ಮುದ್ದೇಬಿಹಾಳ : ಎಡೆಬಿಡದೇ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಮನೆಯೊಂದು ಕುಸಿದು ಮನೆಯಲ್ಲಿ ಮಲಗಿದ್ದ ನಾಲ್ವರ ಮೇಲೆ ಬಿದ್ದ ಪರಿಣಾಮ ಅವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು ಅದರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿರುವ ಘಟನೆ ತಾಲ್ಲೂಕಿನ ಆರೇಮುರಾಳ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.
ಆರೇಮುರಾಳದ ರುದ್ರಪ್ಪ ಬಂಡಿವಡ್ಡರ, ಮಲ್ಲಮ್ಮ ಬಂಡಿವಡ್ಡರ, ಶಾರದಾ ಬಂಡಿವಡ್ಡರ ಹಾಗೂ ಮಕ್ಕಳಾದ ಪ್ರತೀಕ್ಷಾ, ಋಶಾಂಕ ಗಾಯಗೊಂಡಿದ್ದು ಇದರಲ್ಲಿ ರುದ್ರಪ್ಪ ಹಾಗೂ ಮಲ್ಲಮ್ಮ ಅವರನ್ನು ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆಂದು ದಾಖಲಿಸಲಾಗಿದೆ.
ಮಾಜಿ ಶಾಸಕ ನಡಹಳ್ಳಿ ಅಧಿಕಾರಿಗಳ ವಿರುದ್ಧ ಕಿಡಿ: ಮುದ್ದೇಬಿಹಾಳ ತಾಲ್ಲೂಕಿನ ಆರೇಮುರಾಳದಲ್ಲಿ ಮನೆ ಬಿದ್ದು ಮರ್ನಾಲ್ಕು ಜನ ಗಾಯಗೊಂಡಿರುವ ವಿಷಯ ತಿಳಿದರೂ ಕೂಡ ಅಧಿಕಾರಿಗಳು ತ್ವರಿತವಾಗಿ ಬೀದಿಯಲ್ಲಿ ನಿಂತಿದ್ದ ಕುಟುಂಬಕ್ಕೆ ಆಸರೆಯಾಗುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಸ್ವತಃ ತಾವೇ ತಮ್ಮ ಕಾರ್ಯಕರ್ತರನ್ನು ಕರೆದುಕೊಂಡು ಮನೆಬಿದ್ದು ತೊಂದರೆಯಲ್ಲಿದ್ದ ಕುಟುಂಬದವರಿಗೆ ರೇಷನ್ ಕಿಟ್ ವಿತರಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ನಡಹಳ್ಳಿ ಅವರು, ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಕೆಲವು ಅಧಿಕಾರಿಗಳಿಗೆ ದುರಹಂಕಾರ ಬಂದಿದೆ.ಜನರು ಕಷ್ಟದಲ್ಲಿದ್ದಾಗ ಸ್ಪಂದಿಸದೇ ಯಾವಾಗಲಾದರೂ ಹೋದರೆ ನಡೆಯುತ್ತದೆ ಎಂಬ ಭಾವನೆಯುಳ್ಳವರಾಗಿದ್ದಾರೆ. ಇದರಿಂದಲೇ ತಾಲ್ಲೂಕಿನಲ್ಲಿ ಸಂತ್ರಸ್ಥರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ ಎಂದು ಹರಿಹಾಯ್ದರು.
ಮನೆ ಬಿದ್ದ ಕೂಡಲೇ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಸಂತ್ರಸ್ಥ ಕುಟುಂಬಕ್ಕೆ ತ್ವರಿತವಾಗಿ ಮೂಲಭೂತ ಸೌರ್ಯ,ದಿನಸಿ ಪದಾರ್ಥ, ಪರಿಹಾರ ಧನ ಒದಗಿಸಬೇಕು. ಆದರೆ, ಅಧಿಕಾರಿಗಳು ಇದನ್ನು ಬೇಗನೇ ಮಾಡಲಿಲ್ಲ ಎಂದು ದೂರಿದರು.ಈ ಸಂದರ್ಭದಲ್ಲಿ ಮುಖಂಡರಾದ ಗಿರೀಶಗೌಡ ಪಾಟೀಲ, ಅಪ್ಪು ಧನ್ನೂರ, ರಮೇಶ ವಗ್ಗರ, ರವೀಂದ್ರ ಬಿರಾದಾರ, ಬಸವರಾಜ ಸರೂರ,ಪಿಡಿಒ ಕಲ್ಮೇಶ ಕುಂಬಾರ,ರಿಯಾಜ ನಾಯ್ಕೋಡಿ ಇದ್ದರು.
