A life without sports is like a fruit eaten by an insect - A.C. Kerura

ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ – ಎ.ಸಿ.ಕೆರೂರ

ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ – ಎ.ಸಿ.ಕೆರೂರ

ಅಡವಿ ಹುಲಗಬಾಳ : ಅಹಿಲ್ಯದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆ ಅಡವಿ ಹುಲುಗಬಾಳದಲ್ಲಿ 2025-26 ನೇ ಸಾಲಿನ ನಾಲತವಾಡ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟವು ಜರುಗಿದವು. ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ, ಮನುಷ್ಯ ಸದೃಢವಾಗಿ ಇರಬೇಕೆಂದರೆ ಪ್ರತಿದಿನ ಯೋಗ, ಕ್ರೀಡೆಯಲ್ಲಿ ಭಾಗವಹಿಸುವುದು ಅತಿ ಮುಖ್ಯ, ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ಎನ್ನುವಂತೆ, ದೇಹವನ್ನು ದಂಡಿಸಿದಾಗ ಮಾತ್ರ ಆರೋಗ್ಯದಿಂದಿರಲು ಸಾಧ್ಯ.

ಈಗ ಎಲ್ಲರೂ ಯಂತ್ರಗಳಿಗೆ ಮೊರೆ ಹೋಗುವುದರಿಂದ ದೇಹವನ್ನು ದಂಡಿಸಲು ಆಗುತ್ತಿಲ್ಲ. ಹಾಗಾಗಿ ರೋಗ-ರುಜಿನುಗಳಿಗೆ ಅಣಿ ಆಗುತ್ತಿದ್ದಾನೆ. ಸೋಲು ಗೆಲುವನ್ನು ಸಮಾನತೆಯಿಂದ ಕಾಣುವ ಗುಣವನ್ನು ಹೊಂದಿರಬೇಕು. ಕ್ರೀಡಾಪಟುಗಳೊಂದಿಗೆ ಬಂದಂತಹ ಹಿತೈಷಿಗಳು ಯಾವುದೇ ರೀತಿಯಾಗಿ ಜಗಳಕ್ಕೆ ಅಣಿಯಾಗದಂತೆ, ಕ್ರೀಡೆಯಲ್ಲಿ ಭಾಗವಹಿಸಬೇಕು. ಈ ವರ್ಷ ಅರ್ಹತಾ ಪ್ರಮಾಣ ಪತ್ರವನ್ನು ಆನ್ಲೈನ್ ಮುಖಾಂತರವಾಗಿ ತೆಗೆದುಕೊಳ್ಳುತ್ತಿರುವುದರಿಂದ ಬೇರೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಕ್ರೀಡಾಕೂಟದಲ್ಲಿ ಭಾಗವಹಿಸಲು ಕಡಿವಾಣವನ್ನು ಸರಕಾರ ಹಾಕಿದ್ದು ತುಂಬಾ ಸಂತೋಷ. ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ನಿರ್ಣಾಯಕರು ಕೊಟ್ಟಂತಹ ನಿರ್ಣಯಗಳಿಗೆ ಬದ್ಧರಾಗಬೇಕು. ನಿರ್ಣಾಯಕರು ಸಹ ನೀಡುವ ತೀರ್ಪು ಎಲ್ಲರೂ ಒಪ್ಪುವಂತಿರಬೇಕು. ಒಳ್ಳೆಯ ಮತ್ತು ನೈಜ ಪ್ರತಿಭಾವಂತ ಕ್ರೀಡಾಪಟುಗಳನ್ನು ವಲಯ, ತಾಲೂಕು, ಜಿಲ್ಲಾ , ವಿಭಾಗ, ರಾಜ್ಯ ಮಟ್ಟಕ್ಕೆ ಕಳಿಸುವರು ನಾವು ಆಗಬೇಕು. ಆಡಿಸುವರ ಕಣ್ಣು ಎರಡು ಆದರೆ ನೋಡುವವರ ಕಣ್ಣು ನೂರಾರು ಆಗಿರುತ್ತವೆ, ಹಾಗಾಗಿ ತೀರ್ಪು ನ್ಯಾಯ ಸಮ್ಮತವಾಗಿರಬೇಕು ಎಲ್ಲ ಮಕ್ಕಳು ನಮ್ಮ ಶಾಲೆಯ ಮಕ್ಕಳು ಎಂದು ನಿರ್ಣಯವನ್ನು ನೀಡಬೇಕು ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸರ್ಕಾರಿ ಗ್ರೇಡ್ -1 ದೈಹಿಕ ಶಿಕ್ಷಕರ ಸಂಘ,ಮುದ್ದೇಬಿಹಾಳ ಅಧ್ಯಕ್ಷರಾದ ಎ.ಸಿ.ಕೆರೂರ ಹೇಳಿದರು.
ಇನ್ನೋರ್ವ ಅತಿಥಿಯಾಗಿ ಆಗಮಿಸಿದ್ದ ರಾಹುತ ಪೂಜಾರಿ ಅಧ್ಯಕ್ಷರು ದೈ.ಶಿ.ಶಿ. ಸಂಘ ತಾಳಿಕೋಟೆ ಎಲ್ಲಿ ಕ್ರೀಡಾಂಗಣಗಳು ಕ್ರೀಡಾಪಟುಗಳಿಂದ ತುಂಬಿರುತ್ತವೆ ಆ ಊರಲ್ಲಿ ಆಸ್ಪತ್ರೆಗಳು ಖಾಲಿ ಖಾಲಿ ಇರುತ್ತವೆ, ಕ್ರೀಡೆ, ಕ್ರೀಡಾ ಸ್ಪೂರ್ತಿಯಿಂದ ನ್ಯಾಯಯುತವಾಗಿ ಮಾಡಬೇಕು, ಆಟದಿಂದ ನಾಯಕತ್ವವನ್ನು ಹೊಂದಾಣಿಕೆ ಗುಣ ಬೆಳೆಸಿಕೊಳ್ಳಬೇಕು ಹೊರತು ಸಿಟ್ಟು, ದ್ವೇಷ, ಗುಣದಿಂದ ದೂರ ಇರಬೇಕು.

