಂಕಸಾಲಿ, ಮಾಧವರಾವ್ ಮಸೂರಕರ, ಬಾಬುರಾವ ಮಾನೆ, ಶಂಕರ ಘೋರ್ಫಡೆ, ರಾಘವೇಂದ್ರ ಭಕ್ಷಿ, ಡಾ.ಜಿ.ಎಸ್..ಬೀಡೆ, ಮಾಜಿ ಎಂ.ಪಿ ಎಸ್. ಟಿ. ಪಾಟೀಲ್ ರತ್ನಾಕರ ಮಸೂರಕರ ಅಂದು ಪ್ರಾರಂಭಿಸಿದ ಗಣೇಶ ಉತ್ಸವವನ್ನು ಅವರ ಕುಟುಂಬಸ್ತರು ಇಂದಿಗೂ ಈ ಗಲ್ಲಿಯ ಮುಖಂಡರು ಯುವಕರು ಅಚ್ಚುಕಟ್ಟಾಗಿ ನೆರವೇರಿಸಿಕೊಂಡು ಬಂದಿರುತ್ತಾರೆ.

“ಹಿಂದು ಸಂಪ್ರದಾಯ,ಸಂಸ್ಕೃತಿ ಉಳಿದು ಬೆಳೆಯುವ ಸದುದ್ದೇಶದಿಂದ ಕಳೆದ ೫೮ ವರ್ಷಗಳಿಂದ ಈ ಗಣೇಶ ಉತ್ಸವ ಸಮಿತಿ ಕಾರ್ಯ ಮಾಡಿ ರಾಜ್ಯ ಮಟ್ಟದ ತೆರಬಂಡಿ,ಸೈಕಲ್ ರೇಶ ಸ್ಪರ್ಧೆಗನ್ನು ಆಯೋಜನೆ ಮಾಡುತ್ತಾ ಬಂದಿದೆ”
ವಸಂತ ಮಾನೆ
ವೆಂಕಟೇಶ ಗುಡೆಪ್ಪನವರ

Latest News

ಎಲ್ಲೆಡೆ ಶಾಲಾ ಆರಂಭೋತ್ಸವ:                                            ಎತ್ತಿನ ಬಂಡಿಯಲ್ಲಿ ಮಕ್ಕಳ ಮೆರವಣಿಗೆಯ ಮೆರಗು

ಎಲ್ಲೆಡೆ ಶಾಲಾ ಆರಂಭೋತ್ಸವ: ಎತ್ತಿನ ಬಂಡಿಯಲ್ಲಿ ಮಕ್ಕಳ ಮೆರವಣಿಗೆಯ ಮೆರಗು

ಮುದ್ದೇಬಿಹಾಳ : ಬೇಸಿಗೆ ರಜೆ ಕಳೆದು ಶಾಲಾ ಮಕ್ಕಳು ಇನ್ನು ಮುಂದೆ ಶೈಕ್ಷಣಿಕ ಚಟುವಟಿಕೆಗಳಲ್ಲಿ

ಮುದ್ದೇಬಿಹಾಳ : ಗುಡಿಮನಿಗೆ ತಾಪಂ ಅಧಿಕಾರಿಗಳ ಸನ್ಮಾನ

ಮುದ್ದೇಬಿಹಾಳ : ಗುಡಿಮನಿಗೆ ತಾಪಂ ಅಧಿಕಾರಿಗಳ ಸನ್ಮಾನ

ಮುದ್ದೇಬಿಹಾಳ : ತಾಲ್ಲೂಕಿನ ಢವಳಗಿ ಗ್ರಾಮ ಪಂಚಾಯತಿಯ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಎಂ.ಕೆ.