ಶಾಸಕ ನಾಡಗೌಡ ಭೇಟಿ: ತಾಲ್ಲೂಕುಡಾಳಿತದಿಂದ ನೆರವು:
ಮಾಜಿ ಶಾಸಕ ನಡಹಳ್ಳಿ ಭೇಟಿ ನೀಡಿದ ಹೋದ ಬಳಿಕ ಹಾಲಿ ಶಾಸಕ ಸಿ.ಎಸ್.ನಾಡಗೌಡ, ತಹಸೀಲ್ದಾರ ಕೀರ್ತಿ ಚಾಲಕ, ತಾಪಂ ಇಒ ವೆಂಕಟೇಶ ವಂದಾಲ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬಿ.ಜಿ.ಮಠ, ಪಿಡಿಒ ಕಲ್ಮೇಶ ಕುಂಬಾರ ಭೇಟಿ ನೀಡಿ ಬಿದ್ದಿರುವ ಮನೆಯ ಕುಟುಂಬದ ಸದಸ್ಯರಿಂದ ಮಾಹಿತಿ ಪಡೆದುಕೊಂಡರು.ಪಿಡಿಒ ಕಲ್ಮೇಶ ಕುಂಬಾರ ಮಾತನಾಡಿ, ಸಂತ್ರಸ್ಥ ಕುಟುಂಬಕ್ಕೆ ತಾತ್ಕಾಲಿಕ ವಸತಿಗಾಗಿ ಪ್ರಾಣಾಪಾಯದಿಂದ ಪಾರು.
ಭಾರೀ ಮಳೆ: ಮನೆ ಕುಸಿದು ನಾಲ್ವರಿಗೆ ಗಾಯ
ಮುದ್ದೇಬಿಹಾಳ : ಎಡೆಬಿಡದೇ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಮನೆಯೊಂದು ಕುಸಿದು ಮನೆಯಲ್ಲಿ ಮಲಗಿದ್ದ ನಾಲ್ವರ ಮೇಲೆ ಬಿದ್ದ ಪರಿಣಾಮ ಅವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು ಅದರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿರುವ ಘಟನೆ ತಾಲ್ಲೂಕಿನ ಆರೇಮುರಾಳ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.
ಆರೇಮುರಾಳದ ರುದ್ರಪ್ಪ ಬಂಡಿವಡ್ಡರ, ಮಲ್ಲಮ್ಮ ಬಂಡಿವಡ್ಡರ, ಶಾರದಾ ಬಂಡಿವಡ್ಡರ ಹಾಗೂ ಮಕ್ಕಳಾದ ಪ್ರತೀಕ್ಷಾ, ಋಶಾಂಕ ಗಾಯಗೊಂಡಿದ್ದು ಇದರಲ್ಲಿ ರುದ್ರಪ್ಪ ಹಾಗೂ ಮಲ್ಲಮ್ಮ ಅವರನ್ನು ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆಂದು ದಾಖಲಿಸಲಾಗಿದೆ.
ಮಾಜಿ ಶಾಸಕ ನಡಹಳ್ಳಿ ಅಧಿಕಾರಿಗಳ ವಿರುದ್ಧ ಕಿಡಿ: ಮುದ್ದೇಬಿಹಾಳ ತಾಲ್ಲೂಕಿನ ಆರೇಮುರಾಳದಲ್ಲಿ ಮನೆ ಬಿದ್ದು ಮರ್ನಾಲ್ಕು ಜನ ಗಾಯಗೊಂಡಿರುವ ವಿಷಯ ತಿಳಿದರೂ ಕೂಡ ಅಧಿಕಾರಿಗಳು ತ್ವರಿತವಾಗಿ ಬೀದಿಯಲ್ಲಿ ನಿಂತಿದ್ದ ಕುಟುಂಬಕ್ಕೆ ಆಸರೆಯಾಗುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.ಸ್ವತಃ ತಾವೇ ತಮ್ಮ ಕಾರ್ಯಕರ್ತರನ್ನು ಕರೆದುಕೊಂಡು ಮನೆಬಿದ್ದು ತೊಂದರೆಯಲ್ಲಿದ್ದ ಕುಟುಂಬದವರಿಗೆ ರೇಷನ್ ಕಿಟ್ ವಿತರಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ನಡಹಳ್ಳಿ ಅವರು, ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಕೆಲವು ಅಧಿಕಾರಿಗಳಿಗೆ ದುರಹಂಕಾರ ಬಂದಿದೆ.ಜನರು ಕಷ್ಟದಲ್ಲಿದ್ದಾಗ ಸ್ಪಂದಿಸದೇ ಯಾವಾಗಲಾದರೂ ಹೋದರೆ ನಡೆಯುತ್ತದೆ ಎಂಬ ಭಾವನೆಯುಳ್ಳವರಾಗಿದ್ದಾರೆ. ಇದರಿಂದಲೇ ತಾಲ್ಲೂಕಿನಲ್ಲಿ ಸಂತ್ರಸ್ಥರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ ಎಂದು ಹರಿಹಾಯ್ದರು.
