Fatal attack on college lecturer

ಕಾಲೇಜು ಉಪನ್ಯಾಸಕಿ ಮೇಲೆ ಮಾರಣಾಂತಿಕ ಹಲ್ಲೆ

ಕಾಲೇಜು ಉಪನ್ಯಾಸಕಿ ಮೇಲೆ ಮಾರಣಾಂತಿಕ ಹಲ್ಲೆ

ಮುದ್ದೇಬಿಹಾಳ(ವಿಜಯಪುರ ಜಿಲ್ಲೆ ) : ಮನೆ ಬಾಡಿಗೆ ಕೇಳುವ ನೆಪದಲ್ಲಿ ಮನೆಗೆ ಬಂದ ಆಗುಂತಕನೊಬ್ಬ ಕಾಲೇಜು ಉಪನ್ಯಾಸಕಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆಗೈದು ತಡೆಯಲು ಹೋದ ಉಪನ್ಯಾಸಕಿ ತಾಯಿಯನ್ನು ಎಳೆದಾಡಿದ ಘಟನೆ ಪಟ್ಟಣದ ಸಾಯಿ ನಗರದ ಹೇಮರಡ್ಡಿ ದೇವಸ್ಥಾನದ ಹಿಂಭಾಗದಲ್ಲಿ ಶನಿವಾರ ಮದ್ಯಾಹ್ನ ನಡೆದಿದೆ.

ಘಟನೆ ವಿವರ : ಮುದ್ದೇಬಿಹಾಳ ಪಟ್ಟಣದ ಎಂ.ಜಿ.ವಿ.ಸಿ ಕಾಲೇಜಿನ ಉಪನ್ಯಾಸಕಿ ಸುಮಂಗಲಾ ಅಂಗಡಿ(46) ಆಗುಂತಕ ವ್ಯಕ್ತಿಯ ದಾಳಿಯಿಂದ ಗಂಭೀರವಾಗಿ ಗಾಯಗೊಂಡವರು. ಪಿಎಸ್‌ಐ ಸಂಜಯ ತಿಪರೆಡ್ಡಿ ಅವರ ಎದುರಿಗೆ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಅಂಬ್ಯುಲೆನ್ಸ್ನಲ್ಲಿ ಬಾಗಲಕೋಟ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಘಟನೆಯ ಸಂದರ್ಭವನ್ನು ವಿವರಿಸಿದ ಉಪನ್ಯಾಸಕಿ ಸುಮಂಗಲಾ, ಎರಡು ದಿನದ ಹಿಂದೆ ವ್ಯಕ್ತಿಯೊಬ್ಬ ಮನೆ ಬಾಡಿಗೆ ಕೇಳಿಕೊಂಡು ಬಂದಿದ್ದ. ಕೊಠಡಿ ಖಾಲಿ ಇದೆ ಎಂದು ತಿಳಿಸಿದ್ದೇವು. ಶನಿವಾರ ಮದ್ಯಾಹ್ನದ ಹೊತ್ತಿಗೆ ಮನೆ ಬಾಡಿಗೆ ಕೇಳುವ ನೆಪದಲ್ಲಿ ಹಿಂದಿ ಭಾಷೆಯನ್ನು ಮಾತನಾಡುತ್ತಿದ್ದ ಆತನಿಗೆ ಮನೆಯ ಮೇಲಿನ ಮಹಡಿ ಖಾಲಿ ಇದ್ದು ಬಾಡಿಗೆಗೆ ನೋಡುವಂತೆ ತಿಳಿಸಿದೆವು. ಆತ ಮನೆಯ ಫೋಟೋ ತೆಗೆದುಕೊಳ್ಳುವುದಾಗಿ ಹೇಳಿ ಮೊದಲು ಮನೆಯ ಪೂರ್ತಿ ಫೋಟೋ ತಗೆದುಕೊಂಡು ನಂತರ ಬಾಡಿಗೆ ಇರುವ ಕೊಠಡಿಯ ಫೋಟೋ ಬೇಕು ಎಂದ. ಅದಕ್ಕೆ ನಾವು ಕೊಠಡಿಯ ಫೋಟೋ ಯಾವುದಕ್ಕೆ ಎಂದು ಪ್ರಶ್ನಿಸಿದಾಗ ತಮ್ಮ ಕಂಪನಿಯವರಿಗೆ ತೋರಿಸಬೇಕು ಎಂದು ತಿಳಿಸಿದ. ಮೇಲಿನ ಮಹಡಿ ಕೊಠಡಿಗೆ ಹೋಗುತ್ತಿದ್ದಂತೆ ಏಕಾಏಕಿ ನನ್ನ ಮುಖಕ್ಕೆ ಬಲವಾಗಿ ಗುದ್ದಲು ಶುರು ಮಾಡಿದ. ಇದರಿಂದ ಗಾಬರಿಯಾಗಿ ನಾನು ನನ್ನ ತಾಯಿಯನ್ನು ಕೂಗಿದಾಗ ಅವರು ಓಡಿ ಬಂದು ನೋಡುವಷ್ಟರಲ್ಲಿ ತಾಯಿಯವರಿಗೂ ಆತ ಹೊಡೆದಿದ್ದಾನೆ. ಅವರ ಕನ್ನಡಕ ನೆಲಕ್ಕೆ ಬಿದ್ದು ಒಡೆದಿದ್ದು ಅವರು ಹೊರಗೆ ಹೋಗಿ ಓಣಿಯ ಜನರನ್ನು ಕರೆಯಲು ಯತ್ನಿಸುತ್ತಾರೆ ಎಂದು ಅವರನ್ನು ಎಳೆದಾಡಿ ಬಟ್ಟೆ ಹರಿದಿದ್ದಾನೆ. ಘಟನೆಯಿಂದ ನಮಗೆ ತುಂಬಾ ಗಾಬರಿಯಾಗಿದ್ದು ಆತನನ್ನು ಬಿಡಬೇಡಿ ಎಂದು ಹೇಳಿಕೊಂಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು ಹೆಚ್ಚಿನ ವಿಚಾರಣೆ ಬಳಿಕವೇ ಆತ ಏಕೆ ಹೋಗಿದ್ದ ಎಂಬ ಮಾಹಿತಿ ತಿಳಿದು ಬರಲಿದೆ.