ಡಿಸೇಲ್,ಪೆಟ್ರೋಲ್‌ಗಾಗಿ ಪರದಾಟ:                                       ಖಾಲಿ ಕ್ಯಾನ್‌ಗಳೊಂದಿಗೆ ಬಂಕ್‌ಗಳ ಮುಂದೆ ಸಾಲುದ್ದ ಕ್ಯೂ

ಡಿಸೇಲ್,ಪೆಟ್ರೋಲ್‌ಗಾಗಿ ಪರದಾಟ: ಖಾಲಿ ಕ್ಯಾನ್‌ಗಳೊಂದಿಗೆ ಬಂಕ್‌ಗಳ ಮುಂದೆ ಸಾಲುದ್ದ ಕ್ಯೂ

ಮುದ್ದೇಬಿಹಾಳ : ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಣಾಮ ಈ ಭಾಗದಲ್ಲೂ ಎಫೆಕ್ಟ್ ಆಗಿದ್ದು ಡಿಸೇಲ್,ಪೆಟ್ರೋಲ್‌ಗಾಗಿ ಗ್ರಾಹಕರು

Muddebihal Cricket : ಆರ್.ಕೆ.ರಾಕೇಟ್ ಬೂದಿಹಾಳ ತಂಡಕ್ಕೆ ಎಂ.ಬಿ.ಎಲ್ ಗ್ರೂಪ್ ಪ್ರಶಸ್ತಿ

Muddebihal Cricket : ಆರ್.ಕೆ.ರಾಕೇಟ್ ಬೂದಿಹಾಳ ತಂಡಕ್ಕೆ ಎಂ.ಬಿ.ಎಲ್ ಗ್ರೂಪ್ ಪ್ರಶಸ್ತಿ

ಮುದ್ದೇಬಿಹಾಳ : ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಎಂ.ಬಿ.ಎಲ್.ಗ್ರೂಪ್ ನಿಂದ ಆಯೋಜಿಸಿದ್ದ ಹಾರ್ಡ್ ಟೆನ್ನಿಸ್

ಅಧ್ಯಕ್ಷರಾಗಿ ಬಿ.ಎಚ್.ಮುದ್ನೂರ ಪುನರಾಯ್ಕೆ:            ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷರಾಗಿ ಬಿ.ಎಚ್.ಮುದ್ನೂರ ಪುನರಾಯ್ಕೆ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸನ್ 2026-31ನೇ ಅವಧಿಗೆ ತಾಲ್ಲೂಕಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ಸಂಘದ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಬಿ.ಎಚ್.ಮುದ್ನೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಪ್ರಧಾನ ಕಾರ್ಯದರ್ಶಿಗಳಾಗಿ ನಾಗಪ್ಪ ತುರಡಗಿ,ಖಜಾಂಚಿಯಾಗಿ ಭರತೇಶ ಹೊಳಿ, ಉಪಾಧ್ಯಕ್ಷರಾಗಿ ಶಾಂತಪ್ಪ ಬಿರಾದಾರ,ರೇಣುಕಾ ಹಿರೇಮಠ,ಸಹ ಕಾರ್ಯದರ್ಶಿಯಾಗಿ ಈರಯ್ಯ ಹಿರೇಮಠ,ಶೈಲಾ ಗೊಂಗಡಿ,ಸAಘಟನಾ ಕಾರ್ಯದರ್ಶಿಗಳಾಗಿ ಬಸನಗೌಡ ಭಗವತಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಎಸ್.ಕವಡಿಮಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಗರಬೆಟ್ಟದಲ್ಲಿ ಜೂನ್ ಮೊದಲ ವಾರದಲ್ಲಿ ಹೋರಾಟ ನಡೆಸಲು ನಿರ್ಧಾರ

ನಾಗರಬೆಟ್ಟದಲ್ಲಿ ಜೂನ್ ಮೊದಲ ವಾರದಲ್ಲಿ ಹೋರಾಟ ನಡೆಸಲು ನಿರ್ಧಾರ

ಮುದ್ದೇಬಿಹಾಳ : ನಾಗರಬೆಟ್ಟ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಹರಿಸಲು ಆಗ್ರಹಿಸಿ ಜೂನ್ ಮೊದಲ ವಾರದಿಂದ ನಾಗರಬೆಟ್ಟದಲ್ಲಿ ರೈತರೊಡಗೂಡಿ ಹೋರಾಟ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು. ತಾಲ್ಲೂಕಿನ ನಾಗರಬೆಟ್ಟದ ಮಾರುತೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ನಡೆದ ರೈತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ದಶಕದಿಂದ ಈ ನೀರಾವರಿ ಯೋಜನೆಯಡಿ ಹೊಲಗಳಿಗೆ ನೀರು ಹರಿದಿಲ್ಲ.ರಾಜಕಾರಣಿಗಳ