ಈ ವಲಯದ ಕ್ರೀಡಾಪಟುಗಳು ರಾಜ್ಯಮಟ್ಟದವರೆಗೆ ಆಡಿ ನಮ್ಮ ವಲಯದ ಕೀರ್ತಿಯನ್ನು ತರಬೇಕು ಎಂದು ಅಧ್ಯಕ್ಷತೆ ವಹಿಸಿದ ಕಿರಣ್ ಮದರಿ , ಅಧ್ಯಕ್ಷರು ಅಹಿಲ್ಯ ದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆ ಅಡವಿ ಹುಲಗಬಾಳ ಶುಭವನ್ನು ಕೋರಿದರು . ಕ್ರೀಡಾ ಧ್ವಜಾರೋಹಣವನ್ನು ಅಂಬರೀಶ್ ಮದರಿ, ನಿರ್ದೇಶಕರು ಅಹಿಲ್ಯ ದೇವಿ ಶಿಕ್ಷಣ ಸಂಸ್ಥೆ ಅಡವಿ ನಿರ್ವಹಿಸಿದರು, ವೇದಿಕೆ ಮೇಲಿದ್ದ ಕಿರಣ್ ಮದರಿ , ಎ.ಸಿ.ಕೆರೂರ, ಎಂ.ಎಸ್.ಗುಡಗುಂಟಿ ಮುಖ್ಯ ಗುರುಗಳು ಸರ್ಕಾರಿ ಪ್ರೌಢಶಾಲೆ ಅಡವಿ ಹುಲುಗಬಾಳ, ಬಿ.ಬಿ.ಪೂಜಾರಿ, ರಾಹುತ್ ಪೂಜಾರಿ, ಮಲ್ಲಿಕಾರ್ಜುನ ರಾಯಗೊಂಡ, ಪಾರಿವಾಳಗಳನ್ನು ಹಾರಿ ಬಿಡುವುದರಿಂದ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು .
ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಶ್ರೀಮತಿ.ರೇಖಾ ಹಿರೇಮಠ, ಸ್ವಾಗತವನ್ನು ಬಿ.ಕೆ.ಪೂಜಾರಿ ಮುಖ್ಯ ಗುರುಗಳು ಅಭ್ಯುದಯ ಪ್ರೌಢಶಾಲೆ ಅಡವಿ ಹುಳಗಬಾಳ, ನಿರೂಪಣೆ ಬಿ.ಬಿ.ತಳವಾರ ಶಿಕ್ಷಕರು ಅಭ್ಯುದಯ ಪ್ರೌಢಶಾಲೆ ಅಡವಿಹುಲಗಬಾಳ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ವಲಯದ ಕ್ರೀಡಾಪಟುಗಳು ತಂಡದ ವ್ಯವಸ್ಥಾಪಕರು ಮತ್ತು ನಿರ್ಣಾಯಕರಾಗಿ, ವೀರೇಶ್ ಗದಗ, ಮೋಹನ್ .ಬಿ.ಪಾಟೀಲ್, ಬಲಭೀಮ ಮಾದರ್, ಎಸ್. ಎಸ್.ಹಿರೇಮಠ್ , ಎಸ್.ಪಿ.ಹಂಡರಗಲ್, ಪ್ರಕಾಶ್ ಜಂಬಿಗಿ, ಎನ್.ವಿ. ಪತ್ತಾರ್, ಎಚ್.ಎಲ್. ಭಜಂತ್ರಿ, ಎಚ್.ಕೆ.ನಾಟಿಕರ್, ವಿಶ್ವನಾಥ್ ಪಾಟೀಲ್, ಬಸವರಾಜ್ ಚಳ್ಳಗಿ, ಡಿ.ಎ.ಜಾವೂರ್, ಡಿ.ಎ.ಮಂಕಣಿ, ಶ್ರೀಮತಿ ಗೀತಾ ಯರಂತಲಿಮಠ, ಶ್ರೀಮತಿ ಡಿ.ಬಿ.ಪೂಜಾರಿ, ಮುಂತಾದವರು ಭಾಗವಹಿಸಿದ್ದರು.

