Heavy rain: House collapses, four injured

ಭಾರೀ ಮಳೆ: ಮನೆ ಕುಸಿದು ನಾಲ್ವರಿಗೆ ಗಾಯ

ಭಾರೀ ಮಳೆ: ಮನೆ ಕುಸಿದು ನಾಲ್ವರಿಗೆ ಗಾಯ

ಮುದ್ದೇಬಿಹಾಳ : ಎಡೆಬಿಡದೇ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಮನೆಯೊಂದು ಕುಸಿದು ಮನೆಯಲ್ಲಿ ಮಲಗಿದ್ದ ನಾಲ್ವರ ಮೇಲೆ ಬಿದ್ದ ಪರಿಣಾಮ ಅವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು ಅದರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿರುವ ಘಟನೆ ತಾಲ್ಲೂಕಿನ ಆರೇಮುರಾಳ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.

ಆರೇಮುರಾಳದ ರುದ್ರಪ್ಪ ಬಂಡಿವಡ್ಡರ, ಮಲ್ಲಮ್ಮ ಬಂಡಿವಡ್ಡರ, ಶಾರದಾ ಬಂಡಿವಡ್ಡರ ಹಾಗೂ ಮಕ್ಕಳಾದ ಪ್ರತೀಕ್ಷಾ, ಋಶಾಂಕ ಗಾಯಗೊಂಡಿದ್ದು ಇದರಲ್ಲಿ ರುದ್ರಪ್ಪ ಹಾಗೂ ಮಲ್ಲಮ್ಮ ಅವರನ್ನು ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆಂದು ದಾಖಲಿಸಲಾಗಿದೆ.

ಮಾಜಿ ಶಾಸಕ ನಡಹಳ್ಳಿ ಅಧಿಕಾರಿಗಳ ವಿರುದ್ಧ ಕಿಡಿ: ಮುದ್ದೇಬಿಹಾಳ ತಾಲ್ಲೂಕಿನ ಆರೇಮುರಾಳದಲ್ಲಿ ಮನೆ ಬಿದ್ದು ಮರ‍್ನಾಲ್ಕು ಜನ ಗಾಯಗೊಂಡಿರುವ ವಿಷಯ ತಿಳಿದರೂ ಕೂಡ ಅಧಿಕಾರಿಗಳು ತ್ವರಿತವಾಗಿ ಬೀದಿಯಲ್ಲಿ ನಿಂತಿದ್ದ ಕುಟುಂಬಕ್ಕೆ ಆಸರೆಯಾಗುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಸ್ವತಃ ತಾವೇ ತಮ್ಮ ಕಾರ್ಯಕರ್ತರನ್ನು ಕರೆದುಕೊಂಡು ಮನೆಬಿದ್ದು ತೊಂದರೆಯಲ್ಲಿದ್ದ ಕುಟುಂಬದವರಿಗೆ ರೇಷನ್ ಕಿಟ್ ವಿತರಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ನಡಹಳ್ಳಿ ಅವರು, ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಕೆಲವು ಅಧಿಕಾರಿಗಳಿಗೆ ದುರಹಂಕಾರ ಬಂದಿದೆ.ಜನರು ಕಷ್ಟದಲ್ಲಿದ್ದಾಗ ಸ್ಪಂದಿಸದೇ ಯಾವಾಗಲಾದರೂ ಹೋದರೆ ನಡೆಯುತ್ತದೆ ಎಂಬ ಭಾವನೆಯುಳ್ಳವರಾಗಿದ್ದಾರೆ. ಇದರಿಂದಲೇ ತಾಲ್ಲೂಕಿನಲ್ಲಿ ಸಂತ್ರಸ್ಥರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ ಎಂದು ಹರಿಹಾಯ್ದರು.
ಮನೆ ಬಿದ್ದ ಕೂಡಲೇ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಸಂತ್ರಸ್ಥ ಕುಟುಂಬಕ್ಕೆ ತ್ವರಿತವಾಗಿ ಮೂಲಭೂತ ಸೌರ‍್ಯ,ದಿನಸಿ ಪದಾರ್ಥ, ಪರಿಹಾರ ಧನ ಒದಗಿಸಬೇಕು. ಆದರೆ, ಅಧಿಕಾರಿಗಳು ಇದನ್ನು ಬೇಗನೇ ಮಾಡಲಿಲ್ಲ ಎಂದು ದೂರಿದರು.ಈ ಸಂದರ್ಭದಲ್ಲಿ ಮುಖಂಡರಾದ ಗಿರೀಶಗೌಡ ಪಾಟೀಲ, ಅಪ್ಪು ಧನ್ನೂರ, ರಮೇಶ ವಗ್ಗರ, ರವೀಂದ್ರ ಬಿರಾದಾರ, ಬಸವರಾಜ ಸರೂರ,ಪಿಡಿಒ ಕಲ್ಮೇಶ ಕುಂಬಾರ,ರಿಯಾಜ ನಾಯ್ಕೋಡಿ ಇದ್ದರು.

