A life without sports is like a fruit eaten by an insect - A.C. Kerura

ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ – ಎ.ಸಿ.ಕೆರೂರ

ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ – ಎ.ಸಿ.ಕೆರೂರ

ಅಡವಿ ಹುಲಗಬಾಳ : ಅಹಿಲ್ಯದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆ ಅಡವಿ ಹುಲುಗಬಾಳದಲ್ಲಿ 2025-26 ನೇ ಸಾಲಿನ ನಾಲತವಾಡ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟವು ಜರುಗಿದವು. ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ, ಮನುಷ್ಯ ಸದೃಢವಾಗಿ ಇರಬೇಕೆಂದರೆ ಪ್ರತಿದಿನ ಯೋಗ, ಕ್ರೀಡೆಯಲ್ಲಿ ಭಾಗವಹಿಸುವುದು ಅತಿ ಮುಖ್ಯ, ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ಎನ್ನುವಂತೆ, ದೇಹವನ್ನು ದಂಡಿಸಿದಾಗ ಮಾತ್ರ ಆರೋಗ್ಯದಿಂದಿರಲು ಸಾಧ್ಯ.

ಈಗ ಎಲ್ಲರೂ ಯಂತ್ರಗಳಿಗೆ ಮೊರೆ ಹೋಗುವುದರಿಂದ ದೇಹವನ್ನು ದಂಡಿಸಲು ಆಗುತ್ತಿಲ್ಲ. ಹಾಗಾಗಿ ರೋಗ-ರುಜಿನುಗಳಿಗೆ ಅಣಿ ಆಗುತ್ತಿದ್ದಾನೆ. ಸೋಲು ಗೆಲುವನ್ನು ಸಮಾನತೆಯಿಂದ ಕಾಣುವ ಗುಣವನ್ನು ಹೊಂದಿರಬೇಕು. ಕ್ರೀಡಾಪಟುಗಳೊಂದಿಗೆ ಬಂದಂತಹ ಹಿತೈಷಿಗಳು ಯಾವುದೇ ರೀತಿಯಾಗಿ ಜಗಳಕ್ಕೆ ಅಣಿಯಾಗದಂತೆ, ಕ್ರೀಡೆಯಲ್ಲಿ ಭಾಗವಹಿಸಬೇಕು. ಈ ವರ್ಷ ಅರ್ಹತಾ ಪ್ರಮಾಣ ಪತ್ರವನ್ನು ಆನ್ಲೈನ್ ಮುಖಾಂತರವಾಗಿ ತೆಗೆದುಕೊಳ್ಳುತ್ತಿರುವುದರಿಂದ ಬೇರೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಕ್ರೀಡಾಕೂಟದಲ್ಲಿ ಭಾಗವಹಿಸಲು ಕಡಿವಾಣವನ್ನು ಸರಕಾರ ಹಾಕಿದ್ದು ತುಂಬಾ ಸಂತೋಷ. ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ನಿರ್ಣಾಯಕರು ಕೊಟ್ಟಂತಹ ನಿರ್ಣಯಗಳಿಗೆ ಬದ್ಧರಾಗಬೇಕು. ನಿರ್ಣಾಯಕರು ಸಹ ನೀಡುವ ತೀರ್ಪು ಎಲ್ಲರೂ ಒಪ್ಪುವಂತಿರಬೇಕು. ಒಳ್ಳೆಯ ಮತ್ತು ನೈಜ ಪ್ರತಿಭಾವಂತ ಕ್ರೀಡಾಪಟುಗಳನ್ನು ವಲಯ, ತಾಲೂಕು, ಜಿಲ್ಲಾ , ವಿಭಾಗ, ರಾಜ್ಯ ಮಟ್ಟಕ್ಕೆ ಕಳಿಸುವರು ನಾವು ಆಗಬೇಕು. ಆಡಿಸುವರ ಕಣ್ಣು ಎರಡು ಆದರೆ ನೋಡುವವರ ಕಣ್ಣು ನೂರಾರು ಆಗಿರುತ್ತವೆ, ಹಾಗಾಗಿ ತೀರ್ಪು ನ್ಯಾಯ ಸಮ್ಮತವಾಗಿರಬೇಕು ಎಲ್ಲ ಮಕ್ಕಳು ನಮ್ಮ ಶಾಲೆಯ ಮಕ್ಕಳು ಎಂದು ನಿರ್ಣಯವನ್ನು ನೀಡಬೇಕು ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸರ್ಕಾರಿ ಗ್ರೇಡ್ -1 ದೈಹಿಕ ಶಿಕ್ಷಕರ ಸಂಘ,ಮುದ್ದೇಬಿಹಾಳ ಅಧ್ಯಕ್ಷರಾದ ಎ.ಸಿ.ಕೆರೂರ ಹೇಳಿದರು.
ಇನ್ನೋರ್ವ ಅತಿಥಿಯಾಗಿ ಆಗಮಿಸಿದ್ದ ರಾಹುತ ಪೂಜಾರಿ ಅಧ್ಯಕ್ಷರು ದೈ.ಶಿ.ಶಿ. ಸಂಘ ತಾಳಿಕೋಟೆ ಎಲ್ಲಿ ಕ್ರೀಡಾಂಗಣಗಳು ಕ್ರೀಡಾಪಟುಗಳಿಂದ ತುಂಬಿರುತ್ತವೆ ಆ ಊರಲ್ಲಿ ಆಸ್ಪತ್ರೆಗಳು ಖಾಲಿ ಖಾಲಿ ಇರುತ್ತವೆ, ಕ್ರೀಡೆ, ಕ್ರೀಡಾ ಸ್ಪೂರ್ತಿಯಿಂದ ನ್ಯಾಯಯುತವಾಗಿ ಮಾಡಬೇಕು, ಆಟದಿಂದ ನಾಯಕತ್ವವನ್ನು ಹೊಂದಾಣಿಕೆ ಗುಣ ಬೆಳೆಸಿಕೊಳ್ಳಬೇಕು ಹೊರತು ಸಿಟ್ಟು, ದ್ವೇಷ, ಗುಣದಿಂದ ದೂರ ಇರಬೇಕು.