Latest News

ವಿದ್ಯಾಸ್ಪೂರ್ತಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ:      ಸ್ವಾತಂತ್ರ್ಯದ ಉಳಿವಿಗೆ ಶ್ರಮಿಸೋಣ-ರಾಜೇಶ್ವರಿ ಪಾಟೀಲ್

ವಿದ್ಯಾಸ್ಪೂರ್ತಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ: ಸ್ವಾತಂತ್ರ್ಯದ ಉಳಿವಿಗೆ ಶ್ರಮಿಸೋಣ-ರಾಜೇಶ್ವರಿ ಪಾಟೀಲ್

ಮುದ್ದೇಬಿಹಾಳ : ಲಕ್ಷಾಂತರ ಜನ ಹಿರಿಯರು,ಯುವಕರ ತ್ಯಾಗ,ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತಿದ್ದು ಅದನ್ನು

ತಂಗಡಗಿಯಲ್ಲಿ ಧ್ವಜಾರೋಹಣ: ಪೊಲೀಸರಿಗೆ ಸನ್ಮಾನ

ತಂಗಡಗಿಯಲ್ಲಿ ಧ್ವಜಾರೋಹಣ: ಪೊಲೀಸರಿಗೆ ಸನ್ಮಾನ

ಮುದ್ದೇಬಿಹಾಳ : ತಾಲ್ಲೂಕಿನ ತಂಗಡಗಿ ಗ್ರಾಮದ ಸ್ನೇಹಸಿರಿ ಸೇವಾ ಸಂಘದಿಂದ 80ನೇ ಸ್ವಾತಂತ್ರ್ಯೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.

ಮುದ್ದೇಬಿಹಾಳದಲ್ಲಿ ಸಂಭ್ರಮದ 80ನೇ ಸ್ವಾತಂತ್ರ್ಯೋತ್ಸವ; ಬರಗಾಲದ ಹೆಸರಿನಲ್ಲಿ ಜನರ ದಾರಿ ತಪ್ಪಿಸುವ ಹುನ್ನಾರ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳದಲ್ಲಿ ಸಂಭ್ರಮದ 80ನೇ ಸ್ವಾತಂತ್ರ್ಯೋತ್ಸವ; ಬರಗಾಲದ ಹೆಸರಿನಲ್ಲಿ ಜನರ ದಾರಿ ತಪ್ಪಿಸುವ ಹುನ್ನಾರ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಈ ವರ್ಷ ಹಿಂದೆoದಿಗಿoತಲೂ ಅಧಿಕ ಪ್ರಮಾಣದಲ್ಲಿ ಬರಗಾಲ ಕಾಡುತ್ತಿದೆ.ಆದರೆ ಕೆಲವರು ಬರಗಾಲವನ್ನು

ಶೇರುದಾರರಿಗೆ ಶೇ.12 ರಷ್ಟು ಲಾಭಾಂಶ ಘೋಷಣೆ;              ಶರಣ ವೀರೇಶ್ವರ ಬ್ಯಾಂಕಿಗೆ 1.15 ಕೋಟಿ ರೂ.ಲಾಭ-ಎಂ.ಎಸ್.ಪಾಟೀಲ್

ಶೇರುದಾರರಿಗೆ ಶೇ.12 ರಷ್ಟು ಲಾಭಾಂಶ ಘೋಷಣೆ; ಶರಣ ವೀರೇಶ್ವರ ಬ್ಯಾಂಕಿಗೆ 1.15 ಕೋಟಿ ರೂ.ಲಾಭ-ಎಂ.ಎಸ್.ಪಾಟೀಲ್