ಶಾಸಕ ನಾಡಗೌಡ ಭೇಟಿ: ತಾಲ್ಲೂಕುಡಾಳಿತದಿಂದ ನೆರವು:
ಮಾಜಿ ಶಾಸಕ ನಡಹಳ್ಳಿ ಭೇಟಿ ನೀಡಿದ ಹೋದ ಬಳಿಕ ಹಾಲಿ ಶಾಸಕ ಸಿ.ಎಸ್.ನಾಡಗೌಡ, ತಹಸೀಲ್ದಾರ ಕೀರ್ತಿ ಚಾಲಕ, ತಾಪಂ ಇಒ ವೆಂಕಟೇಶ ವಂದಾಲ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬಿ.ಜಿ.ಮಠ, ಪಿಡಿಒ ಕಲ್ಮೇಶ ಕುಂಬಾರ ಭೇಟಿ ನೀಡಿ ಬಿದ್ದಿರುವ ಮನೆಯ ಕುಟುಂಬದ ಸದಸ್ಯರಿಂದ ಮಾಹಿತಿ ಪಡೆದುಕೊಂಡರು.ಪಿಡಿಒ ಕಲ್ಮೇಶ ಕುಂಬಾರ ಮಾತನಾಡಿ, ಸಂತ್ರಸ್ಥ ಕುಟುಂಬಕ್ಕೆ ತಾತ್ಕಾಲಿಕ ವಸತಿಗಾಗಿ ಪ್ರಾಣಾಪಾಯದಿಂದ ಪಾರು.

ಭಾರೀ ಮಳೆ: ಮನೆ ಕುಸಿದು ನಾಲ್ವರಿಗೆ ಗಾಯ
ಮುದ್ದೇಬಿಹಾಳ : ಎಡೆಬಿಡದೇ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಮನೆಯೊಂದು ಕುಸಿದು ಮನೆಯಲ್ಲಿ ಮಲಗಿದ್ದ ನಾಲ್ವರ ಮೇಲೆ ಬಿದ್ದ ಪರಿಣಾಮ ಅವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು ಅದರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿರುವ ಘಟನೆ ತಾಲ್ಲೂಕಿನ ಆರೇಮುರಾಳ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.
ಆರೇಮುರಾಳದ ರುದ್ರಪ್ಪ ಬಂಡಿವಡ್ಡರ, ಮಲ್ಲಮ್ಮ ಬಂಡಿವಡ್ಡರ, ಶಾರದಾ ಬಂಡಿವಡ್ಡರ ಹಾಗೂ ಮಕ್ಕಳಾದ ಪ್ರತೀಕ್ಷಾ, ಋಶಾಂಕ ಗಾಯಗೊಂಡಿದ್ದು ಇದರಲ್ಲಿ ರುದ್ರಪ್ಪ ಹಾಗೂ ಮಲ್ಲಮ್ಮ ಅವರನ್ನು ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆಂದು ದಾಖಲಿಸಲಾಗಿದೆ.