ಈ ವಲಯದ ಕ್ರೀಡಾಪಟುಗಳು ರಾಜ್ಯಮಟ್ಟದವರೆಗೆ ಆಡಿ ನಮ್ಮ ವಲಯದ ಕೀರ್ತಿಯನ್ನು ತರಬೇಕು ಎಂದು ಅಧ್ಯಕ್ಷತೆ ವಹಿಸಿದ ಕಿರಣ್ ಮದರಿ , ಅಧ್ಯಕ್ಷರು ಅಹಿಲ್ಯ ದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆ ಅಡವಿ ಹುಲಗಬಾಳ ಶುಭವನ್ನು ಕೋರಿದರು . ಕ್ರೀಡಾ ಧ್ವಜಾರೋಹಣವನ್ನು ಅಂಬರೀಶ್ ಮದರಿ, ನಿರ್ದೇಶಕರು ಅಹಿಲ್ಯ ದೇವಿ ಶಿಕ್ಷಣ ಸಂಸ್ಥೆ ಅಡವಿ ನಿರ್ವಹಿಸಿದರು, ವೇದಿಕೆ ಮೇಲಿದ್ದ ಕಿರಣ್ ಮದರಿ , ಎ.ಸಿ.ಕೆರೂರ, ಎಂ.ಎಸ್.ಗುಡಗುಂಟಿ ಮುಖ್ಯ ಗುರುಗಳು ಸರ್ಕಾರಿ ಪ್ರೌಢಶಾಲೆ ಅಡವಿ ಹುಲುಗಬಾಳ, ಬಿ.ಬಿ.ಪೂಜಾರಿ, ರಾಹುತ್ ಪೂಜಾರಿ, ಮಲ್ಲಿಕಾರ್ಜುನ ರಾಯಗೊಂಡ, ಪಾರಿವಾಳಗಳನ್ನು ಹಾರಿ ಬಿಡುವುದರಿಂದ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು .
ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಶ್ರೀಮತಿ.ರೇಖಾ ಹಿರೇಮಠ, ಸ್ವಾಗತವನ್ನು ಬಿ.ಕೆ.ಪೂಜಾರಿ ಮುಖ್ಯ ಗುರುಗಳು ಅಭ್ಯುದಯ ಪ್ರೌಢಶಾಲೆ ಅಡವಿ ಹುಳಗಬಾಳ, ನಿರೂಪಣೆ ಬಿ.ಬಿ.ತಳವಾರ ಶಿಕ್ಷಕರು ಅಭ್ಯುದಯ ಪ್ರೌಢಶಾಲೆ ಅಡವಿಹುಲಗಬಾಳ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ವಲಯದ ಕ್ರೀಡಾಪಟುಗಳು ತಂಡದ ವ್ಯವಸ್ಥಾಪಕರು ಮತ್ತು ನಿರ್ಣಾಯಕರಾಗಿ, ವೀರೇಶ್ ಗದಗ, ಮೋಹನ್ .ಬಿ.ಪಾಟೀಲ್, ಬಲಭೀಮ ಮಾದರ್, ಎಸ್. ಎಸ್.ಹಿರೇಮಠ್ , ಎಸ್.ಪಿ.ಹಂಡರಗಲ್, ಪ್ರಕಾಶ್ ಜಂಬಿಗಿ, ಎನ್.ವಿ. ಪತ್ತಾರ್, ಎಚ್.ಎಲ್. ಭಜಂತ್ರಿ, ಎಚ್.ಕೆ.ನಾಟಿಕರ್, ವಿಶ್ವನಾಥ್ ಪಾಟೀಲ್, ಬಸವರಾಜ್ ಚಳ್ಳಗಿ, ಡಿ.ಎ.ಜಾವೂರ್, ಡಿ.ಎ.ಮಂಕಣಿ, ಶ್ರೀಮತಿ ಗೀತಾ ಯರಂತಲಿಮಠ, ಶ್ರೀಮತಿ ಡಿ.ಬಿ.ಪೂಜಾರಿ, ಮುಂತಾದವರು ಭಾಗವಹಿಸಿದ್ದರು.