ಮುದ್ದೇಬಿಹಾಳ / ನಾಲತವಾಡ : ಗ್ರಾಹಕರ ಉತ್ತಮ ಸಹಕಾರ ಹಾಗೂ ಶೇರುದಾರರ ಬೆಂಬಲ,ಆಡಳಿತ ಮಂಡಳಿಯ

ಆ.11,12 ರಂದು ಶಾಸಕ ನಾಡಗೌಡರಿಂದ ಬರ ಪರಿಸ್ಥಿತಿ ವೀಕ್ಷಣೆ

ಆ.11,12 ರಂದು ಶಾಸಕ ನಾಡಗೌಡರಿಂದ ಬರ ಪರಿಸ್ಥಿತಿ ವೀಕ್ಷಣೆ

ಮುದ್ದೇಬಿಹಾಳ : ಕೆಎಸ್‌ಡಿಎಲ್ ಅಧ್ಯಕ್ಷ,ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಬರ ಪರಿಸ್ಥಿತಿ ಕುರಿತು ಆ.11,12 ರಂದು ಅವಲೋಕನ ನಡೆಸಿ ಬೆಳೆ ವೀಕ್ಷಣೆ ಮಾಡಲಿದ್ದಾರೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ. ಆ.11 ರದು ಬೆಳಗ್ಗೆ 11.30ಕ್ಕೆ ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಬರ ಪರಿಸ್ಥಿತಿ ಕುರಿತು ಚರ್ಚೆ, ಮದ್ಯಾಹ್ನ 2.30ಕ್ಕೆ ಬರಪೀಡಿತ ಪ್ರದೇಶಗಳಾದ ಹರಿಂದ್ರಾಳ,ಹಡಲಗೇರಿ ಗ್ರಾಮಗಳಲ್ಲಿ ಹತ್ತಿ,ತೊಗರಿ,ಸಜ್ಜೆ ಬೆಳೆಗಳ ವೀಕ್ಷಣೆ,ಸಂಜೆ 4ಕ್ಕೆ ಢವಳಗಿ ಹೋಬಳಿಯ ಹತ್ತಿ ತೊಗರಿ ಬೆಳೆಗಳ ವೀಕ್ಷಣೆ

ಸದಾ ಮುಖ ಗಂಟು ಹಾಕಿಕೊಂಡು ಇರಬೇಡಿ-ಜಯಸಿದ್ದೇಶ್ವರ ಶ್ರೀ

ಸದಾ ಮುಖ ಗಂಟು ಹಾಕಿಕೊಂಡು ಇರಬೇಡಿ-ಜಯಸಿದ್ದೇಶ್ವರ ಶ್ರೀ

ಮುದ್ದೇಬಿಹಾಳ : ಹಣ, ಆಸ್ತಿ, ಅಂತಸ್ತು, ಐಶ್ವರ್ಯ, ಉದ್ಯೋಗ ಮುಂತಾದವುಗಳ ಕೊರತೆಯಿಂದ ಮನುಷ್ಯ ಬಡವನಾಗುವುದಿಲ್ಲ ಬದಲಿಗೆ ಪರಸ್ಪರ ಮಾತನಾಡದಿರುವುದರಿಂದ, ಮುಖ ಗಂಟು ಹಾಕಿರುವುದರಿಂದ ಬಡವನಾಗಿ ಕಾಣುತ್ತಾನೆ. ಮನುಷ್ಯ ಬದುಕಿನಲ್ಲಿ ನೂರು ಕಾಲ ಬದುಕಿರುವಷ್ಟು ನಗು ಸಂಗ್ರಹಿಸಬೇಕು. ಗೆಳೆಯರ ನಡುವೆ ಸರಿ, ತಪ್ಪುಗಳ ಆರೋಗ್ಯಕರ ಚರ್ಚೆ ನಡೆಯಬೇಕು ಎಂದು ಹಿರೂರು ಜಯಸಿದ್ದೇಶ್ವರ ಸ್ವಾಮೀಜಿ ಹೇಳಿದರು. ಪಟ್ಟಣದ ಹಡಲಗೇರಿ ರಸ್ತೆ ಪಕ್ಕದಲ್ಲಿರುವ ಶ್ರೀ ಪದ್ಮಾವತಿ ದೇವಸ್ಥಾನದ ಸಮುದಾಯ ಭವನದಲ್ಲಿ ವಿಬಿಸಿ ಪ್ರೌಢಶಾಲೆಯ 1985-86ನೇ