ಹಾಡಹಗಲೇ ನಡೆದ ಘಟನೆಯಿಂದ ಪಟ್ಟಣದ ಜನತೆ ಆತಂಕಗೊಂಡಿದ್ದು ಮನೆಯಲ್ಲಿ ಒಂಟಿ ಮಹಿಳೆಯರು ಇದ್ದಾಗ ಘಟನೆ ನಡೆದಿರುವುದು ಜನರನ್ನು ಭಯಭೀತರನ್ನಾಗಿಸಿದೆ. ಗಾಯಗೊಂಡಿದ್ದ ಉಪನ್ಯಾಸಕಿ ಸುಮಂಗಲಾ ಹಾಗೂ ಅವರ ತಾಯಿ ವಿಜಯಲಕ್ಷ್ಮಿ ಅಂಗಡಿ ಅವರನ್ನು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಕಾಲೇಜು ಆಡಳಿತ ಮಂಡಳಿ ಪದಾಧಿಕಾರಿಗಳಿಂದ ಸಾಂತ್ವನ : ಘಟನೆಯ ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಸರಕಾರಿ ಆಸ್ಪತ್ರೆಗೆ ಆಗಮಿಸಿದ ಎಂ.ಜಿ.ವಿ.ಸಿ ಕಾಲೇಜಿನ ಕಾರ್ಯದರ್ಶಿ ಅಶೋಕ ತಡಸದ, ಪ್ರಾಚಾರ್ಯ ಎಸ್.ಎನ್.ಪೊಲೇಶಿ, ಉಪನ್ಯಾಸಕ ರಹೀಂ ಮುಲ್ಲಾ, ಸಿಬ್ಬಂದಿ ಬಾಬು ಚವ್ಹಾಣ ಉಪನ್ಯಾಸಕಿ ಸುಮಂಗಲಾ ಅಂಗಡಿ ಅವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಅಲ್ಲದೇ ತಕ್ಷಣ ಅವರನ್ನು ಬಾಗಲಕೋಟ ಜಿಲ್ಲಾಸ್ಪತ್ರೆಗೆ ಕಳಿಸಲು ನೆರವು ನೀಡಿದರು.