ಮಾಜಿ ಶಾಸಕ ನಡಹಳ್ಳಿ ಅಧಿಕಾರಿಗಳ ವಿರುದ್ಧ ಕಿಡಿ: ಮುದ್ದೇಬಿಹಾಳ ತಾಲ್ಲೂಕಿನ ಆರೇಮುರಾಳದಲ್ಲಿ ಮನೆ ಬಿದ್ದು ಮರ‍್ನಾಲ್ಕು ಜನ ಗಾಯಗೊಂಡಿರುವ ವಿಷಯ ತಿಳಿದರೂ ಕೂಡ ಅಧಿಕಾರಿಗಳು ತ್ವರಿತವಾಗಿ ಬೀದಿಯಲ್ಲಿ ನಿಂತಿದ್ದ ಕುಟುಂಬಕ್ಕೆ ಆಸರೆಯಾಗುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.ಸ್ವತಃ ತಾವೇ ತಮ್ಮ ಕಾರ್ಯಕರ್ತರನ್ನು ಕರೆದುಕೊಂಡು ಮನೆಬಿದ್ದು ತೊಂದರೆಯಲ್ಲಿದ್ದ ಕುಟುಂಬದವರಿಗೆ ರೇಷನ್ ಕಿಟ್ ವಿತರಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ನಡಹಳ್ಳಿ ಅವರು, ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಕೆಲವು ಅಧಿಕಾರಿಗಳಿಗೆ ದುರಹಂಕಾರ ಬಂದಿದೆ.ಜನರು ಕಷ್ಟದಲ್ಲಿದ್ದಾಗ ಸ್ಪಂದಿಸದೇ ಯಾವಾಗಲಾದರೂ ಹೋದರೆ ನಡೆಯುತ್ತದೆ ಎಂಬ ಭಾವನೆಯುಳ್ಳವರಾಗಿದ್ದಾರೆ. ಇದರಿಂದಲೇ ತಾಲ್ಲೂಕಿನಲ್ಲಿ ಸಂತ್ರಸ್ಥರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ ಎಂದು ಹರಿಹಾಯ್ದರು.

ಮನೆ ಬಿದ್ದ ಕೂಡಲೇ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಸಂತ್ರಸ್ಥ ಕುಟುಂಬಕ್ಕೆ ತ್ವರಿತವಾಗಿ ಮೂಲಭೂತ ಸೌರ‍್ಯ,ದಿನಸಿ ಪದಾರ್ಥ, ಪರಿಹಾರ ಧನ ಒದಗಿಸಬೇಕು. ಆದರೆ ಅಧಿಕಾರಿಗಳು ಇದನ್ನು ಬೇಗನೇ ಮಾಡಲಿಲ್ಲ ಎಂದು ದೂರಿದರು. ಈ ಸಂದರ್ಭದಲ್ಲಿ ಮುಖಂಡರಾದ ಗಿರೀಶಗೌಡ ಪಾಟೀಲ, ಅಪ್ಪು ಧನ್ನೂರ,ರಮೇಶ ವಗ್ಗರ,ರವೀಂದ್ರ ಬಿರಾದಾರ, ಬಸವರಾಜ ಸರೂರ,ಪಿಡಿಒ ಕಲ್ಮೇಶ ಕುಂಬಾರ,ರಿಯಾಜ ನಾಯ್ಕೋಡಿ ಇದ್ದರು.

