ಮುಧೋಳ :ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಶಿಕ್ಷಕರ ದಿನಾಚಾರಣೆ ನಿಮಿತ್ಯ ಶಿಕ್ಷಕರ ಕವಿಗೋಷ್ಠಿ ಯು ನಗರದ ಕಸಾಪ ಭವನದಲ್ಲಿ ಭಾನುವಾರ ಅ.21 ರಂದು ಹಮ್ಮಿಕೊಳ್ಳಲಾಗಿದೆ.
ಉದ್ಘಾಟನೆಯನ್ನು ಬಿಇಓ ಎಸ್. ಎಮ್. ಮುಲ್ಲಾ ನೆರವೇರಿಸುವರು ಉದ್ಘಾಟನೆಯನ್ನು ಖ್ಯಾತ ಸಾಹಿತಿ ವೈದ್ಯ ಡಾ.ಶಿವಾನಂದ ಕುಬಸದ ವಹಿಸುವರುಶ್ರೀಶೈಲ ಹುನ್ನೂರ ಆಶಯ ನುಡಿ ನುಡಿಯಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ ಪ್ರಕಾಶ ಬೆಳಗಲಿ, ಜ್ಯೋತಿ ಪಾಟೀಲ, ರಮೇಶ ಕಮತಗಿ, ರಮೇಶ ನಿಡೋಣಿ, ಸಾಹಿತಿ ವೆಂಕಟೇಶ ಗುಡೆಪ್ಪನವರ, ಕಸಾಪ ಅಧ್ಯಕ್ಷ ಆನಂದ ಪೂಜಾರಿ ಉಪಸ್ಥಿತರಿರುವರು.
ವಿದ್ಯಾಕುಮಾರ ಬಡಿಗೇರ, ರಾಮಪ್ಪ ರೇವಪ್ಪ ಶಿವಾಪೂರತ, ಸ್ನೇಹಾ ಹಿರೇಮಠ ಸೇರಿದಂತೆ 35 ಶಿಕ್ಷಕ ಕವಿಗಳು ಕವನ ವಾಚನ ಮಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ನಗರದ, ಟಿ.ಪಿ.ಟಿ.ಎಸ್. (ಹಳೆಯ ಸೊಸೈಟಿ) ಅಧ್ಯಕ್ಷ ವಿ. ಎಂ. ಗಾಣಿಗೇರ, ಆರ್. ಪಿ. ಅಚಾರಟ್ಟಿ ಮಲ್ಲಿಕಾರ್ಜುನ ತಲ್ಲೂರ, ಎಸ್. ಎಸ್. ವಿರಕ್ತಮಠ, ಬಸವರಾಜ ಬಳ್ಳಾರಿ, ಮಹೇಶ ದಿವಾಣ ಅವರನ್ನು ಸನ್ಮಾನಿಸಲಾಗುತ್ತದೆ.