Latest News

ಮಾಜಿ ಶಾಸಕ ನಡಹಳ್ಳಿಗೆ ಶಾಸಕ ನಾಡಗೌಡ ಬುದ್ಧಿಮಾತು: ಕ್ಷೇತ್ರದ ಜನಕ್ಕೆ ಬುದ್ದಿ ಇಲ್ಲ ಎಂದವರಿಗೆ ಸ್ವಾಭಿಮಾನಿ ಮತದಾರರಿಂದ ತಕ್ಕಪಾಠ-ನಾಡಗೌಡ

ಮಾಜಿ ಶಾಸಕ ನಡಹಳ್ಳಿಗೆ ಶಾಸಕ ನಾಡಗೌಡ ಬುದ್ಧಿಮಾತು: ಕ್ಷೇತ್ರದ ಜನಕ್ಕೆ ಬುದ್ದಿ ಇಲ್ಲ ಎಂದವರಿಗೆ ಸ್ವಾಭಿಮಾನಿ ಮತದಾರರಿಂದ ತಕ್ಕಪಾಠ-ನಾಡಗೌಡ

ಮುದ್ದೇಬಿಹಾಳ : ಮತಕ್ಷೇತ್ರದಲ್ಲಿ 2.50 ಲಕ್ಷ ಜನರು ಪಂಚ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.ಪ್ರತಿ

ಬಸವೇಶ್ವರ ಪತ್ತಿನ ಸಹಕಾರಿ ಸಂಘದ ಶಾಖೆ ಉದ್ಘಾಟನೆ: ಶ್ರಮಿಕ ಜನರ ಆರ್ಥಿಕ ಮಟ್ಟದ ಸುಧಾರಣೆಗೆ ಶ್ರಮಿಸಿ-ನಾಡಗೌಡ

ಬಸವೇಶ್ವರ ಪತ್ತಿನ ಸಹಕಾರಿ ಸಂಘದ ಶಾಖೆ ಉದ್ಘಾಟನೆ: ಶ್ರಮಿಕ ಜನರ ಆರ್ಥಿಕ ಮಟ್ಟದ ಸುಧಾರಣೆಗೆ ಶ್ರಮಿಸಿ-ನಾಡಗೌಡ

ಮುದ್ದೇಬಿಹಾಳ : ಗ್ರಾಮೀಣ ಭಾಗದ ಶ್ರಮಿಕರು, ವ್ಯಾಪಾರಸ್ಥರಿಗೆ ಆರ್ಥಿಕವಾಗಿ ಆಸರೆಯಾಗುವ ಕಾರ್ಯ ಮಾಡುವ ಮೂಲಕ

ಸರದಿಯಲ್ಲಿ ನಿಂತು ಶಿವಲಿಂಗದ ದರ್ಶನ;                    ಎಲ್ಲೆಲ್ಲೂ ಅನುರಣಿಸಿದ ಶಿವನಾಮ

ಸರದಿಯಲ್ಲಿ ನಿಂತು ಶಿವಲಿಂಗದ ದರ್ಶನ; ಎಲ್ಲೆಲ್ಲೂ ಅನುರಣಿಸಿದ ಶಿವನಾಮ

ಮುದ್ದೇಬಿಹಾಳ : ಪಟ್ಟಣದಾದ್ಯಂತ ಶಿವರಾತ್ರಿ ಅಂಗವಾಗಿ ಭಕ್ತರು ಭಾನುವಾರ ಸಂಜೆ ಶಿವನ ದೇವಾಲಯಗಳಲ್ಲಿ ಸರದಿಯಲ್ಲಿ

ಬಿಎಎಸ್ ಇಂಟರ್‌ನ್ಯಾಶನಲ್ ಸ್ಕೂಲ್ ಉದ್ಘಾಟನೆ:            ಕಾಲು ಹಿಡಿದು ಜಗ್ಗುವವರೇ ಬಹಳಷ್ಟು ಜನ-ಸಿ.ಎಸ್.ನಾಡಗೌಡ

