ಮುದ್ದೇಬಿಹಾಳ : ಅಂಜುಮನ್ ಸಂಸ್ಥೆ ಕೇವಲ ಬಡವರು,ಅನಾಥರು ಆರ್ಥಿಕವಾಗಿ ಹಿಂದುಳಿದವರಿಗಾಗಿ ಸಮಾಜದ ಪ್ರತಿಯೊಬ್ಬರಿಗೂ ಸೇರಿದ ಸಂಸ್ಥೆಯಾಗಿದೆ.ಆಯ್ಕೆಯಾಗಿರುವ ಎಲ್ಲ ಸದಸ್ಯರು ಸಮಾಜದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಉದ್ಯಮಿ ಅಯೂಬ್ ಮನಿಯಾರ್ ಹೇಳಿದರು.
ಪಟ್ಟಣದ ಬೆಂಗಳೂರು ಬೇಕರಿ ಹಾಲ್ನಲ್ಲಿ ಮಂಗಳವಾರ ಅಂಜುಮನ್ ಹಿತರಕ್ಷಣಾ ವೇದಿಕೆಯಿಂದ ಹಮ್ಮಿಕೊಂಡಿದ್ದ ಅಂಜುಮನ್ ಚುನಾವಣೆಯಲ್ಲಿ ಆಯ್ಕೆಯಾದ ನೂತನ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಸ್ಥೆಗೆ ಯುವ ಉತ್ಸಾಹಿ ಸದಸ್ಯರು ಆಯ್ಕೆಯಾಗಿದ್ದೀರಿ.ಅಂಜುಮನ್ ಸಂಸ್ಥೆಗೆ ಇದ್ದ ಘನತೆಯನ್ನು ಮರುಕಳಿಸುವ ಕೆಲಸ ನಿಮ್ಮಿಂದಾಗಬೇಕು.ಪ್ರಾಮಾಣಿಕ ಸೇವೆಯಿಂದ ಸಂಸ್ಥೆಯ ಕೀರ್ತಿಯನ್ನು ಉನ್ನತಿಗೇರಿಸಬೇಕು ಎಂದರು.
ಮೌಲಾನಾ ಅಯೂಬ್ ಮುಲ್ಲಾ ಮಾತನಾಡಿ, ಅಂಜುಮನ್ ಸಂಸ್ಥೆಯಿoದ ಅಗತ್ಯವಿರುವವರಿಗೆ ನೆರವು ನೀಡುವುದರ ಜತೆಗೆ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಆರ್ಥಿಕ ಸಹಾಯ ನೀಡುವ ಕೆಲಸ ಮಾಡಬೇಕು.ಅವರನ್ನು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಕ್ಕೇರಿಸುವ ಕಾರ್ಯಕ್ಕೆ ಆದ್ಯತೆ ನೀಡಬೇಕು.ಅಂಜುಮನ್ ಸಂಸ್ಥೆ ಯಾವುದೇ ವ್ಯಕ್ತಿಯ ಸ್ವತ್ತಲ್ಲ.ಇದು ಇಡೀ ಸಮುದಾಯದ ಆಸ್ತಿ ಮತ್ತು ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಅಂಜುಮನ್ ಹಿತರಕ್ಷಣಾ ವೇದಿಕೆ ಸದಸ್ಯ ಮಹೆಬೂಬ ಹಡಲಗೇರಿ ಮಾತನಾಡಿ, ನಮ್ಮದು ಅಂಜುಮನ್ ಸಂಸ್ಥೆಗೆ ಚುನಾವಣೆ ನಡೆಸಬೇಕೆಂಬುದು ನಿರಂತರ ಹೋರಾಟವಾಗಿತ್ತು.