A life without sports is like a fruit eaten by an insect - A.C. Kerura

ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ – ಎ.ಸಿ.ಕೆರೂರ

ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ – ಎ.ಸಿ.ಕೆರೂರ

ಅಡವಿ ಹುಲಗಬಾಳ : ಅಹಿಲ್ಯದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆ ಅಡವಿ ಹುಲುಗಬಾಳದಲ್ಲಿ 2025-26 ನೇ ಸಾಲಿನ ನಾಲತವಾಡ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟವು ಜರುಗಿದವು. ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ, ಮನುಷ್ಯ ಸದೃಢವಾಗಿ ಇರಬೇಕೆಂದರೆ ಪ್ರತಿದಿನ ಯೋಗ, ಕ್ರೀಡೆಯಲ್ಲಿ ಭಾಗವಹಿಸುವುದು ಅತಿ ಮುಖ್ಯ, ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ಎನ್ನುವಂತೆ, ದೇಹವನ್ನು ದಂಡಿಸಿದಾಗ ಮಾತ್ರ ಆರೋಗ್ಯದಿಂದಿರಲು ಸಾಧ್ಯ.

ಈಗ ಎಲ್ಲರೂ ಯಂತ್ರಗಳಿಗೆ ಮೊರೆ ಹೋಗುವುದರಿಂದ ದೇಹವನ್ನು ದಂಡಿಸಲು ಆಗುತ್ತಿಲ್ಲ. ಹಾಗಾಗಿ ರೋಗ-ರುಜಿನುಗಳಿಗೆ ಅಣಿ ಆಗುತ್ತಿದ್ದಾನೆ. ಸೋಲು ಗೆಲುವನ್ನು ಸಮಾನತೆಯಿಂದ ಕಾಣುವ ಗುಣವನ್ನು ಹೊಂದಿರಬೇಕು. ಕ್ರೀಡಾಪಟುಗಳೊಂದಿಗೆ ಬಂದಂತಹ ಹಿತೈಷಿಗಳು ಯಾವುದೇ ರೀತಿಯಾಗಿ ಜಗಳಕ್ಕೆ ಅಣಿಯಾಗದಂತೆ, ಕ್ರೀಡೆಯಲ್ಲಿ ಭಾಗವಹಿಸಬೇಕು. ಈ ವರ್ಷ ಅರ್ಹತಾ ಪ್ರಮಾಣ ಪತ್ರವನ್ನು ಆನ್ಲೈನ್ ಮುಖಾಂತರವಾಗಿ ತೆಗೆದುಕೊಳ್ಳುತ್ತಿರುವುದರಿಂದ ಬೇರೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಕ್ರೀಡಾಕೂಟದಲ್ಲಿ ಭಾಗವಹಿಸಲು ಕಡಿವಾಣವನ್ನು ಸರಕಾರ ಹಾಕಿದ್ದು ತುಂಬಾ ಸಂತೋಷ. ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ನಿರ್ಣಾಯಕರು ಕೊಟ್ಟಂತಹ ನಿರ್ಣಯಗಳಿಗೆ ಬದ್ಧರಾಗಬೇಕು. ನಿರ್ಣಾಯಕರು ಸಹ ನೀಡುವ ತೀರ್ಪು ಎಲ್ಲರೂ ಒಪ್ಪುವಂತಿರಬೇಕು. ಒಳ್ಳೆಯ ಮತ್ತು ನೈಜ ಪ್ರತಿಭಾವಂತ ಕ್ರೀಡಾಪಟುಗಳನ್ನು ವಲಯ, ತಾಲೂಕು, ಜಿಲ್ಲಾ , ವಿಭಾಗ, ರಾಜ್ಯ ಮಟ್ಟಕ್ಕೆ ಕಳಿಸುವರು ನಾವು ಆಗಬೇಕು. ಆಡಿಸುವರ ಕಣ್ಣು ಎರಡು ಆದರೆ ನೋಡುವವರ ಕಣ್ಣು ನೂರಾರು ಆಗಿರುತ್ತವೆ, ಹಾಗಾಗಿ ತೀರ್ಪು ನ್ಯಾಯ ಸಮ್ಮತವಾಗಿರಬೇಕು ಎಲ್ಲ ಮಕ್ಕಳು ನಮ್ಮ ಶಾಲೆಯ ಮಕ್ಕಳು ಎಂದು ನಿರ್ಣಯವನ್ನು ನೀಡಬೇಕು ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸರ್ಕಾರಿ ಗ್ರೇಡ್ -1 ದೈಹಿಕ ಶಿಕ್ಷಕರ ಸಂಘ,ಮುದ್ದೇಬಿಹಾಳ ಅಧ್ಯಕ್ಷರಾದ ಎ.ಸಿ.ಕೆರೂರ ಹೇಳಿದರು.
ಇನ್ನೋರ್ವ ಅತಿಥಿಯಾಗಿ ಆಗಮಿಸಿದ್ದ ರಾಹುತ ಪೂಜಾರಿ ಅಧ್ಯಕ್ಷರು ದೈ.ಶಿ.ಶಿ. ಸಂಘ ತಾಳಿಕೋಟೆ ಎಲ್ಲಿ ಕ್ರೀಡಾಂಗಣಗಳು ಕ್ರೀಡಾಪಟುಗಳಿಂದ ತುಂಬಿರುತ್ತವೆ ಆ ಊರಲ್ಲಿ ಆಸ್ಪತ್ರೆಗಳು ಖಾಲಿ ಖಾಲಿ ಇರುತ್ತವೆ, ಕ್ರೀಡೆ, ಕ್ರೀಡಾ ಸ್ಪೂರ್ತಿಯಿಂದ ನ್ಯಾಯಯುತವಾಗಿ ಮಾಡಬೇಕು, ಆಟದಿಂದ ನಾಯಕತ್ವವನ್ನು ಹೊಂದಾಣಿಕೆ ಗುಣ ಬೆಳೆಸಿಕೊಳ್ಳಬೇಕು ಹೊರತು ಸಿಟ್ಟು, ದ್ವೇಷ, ಗುಣದಿಂದ ದೂರ ಇರಬೇಕು.