ಬಿಎಎಸ್ ಇಂಟರ್‌ನ್ಯಾಶನಲ್ ಸ್ಕೂಲ್ ಉದ್ಘಾಟನೆ: ಕಾಲು ಹಿಡಿದು ಜಗ್ಗುವವರೇ ಬಹಳಷ್ಟು ಜನ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಸಮಾಜದಲ್ಲಿ ಒಂದು ಸಂಸ್ಥೆ, ಕಾರ್ಖಾನೆ , ಒಬ್ಬ ವ್ಯಕ್ತಿ ಬೆಳೆಯುತ್ತಿದ್ದಾನೆ ಎಂದರೆ

ಮುದ್ದೇಬಿಹಾಳ : ಬೈಕ್‌ಗೆ ಕಾರು ಡಿಕ್ಕಿ ; ಹಿಂಬದಿ ಸವಾರ ಸಾವು

ಮುದ್ದೇಬಿಹಾಳ : ಬೈಕ್‌ಗೆ ಕಾರು ಡಿಕ್ಕಿ ; ಹಿಂಬದಿ ಸವಾರ ಸಾವು

ಮುದ್ದೇಬಿಹಾಳ : ಬೈಕ್‌ವೊಂದಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿ ಸವಾರ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ತಂಗಡಗಿ ರಸ್ತೆಯ ಕೋಳೂರು ಕ್ರಾಸ್‌ನಲ್ಲಿ ಭಾನುವಾರ ನಡೆದಿದೆ. ಕೂಡಲಸಂಗಮ ಮೂಲದ ಶರಣಬಸಯ್ಯ ನಿಜಗುಣಯ್ಯ ಹಿರೇಮಠ(43) ಮೃತಪಟ್ಟಿರುವ ವ್ಯಕ್ತಿ. ಬೈಕ್ ಚಲಾಯಿಸುತ್ತಿದ್ದ ಸವಾರ ಅಮರೇಶ ಸಂಗಪ್ಪ ಗುಗ್ಗರಿಗೂ ಗಂಭೀರವಾದ ಗಾಯಳಾಗಿದ್ದು ಅವರಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ವಿಫ್ಟ್ ಡಿಜೈರ್ ಕಾರ ನಂಬರ್ ಕೆ.ಎ-37, ಎನ್-3584 ಚಾಲಕನು ಮುದ್ದೇಬಿಹಾಳ ಕಡೆಯಿಂದ ಹುನಗುಂದ ಕಡೆಗೆ ಅತೀ ವೇಗವಾಗಿ

ಗ್ಯಾರಂಟಿ ಯೋಜನೆ:                                                     ಮನೆಗಳ ಎದುರಿಗೆ ರಂಗೋಲಿ ಬಿಡಿಸಿ ಜಾಗೃತಿ

ಗ್ಯಾರಂಟಿ ಯೋಜನೆ: ಮನೆಗಳ ಎದುರಿಗೆ ರಂಗೋಲಿ ಬಿಡಿಸಿ ಜಾಗೃತಿ

ಮುದ್ದೇಬಿಹಾಳ : ಪಟ್ಟಣದ ಮಹಾಂತೇಶ ನಗರ ಹಾಗೂ ಹೊರಪೇಟಿಯಲ್ಲಿ ಮನೆ ಮನೆಗೆ ತೆರಳಿದ ಪಂಚ ಗ್ಯಾರಂಟಿ ಸಮೀತಿ ಪದಾಧಿಕಾರಿಗಳು ನಿವಾಸಿಗಳ ಮನೆ ಎದುರಿಗೆ ರಂಗೋಲಿ ಬಿಡಿಸಿ ಗ್ಯಾರಂಟಿ ಯೋಜನೆಗಳ ಕುರಿತು ಅರಿವು ಮೂಡಿಸಿದರು. ಸಮೀತಿ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ,ಪುರಸಭೆ ಮಾಜಿ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸಮೀತಿ ಪದಾಧಿಕಾರಿಗಳು ಇದ್ದರು.