ನೂತನವಾಗಿ ಆಯ್ಕೆಯಾಗಿರುವ ಸದಸ್ಯರಿಗೆ ಹೊಸ ಸವಾಲುಗಳು ಬಂದೇ ಬರುತ್ತವೆ.ಅವುಗಳನ್ನು ಸಮಾಧಾನವಾಗಿ ಎದುರಿಸುವಂತೆ ತಿಳಿಸಿದರಲ್ಲದೇ ಸರ್ಕಾರದಿಂದ ದೊರೆಯುವ ಸೌಲಭ್ಯ ಹಾಗೂ ಅನುದಾನಗಳನ್ನು ಪಡೆಯಲು ಪ್ರಯತ್ನಿಸಬೇಕು. ಶಿಕ್ಷಣ ಸಂಸ್ಥೆಗಳು, ಕಾಲೇಜುಗಳು ಹಾಗೂ ಸಾಮಾಜಿಕ ಅಭಿವೃದ್ಧಿ ಕಾರ್ಯಗಳಿಗೆ ದೀರ್ಘಕಾಲೀನ ಯೋಜನೆ ರೂಪಿಸಿ ಶಾಂತಿ, ಸಹೋದರತ್ವ ಹಾಗೂ ಸೌಹಾರ್ದತೆಯಿಂದ ಸಮಾಜ ಏಳ್ಗೆಗೆ ಶ್ರಮಿಸಬೇಕು ಎಂದು ಹೇಳಿದರು.
ಜಮಾತೆ ಇಸ್ಲಾಮೀ ಹಿಂದ ಸಂಚಾಲಕ ನೂರೇನಬಿ ನದಾಫ ಮಾತನಾಡಿ,ನೂತನ ಸಮಿತಿಯ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ವಕೀಲರಾದ ಎಂ.ಎ.ಲಿoಗಸೂರು ಮಾತನಾಡಿದರು.ಮುಖಂಡರಾದ ಹಾಜಿ ಹಸನಸಾಬ ಮಕಾನದಾರ,ಅಬ್ದುಲಕರೀಮ ಮೂಲಿಮನಿ,ರಜಾಕಸಾಬ ಮುಲ್ಲಾ ಇದ್ದರು. ನಜೀರ್ಅಹ್ಮದ್ ಮಮದಾಪುರ ನಿರೂಪಿಸಿದರು.ವಕೀಲರಾದ ಶಬ್ಬೀರ ಬಾಗಲಕೋಟ ಸ್ವಾಗತಿಸಿದರು.
ಅಂಜುಮನ್ ಕಮೀಟಿ ಅಧ್ಯಕ್ಷ ಅಲ್ಲಾಭಕ್ಷ ದೇಸಾಯಿ,ಉಪಾಧ್ಯಕ್ಷ ಇರ್ಫಾನ ಕೂಡಗಿ,ಕಾರ್ಯದರ್ಶಿ ನೂರೇಹುಸೇನ ನದಾಫ,ಖಜಾಂಚಿ ಲಾಲಸಾಬ ಮೋಮಿನ, ಸದಸ್ಯರಾದ ಗುಲಾಮೊಹ್ಮದ ದಫೇದಾರ,ಯಾಸೀನ ಸೋಠೆ,ಇಸ್ಮಾಯಿಲ್ ಗೋಲಂದಾಜ ಸೇರಿದಂತೆ ಕಮೀಟಿಯ ಸರ್ವ ಸದಸ್ಯರನ್ನು ಸನ್ಮಾನಿಸಲಾಯಿತು. ಅಂಜುಮನ್ ಹಿತರಕ್ಷಣಾ ವೇದಿಕೆಯ ಮುಖಂಡರಾದ ಎಂ.ಆರ್.ಮುಲ್ಲಾ,ವಕೀಲರಾದ ಶಬ್ಬೀರ ಬಾಗಲಕೋಟ,ಎ.ಎ.ಹಳ್ಳೂರ,ಎನ್.ಬಿ.ಮುದ್ನಾಳ,ಎನ್.ಆರ್.ಮೊಕಾಶಿ, ಯೂಸೂಫ ಸಾತಿಹಾಳ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.