ಶಾಸಕ ನಾಡಗೌಡ ಭೇಟಿ: ತಾಲ್ಲೂಕುಡಾಳಿತದಿಂದ ನೆರವು:
ಮಾಜಿ ಶಾಸಕ ನಡಹಳ್ಳಿ ಭೇಟಿ ನೀಡಿದ ಹೋದ ಬಳಿಕ ಹಾಲಿ ಶಾಸಕ ಸಿ.ಎಸ್.ನಾಡಗೌಡ , ತಹಸೀಲ್ದಾರ ಕೀರ್ತಿ ಚಾಲಕ, ತಾಪಂ ಇಒ ವೆಂಕಟೇಶ ವಂದಾಲ,ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬಿ.ಜಿ.ಮಠ, ಪಿಡಿಒ ಕಲ್ಮೇಶ ಕುಂಬಾರ ಭೇಟಿ ನೀಡಿ ಬಿದ್ದಿರುವ ಮನೆಯ ಕುಟುಂಬದ ಸದಸ್ಯರಿಂದ ಮಾಹಿತಿ ಪಡೆದುಕೊಂಡರು. ಪಿಡಿಒ ಕಲ್ಮೇಶ ಕುಂಬಾರ ಮಾತನಾಡಿ, ಸಂತ್ರಸ್ಥ ಕುಟುಂಬಕ್ಕೆ ತಾತ್ಕಾಲಿಕ ವಸತಿಗಾಗಿ ಗ್ರಾಮದಲ್ಲಿ ಮನೆಯೊಂದನ್ನು ಬಾಡಿಗೆ ಪಡೆದು ಸ್ಥಳಾಂತರಿಸಲಾಗಿದೆ. ದಿನಸಿ, ಹಾಸಿಗೆ, ಹೊದಿಕೆ, ಪಾತ್ರೆ ನೀಡಿದ್ದೇವೆ ಎಂದು ತಿಳಿಸಿದರು. ಮುಖಂಡ ರಾಯನಗೌಡ ತಾತರೆಡ್ಡಿ ಇದ್ದರು. ಮನೆಯೊಂದನ್ನು ಬಾಡಿಗೆ ಪಡೆದು ಸ್ಥಳಾಂತರಿಸಲಾಗಿದೆ. ದಿನಸಿ, ಹಾಸಿಗೆ, ಹೊದಿಕೆ, ಪಾತ್ರೆ ನೀಡಿದ್ದೇವೆ ಎಂದು ತಿಳಿಸಿದರು. ಮುಖಂಡ ರಾಯನಗೌಡ ತಾತರೆಡ್ಡಿ ಇದ್ದರು.

Latest News

ಲಕ್ಷ್ಮೀ ಅಡಗಿಮನಿ ರಾಜ್ಯಕ್ಕೆ 6ನೇ ಸ್ಥಾನ :                 ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜು ಅಮೋಘ ಸಾಧನೆ

ಲಕ್ಷ್ಮೀ ಅಡಗಿಮನಿ ರಾಜ್ಯಕ್ಕೆ 6ನೇ ಸ್ಥಾನ : ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜು ಅಮೋಘ ಸಾಧನೆ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ

ಸರ್ವ ಸಮಾಜದ ಬಾಂಧವರೊoದಿಗೆ ಬಸವ ಜಯಂತಿ ಆಚರಣೆ

ಸರ್ವ ಸಮಾಜದ ಬಾಂಧವರೊoದಿಗೆ ಬಸವ ಜಯಂತಿ ಆಚರಣೆ

ಮುದ್ದೇಬಿಹಾಳ : ಪಟ್ಟಣದಲ್ಲಿ ಮಾ.20 ರಂದು ನಡೆಯಲಿರುವ ವಿಶ್ವ ಗುರು ಬಸವಣ್ಣನವರ ಜಯಂತಿಯನ್ನು ಸರ್ವ

ನಾಗರಬೆಟ್ಟ ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ

ನಾಗರಬೆಟ್ಟ ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟದ ಬಸ್ ನಿಲ್ದಾಣದ ಸಮೀಪದಲ್ಲಿರುವ ಆಕ್ಸಫರ್ಡ್ ಮಠ್ಸ್ ಸಮೂಹ ಶಿಕ್ಷಣ

ಮುದ್ದೇಬಿಹಾಳ ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ ಶೇ.100ರಷ್ಟು ಫಲಿತಾಂಶ

ಮುದ್ದೇಬಿಹಾಳ ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ ಶೇ.100ರಷ್ಟು ಫಲಿತಾಂಶ

ಮುದ್ದೇಬಿಹಾಳ : ಪಟ್ಟಣದ ಬಿದರಕುಂದಿ ರಸ್ತೆಯಲ್ಲಿರುವ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನ ಫಲಿತಾಂಶ