ಮನೆ ಬಿದ್ದ ಕೂಡಲೇ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಸಂತ್ರಸ್ಥ ಕುಟುಂಬಕ್ಕೆ ತ್ವರಿತವಾಗಿ ಮೂಲಭೂತ ಸೌರ್ಯ,ದಿನಸಿ ಪದಾರ್ಥ, ಪರಿಹಾರ ಧನ ಒದಗಿಸಬೇಕು. ಆದರೆ ಅಧಿಕಾರಿಗಳು ಇದನ್ನು ಬೇಗನೇ ಮಾಡಲಿಲ್ಲ ಎಂದು ದೂರಿದರು. ಈ ಸಂದರ್ಭದಲ್ಲಿ ಮುಖಂಡರಾದ ಗಿರೀಶಗೌಡ ಪಾಟೀಲ, ಅಪ್ಪು ಧನ್ನೂರ,ರಮೇಶ ವಗ್ಗರ,ರವೀಂದ್ರ ಬಿರಾದಾರ, ಬಸವರಾಜ ಸರೂರ,ಪಿಡಿಒ ಕಲ್ಮೇಶ ಕುಂಬಾರ,ರಿಯಾಜ ನಾಯ್ಕೋಡಿ ಇದ್ದರು.
ಶಾಸಕ ನಾಡಗೌಡ ಭೇಟಿ: ತಾಲ್ಲೂಕುಡಾಳಿತದಿಂದ ನೆರವು:
ಮಾಜಿ ಶಾಸಕ ನಡಹಳ್ಳಿ ಭೇಟಿ ನೀಡಿದ ಹೋದ ಬಳಿಕ ಹಾಲಿ ಶಾಸಕ ಸಿ.ಎಸ್.ನಾಡಗೌಡ , ತಹಸೀಲ್ದಾರ ಕೀರ್ತಿ ಚಾಲಕ, ತಾಪಂ ಇಒ ವೆಂಕಟೇಶ ವಂದಾಲ,ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬಿ.ಜಿ.ಮಠ, ಪಿಡಿಒ ಕಲ್ಮೇಶ ಕುಂಬಾರ ಭೇಟಿ ನೀಡಿ ಬಿದ್ದಿರುವ ಮನೆಯ ಕುಟುಂಬದ ಸದಸ್ಯರಿಂದ ಮಾಹಿತಿ ಪಡೆದುಕೊಂಡರು. ಪಿಡಿಒ ಕಲ್ಮೇಶ ಕುಂಬಾರ ಮಾತನಾಡಿ, ಸಂತ್ರಸ್ಥ ಕುಟುಂಬಕ್ಕೆ ತಾತ್ಕಾಲಿಕ ವಸತಿಗಾಗಿ ಗ್ರಾಮದಲ್ಲಿ ಮನೆಯೊಂದನ್ನು ಬಾಡಿಗೆ ಪಡೆದು ಸ್ಥಳಾಂತರಿಸಲಾಗಿದೆ. ದಿನಸಿ, ಹಾಸಿಗೆ, ಹೊದಿಕೆ, ಪಾತ್ರೆ ನೀಡಿದ್ದೇವೆ ಎಂದು ತಿಳಿಸಿದರು. ಮುಖಂಡ ರಾಯನಗೌಡ ತಾತರೆಡ್ಡಿ ಇದ್ದರು. ಮನೆಯೊಂದನ್ನು ಬಾಡಿಗೆ ಪಡೆದು ಸ್ಥಳಾಂತರಿಸಲಾಗಿದೆ. ದಿನಸಿ, ಹಾಸಿಗೆ, ಹೊದಿಕೆ, ಪಾತ್ರೆ ನೀಡಿದ್ದೇವೆ ಎಂದು ತಿಳಿಸಿದರು. ಮುಖಂಡ ರಾಯನಗೌಡ ತಾತರೆಡ್ಡಿ ಇದ್ದರು.