ಈ ವಲಯದ ಕ್ರೀಡಾಪಟುಗಳು ರಾಜ್ಯಮಟ್ಟದವರೆಗೆ ಆಡಿ ನಮ್ಮ ವಲಯದ ಕೀರ್ತಿಯನ್ನು ತರಬೇಕು ಎಂದು ಅಧ್ಯಕ್ಷತೆ ವಹಿಸಿದ ಕಿರಣ್ ಮದರಿ , ಅಧ್ಯಕ್ಷರು ಅಹಿಲ್ಯ ದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆ ಅಡವಿ ಹುಲಗಬಾಳ ಶುಭವನ್ನು ಕೋರಿದರು . ಕ್ರೀಡಾ ಧ್ವಜಾರೋಹಣವನ್ನು ಅಂಬರೀಶ್ ಮದರಿ, ನಿರ್ದೇಶಕರು ಅಹಿಲ್ಯ ದೇವಿ ಶಿಕ್ಷಣ ಸಂಸ್ಥೆ ಅಡವಿ ನಿರ್ವಹಿಸಿದರು, ವೇದಿಕೆ ಮೇಲಿದ್ದ ಕಿರಣ್ ಮದರಿ , ಎ.ಸಿ.ಕೆರೂರ, ಎಂ.ಎಸ್.ಗುಡಗುಂಟಿ ಮುಖ್ಯ ಗುರುಗಳು ಸರ್ಕಾರಿ ಪ್ರೌಢಶಾಲೆ ಅಡವಿ ಹುಲುಗಬಾಳ, ಬಿ.ಬಿ.ಪೂಜಾರಿ, ರಾಹುತ್ ಪೂಜಾರಿ, ಮಲ್ಲಿಕಾರ್ಜುನ ರಾಯಗೊಂಡ, ಪಾರಿವಾಳಗಳನ್ನು ಹಾರಿ ಬಿಡುವುದರಿಂದ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು .
ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಶ್ರೀಮತಿ.ರೇಖಾ ಹಿರೇಮಠ, ಸ್ವಾಗತವನ್ನು ಬಿ.ಕೆ.ಪೂಜಾರಿ ಮುಖ್ಯ ಗುರುಗಳು ಅಭ್ಯುದಯ ಪ್ರೌಢಶಾಲೆ ಅಡವಿ ಹುಳಗಬಾಳ, ನಿರೂಪಣೆ ಬಿ.ಬಿ.ತಳವಾರ ಶಿಕ್ಷಕರು ಅಭ್ಯುದಯ ಪ್ರೌಢಶಾಲೆ ಅಡವಿಹುಲಗಬಾಳ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ವಲಯದ ಕ್ರೀಡಾಪಟುಗಳು ತಂಡದ ವ್ಯವಸ್ಥಾಪಕರು ಮತ್ತು ನಿರ್ಣಾಯಕರಾಗಿ, ವೀರೇಶ್ ಗದಗ, ಮೋಹನ್ .ಬಿ.ಪಾಟೀಲ್, ಬಲಭೀಮ ಮಾದರ್, ಎಸ್. ಎಸ್.ಹಿರೇಮಠ್ , ಎಸ್.ಪಿ.ಹಂಡರಗಲ್, ಪ್ರಕಾಶ್ ಜಂಬಿಗಿ, ಎನ್.ವಿ. ಪತ್ತಾರ್, ಎಚ್.ಎಲ್. ಭಜಂತ್ರಿ, ಎಚ್.ಕೆ.ನಾಟಿಕರ್, ವಿಶ್ವನಾಥ್ ಪಾಟೀಲ್, ಬಸವರಾಜ್ ಚಳ್ಳಗಿ, ಡಿ.ಎ.ಜಾವೂರ್, ಡಿ.ಎ.ಮಂಕಣಿ, ಶ್ರೀಮತಿ ಗೀತಾ ಯರಂತಲಿಮಠ, ಶ್ರೀಮತಿ ಡಿ.ಬಿ.ಪೂಜಾರಿ, ಮುಂತಾದವರು ಭಾಗವಹಿಸಿದ್ದರು.