Latest News

S.I.R-ಮುದ್ದೇಬಿಹಾಳ ಮತಕ್ಷೇತ್ರ :  ಇಬ್ಬರು ಬಿಎಲ್‌ಓಗಳಿಂದ ಶೇ.100ರಷ್ಟು ಕಾರ್ಯ ಪೂರ್ಣ

S.I.R-ಮುದ್ದೇಬಿಹಾಳ ಮತಕ್ಷೇತ್ರ : ಇಬ್ಬರು ಬಿಎಲ್‌ಓಗಳಿಂದ ಶೇ.100ರಷ್ಟು ಕಾರ್ಯ ಪೂರ್ಣ

ಮುದ್ದೇಬಿಹಾಳ : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ಬಿಎಲ್‌ಓಗಳು,ಮೇಲ್ವಿಚಾರಕರು,ಬಿಎಲ್‌ಎಗಳ ಹಾಗೂ ಮತದಾರರ

ಎನ್ರೋಲ್‌ಮೆಂಟ್ ಆಗದಿದ್ದರೆ ಸರ್ಕಾರಿ ಯೋಜನೆಗಳು ಸಿಗಲ್ಲ-ನಾಡಗೌಡ

ಎನ್ರೋಲ್‌ಮೆಂಟ್ ಆಗದಿದ್ದರೆ ಸರ್ಕಾರಿ ಯೋಜನೆಗಳು ಸಿಗಲ್ಲ-ನಾಡಗೌಡ

ಮುದ್ದೇಬಿಹಾಳ : ಮುಖ್ಯಮಂತ್ರಿಗಳು ಹೇಳಿದಂತೆ ನೀವು ಮತದಾರರಾಗಿ ನೋಂದಾಯಿಸಿಕೊಳ್ಳದಿದ್ದರೆ ಸರಕಾರದ ಯಾವುದೇ ಯೋಜನೆ ಕೊಡುವುದಕ್ಕೆ

32 ಕೆಜಿ ಬೆಳ್ಳಿ ವಿಗ್ರಹ ಹೊತ್ತೊಯ್ದ ಕಳ್ಳರು:                         ಬಸರಕೋಡದ ಪವಾಡ ಬಸವೇಶ್ವರರ ವಿಗ್ರಹ ಕಳ್ಳತನ

32 ಕೆಜಿ ಬೆಳ್ಳಿ ವಿಗ್ರಹ ಹೊತ್ತೊಯ್ದ ಕಳ್ಳರು: ಬಸರಕೋಡದ ಪವಾಡ ಬಸವೇಶ್ವರರ ವಿಗ್ರಹ ಕಳ್ಳತನ

ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡದ ಐತಿಹಾಸಿಕ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಬಸವೇಶ್ವರ ವಿಗ್ರಹವನ್ನೇ ಕಳ್ಳರು