ಡೆತ್ ನೋಟ್ ಬರೆದಿಟ್ಟು ಖಾಸಗಿ ಟ್ರಾವೆಲ್ಸ್ ಏಜೆಂಟ್ ಆತ್ಮಹತ್ಯೆ

ಡೆತ್ ನೋಟ್ ಬರೆದಿಟ್ಟು ಖಾಸಗಿ ಟ್ರಾವೆಲ್ಸ್ ಏಜೆಂಟ್ ಆತ್ಮಹತ್ಯೆ

ಮುದ್ದೇಬಿಹಾಳ : ಸಾಲಗಾರರಿಗೆ ಕೊಟ್ಟಿದ್ದ ಹಣ ಮರಳಿ ಕೊಡದ ಕಾರಣಕ್ಕೆ ಮನನೊಂದು ಖಾಸಗಿ ಟ್ರಾವೆಲ್ಸ್ ಏಜೆಂಟ್‌ವೊಬ್ಬರು ಜಮೀನೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ತಾಲ್ಲೂಕಿನ ಬಿದರಕುಂದಿ ಗ್ರಾಮದ ಹತ್ತಿರ ಬೆಳಕಿಗೆ ಬಂದಿದೆ. ಮುದ್ದೇಬಿಹಾಳದಲ್ಲಿ ಎಸ್.ಆರ್.ಎಸ್ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ ಮೂಲತಃ ಗೋನಾಳ ಎಸ್.ಎಚ್.ಗ್ರಾಮದ ನಿವಾಸಿಯಾಗಿದ್ದ ಚನ್ನಯ್ಯ ಗಂಗಯ್ಯ ಹಿರೇಮಠ(45)ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ನನ್ನ ಸಾವಿಗೆ ರವಿ ನಾಲವಡೆ ಹಾಗೂ ವೈಜನಾಥ ಮರಾಠೆ ಎಂಬುವರು ಕಾರಣರಾಗಿದ್ದಾರೆ ಎಂದು ನಾಲ್ಕು

ಹೋಳ್ಕರ್ ಅವಾರ್ಡ್ ಪರೀಕ್ಷೆಗೆ 900 ವಿದ್ಯಾರ್ಥಿಗಳು ಭಾಗಿ : ಪ್ರತಿಭಾನ್ವಿತ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ-ಎಂ.ಎನ್.ಮದರಿ

ಹೋಳ್ಕರ್ ಅವಾರ್ಡ್ ಪರೀಕ್ಷೆಗೆ 900 ವಿದ್ಯಾರ್ಥಿಗಳು ಭಾಗಿ : ಪ್ರತಿಭಾನ್ವಿತ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ-ಎಂ.ಎನ್.ಮದರಿ

ಮುದ್ದೇಬಿಹಾಳ : ಬಡ,ಕೂಲಿ ಕಾರ್ಮಿಕರ ಪ್ರತಿಭಾವಂತ ಮಕ್ಕಳು ಉನ್ನತ ಶಿಕ್ಷಣ ಪಡೆದುಕೊಳ್ಳಲು ನಮ್ಮ ವಿದ್ಯಾಸಂಸ್ಥೆಯಿoದ ಅಗತ್ಯ ಸಹಕಾರ ಒದಗಿಸಲಾಗುವುದು ಎಂದು ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು,ಸಮಾಜ ಸೇವಕರಾದ ಎಂ.ಎನ್.ಮದರಿ ಹೇಳಿದರು. ಪಟ್ಟಣದ ಅಭ್ಯುದಯ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಹಿಲ್ಯಾದೇವಿ ಹೋಳ್ಕರ್ ಅವಾರ್ಡ್ ಪರೀಕ್ಷೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಅವರು ಮಾತನಾಡಿದರು.2017ರಿಂದ ಇಲ್ಲಿವರೆಗೆ ವಿವಿಧ ಸಾಧನೆಗಳನ್ನು ಶಾಲೆ ಮಾಡುತ್ತ ಬಂದಿದೆ.ಇಬ್ಬರು