Latest News

ಮುದ್ದೇಬಿಹಾಳ ಬಂದ್‌ಗೆ ಉತ್ತಮ ಸ್ಪಂದನೆ :                 ಒಳಮೀಸಲು ಸೌಲಭ್ಯ ಕಲ್ಪಿಸಿದ ಬಳಿಕವೇ ನೇಮಕಾತಿ ಪ್ರಕ್ರಿಯೆ ಆರಂಭಿಸಿ

ಮುದ್ದೇಬಿಹಾಳ ಬಂದ್‌ಗೆ ಉತ್ತಮ ಸ್ಪಂದನೆ : ಒಳಮೀಸಲು ಸೌಲಭ್ಯ ಕಲ್ಪಿಸಿದ ಬಳಿಕವೇ ನೇಮಕಾತಿ ಪ್ರಕ್ರಿಯೆ ಆರಂಭಿಸಿ

ಮುದ್ದೇಬಿಹಾಳ : ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸೌಲಭ್ಯ ಜಾರಿಗೊಳಿಸುವಂತೆ ಆಗ್ರಹಿಸಿ ಹಾಗೂ ಒಳ

ಗ್ರಾಮೀಣ ರಸ್ತೆಗಳ ಸುಧಾರಣೆಗೆ ಕಾಂಗ್ರೆಸ್ ಸರ್ಕಾರದ ಆದ್ಯತೆ-ನಾಡಗೌಡ

ಗ್ರಾಮೀಣ ರಸ್ತೆಗಳ ಸುಧಾರಣೆಗೆ ಕಾಂಗ್ರೆಸ್ ಸರ್ಕಾರದ ಆದ್ಯತೆ-ನಾಡಗೌಡ

ಮುದ್ದೇಬಿಹಾಳ : ಗ್ರಾಮೀಣ ರಸ್ತೆಗಳ ಸುಧಾರಣೆಗೆ ರಾಜ್ಯ ಸರ್ಕಾರ ಹಂತ ಹಂತವಾಗಿ ಆದ್ಯತೆ ನೀಡುತ್ತಿದೆ

ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ-ಹಾಸಿಂಪೀರ ವಾಲಿಕಾರ

ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ-ಹಾಸಿಂಪೀರ ವಾಲಿಕಾರ

ಮುದ್ದೇಬಿಹಾಳ : ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾಗಬೇಕು. ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ ಶಾಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ

ಶಾಸಕ ವಿಜಯಾನಂದ ಕಾಶಪ್ಪನವರ ಘೋಷಣೆ:   ಕಾಶಪ್ಪನವರ ಕುಟುಂಬದಿoದ ಸಕ್ಕರೆ ಕಾರ್ಖಾನೆ ಸ್ಥಾಪನೆ

ಶಾಸಕ ವಿಜಯಾನಂದ ಕಾಶಪ್ಪನವರ ಘೋಷಣೆ: ಕಾಶಪ್ಪನವರ ಕುಟುಂಬದಿoದ ಸಕ್ಕರೆ ಕಾರ್ಖಾನೆ ಸ್ಥಾಪನೆ

ಮುದ್ದೇಬಿಹಾಳ : ನಮ್ಮ ಭಾಗದ ರೈತರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಕಾಶಪ್ಪನವರ ಕುಟುಂಬದಿoದ ಹುನಗುಂದ

ಮಾ.4 ರಂದು ಚಿಣ್ಣರೊಂದಿಗೆ ಬಣ್ಣದ ಓಕುಳಿ

ಮಾ.4 ರಂದು ಚಿಣ್ಣರೊಂದಿಗೆ ಬಣ್ಣದ ಓಕುಳಿ

ಮುದ್ದೇಬಿಹಾಳ : ಹೋಳಿ ಹಬ್ಬದ ಅಂಗವಾಗಿ ಇಲ್ಲಿನ ಸಮಾನ ಮನಸ್ಕರ ಯುವ ಬಳಗದ ಸಹಯೋಗದಲ್ಲಿ 4 ರಂದು ಬೆಳಗ್ಗೆ 8 ರಿಂದ ಮದ್ಯಾಹ್ನ 1 ಗಂಟೆಯವರೆಗೆ ಪಟ್ಟಣದ ಹುಡ್ಕೋದಲ್ಲಿರುವ ಗವಿಸಿದ್ದೇಶ್ವರ ವೇದಿಕೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಮುದ್ದೇಬಿಹಾಳದ ಎಲ್ಲಾ ಬಾಂಧವರು ತಮ್ಮ ಮಕ್ಕಳನ್ನು ಕರೆತಂದು ಈ ಕಾರ್ಯಕ್ರಮದಲ್ಲಿ ತೊಡಗಿಸಿ ಹೋಳಿ ಆಚರಣೆ ಯಶಸ್ವಿಗೊಳಿಸುವಂತೆ ಬಳಗದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎರಡು ದಿನ ನಿರಂತರ ದುರಸ್ತಿ : ಕುಡಿವ ನೀರು ಪೂರೈಕೆ ಅಬಾಧಿತ

ಎರಡು ದಿನ ನಿರಂತರ ದುರಸ್ತಿ : ಕುಡಿವ ನೀರು ಪೂರೈಕೆ ಅಬಾಧಿತ

ಮುದ್ದೇಬಿಹಾಳ : ಪಟ್ಟಣಕ್ಕೆ ಕುಡಿವ ನೀರು ಪೂರೈಕೆ ಎರಡು ದಿನ ವಿಳಂಬವಾಗಿದ್ದು ಮಾ.3 ರಿಂದ ಯತಾಸ್ಥಿತಿಯಲ್ಲಿ ವಿವಿಧ ವಾರ್ಡಗಳಿಗೆ ಸರದಿ ಮೇಲೆ ಪೂರೈಕೆ ಆಗಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಕುಡಿವ ನೀರು ಪೂರೈಕೆ ವಿಭಾಗದ ಉಸ್ತುವಾರಿ, ಪುರಸಭೆ ಆರೋಗ್ಯ ನಿರೀಕ್ಷಕ ಜಾವೇದ ನಾಯ್ಕೋಡಿ ತಿಳಿಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎರಡು ದಿನಗಳಿಂದ ಇಲ್ಲಿನ ಜ್ಞಾನ ಭಾರತಿ ಶಾಲೆ ಮುಂದೆ ಮುಖ್ಯ ಕೊಳವೆ ಪೈಪ್‌ನಲ್ಲಿ ಸೋರಿಕೆ ಕಂಡು ಬಂದಿತ್ತು.ಅದನ್ನು