ಮೈಸೂರು: ಈ ಕಾಂಗ್ರೆಸ್ ಸರ್ಕಾರ ದರಿದ್ರ ಸರ್ಕಾರ. ಈ ಸರ್ಕಾರಕ್ಕೆ ಅಂಗವಿಕಲರಿಗೆ ಮಾಶಾಸನ ಕೊಡುವ ಯೋಗ್ಯತೆ ಇಲ್ಲ. ಕಳೆದ ಆರು ತಿಂಗಳಿಂದ ಮಾಸಾಶನ ನೀಡಿಲ್ಲ. ಇಂತಹ ದರಿದ್ರ ಸರ್ಕಾರ ಒಂದಾದ ಮೇಲೆ ಒಂದರಂತೆ ಹಗರಣದಲ್ಲಿ ಮುಳುಗಿದೆ ಎಂದು ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ.ವಿಜಯೇಂದ್ರ(BY vijayendra) ಟೀಕಿಸಿದರು.
Join Our Telegram: https://t.me/dcgkannada
ಮೈಸೂರಿನಲ್ಲಿ ಆಯೋಜಿಸಿದ್ದ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಅವರಿಗೆ ಸಿದ್ದರಾಮಯ್ಯ ಅನ್ನಲ್ಲ. ಅಂದ್ರೆ, ಹಿಂದುಳಿದ ನಾಯಕನ ತುಳಿಯುವ ಪ್ರಯತ್ನ ಅಂತಾರೆ. ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳೇ ನಿಮ್ಮ ದರಿದ್ರ ಸರ್ಕಾರ ಬೇಡ. ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ವಿಜಯೇಂದ್ರ (BY vijayendra) ಒತ್ತಾಯಿಸಿದರು.
ದುರಹಂಕಾರದಿಂದ ವಿಪಕ್ಷಗಳಿಗೆ ಧಮ್ಕಿ ಹಾಕುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಸವಾಲು ಹಾಕುವೆ. ಬನ್ನಿ ಹಗರಣ ಬಿಚ್ಚಿಡಿ. ಅದರ ಬಗ್ಗೆ ಚರ್ಚೆ ಮಾಡೋಣ. ಅದು ಬಿಟ್ಟು ವಿಪಕ್ಷಗಳಿಗೆ ಧಮ್ಕಿ ಹಾಕುವುದನ್ನು ಬಿಟ್ಟು ಬಿಡಿ ಎಂದು ಗರಂ ಆಗಿ ಹೇಳಿದರು.
ಇದನ್ನೂ ಓದಿ: BJP-JDS ಪಾದಯಾತ್ರೆ ಸಮಾರೋಪಕ್ಕೂ ಮುನ್ನ ಚಾಮುಂಡಿ ಮೊರೆ ಹೋದ ಸಿಎಂ ಸಿದ್ದರಾಮಯ್ಯ
ಯಡಿಯೂರಪ್ಪ ಬಡವರ, ರೈತರ ನಾಯಕ. ಅವರ ರಾಜಕೀಯ ನಿವೃತ್ತಿ ಬಗ್ಗೆ ಮಾತಾಡುತ್ತಿರಲ್ಲ. ಅವರಿಗೆ 82 ವಯಸ್ಸಾಗಿದೆ. ಅವರನ್ನು ಕಂಡಿರೆ ನಿಮಗೆ ಇನ್ನೂ ಭಯ ಇದೆವೇ ಎಂದು ಕೆಣಕಿದರು.
ನಿಮ್ಮ ಸ್ಥಾನ ಉಳಿಸಿಕೊಳ್ಳಿ. ಯಡಿಯೂರಪ್ಪ ಬಗ್ಗೆ ಮಾತಾಡೋದು ಬಿಡಿ. ಅವರ ಮೇಲೆ ಮಾರಾಣಾಂತಿಕ ಹಲ್ಲೆ ಆದಾಗ, ಅವರು ಕೊನೆಯ ಉಸಿರು ಇರುವವರೆಗೂ ಹೋರಾಟ ಮಾಡುವ ಪ್ರತಿಜ್ಞೆ ಮಾಡಿದ್ದಾರೆ. ಅವರು ಬಡವರ ಪರ, ರೈತರ ಪರ ಇರುತ್ತಾರೆ. ಅವರ ರಾಜೀನಾಮೆ ಕುರಿತು ನೀಡಿದ ಹೇಳಿಕೆ ಹಿಂದಕ್ಕೆ ಪಡೆಯಿರಿ ಎಂದು ಸಲಹೆ ನೀಡಿದರು.