ಮುದ್ದೇಬಿಹಾಳ S.I.R ; 1,56,657 ಗಣತಿ ನಮೂನೆ ವಿತರಣೆ

ಮುದ್ದೇಬಿಹಾಳ S.I.R ; 1,56,657 ಗಣತಿ ನಮೂನೆ ವಿತರಣೆ

ಮುದ್ದೇಬಿಹಾಳ : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು ಹಲವೆಡೆ

ಜು.3 ರಂದು ಮುದ್ದೇಬಿಹಾಳ P.W.D ಇಲಾಖೆ ಮುಂದೆ ಧರಣಿ

ಜು.3 ರಂದು ಮುದ್ದೇಬಿಹಾಳ P.W.D ಇಲಾಖೆ ಮುಂದೆ ಧರಣಿ

ಮುದ್ದೇಬಿಹಾಳ : ತಾಲ್ಲೂಕಿನ ಹಿರೇಮುರಾಳ ಕ್ರಾಸ್‌ದಿಂದ ಹುನಕುಂಟಿ ಗ್ರಾಮದ ಕ್ರಾಸವರೆಗೆ ಸ್ಥಗಿತಗೊಂಡಿರುವ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಆಗ್ರಹಿಸಿ ಜು.3 ರಿಂದ ಮುದ್ದೇಬಿಹಾಳ ಪಟ್ಟಣದ ಲೋಕೋಪಯೋಗಿ ಇಲಾಖೆ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ಆ ಗ್ರಾಮಗಳ ವ್ಯಾಪ್ತಿಯ ಗ್ರಾಮಸ್ಥರು ತಿಳಿಸಿದ್ದಾರೆ. ಈ ಕುರಿತು ಪೊಲೀಸ್ ಇಲಾಖೆಗೆ ಭದ್ರತೆ ಕೋರಿ ಮನವಿ ಕೊಟ್ಟಿರುವ ನೆರಬೆಂಚಿ, ಕೇಸಾಪೂರ, ಆಲೂರ,ಹುನಕುಂಟಿ ಗ್ರಾಮಗಳ ಗ್ರಾಮಸ್ಥರು, ಮುರಾಳ ಗ್ರಾಮದ ಕ್ರಾಸ್‌ದಿಂದ ನೆರಬೆಂಚಿ ಮೇಲೆ ಹುನಕುಂಟಿ ಕ್ರಾಸವರೆಗೂ ರಸ್ತೆ

ಸಿಲಿಂಡರ್ ಸೋರಿಕೆ : ತಪ್ಪಿದ ಭಾರೀ ಅನಾಹುತ

ಸಿಲಿಂಡರ್ ಸೋರಿಕೆ : ತಪ್ಪಿದ ಭಾರೀ ಅನಾಹುತ

ಮುದ್ದೇಬಿಹಾಳ : ರೆಗ್ಯೂಲೆಟರ್‌ನಲ್ಲಿ ದೋಷ ಕಾಣಿಸಿಕೊಂಡ ಪರಿಣಾಮ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ದಿನಬಳಕೆ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು ಅದೃಷ್ಟವಶಾತ್ ಮನೆಯಲ್ಲಿದ್ದ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಪಟ್ಟಣದ ಅವಟಿ ಗಲ್ಲಿಯಲ್ಲಿ ನಡೆದಿದೆ. ಪಟ್ಟಣದ ಅವಟಿಗಲ್ಲಿ ನಿವಾಸಿ ಹುಸೇನಸಾಬ ನಾಗರಾಳ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ.ಸಿಲಿಂಡರ್ ಸೋರಿಕೆಯಾಗುತ್ತಲೇ ಕುಟುಂಬದ ಸದಸ್ಯರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.ಬೆAಕಿಗೆ ಮನೆಯಲ್ಲಿದ್ದ ಪ್ರಿಡ್ಜ್,ಕುಕ್ಕರ್,ಬಟ್ಟೆಗಳು ಸೇರಿದಂತೆ ದಿನಬಳಕೆ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ.ಬೆಂಕಿಯ ಝಳಕ್ಕೆ