ಮುದ್ದೆಬಿಹಾಳ : ಆನ್ಲೈನ್ ಪೋರ್ಟಲ್ಗಳ ಅನಿಯಂತ್ರಿತ ಕಾರ್ಯನಿರ್ವಹಣೆ ಮತ್ತು ದರೋಡೆಕೋರತನದ ಬೆಲೆ ಅಕ್ರಮಗಳು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಔಷಧ ವ್ಯಾಪಾರಸ್ಥರು ಮೇ.20 ರಂದು ಔಷಧಿ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದು ಈ ಕುರಿತಂತೆ ವಿಜಯಪುರ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದಿoದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ.
ಈಚೇಗೆ ಮನವಿ ಪತ್ರ ಸಲ್ಲಿಸಿರುವ ಸಂಘದ ಪದಾಧಿಕಾರಿಗಳು,ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ ಆ್ಯಂಡ್ ಡ್ರಗ್ಗಿಸ್ಟ್ ಸರ್ಕಾರದ ನಿಷ್ಕಿçಯತೆಯನ್ನು ವಿರೋಧಿಸಿ ಮೇ.20 ರಂದು ಒಂದು ದಿನದ ರಾಷ್ಟ್ರವ್ಯಾಪಿ ಬಂದ್ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಪದೇ ಪದೇ ಜ್ಞಾಪಕ ಪತ್ರಗಳ ಮೂಲಕ ವಿನಂತಿಸಿದರೂ ಇ-ಪೋರ್ಟಲ್ಗಳ ಮೂಲಕ ವಹಿವಾಟು ನಡೆಸುವ ಔಷಧ ವ್ಯಾಪಾರವು ಬೀರುವ ಗಂಭೀರ ಸಮಸ್ಯೆಗಳ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ. ಇದು ದೇಶಾದ್ಯಂತ ಔಷಧ ವ್ಯಾಪಾರಿಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಗ್ರಾಮೀಣ ಮತ್ತು ಅರೆ-ನಗರಗಳ ಪ್ರದೇಶಗಳಲ್ಲಿನ ಸಣ್ಣ ಔಷಧ ವ್ಯಾಪಾರಿಗಳು ವಹಿವಾಟು ನಡೆಸುವುದು ಕಷ್ಟಕರವಾಗಿದ್ದು ಔಷಧಗಳು ಸರಿಯಾದ ಸಮಯಕ್ಕೆ ಸಿಗದೇ ಅಮೂಲ್ಯ ಪ್ರಾಣಗಳು ಹಾನಿಯಾಗುವ ಅಪಾಯನ್ನು ಸೃಷ್ಟಿಸುತ್ತಿದೆ. ತಾತ್ಕಾಲಿಕ ಕೋವಿಡ್-ಅವಧಿಯ ಅಧಿಸೂಚನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಬೇಕು. ಇ-ಫಾರ್ಮಾಸಿ ಸಂಬAಧಿತ ಅಧಿಸೂಚನೆ ಜಿ.ಎಸ್.ಆರ್ 817 (ಇ) ಅನ್ನು ಹಿಂಪಡೆಯಬೇಕು. ಕಾರ್ಪೋರೇಟ್ಗಳಿಂದ ಅನ್ಯಾಯದ ಆಳವಾದ ರಿಯಾಯಿತಿಯನ್ನು ನಿಲ್ಲಿಸಲು. “ಲೆವೆಲ್-ಪ್ಲೇಯಿಂಗ್ ಫೀಲ್ಡ್” ನೀತಿಯನ್ನು ಪರಿಚಯಿಸಬೇಕು ಎಂದು ವಿಜಯಪುರ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದಿAದ ಸಲ್ಲಿಸಲಾದ ಮನವಿಯಲ್ಲಿ ತಿಳಿಸಲಾಗಿದೆ.
ಸಂಘದ ಅಧ್ಯಕ್ಷ ಕೆ.ಆರ್.ಎತ್ತಿನಮನಿ, ಕಾರ್ಯದರ್ಶಿ ಸಂಗಮೇಶ ಗುಡ್ಡೋಡಗಿ,ಮುದ್ದೇಬಿಹಾಳ ತಾಲ್ಲೂಕು ಅಧ್ಯಕ್ಷ ಜಿ.ಎಂ.ಹಿರೇಮಠ್,ಉಪಾಧ್ಯಕ್ಷೆ ಕವಿತಾ ಪಾಟೀಲ್,ಕಾರ್ಯದರ್ಶಿ ಇಲಿಯಾಸ್ ಮಾಗಿ,ಜಿಲ್ಲಾ ಸಹ ಕಾರ್ಯದರ್ಶಿ ಶಿವು ಸಿದ್ದಾಪುರ,ರವೀಂದ್ರ ಐಹೊಳೆ ,ಮಲ್ಲಿಕಾರ್ಜುನ ಓತಗೇರಿ,ಮಂಜುನಾಥ್ ಹಿರೇಮಠ , ರೂಪಾ ಪತ್ತಾರ್, ದಿನೇಶ್ ಲೋಕರೆ,ಸಂಜಯ್ ಓಸ್ವಾಲ್, ಎಚ್.ಎ.ಪಾಟೀಲ್, ಕುಮಾರಸ್ವಾಮಿ ಶಿವಯೋಗಿಮಠ, ಗೌರಿಶಂಕರ್ ಹಿರೇಮಠ್, ಮಲ್ಲಿಕಾರ್ಜುನ್ ಕಲ್ಲುಂಡಿ, ಶಬೀರ್ ಮಿರ್ಜಾ, ಪಾಂಡು ಥೋರಾಥ್ ಮೊದಲಾದವರು ಮನವಿಗೆ ಸಹಿ ಮಾಡಿದ್ದಾರೆ







